ಹನುಮ ಮಾಲೆ & ಜಯಂತಿ
- Mar 13
- 1 min read
ARJUN K S
ಹನುಮ ಮಾಲೆ & ಜಯಂತಿ
24 Dec 2023
Location: Karnataka / Mandya / Srirangapatna / Kudalukuppe
Categories: Traditional and Beliefs
ಶ್ರೀರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಗ್ರಾಮದಲ್ಲಿ ಗ್ರಾಮದ ಯುವಕರು ಹನುಮ ಮಾಲೆಯನ್ನು ಧರಿಸಿ 5 ದಿನಗಳ ಕಾಲ ವ್ರತ ಮಾಡಿ, ಗ್ರಾಮದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 23/12/2023 ರಂದು ಹನುಮ ಜಯಂತಿಯನ್ನು ಆಚರಿಸಿ, 24/12/2023 ರಂದು ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಮಂದಿರ ಪುನರ್ ಪ್ರತಿಷ್ಟಾಪನೆಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡರು. ಈ ಹಿಂದೆ ಗ್ರಾಮದಲ್ಲಿ ಹನುಮ ಜಯಂತಿಯಂದು ನೆಪ ಮಾತ್ರಕ್ಕೆ ಮಾತ್ರ ಪೂಜಾ ಕಾರ್ಯ ನಡೆಯುತ್ತಿದ್ದವು. ಆದರೆ ಗ್ರಾಮದ ಯುವಕರು ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ, ತೋರಣ ಕಟ್ಟಿ, ಹನುಮನ ಭಜನೆ ಮಾಡುತ್ತ ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಿದರು. ನಂತರ ಗ್ರಾಮಸ್ಥರಿಗೆ ಪ್ರಸಾದವನ್ನು ವಿತರಿಸಿದರು.



Comments