top of page

Your Stories

Untitled 4.png

ಮಹಾಕೂಟ ದೇವಾಲಯಗಳ ಪಂಚಲಿಂಗೇಶ್ವರ

6ನೇ ಅಥವಾ 7ನೇ ಶತಮಾನದಲ್ಲಿ ಬಾದಾಮಿಯ ಚಾಲುಕ್ಯ ರಾಜವಂಶದ ಆರಂಭಿಕ ರಾಜರಿಂದ ನಿರ್ಮಿಸಲ್ಪಟ್ಟಿರುವ ಮಹಾಕೂಟ ದೇವಾಲಯಗಳ ಸಮೂಹವು ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿದೆ. ಈ ಸಂಕೀರ್ಣದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿರುವ ಮಹಾಕೂಟೇಶ್ವರ ದೇವಾಲಯ ಮತ್ತು ಮಲ್ಲಿಕಾರ್ಜುನ ಸ್ವಾಮಿಯ ದೇವಾಲಯಗಳು ದೊಡ್ಡವು.

 

ಈ ದೇಗುಲದ ಒಳಾಂಗಣದಲ್ಲಿ ಇರುವ ಕಲ್ಯಾಣಿಯೊಂದನ್ನು "ವಿಷ್ಣು ಪುಷ್ಕರಣಿ" ಎಂದು ಹೆಸರಿಸಿದ್ದು, ನೈಸರ್ಗಿಕವಾದ ನೀರಿನ ಬುಗ್ಗೆಯಿಂದ ಇಲ್ಲಿ ಸದಾಕಾಲ ಶುದ್ಧ ನೀರು ತುಂಬಿರುತ್ತದೆ. ಭಕ್ತಾದಿಗಳು ಈ ಪುಷ್ಕರಣಿಯಲ್ಲಿ ಮಿಂದು ಶಿವನ ಪೂಜೆಯನ್ನು ಮಾಡಿ ಧನ್ಯರಾಗುತ್ತಾರೆ.

 

ಈ ವಿಷ್ಣು ಪುಷ್ಕರಣಿಯ ಮಧ್ಯದಲ್ಲಿ ಪುಟ್ಟದಾದ ಗುಡಿ ಇದ್ದು, ಅದರಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ಈ ಲಿಂಗದ ಮೇಲೆ ಮುಖಗಳ ಚಿತ್ರವನ್ನು ಮೂಡಿಸಿರುವುದು ಅತ್ಯಂತ ಆಕರ್ಷಕವಾಗಿದೆ. ಇದೇ ಪಂಚಲಿಂಗೇಶ್ವರ ಎಂಬ ಹೆಸರಿನಿಂದ ಖ್ಯಾತವಾಗಿದೆ.

 

#ನಮ್ಮೂರಶಿವ #ದಿನಕ್ಕೊಂದುಶಿವಲಿಂಗ

Untitled 4.png

ಶಿವರಾತ್ರಿಯ ಜಾಗರಣ ಕಾರ್ಯಕ್ರಮ

ಗುಡಿಬಂಡೆ ಪಟ್ಟಣದ ಮೂರು ಮತ್ತು ನಾಲ್ಕನೇ ವಾರ್ಡ್ ಕಲಿಕಾ ಕೇಂದ್ರಗಳು ಜೈನರ ಬಸದಿಯಲ್ಲಿ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಯಿತು.

ಈ ವೇಳೆ ವಾರ್ಡಿನ ಮಾತೆಯರು ಮತ್ತು ಮಕ್ಕಳು ಭಾಗವಹಿಸಿ ಲಿಂಗಾಷ್ಟಕಂ ಮತ್ತು ಕೆಲವು ಭಜನೆಗಳನ್ನು ಮಾಡಲಾಯಿತು.

 

ಗ್ರಾಮ ವಿಕಾಸ, ಗೋ ಸಂರಕ್ಷಣೆ, ಸಾಮರಸ್ಯ, ಧರ್ಮ ಜಾಗರಣೆ ಪರ್ಯಾವರಣ ಮತ್ತು ಕುಟುಂಬ ಪ್ರಬೋಧನ್ ವಿಷಯಗಳ ಬಗ್ಗೆ ತಿಳಿಸಲಾಯಿತು.

ಚಿಕ್ಕ ಚಿಕ್ಕ ಕೆಲಸಗಳು ಮಾಡುವುದರಿಂದ ಸಮಾಜಕ್ಕೆ ಯಾವ ರೀತಿಯಾಗಿ ನಾವು ಮಾದರಿ ಆಗಬೇಕು ಎಂಬುದರನ್ನ ತಿಳಿಸಲಾಗಿದೆ.

 

ವಿಶೇಷವಾಗಿ ಹೊತ್ತಿನ ಮಣ್ಣನ್ನು ತಂದು ಲಿಂಗಗಳನ್ನು ಮಾಡಿ ಪೂಜಿಸಲಾಗಿದೆ

 

ಆ ಯೋಜನೆ ಮಾಡಿದಂತಹ ಕಲಿಕಾ ಕೇಂದ್ರ ಪ್ರಮುಖರು ಶ್ರೀಮತಿ ಇಂದಿರಮ್ಮ ಮತ್ತು ಶ್ರೀಮತಿ ಮೇಘನಾ ರವರಿಗೆ ಅಭಿನಂದನೆಗಳು🙏🏼

ತಾಲೂಕು ಶಿಕ್ಷಣ ಸಂಯೋಜಕರು ಶ್ರೀಯುತ ಶ್ರೀ ಮುನಿರಾಜ ಮತ್ತು ವಿಕಾಸ ಕೇಂದ್ರ ಸಂಯೋಜಕರು ಶ್ರೀಯುತ ಶ್ರೀ ನರಸಿಂಹಮೂರ್ತಿ ರವರು ಉಪಸ್ಥಿತರಿದ್ದರು

Untitled 4.png

ಮಳವಳ್ಳಿಯ ಅಮೃತೇಶ್ವರ

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಇರುವ ಅಮೃತೇಶ್ವರ ದೇವಾಲಯವು ಚೋಳರ ದೊರೆ ಒಂದನೇ ರಾಜರಾಜ ನಿರ್ಮಿಸಿದ್ದು ಎಂದು ಹೇಳಲಾಗುತ್ತದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯವು ಸರಳವಾದ ಗರ್ಭಗುಡಿ ಅಂತರಾಳ ಮತ್ತು ಮಂಟಪಗಳನ್ನು ಒಳಗೊಂಡಿದೆ. ಅಮೃತೇಶ್ವರ ಲಿಂಗವು ಚೌಕಾಕಾರದ ಪಾಣಿಬಟ್ಟಲ ಮೇಲೆ ಸ್ಥಾಪಿತವಾಗಿದ್ದು ಆಕರ್ಷಕವಾಗಿದೆ.

 

ಹೊರ ಪ್ರಾಕಾರದಲ್ಲಿ ಅರಳಿ ಮರದ ಕೆಳಗಡೆ ನವಗ್ರಹಗಳು, ಗಣಪತಿ ಮತ್ತು ನಾಗರಕಲ್ಲುಗಳಿವೆ. ದೇಗುಲದ ಮೇಲಿನ ವಿಮಾನವು ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಲಾಗಿದೆ. ಇಲ್ಲಿರುವ ಅಮ್ಮನವರ ಗುಡಿಯು ಮಂಟಪದಲ್ಲಿ ದಕ್ಷಿಣಾಭಿಮುಖವಾಗಿದೆ.

 

ಪ್ರಾಚೀನವಾದ ಈ ದೇವಾಲಯವನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸಬೇಕಾದ ಅವಶ್ಯಕತೆ ಇದೆ.

 

#ನಮ್ಮೂರಶಿವ #ದಿನಕ್ಕೊಂದುಶಿವಲಿಂಗ

Untitled 4.png

ಹೊನ್ನಾವರ ಗ್ರಾಮದ ಶ್ರೀ ಚನ್ನಕೇಶವ ದೇವಾಲಯ, ಭಾಗ-2

ದೇವಾಲಯದ ಜೀರ್ಣೋದ್ಧಾರ:-

ಸುಮಾರು 350 ವರ್ಷಗಳ ಹೊಯ್ಸಳ ಅವಧಿಯಲ್ಲಿ ನಿರ್ಮಾಣವಾದ 1500 ಕ್ಕೂ ಅಧಿಕ ದೇವಾಲಯಗಳಲ್ಲಿ ಇಂದು ನೂರಾರು ದೇವಾಲಯಗಳುನಾಮಾವಶೇಷ ಆಗಿವೆ.ಇನ್ನೂ ನೂರಾರು ದೇವಾಲಯಗಳು ಭಗ್ನಾವಸ್ಥೆಯಲ್ಲಿವೆ. ಸರ್ಕಾರ, ಧಾರ್ಮಿಕ ಸಂಸ್ಥೆಗಳು, ನಾಗರೀಕರು, ಸಂಘ ಸಂಸ್ಥೆಗಳು ಆಸಕ್ತಿವಹಿಸಿ ಭಗ್ನಗೊಂಡ ಹಲವು ದೇವಾಲಯಗಳನ್ನು ಜೀರ್ಣೋದ್ಧಾರಮಾಡಿವೆ.ಪ್ರಾಚೀನ ದೇವಾಲಯಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವಾಗ ಇಂತಹ ದೇವಾಲಯಗಳನ್ನು ಉಳಿಸಿಕೊಳ್ಳುವುದರಲ್ಲಿಎಲ್ಲರ ಜವಾಬ್ದಾರಿ ಇದೆ.

 

ಐತಿಹಾಸಿಕ ಹಿನ್ನೆಲೆ ಹೊಂದಿರುವ ದೇವಾಲಯವು, ‘ಕಾಲೋ ಜಗದ್ಭಕ್ಷಕಃ (ಕಾಲವು ಜಗತ್ತನ್ನು ಭಕ್ಷಿಸುತ್ತಿದೆ) ಎಂಬಂತೆ ಕಾಲನ ಹೊಡೆತಕ್ಕೆ ಸಿಲುಕಿ, ಸಂಪೂರ್ಣ ಅವನತಿಯ ಹಂತವನ್ನು ತಲುಪಿತ್ತು.

 

ದೇವಾಲಯದ ಮೇಲೆ ಬೆಳೆದುನಿಂತಿದ್ದ ಮರದ ಬೇರುಗಳು ಗರ್ಭಗುಡಿಗೆ ಇಣುಕುತ್ತಿದ್ದವು. ಇದೇ ಪರಿಸ್ಥಿತಿ ಮುಂದುವರೆದಿದ್ದರೆ ದೇವಾಲಯವು ಕಾಲಗರ್ಭವನ್ನು ಸೇರುತ್ತಿತ್ತು. ಆದರೆ ಈ ಬಗ್ಗೆ ಎಚ್ಚೆತ್ತ ಹೊನ್ನಾವರ ಗ್ರಾಮದ ಗ್ರಾಮಸ್ಥರ ಪ್ರಯತ್ನ, ಒತ್ತಾಸೆ ಮತ್ತು ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ, ಹಾಸನ ಇವರ ನಿರಂತರ ಪ್ರಯತ್ನ, ಪತ್ರವ್ಯವಹಾರಗಳ ಫಲವಾಗಿ ಕರ್ನಾಟಕ ರಾಜ್ಯ ಪುರಾತತ್ವ ಮತ್ತು ಸಂರಕ್ಷಣಾ ಇಲಾಖೆ, ಮೈಸೂರು ಇವರಿಂದ ರೂಪಾಯಿ ಒಂದು ಕೋಟಿ ವೆಚ್ಚದಲ್ಲಿ ದೇವಾಲಯ ಸಂಪೂರ್ಣ ಜೀರ್ಣೋದ್ಧಾರವಾಗಿ ಈಗ ಸುಸ್ಥಿತಿಗೆ ತಲುಪಿದೆ. ಇದೆಲ್ಲದರ ಬೆನ್ನಿಗೆ ನಿಂತವರು ಸಂಘದ ಸಂಚಾಲಕರಾದ ಶ್ರೀ ನಟರಾಜಪಂಡಿತರು. ಪಾಳುಬಿದ್ದ ಈ ದೇವಾಲಯವನ್ನು ಉಳಿಸಲೇಬೇಕೆಂಬ ಪಣತೊಟ್ಟ ಶ್ರೀಯುತರು ತಮ್ಮ ಛಲ ಬಿಡದೆ ಇಲಾಖೆಯ ಬೆನ್ನುಬಿದ್ದು ಕೆಲಸಸಾಧಿಸಿದರು. ಇಂತಹ ಮಹನೀಯರು ಎಲ್ಲರಿಗೂ ಅದರ್ಶಪ್ರಾಯ.

 

ಸಂಕಲ್ಪ ಸಾಧನೆ ಮತ್ತು ಮುಂದಿನ ಯೋಜನೆಗಳು

ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ. ಹಾಸನ ಇವರ ದೃಢ ಸಂಕಲ್ಪದಿಂದಾಗಿ - ಶ್ರೀ ಚನ್ನಕೇಶವ ದೇವಾಲಯದ ದುಸ್ಥಿತಿಯ ಬಗ್ಗೆ ರಾಜ್ಯಪುರ ತತ್ತ್ವ ಇಲಾಖೆಯ ಗಮನ ಸೆಳೆಯಲು ಸಾಧ್ಯವಾಯಿತು. ಪ್ರಾರಂಭಿಕ ಹಂತದಿಂದಲೂ ವೇದಿಕೆ ನಿರಂತರವಾಗಿ ಪುರಾತತ್ವ ಇಲಾಖೆಯೊಂದಿಗೆ ಪತ್ರ ವ್ಯವಹಾರ- ಹಾಸನದ ಸ್ಥಳೀಯ ಪತ್ರಿಕೆಗಳಲ್ಲಿ. ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ದೇವಾಲಯದ ದುಸ್ಥಿತಿಯ ಬಗ್ಗೆ ಲೇಖನಗಳ ಪ್ರಕಟಣೆ. ಮುಖ್ಯವಾಗಿ ಹೊನ್ನಾವರ ಗ್ರಾಮಸ್ಥರ ಆಸಕ್ತಿ. ಮತ್ತು ಪ್ರಯತ್ನದ ಫಲವಾಗಿ - ಸಂರಕ್ಷಿತ ದೇವಾಲಯ ನಮ್ಮ ಕಣ್ಣ ಮುಂದಿದೆ.

 

ವೇದಿಕೆಯ ಕೀರ್ತಿ ಶೇಷ ಶ್ರೀ ಕೃಷ್ಣ ಸ್ವಾಮಿಗಳು. ಶ್ರೀ ರಾಮಸ್ವಾಮಿಗಳು. ಶ್ರೀ ನರಸಿಂಹಮೂರ್ತಿಗಳು ವಿನೋದ್ ಕುಮಾರ್. ಸೀತಾರಾಮ ಪೂಜಾರ್.ಪುರಾತತ್ವ ಇಲಾಖೆಯ ಜಿಲ್ಲಾ conservator ಶ್ರೀಮತಿ ಕಾವ್ಯಶ್ರೀ ಮೇಡಂ ಮತ್ತು ಪ್ರತ್ಯಕ್ಷವಾಗಿ.ಪರೋಕ್ಷವಾಗಿ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು. ದೇವಾಲಯದ ಸಂರಕ್ಷಣೆ ಕಾರ್ಯ ಪ್ರಾರಂಭ ಪೂರ್ವದಲ್ಲಿ ನೆಡೆದ ಕಳಾಕರ್ಷಣೆ ಧಾರ್ಮಿಕ ಪೂಜಾವಿಧಿ ಕನ್ನಡದ ಪೂಜಾರಿ ಎಂದೇ ಖ್ಯಾತರಾದ. ಕಣ್ಣನ್ ರವರ ಸಹೋದರರಾದ ಶ್ರೀ ಬದರಿ ನಾರಾಯಣ್ ರವರಿಂದ ಮತ್ತು ಪುನರ್ ಲೋಕಾರ್ಪಣೆ ಧಾರ್ಮಿಕ ಕಾರ್ಯಕ್ರಮವು ಕೀರ್ತಿ ಶೇಷ ಕಟ್ಟಾಯ ಮಂಜುನಾಥ್ ರವರಿಂದ ನೆರವೇರಿತು.

 

ಪ್ರಸ್ತುತ ದೇವಾಲಯದ ಸುತ್ತ ರಕ್ಷಣಾ ಗೋಡೆಯು( ಕಾಂಪೌಂಡ್ ) ನಿರ್ಮಾಣವಾಗಿದೆ. ದೇವರ ನಿತ್ಯ ಅಭಿಷೇಕದ ಸಲುವವಾಗಿ. ನೀರಿನ ವ್ಯವಸ್ಥೆ. ದೀಪದ ವ್ಯವಸ್ಥೆ ಆಗಿದೆ. ದೇವಾಲಯದ ಇತಿಹಾಸ ವಿವರಿಸುವ "ನೆಲೆ -ಹಿನ್ನೆಲೆ " ಫಲಕ ಅನಾವರಣವಾಗಿದೆ. ಹಾಸನದ ಆಸರೆ ಟ್ರಸ್ಟ್(ರಿ ) ನವರಿಂದ ದೇವಾಲಯದ ಆವರಣದಲ್ಲಿ ನಿತ್ಯ ಪೂಜೆ ಸಲುವಾಗಿ. ತುಳಸಿ ಮತ್ತು ಹೂವಿನ ಗಿಡಗಳು. ಭಕ್ತಾದಿಗಳಿಗೆ ವಿಶ್ರಮಿಸಲು ಕಲ್ಲು ಬೆಂಚಿನ ವ್ಯವಸ್ಥೆ ಆಗಲಿದೆ. ಸ್ಥಳೀಯವಾಗಿ ದೇವಾಲಯ ಮೇಲ್ವಿಚಾರಣೆಯನ್ನು ಶ್ರೀ ಸ್ವಾಮಿಗೌಡರು ನೋಡಿಕೊಳ್ಳುತ್ತಿದ್ದಾರೆ. ಅರ್ಚಕರಾದ ಶ್ರೀನಿವಾಸ್. ನಾಗರಾಜ್ ಸಹೋದರರು ಮತ್ತು ಹೊನ್ನಾವರ ಗ್ರಾಮಸ್ಥರು ನಿತ್ಯ ಪೂಜೆ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ.

 

ಜೀರ್ಣೋದ್ಧಾರಪೂರ್ವ ಚಿತ್ರಗಳು: ಶ್ರೀ ರಾಜೇಶ್ ನಾಯಕ್, Parampara Conservationಮತ್ತುTemples of Karnataka

ಈಗಿನ ಸುಸ್ಥಿತಿಯ ಫೋಟೋಗಳನ್ನು ಭಾಗ-1 ಪೋಸ್ಟ್ನಲ್ಲಿ ನೋಡಿ.

Untitled 4.png

Amareshwara Temple

Wonderful New temple in Ballari rural area.

Untitled 4.png

95 ವರ್ಷದ ಅಜ್ಜ ಹಾರ್ಮೋನಿಯಂ ನುಡಿಸುತ್ತಿರುವುದು

ರಾಗ ತಾಳಗಳ ಮುಖಾಂತರ 95 ವರ್ಷದ ಅಜ್ಜ ಹಾರ್ಮೋನಿಯಂ ಅನ್ನು ಹೇಗೆ ನುಡಿಸಬೇಕೆಂಬುದನ್ನ ಗ್ರಾಮದ ಯುವಕರಿಗೆ ಕಲಿಸಿಕೊಡುತ್ತಿರುವ ವಿಡಿಯೋ

Untitled 4.png

Toglur Mahadev temple

Toglur Mahadev temple

Untitled 4.png

ಶ್ರೀ ಸಿದ್ದೇಶ್ವರ ಪ್ರಸನ್ನ

ನಮ್ಮೂರಿನ ಶ್ರೀ ಸಿದ್ದೇಶ್ವರ ದೇವಸ್ಥಾನವು ಸುಮಾರು 500 ನೂರು ವರ್ಷ ಹಿಂದಿನ ದೇವಸ್ಥಾನ ಐತಿಹಾಸಿಕ ದೇವಸ್ಥಾನ. 🚩🙏

Untitled 4.png

Sardara vallabhai Patel statue

Recently innogration made by our beloved Amit Shah ji

Untitled 4.png

ಐತಿಹಾಸಿಕ ದೇವಸ್ಥಾನಗಳ ಗ್ರಾಮ – ನಾರಾಯಣಪುರ

ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮವು ಒಂದು ವಿಶಿಷ್ಟ ಗ್ರಾಮ. ತನ್ನ ಐತಿಹಾಸಿಕ ದೇವಾಲಯಗಳಿಂದ ಪ್ರಸಿದ್ಧಿಯಲ್ಲಿದೆ. ಈ ಊರಿನಲ್ಲಿ 1000 ವರ್ಷಗಳ ಹಿಂದೆಯೇ ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯನು ಕಟ್ಟಿಸಿದ ದೇವಾಲಯವಿದೆ. ಇಲ್ಲಿ ಒಂದೊಂದು ಮನೆಗೆ ಒಂದೊಂದು ದೇವಾಲಯವಿರುವಷ್ಟು ದೇವಸ್ಥಾನಗಳ ಆಗರವಾಗಿದೆ!

 

ಈ ಗ್ರಾಮದ ಮತ್ತೊಂದು ವಿಶೇಷವೆಂದರೆ, ತಿರುಪತಿ ವೆಂಕಟರಮಣ ದೇವರ ವಿವಾಹ ನಡೆದ ಪವಿತ್ರ ಸ್ಥಳವೂ ಇದೇ ಎಂಬ ನಂಬಿಕೆ.

ಇಲ್ಲಿರುವ ಭಾಗ್ಯವಂತಿ ಕೆರೆ, ಸುಮಾರು 600 ಎಕರೆ ವ್ಯಾಪ್ತಿಯ ಬೃಹತ್ತಾದ ಕೆರೆ.

 

ಇತ್ತೀಚೆಗೆ ಹೊಲದಲ್ಲಿ ಪ್ರತ್ಯಕ್ಷವಾದ ವಿಷ್ಣು ದೇವರ ಸುಂದರ ಶಿಲಾಮೂರ್ತಿ ಕೂಡ ಈ ಊರಿಗೆ ಮತ್ತೊಂದು ಆಧ್ಯಾತ್ಮಿಕ ಆಕರ್ಷಣೆಯಾಗಿದೆ.

Untitled 4.png

Sarakki lake - a habitat for saavira hakki

1. Swamp hen

2. Coot

3. Little grebe

4. Asian open bill

5. Pond heron

6. Little egret

7. Darter

8. Greater cormorant

9. Cormorant

10. Pond heron

11. Grey heron

12. Spotted dove

13. Bramhiny kite

14. Night heron

15. Spot billed duck

16. Paraiah kite

17. Rock pigeon

18. Magpie robin

19. Peacock

20. Cattle egret

21. House crow

22. Purple sunbird

 

The above is a list of birds spotted by a bird watcher yesterday, 4-Feb-2024. Where do you think he would have spotted? Seems like in some bird sanctuary or in a jungle. No, he saw them in Sarakki lake, south of Bangalore.

 

Once upon a time this lake was a place for “saavira hakki” which means thousand birds, hence the name Sarakki. It is one of the large water bodies in south Bangalore today, spreading over more than 60 acres with full of life. The sewage treatment plant (STP) pumps treated water to this lake every day. The lake has water to the brim and BBMP has given fishing rights to an agency. The lake is slowly and progressively getting back to its glory towards to have “saavira hakki”!

 

The lake is surrounded by Puttenahalli Palya, Jaraganahalli, Sharada nagara, JP Nagar 6th phase. In 2012 this lake appeared to be heading to be yet another sad story i.e., about to get added to the list of died lakes in Bangalore. Then the lake boundary was not marked, lake area had become the dumping ground for the construction debris and filth. That had a deep impact on the entire ecosystem including the ground water.

 

I am sure many people living around were concerned about the state of the lake then. A group of people came together for the lake rejuvenation cause. They formed a trust – Sarakki Lake Area Improvement Trust (SLAIT) - to work with the government agencies. They worked with revenue department, LDA (not existing now), BDA, BBMP, BWSSB, Pollution control board because all of them are stake holders in the lake ecosystem. The sustained effort by the Samaritans for a cause paid off. The government agencies executed on their part for the rejuvenation of the lake (as per a detailed project report) which not only helped for the ecosystem but also recharged the ground water.

 

Today the lake is visited by several hundreds of walkers and joggers in the morning and evening. In the weekend it has become a picnic spot for families. STP continues to pump treated water, pathways are laid around the lake measuring about 2.5Km, benches are available around the lake, sapling are planted, toilet is under construction and many other amenities are under construction.

 

We citizens & the government agencies are duty bound to maintain the lake for the people around now and for generations to come, for the entire eco-system and for those “saavira hakki”.

Untitled 4.png

ರಟ್ಟಿಹಳ್ಳಿ ಎಂಬ ಪ್ರಾಚೀನ ಸಿರಿ ಭಾಗ 2

ರಟ್ಟಿಹಳ್ಳಿಯ ವೀರಭದ್ರೇಶ್ವರ ರಥೋತ್ಸವ ಬಹಳ ಪ್ರಸಿದ್ಧವಾಗಿದೆ. ವೀರಭದ್ರನ ಏಳು ಅಂಕಣದ ತೇರು ಬಹು ವಿಶೇಷವಾಗಿದೆ.

ಕದಂಬೇಶ್ವರ ದೇವಾಲಯ:

ರಟ್ಟಿಹಳ್ಳಿಯಲ್ಲಿ ಇನ್ನೂ ಒಂದು ಮಹತ್ವದ ದೇವಾಲಯವಿದೆ. ಬನವಾಸಿ ಕದಂಬರ ಅಧೀನದಲ್ಲಿದ್ದ ಅವಧಿಯಲ್ಲಿ ರಟ್ಟಿಹಳ್ಳಿಯಲ್ಲಿ ಸ್ಥಾಪಿತವಾದ ಕದಂಬೇಶ್ವರ ದೇವಾಲಯ ಹೊಯ್ಸಳ ಶೈಲಿಯಲ್ಲಿದೆ. ಈ ದೇವಾಲಯದ ಮೇಲ್ಭಾಗದಲ್ಲಿ ಹೊಯ್ಸಳ ಲಾಂಛನವಿದೆ. 1230ರ ಕಾಲಘಟ್ಟದಲ್ಲಿ ಈ ದೇವಾಲಯ ಕಟ್ಟಿರುವುದನ್ನು ಇಲ್ಲಿನ ಶಾಸನ ದೃಢಪಡಿಸುತ್ತದೆ.

ಈ ದೇವಾಲಯ ತ್ರಿಕೂಟಾಚಲವಾಗಿದ್ದು, ಎಡ ಪಾರ್ಶ್ವದ ಗೋಪುರ ಬಿದ್ದುಹೋಗಿದೆ. ಉಳಿದೆರಡು ಗೋಪುರಗಳು ದೃಢವಾಗಿದ್ದು, ಸುಂದರವಾದ ಕೆತ್ತನೆಗಳಿವೆ. ಈ ದೇವಾಲಯದಲ್ಲೂ ಈಗಲೂ ಪೂಜೆ ನಡೆಯುತ್ತದೆ.

ದೇವಾಲಯದಲ್ಲಿ ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗೃಹಗಳಿವೆ. ನವರಂಗದಲ್ಲಿ ನಂದಿಯ ದೊಡ್ಡ ಮೂರ್ತಿ ಇದೆ. ಗರ್ಭಗುಡಿಯ ಬಾಗಿಲು ಕಮಾನಿನ ಆಕಾರದಲ್ಲಿರುವುದು ವಿಶೇಷ. ಒಳಗೆ ಶಿವಲಿಂಗವಿದೆ. ನವರಂಗದ ದ್ವಾರದ ಬಳಿ ಸುಮಾರು 7 ಅಡಿ ಎತ್ತರದ ಅದ್ಭುತ ಮೂರ್ತಿಗಳಿವೆ.

ರಟ್ಟಿಹಳ್ಳಿಯಲ್ಲಿ ಈ ದೇವಾಲಯಗಳಲ್ಲದೇ ಪಾಂಡುರಂಗ, ಹನುಮಂತ, ಬಸವಣ್ಣ, ಈಶ್ವರ, ಬೀರಪ್ಪ ಗುಡಿ, ನರಸಿಂಹಮೂರ್ತಿ ದೇವಾಲಯಗಳು, ಗ್ರಾಮದೇವತೆಗಳಾದ ಮಾರಿಕಾಂಬಾ, ಹೊಳೆಸಾಲು ದುರ್ಗವ್ವ, ತುಳಜಾಭವಾನಿ ಗುಡಿಗಳು ಇವೆ. ರಾಘವೇಂದ್ರ ಸ್ವಾಮಿ ತೇರು, ದುರ್ಗಾದೇವಿ ಜಾತ್ರೆಗಳು ಭಕ್ತಿ-ವೈಭವದಿಂದ ನಡೆಯುತ್ತವೆ. ರಾಘವೇಂದ್ರಸ್ವಾಮಿ ಮಠ, ಕಬ್ಬಿಣ ಕಂತಿಮಠ, ಭಾವನಾ ಮಠಗಳು ರಟ್ಟಿಹಳ್ಳಿಯಲ್ಲಿವೆ.

ಹಬ್ಬಗಳು, ಉತ್ಸವ, ಜಾತ್ರೆಗಳ ಸಂದರ್ಭದಲ್ಲಿ ಕುಸ್ತಿ ಪಂದ್ಯ, ಚಿನ್ನಿದಾಂಡು, ಜೋಕಾಲಿ, ಲಗೋರಿ, ಗರಡಿ ಪಂದ್ಯಗಳು ನಡೆಯುತ್ತವೆ. ಡೊಳ್ಳಿನ ಕಲೆ, ಕೋಲಾಟ, ರಟ್ಟಿಹಳ್ಳಿಯ ಪರಂಪರೆಯ ವಿಶೇಷ ಕಲೆ. ಊರುಸ್, ಓಕುಳಿ, ಕೊಂಡ ಹಾಯುವುದು, ಬಾಯಿಬೀಗ ಆಚರಣೆಗಳಿವೆ.

ರಟ್ಟಿಹಳ್ಳಿಯು ಎಲ್ಲ ಸಮುದಾಯದವರ ನೆಲೆವೀಡು. ನಾನಾ ಒಳಪಂಗಡಗಳ ಲಿಂಗಾಯತರ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿದೆ. ಬ್ರಾಹ್ಮಣರು, ಕುರುಬರು, ಜೈನರು, ಕ್ರೈಸ್ತರು, ವೈಶ್ಯರು, ಈಡಿಗರು, ಬಡಿಗರು, ತಳವಾರರು, ಲಂಬಾಣಿಗರು, ಮುಸ್ಲಿಂರು, ಉಪ್ಪಾರರು, ಕಲಾಲರು, ಕ್ಷೌರಿಕರು, ಸುಣಗಾರರು, ಸಿಂಪಿಗರು, ದಲಿತ ಸಮುದಾಯದವರು ಇಲ್ಲಿ ನೆಲೆಸಿದ್ದಾರೆ. ಚಲನಚಿತ್ರ ರಂಗದಲ್ಲಿ ಹೆಸರು ಗಳಿಸಿದ ಆರ್.ಎನ್. ಜಯಗೋಪಾಲ್, ಆರ್.ಎನ್. ಸುದರ್ಶನ್ ಅವರು ಇದೇ ರಟ್ಟಿಹಳ್ಳಿಯವರು.

ಹತ್ತಿ, ತೊಗರಿ, ಗೋವಿನಜೋಳ, ಅಲಸಂದೆ, ಗುರೆಳ್ಳು, ಶೇಂಗಾ, ಟೊಮ್ಯಾಟೊ, ಮಾವು, ಪೇರಲ, ಅಡಕೆ, ಬಾಳೆ, ವೀಳ್ಯದೆಲೆ ಈ ಊರಿನ ಪ್ರಮುಖ ಬೆಳೆಗಳು.

ಚಿತ್ರ ಕೃಪೆ: FB ನಮ್ಮೂರು ರಟ್ಟಿಹಳ್ಳಿ

Untitled 4.png

ಉಳವಿ ಚನ್ನಬಸವೇಶ್ವರ ಜಾತ್ರೆ ಎತ್ತಿನ ಚಕ್ಕಡಿಯಲ್ಲಿ ಜಾತ್ರೆ

ಉಳವಿ ಚನ್ನಬಸವೇಶ್ವರ ಜಾತ್ರೆ ನಮ್ಮ ಊರಿನಲ್ಲಿ ಪ್ರಥಮ ಬಾರಿಗೆ ಎತ್ತಿನ ಚಕ್ಕಡಿ ಹೂಡಿಕೊಂಡು ಹೋಗಿರುವದು ಒಂದು ವಿಶೇಷ. ಈ ಸಾರಿ ನಮ್ಮ ಗ್ರಾಮದಲ್ಲಿ ಎರಡು ಜೋಡಿ ಎತ್ತುಗಳು ಹೋಗಿದ್ದೆವು. ಪ್ರಕಾಶ ರಬ್ಬಣ್ಣಿ ಮತ್ತು ಯಲ್ಲಪ್ಪ ಹೊರಕೇರಿ ಎಂಬಾತ ರೈತರು ಸುಮಾರು ಎರಡು ತಿಂಗಳು ತರಬೇತಿ ನೀಡಿ, ಈ ವರ್ಷ ಉಳವಿ ಜಾತ್ರೆ ಮಾಡಿದ್ದು ನಮ್ಮ ಊರಿನ ಮಟ್ಟಿಗೆ ಇತ್ತೀಚಿನ ಒಂದು ವಿಶೇಷ ಸುದ್ದಿ.

Untitled 4.png

ಬತ್ತದ ಕಣಜ

ನಮ್ಮ ಗ್ರಾಮವನ್ನು ಹಿಂದಿನ ಕಾಲದಲ್ಲಿ ಬತ್ತದ ಕಣಜ ಎಂದು ಕರೆಯುತ್ತಿದ್ದರು

Untitled 4.png

ಕಾರ್ಕಳ ಗೊಮ್ಮಟೇಶ್ವರ

ಅವತ್ತು ಸಂಜೆ ನಾವು ಜಗತ್ಪ್ರಸಿದ್ಧ ಕಾರ್ಕಳ ಗೊಮ್ಮಟೇಶ್ವರ ಮೂರ್ತಿಯ ದರ್ಶನಕ್ಕೆಂದು ಹೋದೆವು. ನಾನು ಬಹಳ ಚಿಕ್ಕವಳಿದ್ದಾಗ ಒಮ್ಮೆ ನೋಡಿದ ಜಾಗವದು.ಏಳನೇ ತರಗತಿಯಲ್ಲಿದ್ದಾಗ ಶಾಲೆಯಿಂದ ಪ್ರವಾಸ ಕರೆದುಕೊಂಡು ಬಂದಿದ್ದರು.ಅಂದಿನ ಅನುಭವಕ್ಕೂ ಇಂದಿನ ಸಂಚಲನಕ್ಕೆ ತುಂಬಾ ವ್ಯತ್ಯಾಸವಿತ್ತು. ಆಗ ಇದ್ದ ಮೆಟ್ಟಿಲುಗಳನ್ನು ಪಟಪಟನೆ ಹತ್ತುವ ಉತ್ಸಾಹವಿತ್ತಾದರೂ ಶಕ್ತಿ ಈಗಿರಲಿಲ್ಲ.. ಇನ್ನೂರಕ್ಕೂ ಹೆಚ್ಚು ಇದ್ದ ಮೆಟ್ಟಿಲುಗಳನ್ನು ಹತ್ತಿ ಗಮ್ಯವನ್ನು ತಲುಪುವಷ್ಟರಲ್ಲಿ ಉಸಿರು ಕಟ್ಟಿದಂತಾಗಿತ್ತು. ಆದರೂ ಆತ ಎತ್ತರದಲ್ಲಿ ನಿಂತಾಗ ಏನನ್ನೋ ಗೆದ್ದ ಸಾರ್ಥಕ ಭಾವ.

 

ಪ್ರವೇಶದ್ವಾರದ ಎಡಬದಿಯಲ್ಲಿ ೨೩ನೆಯ ತೀರ್ಥಂಕರ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಬಲಬದಿಯಲ್ಲಿ ೧೦ನೇ ತೀರ್ಥಂಕರ ಶ್ರೀ ಶೀತಲನಾಥ ಸ್ವಾಮಿಯ ಪುಟ್ಟ ಗುಡಿಗಳು, ಪ್ರಧಾನ ಮೂರ್ತಿಯ ಎದುರು ನಿಂತ ಕ್ಷೇತ್ರಪಾಲ, ಮತ್ತು ಬುಡದಲ್ಲಿ ಬ್ರಹ್ಮ ಯಕ್ಷನ ಶಿಲ್ಪವಿದ್ದ ಮಾನಸ್ತಂಭಗಳು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ೪೨ಅಡಿ ಎತ್ತರ, ೧೦.೩೩ಅಡಿ ಅಗಲದ, ಗುಂಗುರು ಕೂದಲಿನ, ಅಗಲ ಕಿವಿಗಳ, ಮೊಣಕಾಲುಗಳನ್ನು ಮುಟ್ಟುವ ನೀಳ ಕೈಗಳ, ಮುಖದಲ್ಲಿ ತುಂಬಿದ ಮಂದಹಾಸದ ಭಗವಾನ್ ಬಾಹುಬಲಿಯ ಏಕಶಿಲಾ ವಿಗ್ರಹ, ಹಿಂಬದಿಯಲ್ಲಿ ಸಾಲಾಗಿ ನಿಲ್ಲಿಸಿದ ಮಹಾವೀರ ಹಾಗೂ ೨೪ ಮಂದಿ ತೀರ್ಥಂಕರರ ಪುಟ್ಟ ಸುಂದರ ಮೂರ್ತಿಗಳನ್ನು ನೋಡಿ ಎಲ್ಲವನ್ನೂ ಕೆತ್ತಲು ಶಿಲ್ಪಿಗಳು ಮಾಡಿರಬಹುದಾದ ತಪಸ್ಸನ್ನು ಎಣಿಸಿ ಮನಸ್ಸು ಕೃತಜ್ಞತೆಯಿಂದ ತುಂಬಿ ಬಂತು. ಬಾಹುಬಲಿಯ ಮೂರ್ತಿಯ ಎಡಬದಿಯಲ್ಲಿರುವ ಯಜ್ಞಶಾಲೆಯು ಅಂದಿನ ದಿನಗಳಲ್ಲಿ ಹಿರಿಯರು ಲೋಕ ಕಲ್ಯಾಣಕ್ಕಾಗಿ ಮಾಡುತ್ತಿದ್ದ ಯಜ್ಞಗಳ ಸಂಭ್ರಮದ ದೃಶ್ಯಗಳನ್ನು ಕಲ್ಪಿಸಿಕೊಳ್ಳುವಂತೆ ಮಾಡಿತು. ಇಂಥ ಒಂದು ಪ್ರೇಮ ಪಾವನ ಕ್ಷೇತ್ರವನ್ನು ಸಮುದ್ರ ಮಟ್ಟದಿಂದ ಸುಮಾರು ೩೦೦ಅಡಿಗಳಷ್ಟು ಎತ್ತರದಲ್ಲಿ ಅತ್ಯಂತ ಪರಿಮಿತ ವ್ಯವಸ್ಥೆಗಳಿದ್ದ ಕ್ರಿ.ಶ.೧೪೩೨ರ ಕಾಲದಲ್ಲಿ ಕಟ್ಟಿಸಿದ ವೀರ ಪಾಂಡ್ಯ ಭೈರರಸ ವಡೆಯರ್ ಮತ್ತು ಅವನು ನೇಮಿಸಿದ ಶಿಲ್ಪಿಗಳು ಮತ್ತು ಕೆಲಸಗಾರರ ಕಲ್ಪನೆ ಹಾಗೂ ಕ್ರಿಯಾಶಕ್ತಿಗೆ ಮನಸ್ಸಿನಲ್ಲೇ ಸಾಷ್ಟಾಂಗ ನಮಿಸಿದೆ.

 

ಬದುಕಿನ ಮುಕ್ಕಾಲು ಪಾಲು ಆಯುಸ್ಸು ಕಳೆದು ಸಾವಿನ ಹೊಸ್ತಿಲಲ್ಲಿ ನಿಂತರೂ ಕಾಮ, ಕ್ರೋಧ 'ಲೋಭ' ಮೋಹಗಳಿಂದ ಬಿಡಿಸಿಕೊಳ್ಳದೆ 'ಇನ್ನೂ ಬೇಕು, ಇನ್ನೂ ಬೇಕು' ಎಂಬ ಆಸೆಗಳಿಂದ ಸದಾ ಭೋರ್ಗರೆಯುವ ಮನಸ್ಸಿನ ನಮ್ಮಂತಹ ಸಾಮಾನ್ಯರ ದೌರ್ಬಲ್ಯದ ಮುಂದೆ ಲೌಕಿಕದ ಮೋಹಗಳನ್ನು ಮೆಟ್ಟಿ ತಲೆಯೆತ್ತಿ ನಿಂತ ಭಗವಾನ್ ಬಾಹುಬಲಿಯ ಆ ಮಹಾನ್ ಮೂರ್ತಿಯ ಮುಖದಲ್ಲಿ ತುಂಬಿದ ತೇಜಸ್ಸು, ಮೈಯ ಸುತ್ತಲೂ ಬಳ್ಳಿಗಳು ಹಬ್ಬಿ ಕೊಂಡರೂ ಅದರ ಅರಿವೇ ಇಲ್ಲದೆ ತಪಸ್ಸು ಗೈಯುತ್ತ ನಿಂತ ಆ ಶಾಂತ ಗಂಭೀರ ನೋಟಗಳು ನನ್ನನ್ನು ಇನ್ನಿಲ್ಲದಂತೆ ಅಲುಗಾಡಿಸಿದವು. ಒಂದು ಕ್ಷಣ ಸಂಪೂರ್ಣ ಅಂತರ್ಮುಖಿಯಾಗಿ ನಿಂತು ಆ ತೇಜೋ ಮೂರ್ತಿಗೆ ತಲೆಬಾಗಿ ನಮಿಸಿದೆ.

 

ಬೆಟ್ಟದಿಂದ ಇಳಿದು ನಂತರ ಬುಡದಲ್ಲಿದ್ದ ಗುರು ಪಾರ್ಶ್ವನಾಥ ಮತ್ತು ಮಹಾ ಮಾತೆ ಸಿದ್ಧಿ ಪದ್ಮಾವತಿ ದೇವಿಯವರ ಬಸದಿಯನ್ನು ನೋಡಲೆಂದು ಹೋದೆವು. ಅದು ಬೀಗ ಹಾಕಿದ್ದರಿಂದ ಹೊರಗಿನಿಂದಲೇ ದರ್ಶನ ಮಾಡಿ ತಿರುಗಿ ಬಂದೆವು.

Untitled 4.png

ಉಡುಪಿ ಮಲ್ಲಿಗೆಯ ಘಮಘಮ ಭಾಗ 2

ಈ ಮಲ್ಲಿಗೆ ಬೆಳೆಗೆ ಕಡಲ ತಡಿಯ ಹವಾಗುಣವೇ ಸೂಕ್ತ. ಬೇರೆ ಕಡೆ ಅದು ಬೆಳೆಯಲು ಒಲ್ಲೆ ಎನ್ನುತ್ತದೆ. ಮಲ್ಲಿಗೆ ಹೂಗಳನ್ನು ದಂಡೆಯಂತೆ ಒಣಗಿದ ಬಾಳೆ ದಾರದಲ್ಲಿ ಎರಡೂ ಕಡೆಯೂ ಕಟ್ಟಿ ಮಾರುತ್ತಾರೆ. ಆ ಕಲೆಯೂ ಸುಂದರ. ಪರಿಣತರಂತೂ ಬಹುವೇಗದಲ್ಲಿ ಕಟ್ಟುತ್ತಾರೆ. ಘಮಘಮಿಸುವ ನೋಡಲು ಸುಂದರ, ಮುಡಿಯಲು ಹಿತಕರವಾದ ಈ ಮಲ್ಲಿಗೆಯನ್ನು ಚೆಂಡು ಮತ್ತು ಅಟ್ಟಿ ಎಂಬ ರೀತಿಯಲ್ಲಿ ಮಾರುತ್ತಾರೆ. ಒಂದು ಚೆಂಡು ಎಂದರೆ ಸರಿಸುಮಾರು ಒಂದೂವರೆ ಅಡಿ ಉದ್ದ ಇರುತ್ತದೆ. ಅಂತಹ 4 ಚೆಂಡು ಸೇರಿದಲ್ಲಿ ಅಟ್ಟಿ ಎನ್ನುತ್ತಾರೆ. ಅಟ್ಟಿಯನ್ನು 4 ಭಾಗವಾಗಿ ಕತ್ತರಿಸಲು ಅನುಕೂಲವಾಗುವಂತೆ ಹೂವನ್ನು ಹೆಣೆಯುವಾಗ ಬಾಳೆದಾರವನ್ನು ಉಳಿಸಿರುತ್ತಾರೆ. ಹೀಗಾಗಿ ಒಂದು ಅಟ್ಟಿ ಹೂವನ್ನು ಖರೀದಿಸಿದಲ್ಲಿ ಸುಲಭವಾಗಿ 4 ಪಾಲು ಮಾಡಬಹುದು. ಮಲ್ಲಿಗೆ ಚೆಂಡನ್ನು ಉದ್ದ ಜಡೆಗೂ, ಗಿಡ್ಡ ಜಡೆಗೂ, ತುರುಬಿಗೂ ಸಲೀಸಾಗಿ ಮುಡಿಯಬಹುದು. ದೇವರ ಅಲಂಕಾರಕ್ಕೂ ಸೊಗಸು.

ಉಡುಪಿ ಜಿಲ್ಲೆಯ ಈ ಮಲ್ಲಿಗೆ ಬೆಳೆಯುವ ಪ್ರದೇಶದಲ್ಲಿ ಬೆಳೆದ ಮಲ್ಲಿಗೆಯನ್ನು ಬೆಳೆಗಾರರು ಶಂಕರಪುರದ ಕಟ್ಟೆಗೆ ತರುತ್ತಾರೆ. ಇಲ್ಲಿ ಒಂದು ಮಲ್ಲಿಗೆಯ ಕಟ್ಟೆ ಇದೆ. ಇದನ್ನು ಮಲ್ಲಿಗೆ ಕಟ್ಟೆ ಎಂದೂ ಕರೆಯುತ್ತಾರೆ. ಇದೇ ಮೊದಲ ಹಂತದ ಮಾರುಕಟ್ಟೆ. ಇಂದು ಬೆಳಗ್ಗೆ ಹೂವಿನ ಚೆಂಡುಗಳನ್ನು ಬೆಳೆಗಾರರು ತಂದಾಗ, ಇಂದು ಮಾರುಕಟ್ಟೆಗೆ ಬಂದ ಹೂವಿನ ಪ್ರಮಾಣ ಮತ್ತು ನಾಳೆಯ ಬೇಡಿಕೆಯನ್ನು ಅನುಸರಿಸಿ ಮಾರಾಟ ದರ ನಿಗದಿಯಾಗುತ್ತದೆ. ಒಂದು ಅಟ್ಟಿಗೆ ಸಾಮಾನ್ಯವಾಗಿ 850 ರೂ. ದರ ಈ ಋತುವಿನಲ್ಲಿದೆ. (ಇದು ನಂತರದ ದಿನಗಳಲ್ಲಿ ಅಧಿಕಗೊಳ್ಳುತ್ತದೆ). ಒಂದು ಅಟ್ಟಿ 850 ರೂ. ದರವು ಬೆಳೆಗಾರನಿಗೆ ದಕ್ಕಿದರೆ, ಅವನು 20 ರೂ.ಗಳನ್ನು ಮಲ್ಲಿಗೆ ಕಟ್ಟೆಯ ನಿರ್ವಹಣೆಗೆ ಕೊಡಬೇಕು. ಇಲ್ಲಿಂದ ಹೂವಿನ ಅಂಗಡಿಯವರು 750 ರೂ. ದರಕ್ಕೆ ಕೊಂಡುಕೊಂಡರೆ ಉಡುಪಿಯಲ್ಲೇ 1000 ರೂ.ಗೆ ಮಾರುತ್ತಾರೆ. ಉಡುಪಿ, ಅದನ್ನು ದಾಟಿ ಮುಲ್ಕಿ, ಮಂಗಳೂರಿನ ಅಂಗಡಿಗಳಲ್ಲಿ 1200/1500 ರೂ.ಗೆ ಮಾರಾಟವಾಗುತ್ತದೆ. ಕಾಸರಗೋಡು, ಬೆಂಗಳೂರು ತಲುಪುವಾಗ ದರ ಇನ್ನಷ್ಟು ಜಾಸ್ತಿ. ಬಹುಬೇಡಿಕೆಯ ಋತುವಿನಲ್ಲಿ ಒಂದು ಅಟ್ಟಿಗೆ ಶಂಕರಪುರ ಮಲ್ಲಿಗೆ ಕಟ್ಟೆಯಲ್ಲಿಯೇ 2200 ರೂ.ವರೆಗೆ ತಲುಪುತ್ತದೆ. ಆಗ ದೂರದ ಅಂಗಡಿಗಳಲ್ಲಿ 3000 ರೂ.ವರೆಗೆ ಮಾರಾಟವಾಗುತ್ತದೆ. ಒಂದು ಅಟ್ಟಿಯನ್ನು ತಕ್ಕಡಿಯಲ್ಲಿ ಇಟ್ಟು ತೂಗಿದರೆ ಸುಮಾರು ಅರ್ಧ ಕೆ.ಜಿ. ತೂಗಬಹುದು.

ಸದ್ಯ ಈಗ ಉಡುಪಿ ಮಲ್ಲಿಗೆ ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು, ಬೆಂಗಳೂರು, ಶಿವಮೊಗ್ಗದ ಗಡಿಭಾಗಗಳಲ್ಲಿ ಮಾರಾಟವಾಗುತ್ತದೆ. ಮುಂಬೈಗೂ ಹೋಗುತ್ತಿದೆ. ಹಿಂದೆ ದುಬೈಗೆ ವಿಮಾನದಲ್ಲಿ ಕಳಿಸುವ ಪ್ರಯತ್ನಗಳು ನಡೆದಿದ್ದವು.

Untitled 4.png

ಉಳವಿ ಜಾತ್ರೆಗೆ ಚಕ್ಕಡಿಯನ್ನು ಕಟ್ಟುವುದು

ಗ್ರಾಮದಿಂದ ಪ್ರಥಮವಾಗಿ ಉಳಿವಿಗೆ ಎತ್ತುಗಳ ಮುಖಾಂತರ ಜಾತ್ರೆಗೆ ಹೋಗಿರುವ ಭಾವಚಿತ್ರ

Untitled 4.png

ಮದುವೆಯ ಸಮಯದಲ್ಲಿ ಮಾಡುವ ಒಂದು ನಮ್ಮೂರಿನ ಪದ್ಧತಿ

ನಮ್ಮೂರಿನ ಹಿರಿಯರು ವೀರಭದ್ರ ದೇವರ ಮಂತ್ರವನ್ನ ಹೇಳುವುದು

Untitled 4.png

ಕನ್ನಡಿಗರು ತಿಳಿಯಲೇ ಬೇಕಾದ ವಿಷಯ

ಇಂದಿನ ವಿಜ್ಞಾನಕ್ಕೂ ಅರ್ಥಮಾಡಿಕೊಳ್ಳಲಾಗದ ಸಂಗತಿ

Untitled 4.png

ರಾಮನಾಮದಲ್ಲಿ ನಾಮದ ಚಿಲುಮೆ

ಭಾರತದ ಪ್ರತಿಯೊಂದು ಊರು ಶ್ರೀರಾಮ ದೇವರೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತದೆ. ಶ್ರೀರಾಮ ವನವಾಸ ಸಂದರ್ಭದಲ್ಲಿ ಇಲ್ಲಿ ನೆಲೆಸಿದ್ದ, ಇಲ್ಲಿ ಸೀತೆ ಅಡುಗೆ ಮಾಡಿ, ರಾಮ-ಲಕ್ಷ್ಮಣರಿಗೆ ಬಡಿಸಿದ್ದಳು. ಸೀತೆ ಇಲ್ಲಿನ ಹೊಳೆಯಲ್ಲಿ ಬಟ್ಟೆ ತೊಳೆದು ಒಣಗಿಸಿದ್ದಳು… ಎಂದು ಹೇಳಿಕೊಳ್ಳುವುದು ಆ ಊರಿನವರಿಗೆ ಹೆಮ್ಮೆಯ ಸಂಗತಿ. ಹಾಗೆಯೇ ರಾಮನ ಬಂಟ ಹನುಮಂತನಂತೂ ಎಲ್ಲ ಊರಿನಲ್ಲಿ ದೇವಸ್ಥಾನದಲ್ಲಿ, ಮಂದಿರದಲ್ಲಿ ನೆಲೆಸಿಯೇ ಇದ್ದಾನೆ.

ತುಮಕೂರು ಜಿಲ್ಲೆಯ ದೇವರಾಯನ ದುರ್ಗದ ಬಳಿ ಇರುವ “ನಾಮದ ಚಿಲುಮೆ” ಶ್ರೀರಾಮನ ಹೆಸರಿನೊಂದಿಗೆ ಪ್ರಸಿದ್ಧವಾಗಿದೆ. ಇಲ್ಲಿ ಒಂದು ನೈಸರ್ಗಿಕ ಚಿಲುಮೆ ಇದೆ. ಎಂತಹ ಬಿರುಬಿಸಿಲಿನ ಕಾಲವೇ ಆಗಿರಲಿ, ಇಲ್ಲಿನ ಚಿಲುಮೆಯಲ್ಲಿ ನೀರು ಬತ್ತುವುದಿಲ್ಲ. ಸರ್ವಕಾಲವೂ ಸಿಹಿ ನೀರು ಇಲ್ಲಿ ಚಿಮ್ಮುತ್ತದೆ. ಈ ಚಿಲುಮೆ ವೃತ್ತಾಕಾರದಲ್ಲಿ ರೂಪುಗೊಂಡಿದೆ.

ಈ ಚಿಲುಮೆ ‘ನಾಮದ ಚಿಲುಮೆ’ಯಾಗಿ ರಾಮನೊಂದಿಗೆ ಹೆಸರು ಪಡೆದಿರುವುದು ಜನಮಾನಸದಲ್ಲಿ ನೆಲೆಯಾಗಿರುವುದನ್ನು ನೋಡೋಣ. ಶ್ರೀರಾಮ, ಸೀತೆ, ಲಕ್ಷ್ಮಣರು ತಮ್ಮ ವನವಾಸದ ಅವಧಿಯಲ್ಲಿ ಸ್ವಲ್ಪ ಸಮಯ ದೇವರಾಯನದುರ್ಗದ ಕಾಡಿನಲ್ಲಿ ಸಮಯ ಕಳೆದಿದ್ದರಂತೆ. ಈ ಸಂದರ್ಭದಲ್ಲಿ ಒಮ್ಮೆ ರಾಮನಿಗೆ ಹಣೆಗೆ ತಿಲಕ ಇಟ್ಟುಕೊಳ್ಳಬೇಕಾಗಿ ಬಂತು. ಹಣೆಯ ಚರ್ಮಕ್ಕೆ ಹೆಚ್ಚು ಕಾಲ ತಿಲಕ ಅಂಟಿಕೊಂಡಿರಬೇಕಲ್ಲ. ಹಾಗಾಗಿ ಹಣೆಗೆ ನೀರನ್ನು ಲೇಪಿಸಿ ತಿಲಕ ಇಟ್ಟುಕೊಳ್ಳುತ್ತಾರೆ. ಹಾಗೆಯೇ ರಾಮನೂ ತಿಲಕವಿಡಲು ನೀರನ್ನು ಹುಡುಕುತ್ತಾನೆ. ಸುತ್ತಲೂ ನೀರು ಕಂಡುಬರುವುದಿಲ್ಲ. ಆಗ ಅವನು ನೆಲಕ್ಕೆ ಬಾಣ ಹೂಡುತ್ತಾನೆ. ಅವನ ಬಾಣದ ಚೂಪು ಭೂಮಿಗೆ ನೆಟ್ಟಾಗ ಅಲ್ಲಿ ನೀರು ಚಿಮ್ಮುತ್ತದೆ. ಖುಷಿಯಿಂದ ರಾಮ ನೀರನ್ನು ಹಣೆಗೆ ಲೇಪಿಸಿಕೊಂಡು, ತಿಲಕವನ್ನಿಟ್ಟುಕೊಂಡು ಮುಂದುವರಿಯುತ್ತಾನೆ. ಹೀಗಾಗಿ ಇದು ನಾಮದ ಚಿಲುಮೆಯಾಗುತ್ತದೆ. ರಾಮನು ಆದರ್ಶ ಪುರುಷ. ನಮ್ಮ ಜನ ಅವನ ಆರಾಧನೆಯಲ್ಲಿ ಖುಷಿ ಪಡುತ್ತಾರೆ.

ನಾಮದ ಚಿಲುಮೆಯ ನೀರನ್ನು ಪವಿತ್ರ ತೀರ್ಥವಾಗಿ ಸ್ವೀಕರಿಸುತ್ತಾರೆ ಇಲ್ಲಿನ ಜನರು.

ನಾಮದಚಿಲುಮೆ ಇರುವ ಸ್ಥಳದ ಸನಿಹದಲ್ಲಿ ಜಿಂಕೆಗಳ ಮೃಗಾಲಯವಿದೆ. ಸುತ್ತಲು ಕಾಡು ಇದೆ. ಕೋತಿಗಳು, ನಾನಾ ಪಕ್ಷಿ ಸಮೂಹವೂ ಹಾಯಾಗಿ ಕುಣಿಯುತ್ತ, ಜಿಗಿಯುತ್ತ ಮನಕ್ಕೆ ಮುದ ನೀಡುತ್ತಿವೆ. ಇನ್ನೂ ಒಂದು ವಿಶೇಷವೂ ಇಲ್ಲಿದೆ. ಅರಣ್ಯ ಇಲಾಖೆಯು ಇಲ್ಲಿ ಔಷಧ ಸಸ್ಯಗಳನ್ನು ಬೆಳೆಸುವ ನರ್ಸರಿಯನ್ನು ಇಲ್ಲಿ ಕೈಗೊಂಡಿದೆ. 300ಕ್ಕೂ ಹೆಚ್ಚಿನ ಔಷಧ ಸಸ್ಯಗಳನ್ನು ಈ ಉದ್ಯಾನದಲ್ಲಿ ಬೆಳೆಯಲಾಗುತ್ತಿದೆ. ಇಲ್ಲಿಗೆ ಬಂದವರು ದೇವರಾಯನದುರ್ಗಕ್ಕೆ ಭೇಟಿ ನೀಡಬಹುದು. ಬೆಟ್ಟದ ಮೇಲಿನ ಯೋಗ ನರಸಿಂಹ ಮತ್ತು ಭೋಗ ನರಸಿಂಹ ದೇವಾಲಯವನ್ನೂ ಸಂದರ್ಶಿಸಬಹುದು.

Untitled 4.png

ಒಂದು ಊಟದ ಕತೆ

ಈ ಕರೋನ ಬಂದು ಆಪೀಸ್ ಕೆಲ್ಸ ಎಲ್ಲಾ ಮನೇಲೆ ಮಾಡಂಗಾಯ್ತು. ನಾವು ಕರೋನ ಟೈಮಲ್ಲಿ ನಮ್ಮ ಹೊಲದತ್ರ ಒಂದು ಚಿಕ್ಕ ಶೆಡ್ ಕಟ್ಟಿದ್ವಿ. ಅದು ರೆಡಿ ಆದ್ಮೇಲೆ ನಾನು ವರ್ಕ್ ಪ್ರಮ್ ಹೋಮ್ ಅನ್ನು ವರ್ಕ್ ಪ್ರಮ್ ಫಾರ್ಮ್ ಮಾಡಿಕೊಂಡೆ. ಇಲ್ಲಿ ನೆಟ್ ಕೂಡ ಚೆನ್ನಾಗಿ ಸಿಗೋದ್ರಿಂದ ಶೆಡ್ ನಿಂದಲೇ ಕೆಲಸ ಮಾಡೋಕೆ ಶುರು ಮಾಡ್ದೆ. ನಮ್ಮೊಲ ಊರಿಂದ ದೂರ ಇರೋದ್ರಿಂದ ಮದ್ಯಾನಕ್ಕೆ ಊಟನ ಮನೆಯಿಂದ ಬೆಳಗ್ಗೆನೇ ತರ್ಬೇಕು.

ಇವತ್ತು ಅದೇ ತರ ತಿಂಡಿ ತಿಂದು ಊಟ ಬಾಕ್ಸ್ ಗೆ ಹಾಕ್ಕೊಂಡು ನಮ್ಮ ಅಣ್ಣನ ಜೊತೆಗೆ (ನಾವು ಅಪ್ಪನ್ನ ಅಣ್ಣ ಅಂತ ಕರಿತೀವಿ) ಗಾಡೀಲಿ ಹೊಲದತ್ರ ಬಂದೆ. (ಇನ್ನೊಂದು ವಿಷಯ ಅಂದ್ರೆ ನನಗೆ ಬೈಕ್ ಹೋಡಿಸೋದು ಬರಲ್ಲ. ಅವರ್ನ ಇವರ್ನ ಅವಲಂಬಿಸಬೇಕು.) ನನಗೆ ಇವತ್ತು ಬಿಜಿ ಕೆಲ್ಸ ಇದ್ದಿದ್ದರಿಂದ ಗಡಿಬಿಡಿಲಿ ಗಾಡಿಯಿಂದ ಇಳಿದು ಬಂದೆ. ಅಣ್ಣ ವಾಪಾಸ್ ಹೋದ್ರು. ಮದ್ಯಾನ ಎರ್ಡು ಗಂಟೆತಕ ಕೆಲ್ಸ ಮಾಡ್ದೆ. ಆವಾಗ ಹೊಟ್ಟೆ ಕಡೆ ಗಮನ ಬಂದು ಗ್ಯಾಪ್ನಾ ಮಾಡ್ಕಂಡ್ರೆ ಊಟದ್ ಬಾಕ್ಸ್ ನ ಗಾಡೀಲೆ ಬಿಟ್ಟಿರೋದು ಗೊತ್ತಾಯ್ತು. ಊರು ಬೇರೆ ದೂರ. ಈಗೇನಪ್ಪ ಮಾಡೋದು?

ಚೇ ಚೇ ಎಂತಾ ಮರವು ನನಗೆ, ಬಿಡು ಯಂಗಿದ್ರು ಕಡ್ಲೆಗಿಡ ಇದಾವಲ್ಲ, ತಿಂದು ನೀರು ಕೊಡಿಯೋಣ ಅಂದುಕೊಂಡೆ. ಆದ್ರೂ ಹೊಟ್ಟೆ ಊಟನೇ ಕೇಳುತ್ತೆ, ಅದು ನನ್ನ ಮಾತು ಕೇಳಬೇಕಲ್ಲ, ಏನು ಮಾಡೋದು? ಯೋಚನೆ ಮಾಡ್ದೆ.

ಶೆಡ್ ನಲ್ಲಿ ಹದಿನೈದು ದಿನದಿಂದೆ ತಂದಿಟ್ಟಿದ್ದ ಸಲ್ಪ ಅಕ್ಕಿ ಕಣ್ಣಿಗೆ ಬಿತ್ತು. ಅಲ್ಲೆ ಪಾತ್ರೆನೂ ಇತ್ತು. ರೂಮಿನ ಪಕ್ಕದಲ್ಲಿ ಮೆಣಸಿನ ಗಿಡ, ಬೆಂಡೆಗಿ ಹಾಕಿದ್ದು ನೆನಪಾಯ್ತು. ಪಟಪಟ ಅಂತ ಹೊಲೆ ಜೋಡಿಸಿ, ಅಕ್ಕಿ ಇಟ್ಟು, ಮೆಣಸಿನ ಮಡಿಗೋಗಿ ಮೂರು ಮೆಣಸಿನ ಕಾಯಿ, ಎರಡು ಬೆಂಡೆಕಾಯಿ ಕಿತ್ತೆ, ಪಕ್ಕದಲ್ಲಿ ಅಲಸಂದೆ ಗಿಡ ಕಾಣುಸ್ತು, ಅದೂ ಒಂದೆರಡು ಕಿತ್ತೆ, ಹುಣಸೇ ಗಿಡದಲ್ಲಿ ಒಂದು ಹಸಿ ಹುಣಸೇಕಾಯಿ ಕಿತ್ತು ತಂದೆ.

ಅಕ್ಕಿ ಇಟ್ಟಿದ್ದ ಹೊಲೆಯ ಕೆಂಡದ ಮೇಲೆ ಇದೆಲ್ಲಾ ಸುಟ್ಟು ನೀರಲ್ಲಿ ತೊಳ್ದು ಕಿವುಚಿದೆ, ಕಿಟಿಕಿ ಮೇಲೆ ರಾಗಿ ಬೆಳಸೆ ಮಾಡಕೆ ಅಂತ ತಂದಿಟ್ಟಿದ್ದ ಉಪ್ಪು ಇತ್ತು, ಅದೂ ಸೇರ್ಸಿ ಚೆನ್ನಾಗಿ ಕಿವುಚಿದೆ. ಇನ್ನೇನು ಸೂಪರ್ ಆದಾ ಕಿವುಚಾಂಬ್ರ ರೆಡಿ.

ತಟ್ಟೆ ಇರ್ಲಿಲ್ಲ, ಹೋಗಿ ನಮ್ಮ ಬಾಳೆ ತೋಟದಲ್ಲಿ ಒಂದು ಒಳ್ಳೆ ಅರ್ಗದೆಲೆ ತಂದು ಬಿಸಿಬಿಸಿ ಅನ್ನ, ರುಚಿರುಚಿಯಾದ ಸಾರು ಹಾಕ್ಕಂಡೆ, ಊಟ ಮಾಡೋ ಮುಂಚೇನೆ ಬಾಯ್ನೀರು ಶುರು.

ಸರಿಯಾಗಿ ಹೊಟ್ಟೆ ಹಸಿದಿದ್ದಕ್ಕೂ ಒಳ್ಳೆ ಬಾಳೆ ಎಲೆ ಊಟ ಸಿಕ್ಕಿದ್ದಕ್ಕೂ ಅಬ್ಬಾ. ಅಂತೂ ಊಟ ಮರ್ತ ನನಗೆ ಪಗಡದಸ್ತಾದ ಊಟ ಆಯ್ತು. ಎಂತಾ ರುಚಿ ಏನೂ ಊಟ, ವಾವ್ ಸೂಪರ್ರೋ ಸೂಪರ್.

 

ನಮ್ಮ ಜೀವನದ್ದಲ್ಲೂ ಹಿಂಗೆಕಣ್ರಿ. ನಾವೇನೋ ಪ್ಲಾನ್ ಮಾಡಿರ್ತೀವಿ, ಆದ್ರೆ ಆದು ಇನ್ನೇನೋ ಆಗುತ್ತೆ. ಆದ್ರೆ ಬಾಳ ಅಂಗಾದ್ದೇ ತಡ ಖಿನ್ನ ಆಗೋಬಿರ್ಡಾತಾರೆ, ಗಾಬರಿ ಆಗ್ತಾರೆ, ಭಾವಾವೇಶಕ್ಕೆ ಒಳಗಾಗುತ್ತಾರೆ, ಸಮಸ್ಯೆ ಅರ್ಥ ಮಾಡಿಕೊಂಡು ಪರಿಹಾರ ಮಾಡ್ಕೋಳೋ ಬದ್ಲು ಜೀವನನೇ ಕಳಕೊಂಡು ಬಿಟ್ಟಿರೋದು ನೋಡ್ತೀವಿ.

 

ನಮ್ಮ ಸೈಕಾಲಜಿಸ್ಟ್ ಒಬ್ಬ ಇದಾನೆ, ಅವನ ಹೆರ್ಸು ಕೋಹ್ಲರ್ ಅಂತ. ಅವನು ಚಿಂಪಾಜಿ ಮೇಲೆ ಒಂದು ಪ್ರಯೋಗ ಮಾಡಿ ಒಂದು ಸಿದ್ದಾಂತವನ್ನು ಕಂಡಿಡಿತಾನೆ. ಅದನ್ನು ಅಂತರ್ದೃಷ್ಟಿ ಕಲಿಕಾ ವಿಧಾನ ಅಂತ ಕರಿತಾನೆ. ಅದೇನಪ್ಪ ಅಂದ್ರೆ ಸಮಸ್ಯೆ ಬಂದ ತಕ್ಷಣ ಭಾವವೇಶಕ್ಕೆ ಒಳಗಾಗದೆ ಸ್ವಲ್ಪ ವಿವೇಚನೆಯಿಂದ ನಿಮ್ಮ ಇಡೀ ಸಮಸ್ಯೆಯನ್ನು ಪೂರ್ಣವಾಗಿ ಅವಲೋಕಿಸಿದರೆ ನಿಮಗೆ ಖಂಡಿತ ಅದರಲ್ಲೇ ಒಂದು ಪರಿಹಾರ ಹೊಳೆಯುತ್ತೆ. ಇದೇ ಅಂತರ್ದೃಷ್ಟಿ. ಅದು ಬಿಟ್ಟು ನಾವು ಗಾಬರಿ ಅದ್ರೆ ಸಮಸ್ಯೆ ಇನ್ನೂ ಗಂಭೀರ ಆಗುತ್ತೆ, ಸಂಕೀರ್ಣ ಆಗುತ್ತೆ. ಅದಕ್ಕೆ ಸ್ವಲ್ಪ ತಾಳ್ಮೆ ಬೇಕು. ಜೀವನದಲ್ಲಿ ತಾಳ್ಮೆ ಮತ್ತು ವಿವೇಕ ಕಳಕೊಬಾರದು.

ಆಯ್ತು ಬಿಡಿ. ಊಟ ಆದ್ಮೇಲೆ ಕೊಹ್ಲರ್ ಕೂಡ ನೆನಪಾದ. ಊಟದ ಪುರಾಣ ಉದ್ದ ಆಯ್ತು ಅನ್ಸುತ್ತೆ ಕ್ಷಮಿಸಿ

#SGF

Untitled 4.png

ರಾತ್ರಿಯಲ್ಲಿ ನಮ್ಮೂರು ಹೇಗೆ ಕಾಣುತ್ತೆ ಗೊತ್ತಾ?

Untitled 4.png

ರಾಮದುರ್ಗದ ಪ್ರಾಚೀನತೆ

ರಾಮದುರ್ಗದ ಇತಿಹಾಸವನ್ನು ಗಮನಿಸಿದಲ್ಲಿ ಪಾಚೀನ ಕಾಲದಿಂದಲೂ ರಾಮದುರ್ಗ ಅಸ್ಥಿತ್ವದಲ್ಲಿದೆ. ರಾಜರುಗಳು ತಮ್ಮ ಆಳ್ವಿಕೆಯಲ್ಲಿ ಹಲವಾರು ದಾನಶಾಸನಗಳನ್ನು ಹಾಕಿಸಿರುವುದು ಕ್ಷೇತ್ರಕಾರ್ಯದಿಂದ, ಅಧ್ಯಯನದಿಂದ ತಿಳಿದುಬರುತ್ತದೆ.

ಬಾದಾಮಿ ಚಾಲುಕ್ಯರ ಮೊದಲನೇ ಕೀರ್ತಿವರ್ಮ(ಕತ್ತಿ ಅರಸ) ಗೊಡಚಿಯ ವೀರಶೈವ ಮಠಕ್ಕೆ ದಾನ ನೀಡಿದರ ಬಗ್ಗೆ ತಿಳಿಸುವ ತಾಮ್ರಪಟ ದೊರೆಕಿದೆ. ಅದು ಸುಮಾರು ಕ್ರಿ. ಶಕ. ೬ನೇ ಶತಮಾನದಲ್ಲಿ ಹೊರಡಿಸಿದ್ದಾಗಿದೆ. (ಕ್ರಿ. ಶ. ೫೭೮) ಹಳಗನ್ನಡ ಲಿಪಿಯಲ್ಲಿದ್ದು, ಸಂಸ್ಕೃತ ಭಾಷೆಯಲ್ಲಿ ಬರೆಸಲಾಗಿದೆ. ತಾಮ್ರಪಟವನ್ನು ಎಸ್.ಸಿ. ನಮದಿಮಠ ಅವರು ಕ್ರಿ. ಶ ೧೯೨೭ರಲ್ಲಿ ಶೋಧಿಸಿ ಶಾಸನದ ಕುರಿತು ಎರಡು ಲೇಖನಗಳನ್ನು ಪ್ರಕಟಿಸಿದರು. ಅದರ ಪಠ್ಯದಲ್ಲಿರುವ ದೋಷಗಳನ್ನು ಗುರುತಿಸಿದ ಪಿ.ಬಿ. ದೇಸಾಯಿಯವರು ಅದನ್ನು ಅಧ್ಯಯನ ಮಾಡಿ ಎಫಿಗ್ರಾಫಿಯಾ ಇಂಡಿಕಾ ಸಂ. ೨೮ (೧೯೮೬-೫೦)ರಲ್ಲಿ ಪ್ರಕಟಿಸಿದರು.

ಬಾದಾಮಿ ಚಾಲುಕ್ಯರ ವಂಶದ ಪ್ರಶಸ್ತಿ ಈ ಶಾಸನದ ಆರಂಭದಲ್ಲಿದೆ. ಈ ಅರಸನು ತನ್ನ ಆಳ್ವಿಕೆಯ ೧೨ನೇ ವರ್ಷದಲ್ಲಿ ವ್ಯಾಗ್ರಸ್ವಾಮಿಯ ವಿನಂತಿಯ ಮೇರೆಗೆ ಪ್ರಸಿದ್ಧ ಭಾಷಣ ಕೃಷ್ಣಸ್ವಾಮಿನ್ ಎಂಬುವವನಿಗೆ ಭೂದಾನವನ್ನು ನೀಡಿದನೆಂದು ಹೇಳಲಾಗಿದೆ.

ರಾಮದುರ್ಗ ತಾಲ್ಲೂಕಿನ ನಂದಿಹಾಳ ಗ್ರಾಮದಲ್ಲಿ ಮಾರುತಿ ದೇವಾಲಯದ ಆವರಣದಲ್ಲಿ ಮುರಿದು ತುಂಡಾದ ಶಾಸನದಲ್ಲಿ ದತ್ತಿ ನೀಡಿದ ಬಗ್ಗೆ ಉಲ್ಲೇಖವಿದೆ. ಇದಿ ಕ್ರಿ. ಶ. ೧೦೯೫ರಲ್ಲಿ ಕಲ್ಯಾಣ ಚಾಲುಕ್ಯರ ಅರಸ ಆರನೇ ವಿಕ್ರಮಾದಿತ್ಯ (ತ್ರಿಭುವನ ಮಲ್ಲ) (ಕ್ರಿ. ಶ. ೧೦೭೬-೧೧೨೭)ನ ಸಾಮಂತ ರಾಜನಾದ ಮಲ್ಲಗಾವುಂಡನು ಹಾಕಿಸಿದ ಶಾಸನ. ಇದು ಕನ್ನಡ ಭಾಷೆ, ಕನ್ನಡ ಲಿಪಿಯಲ್ಲಿದೆ. ಅಲ್ಲಿನ ಅಧಿಕಾರಿಯಾದ ಮಲ್ಲಗಾವುಂಡನೆAಬುವವನು ಅಲ್ಲಿನ ಮೂಲಸ್ಥಾನ ದೇವರಿಗೆ ದತ್ತಿ ನೀಡಿದರೆನ್ನಲಾಗಿದೆ. ಈ ಶಾಸನದಲ್ಲಿ ಮನೆಯ ನಿವೇಶನ ಕೊನೆಯಲ್ಲಿ ಶಾಸನದ ಫಲಶೃತಿ ಮತ್ತು ಶಾಪಾಶಯವಿದೆ. ಶಾಸನದ ಕೊನೆಯ ಭಾಗದಲ್ಲಿ ಇನ್ನೊಂದು ಕಾಲದ ದತ್ತಿಯ ಉಲ್ಲೇಖವಾಗಿದೆ. ಬಸವಣ್ಣನೆಂಬುವನು ಕಲ್ಕುಟಿಗನೆಂದು ಉಕ್ತವಾದಂತೆ ಕಾಣುತ್ತದೆ.

Untitled 4.png

ಶಿರಸಿ

ನನ್ನ ಊರು ಸಿರಸಿ. ನನ್ನ ಊರಿನ ಹೆಸರನ್ನು ಹಲವರು ಬೇರೆ ಬೇರೆ ರೀತಿಯಲ್ಲಿ ಬರೆಯುತ್ತಾರೆ. ಶಿರಸಿ, ಸಿರ್ಸಿ ಎಂತಲೂ ಬರೆಯತ್ತಾರೆ. ಶಿರಸಿ ಎಂದು ಹೆಸರು ಬಂದುದು ಈ ತಾಲೂಕಿನಲ್ಲಿ ಧಾರಾಳವಾಗಿದ್ದ ಶಿರೀಶ ವೃಕ್ಷಗಳಿಂದಾಗಿ. ಇತ್ತೀಚಿನ ವರ್ಷಗಳಲ್ಲಿ ಎಲ್ಲ ಕಡೆಗಳಲ್ಲಿಯಂತೆ ನಮ್ಮ ಊರಿನಲ್ಲಿಯೂ ಈ ಮರಗಳು ಅಪರೂಪವಾಗಿವೆ.

ಶಿರಸಿ ತಾಲೂಕು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ. ಉತ್ತರ ಕನ್ನಡ ಜಿಲ್ಲೆಯ ಒಂದು ವಿಶೇಷ ಗಮನಾರ್ಹವಾದುದು. ಏಕೆಂದರೆ ಈ ಜಿಲ್ಲೆ ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಯ ಸೆರಗನ್ನು ಹೊಂದಿರುವ ಸುಂದರವಾದ ಪ್ರದೇಶ. ಇಂತಹ ವಿಶೇಷತೆ ಬೇರೆ ಜಿಲ್ಲೆಯಲ್ಲಿ ಕಾಣಸಿಗದು.

ಶಿರಸಿ ನಗರದಲ್ಲಿರುವ ಹೆಚ್ಚಿನವರು 3-4 ತಲೆಮಾರುಗಳ ಹಿಂದೆ ಘಟ್ಟದ ಕೆಳಗಿನಿಂದ ಅಂದರೆ ಕರಾವಳಿ ಪ್ರದೇಶದಿಂದ ಕುಮಟಾ, ಅಂಕೋಲಾ ಇತರ ಕಡಲತೀರದ ಪ್ರದೇಶದಿಂದ ವಲಸೆ ಬಂದವರು. ಶಿರಸಿ ಪಟ್ಟಣದಲ್ಲಿ ಹಿಂದುಗಳು, ಕ್ರೈಸ್ತರು, ಮುಸ್ಲಿಂರು ನೆಲೆಸಿದ್ದಾರೆ. ಶಾಂತಿ, ಸಹಬಾಳ್ವೆಗೆ ನನ್ನೂರು ಪ್ರಸಿದ್ಧ. ಯಾವುದೇ ಕೋಮುಗಲಭೆಯ ತಂಟೆ ತಕರಾರು ಇಲ್ಲ. ಗಣೇಶಚತುರ್ಥಿ ಸಂದರ್ಭದಲ್ಲಿ ಊರಿನ ಎಲ್ಲೆಡೆಯೂ ಗಣೇಶನ ವಿಗ್ರಹಗಳನ್ನಿಟ್ಟು ಪೂಜಿಸುತ್ತಾರೆ. ಎಲ್ಲ ಧರ್ಮೀಯರು ಗಣೇಶನ ದರ್ಶನ ಪಡೆಯುತ್ತಾರೆ.

ಶಿರಸಿ ಎಂದೊಡನೆ ಎಲ್ಲರಿಗೂ ನೆನಪಾಗುವುದು ಶ್ರೀ ಮಾರಿಕಾಂಬಾ ದೇವಿ. ಶಿರಸಿ ಮಾರಿಕಾಂಬಾ ದೇವಸ್ಥಾನ ಅತ್ಯಂತ ಶಕ್ತಿಸ್ಥಳವೆಂದು ಪ್ರಸಿದ್ಧಿ. ಭಕ್ತಿಯ ಸ್ಥಳ. ಶಿರಸಿಯವರೆಲ್ಲ ಈ ದೇವತೆಯನ್ನು ‘ಅಮ್ಮನವರು’ ಎಂದೇ ಕರೆಯುತ್ತಾರೆ. ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಅತ್ಯಂತ ಪ್ರಸಿದ್ಧ. ಜಾತ್ರೆ ಇಲ್ಲದ ವರ್ಷ ಕಾಮನಹುಣ್ಣಿಮೆಯ ಸಂದರ್ಭದಲ್ಲಿ ಸುಮಾರು 2 ತಿಂಗಳು ನಡೆಯುವ ಬೇಡರ ವೇಷ ಕುಣಿತವಂತೂ ಜಾನಪದ ಸಿರಿ ಎಂದೇ ಹೇಳಬೇಕು. ಅದರಂತೆ ಯಕ್ಷಗಾನವೂ ನನ್ನೂರಿನ ಜನತೆಗೆ ಪ್ರಿಯ.

ನನ್ನೂರಿನಲ್ಲಿ ದೇವಿಕೆರೆ, ಕೋಟೆಕರೆಗಳು ಐತಿಹಾಸಿಕ ಮಹತ್ವವನ್ನು ಹೊಂದಿವೆ. ಸೋಂದಾ, ಸ್ವರ್ಣವಲ್ಲಿ, ಸಹಸ್ರಲಿಂಗ, ಕನ್ನಡದ ಮೊದಲ ರಾಜಮನೆತನ ಕದಂಬರ ರಾಜಧಾನಿ ಬನವಾಸಿ, ಯಾಣದ ಶಿಲಾ ಬೆಡಗು, ಮಂಜುಗುಣಿ ದೇವಸ್ಥಾನ, ಇತರ ಪ್ರದೇಶಗಳು ನಮ್ಮ ಸಮೃದ್ಧ ಮತ್ತು ಸಾಂಸ್ಕೃತಿಕ, ಐತಿಹಾಸಿಕ ನೆಲಗಟ್ಟನ್ನು ಹೊಂದಿವೆ. ಸ್ವಾತಂತ್ರ್ಯ ಹೋರಾಟದಲ್ಲೂ ನನ್ನೂರು ಮುಂದಿತ್ತು. ವಿಶೇಷವಾಗಿ ಮಹಿಳಾ ಹೋರಾಟ ಗಮನಾರ್ಹ. ನನ್ನೂರಿನ ಬಗ್ಗೆ ತುಂಬಾ ಹೇಳಲಿಕ್ಕಿದೆ. ಮುಂದೆ ಹೇಳೋಣ. ನೀವೂ ನನ್ನೂರಿನ ಅಂದರೆ ನಮ್ಮೂರು ಶಿರಸಿಯ ಬಗ್ಗೆ ಬರೆಯಿರಿ. ಸಾಂಸ್ಕೃತಿಕ ಕಲೆಗಳು, ನಶಿಸಿದ ಕಾವಿ ಕಲೆಯ ಕುರಿತಾಗಿಯೂ ನಿಮ್ಮ ಬರಹ ಇರಲಿ. ಹಾಗೆಯೇ ಉಳಿದವರು ಅವರೂರಿನ ವಿಶೇಷತೆಯ ಬಗ್ಗೆಯೂ ದಾಖಲಿಸೋಣ. ಶಾಸನಗಳು, ಕೆರೆಕಟ್ಟೆಗಳು, ಆಚರಣೆಗಳು, ಸಂಪ್ರದಾಯಗಳನ್ನೂ ಉಲ್ಲೇಖಿಸಿ.

Untitled 4.png

ನಮ್ಮೂರ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಸಾಕ್ಷರತೆಯ ಪಾಠ

ಆಧುನಿಕ ಪ್ರಪಂಚದಲ್ಲಿ ಕಂಪ್ಯೂಟರ್ ಜ್ಞಾನವನ್ನು ಪ್ರತಿಯೊಬ್ಬರು ಪಡೆಯಬೇಕು ಈಗಂತೂ ಕಂಪ್ಯೂಟರ್ ತರಬೇತಿ ನೀಡಲು ಖಾಸಗಿ ಸಂಸ್ಥೆಗಳು ಪ್ರಾರಂಭವಾಗಿ ತರಬೇತಿಯನ್ನು ಒದಗಿಸುತ್ತಿದೆ. ಅದಕ್ಕಾಗಿಯೇ ಅವಧಿಗಳು, ಆಧುನಿಕ ಕಲಿಕಾ ಸಾಮಗ್ರಿಗಳು ಎಲ್ಲಾನೂ ಲಭ್ಯವಿರುತ್ತದೆ , ಆದರೆ ಗ್ರಾಮೀಣ ಪ್ರದೇಶದ, ನಗರ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳಿಗೂ ಕಂಪ್ಯೂಟರ್ ಜ್ಞಾನ ಪಡೆಯುವಲ್ಲಿ ಅವಕಾಶ ವಂಚಿತರಾಗಿರುತ್ತಾರೆ. ಅದಕ್ಕಾಗಿಯೇ ನಮ್ಮಂತ ಸಾಮಾನ್ಯ ಯುವಕರು ಕಂಪ್ಯೂಟರ್ ,ಜ್ಞಾನ ಪಡೆದವರು ನಾವು ಕಲಿತ ಶಾಲೆ,ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್ ಸಾಕ್ಷರತೆಯ ಬಗ್ಗೆ ನಮ್ಮ ಸಮಯವನ್ನು ಮೀಸಲಿಟ್ಟು ಅವರಿಗೆ ಕಲಿಸಬೇಕು ಮಕ್ಕಳಿಗೂ ಅನುಕೂಲವಾಗುತ್ತದೆ.

Untitled 4.png

ಸಂವಿಧಾನ ದಿನಾಚರಣೆಯ ಆಚರಣೆ

ರಾಜೇಂದ್ರ ನಗರದಲ್ಲಿರುವ ಜ್ಞಾನ ಗಂಗೋತ್ರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಂವಿಧಾನ ಸಮರ್ಪಣೆ ದಿನವನ್ನು ವಿಶೇಷವಾಗಿ ಆಚರಿಸಲಾಯಿತು,ಮಕ್ಕಳಿಗೆ ಸಂವಿಧಾನ ರಚನೆಯ ಇತಿಹಾಸ ಮಹತ್ವದ ಬಗ್ಗೆ ವಿಶೇಷ ಹಕ್ಕುಗಳು ಕರ್ತವ್ಯಗಳ ಬಗ್ಗೆ ತಿಳಿಸಲಾಯಿತು ಹಾಗೂ ಸಂವಿಧಾನದ ಪೀಠಿಕೆಯನು ಓದಲಾಯಿತು ಹಾಗೂ ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿ ಗೋವಿತ್ ಕಿರಣ್

ಶಾಲೆಯು ಮುಖ್ಯೋಪಾಧ್ಯಾಯರಾದ ಶ್ರೀ ಸಚ್ಚಿದಾನಂದ, ಶಿವಣ್ಣ ಶೆಟ್ಟಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Untitled 4.png

ಹೆಬ್ಬಕ್ಕ ಗ್ರಾಮದಲ್ಲಿ ನಮ್ಮ ರಾಮ – ನಮ್ಮ ಹಬ್ಬ!

ಅಯೋಧ್ಯಾ ರಾಮಮಂದಿರದ ಉದ್ಘಾಟನೆವನ್ನು ನಮ್ಮ ಗ್ರಾಮದಲ್ಲೂ ಶಾಲೆಯ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಒಟ್ಟಾಗಿ, ಭಕ್ತಿಭಾವದಿಂದ ಆಚರಿಸಿದ್ದೇವೆ ಎಂಬುದು ನಮ್ಮ ಹೆಮ್ಮೆ!

ನಮ್ಮೆಲ್ಲರ ಹೃದಯದಲ್ಲಿ ನೆಲೆಗೊಂಡ ರಾಮನನ್ನು ಸ್ಮರಿಸುತ್ತ, ಗ್ರಾಮಸ್ಥರ ಸಮ್ಮುಖದಲ್ಲಿ ನಮನ ಸಲ್ಲಿಸಲಾಯಿತು.

Untitled 4.png

ಕಂದೇಗಾಲದ ರಾಮ ದೇವರು..

ಇಂದು ಕಂದೇಗಾಲ ಗ್ರಾಮದಲ್ಲಿ ರಾಮ ದೇವರು ಮರು ಸ್ಥಾಪಿಸಲ್ಪಟ್ಟಿತು.

Untitled 4.png

ಹುಲ್ಲೇಮಾಳ ಇತಿಹಾಸ

ಹುಲ್ಲೇಮಾಳ – ನಮ್ಮ ಈ ಊರಿನ ಹೆಸರು ಹುಟ್ಟಿದ ಹಿನ್ನಲೆ ವಿಶಿಷ್ಟವಾಗಿದೆ. ಇಡೀ ಊರಿನ ಪೂರ್ವ ಭಾಗದಲ್ಲಿ ಹುಲ್ಲು ಹೆಚ್ಚು ಬೆಳೆದಿದ್ದರಿಂದ ಆ ಪ್ರದೇಶವು ಜಾನುವಾರುಗಳು ಮೇಯುವ ಜಾಗವಾಗಿತ್ತು. ಮುಂದೆ ಅಲ್ಲಿನ ಜಮೀನಿನಲ್ಲಿ ಮನೆಗಳು ನಿರ್ಮಾಣವಾಗುತ್ತಿದ್ದಂತೆ "ಹುಲ್ಲೇಮಾಳ" ಎಂಬ ಹೆಸರು ಸ್ಥಾಯಿಯಾಯಿತು.

 

ನಮ್ಮ ಗ್ರಾಮದಲ್ಲಿ ವರ್ಷಕ್ಕೊಮ್ಮೆ ಇಲ್ಲಿನ ಶ್ರೀ ಮಹದೇಶ್ವರ ಹಾಗೂ ಶ್ರೀ ಬಸವೇಶ್ವರರಿಗೆ 2 ದಿನಗಳ ವಿಶೇಷ ಜಾತ್ರೆ ನಡೆಯುತ್ತದೆ.

ಮೊದಲ ದಿನ ಸಂಜೆ: ದನಗಳ ಪರಿಷೆ, ಮುನೇಶ್ವರ ಸ್ವಾಮಿಗೆ ಸಂಬ್ರಾಣಿ ದೂಪದ ಪೂಜೆ, ನಂತರ ಸತ್ತಿಗೆ ಹಾಗೂ ದೇವರ ಬಿರುದುಗಳಿಗೆ ಪೂಜೆ ಮತ್ತು ಮೆರವಣಿಗೆ.

ಎರಡನೇ ದಿನ ಬೆಳಗ್ಗೆ 9 ಗಂಟೆಗೆ: ಹಾಲರವಿಯ ಉತ್ಸವ, ನಂದಿಧ್ವಜ ಕುಣಿತ, ವೀರಗಾಸೆ ಪ್ರದರ್ಶನ, ನಂತರ ಕೊಂಡೊತ್ಸವ.

ಸಂಜೆ: ಊರ ದೇವರನ್ನು ಊರ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಕರೆದುಕೊಂಡು ಹೋಗಲಾಗುತ್ತದೆ.

 

ಇದೇ ನಮ್ಮ ಸಂಸ್ಕೃತಿ, ನಮ್ಮ ಶಕ್ತಿ!

ಹರ ಹರ ಮಹದೇವ

Untitled 4.png

ನಮ್ಮೂರಿನ ಯುಗಾದಿ ಹಬ್ಬದ

ನಮ್ಮೂರಿನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ "ವನ್ನೇರುಬಂಡಿ" ಕಟ್ಟುವುದು ಬಹಳ ವಿಶೇಷವಾದ ಆಚರಣೆ.

ಊರಿನ ಎಲ್ಲಾ ಪ್ರಮುಖರು ಭಾಗವಹಿಸಿ, ಊರನ್ನು ಪ್ರದಕ್ಷಿಣೆ ಹಾಕಿ, ನಂತರ ಊರಿಂದ ಹೊರಗಡೆ ಇರುವ ಮುನೇಶ್ವರ ಸ್ವಾಮಿ ದೇವಸ್ಥಾನಕ್ಕೆ ತಲುಪಿ, ಪೂಜೆ ಸಲ್ಲಿಸಿ ಮತ್ತೆ ಊರಿನ ಕಡೆ ಬರುತ್ತಾರೆ. ನಂತರ ಪಾನಕ, ಮಜ್ಜಿಗೆ ವಿತರಣೆ ಸಹ ಉಂಟು. ಏನೇ ಹೇಳಿ, ನಮ್ಮೂರಿನ ಯುಗಾದಿ ಹಬ್ಬ ಬಹಳ ವಿಶೇಷ.

Untitled 4.png

ನಮ್ಮೂರಿನ ಸಂಕ್ರಾಂತಿ ಹಬ್ಬ

ಶ್ರೀರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಗ್ರಾಮದಲ್ಲಿ ಬಹಳ ವರ್ಷಗಳಿಂದ ನಡೆದು ಬಂದ ಆಚರಣೆಯಲ್ಲಿ ವಿಶೇಷವಾಗಿ ಸಂಕ್ರಾಂತಿ ಹಬ್ಬ. ಸುಗ್ಗಿಯ ನಂತರ ಮಕರ ಸಂಕ್ರಾಂತಿ ದಿನದಂದು ಜಾನುವಾರುಗಳಿಗೆ ಅಲಂಕಾರ ಮಾಡಿ ಗ್ರಾಮದ ಬಸವೇಶ್ವರ ದೇವಸ್ಥಾನ ಹತ್ತಿರ ಬಂದು ರಾಸುಗಳಿಗೆ ಪೂಜೆ ಮಾಡಿಸಿ ನಂತರ ಬೆಂಕಿಯಲ್ಲಿ ಕಿಚ್ಚು ಹಾಯಿಸುವುದು ನಮ್ಮ ಗ್ರಾಮದ ಪದ್ಧತಿಯೂ ಹೌದು. ಕಿಚ್ಚು ಹಾಯಿಸುವುದರಿಂದ ಜಾನುವಾರುಗಳಿಗೆ ಯಾವುದೇ ರೋಗಗಳು ಬರುವುದಿಲ್ಲವೆಂದು ನಮ್ಮ ಜನರ ನಂಬಿಕೆ.

Untitled 4.png

ಹೊಯ್ಸಳ ಕಾಲದ ಅಮೂಲ್ಯ ನಿಧಿ, ಕೇಶವೇಶ್ವರ ದೇವಾಲಯ - ಭಾಗ-2

ಈ ಕೇಶವೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಇರುವ ಒಂದು ಶ್ಲೋಕವು ಎಲ್ಲರ ಗಮನ ಸೆಳೆಯುತ್ತದೆ. ಹರಿಹರರನ್ನು ಸ್ತುತಿಸಿರುವ ಶ್ಲೋಕದಲ್ಲಿ ಕವಿಯ ಪ್ರೌಢಿಮೆ ಸುಂದರವಾಗಿ ವ್ಯಕ್ತವಾಗಿದೆ. ಕಾವ್ಯಾತ್ಮಕ ಶೈಲಿ ಹಾಗೂ ಪದ ಸಂಯೋಜನೆಯ ಚಮತ್ಕಾರಗಳು ಅದ್ಭುತವಾಗಿವೆ. ಇದರ ಸ್ವಾರಸ್ಯವನ್ನು ಅರಿಯಲು, ಮೂಲ ಪದ್ಯವನ್ನು ಹಾಗೆಯೇ ಓದಿದರೆ ಅದು ಶಿವನನ್ನು ಸ್ತುತಿಯಿದ್ದಂತಿದೆ, ಮೊದಲಿನ ಒಂದು ಅಕ್ಷರವನ್ನು ಬಿಟ್ಟು ಓದಿದರೆ ಅದು ವಿಷ್ಣುಪರವಾದ ಸ್ತುತಿಯಾಗುತ್ತದೆ. ಸ್ವಾರಸ್ಯಕರವಾಗಿರುವ ಈ ಪದ್ಯವನ್ನು ನಿಧಾನವಾಗಿ ಓದಿ ಆನಂದಿಸಿ.

 

ಪಾಯಾತ್ಕುಮಾರ ಜನಕಃ ಶಶಿಖಂಡಮೌಳೀ |

ಶಂಖಪ್ರಭಶ್ಚ ನಿಧನಶ್ಚ ಗವೀಶಯಾನಃ ||

ಇದು ಮೊದಲ ಪಾದ. ಇದರ ಅರ್ಥ ಹೀಗಿದೆ.

ಕುಮಾರ ಜನಕಃ – ಷಣ್ಮುಖನ ತಂದೆ (ಶಿವ)

ಮೊದಲಿನ ಅಕ್ಷರ ಕು ಅನ್ನು ಬಿಟ್ಟು ಓದಿದರೆ ಅದು

ಮಾರ ಜನಕಃ – ಮನ್ಮಥನ ತಂದೆ (ವಿಷ್ಣು)

 

ಅದೇ ರೀತಿ

ಶಶಿಖಂಡ ಮೌಳೀ – ತಲೆಯಲ್ಲಿ ಚಂದ್ರನನ್ನು ಧರಿಸಿರುವವ (ಶಿವ)

ಶಿಖಂಡ ಮೌಳೀ – ತಲೆಯಲ್ಲಿ ನವಿಲುಗರಿಯನ್ನು ಧರಿಸಿರುವವ (ವಿಷ್ಣು)

ನಂತರ

ಶಂಖ ಪ್ರಭ – ಶಂಖದಂತೆ ಬಿಳಿ ಬಣ್ಣದವ (ಶಿವ)

ಖಪ್ರಭ – ಆಕಾಶದಂತೆ ನೀಲವರ್ಣದವ (ವಿಷ್ಣು)

ಹಾಗೂ

ಗವೀಶಯಾನಃ – ಎತ್ತನ್ನು ವಾಹನವಾಗಿರುವವ (ಶಿವ)

ವೀಶಯಾನಃ – ಗರುಡವಾಹನವುಳ್ಳವ (ವಿಷ್ಣು)

 

ಈಗ ಎರಡನೇ ಪಾದ

ಗಂಗಾಂಚ ಪನ್ನಗಧರಶ್ಚ ಉಮಾವಿಲಾಸಃ |

ಆದ್ಯಕ್ಷರೇಣ ಸಹಿತೋ ರಹಿತೋಹಿ ದೇವಃ ||

ಮೊದಲಿಗೆ

ಗಂಗಾಂ – ತಲೆಯಲ್ಲಿ ಗಂಗೆ ಧರಿಸಿದವ (ಶಿವ)

ಗಾಂ – ಭೂಮಿಯನ್ನು ಧರಿಸಿದವ (ವಿಷ್ಣು)

ನಂತರದಲ್ಲಿ

ಪನ್ನಗಧರಶ್ಚ – ಹಾವನ್ನು ಧರಿಸಿರುವವ (ಶಿವ)

ನಗಧರಶ್ಚ – ಆಭರಣಗಳನ್ನು ಧರಿಸಿರುವವ (ವಿಷ್ಣು)

ಹಾಗೂ

ಉಮಾ ವಿಲಾಸಃ – ಪಾರ್ವತಿಯನ್ನು ಪತ್ನಿಯನ್ನಾಗಿ ಉಳ್ಳವ (ಶಿವ)

ಮಾ ವಿಲಾಸಃ – ಲಕ್ಮ್ಮಿಯನ್ನು ಪತ್ನಿಯನ್ನಾಗಿ ಉಳ್ಳವ (ವಿಷ್ಣು)

ಇವರೀರ್ವರೂ

ಆದ್ಯಕ್ಷರೇಣ – ಆರಂಭದ ಅಕ್ಷರದಿಂದ

ಸಹಿತೋ ರಹಿತೋಹಿ ದೇವಃ – ಸಹಿತನಾಗಿರುವ ಹಾಗೂ ರಹಿತನಾಗಿರುವ

ದೇವನು ನಮ್ಮನ್ನು ಸಂರಕ್ಷಿಸಲಿ.

 

ಚಿತ್ರ ಕೃಪೆ: ರಾಕೇಶ್ ಹೊಳ್ಳ

 

Youtube Link :https://youtu.be/BNX3S7jYmDs

https://www.youtube.com/watch?v=bXZHv4tSCHc

Untitled 4.png

ನಮ್ಮೂರ ಕೆರೆ ಕಥೆ

ಒಂದು ಊರಲ್ಲಿ ಒಂದು ಕೆರೆ ಐತೆ ಅಂದ್ರೇನೆ ಅದೊಂತರ ಸಮೃದ್ಧಿ. ಕೆರೆ ತುಂಬಿದ್ರಂತೂ ರೈತಾಪಿಗಳಿಗೆ ಆನಂದವೂ ಆನಂದ. ಸೋಮಾರನೇ ಕೋಡಿ ಬೀಳುತ್ತೆ ಅನ್ನೋ ನಂಬಿಕೆ ನಮ್ಮೂರಲ್ಲಿತ್ತು. ನಾವು ಮಳೆ ಬಂದ ಬೆಳಗ್ಗೆ ಬೆಳಿಗ್ಗೆನೆ ಕೆರೆ ಏರಿಮೇಲೆ ಹಾಜುರ್. ಕೋಡಿ ಬೀಳೋದು ನೋಡೊಕೆ ಸುತ್ತಮುತ್ತ ಊರೋರೆಲ್ಲಾ ಬರ್ತಾ ಇದ್ರು. ಬೆಳಗ್ಗಿನ ಜಾವಕ್ಕೆ ಮರ್ರೋ ಅಂತಾ ಸದ್ದು. ಆಗ್ಲೆ ಕೊಡಿ ಬಿದ್ದಿರೋ ಸೂಚನೆ ಸಿಗೋದು. ನಮ್ಮೂರ ಕೆರೆಗೆ ನಾಲ್ಕು ಕೋಡಿ ಇದಾವೆ. ಅದೃಷ್ಟ ವಶಾತ್ ಕೊನೆ ಕೋಡಿ ಹಿಂದೆನೆ ನಮ್ಮನೆ. ಕೋಡಿ ಬಿದ್ರೆ ಬೇಗ ಗೊತ್ತಾಗುತ್ತೆ.

ನಮ್ಮ ಕೆರೆ ಸುಮಾರು 700 ಎಕ್ರೆಗಿಂತ ದೊಡ್ದದು. ನಮ್ಮ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಇದೂಂದು. ಈಗ ಅಲ್ಲಲ್ಲೇ ಒತ್ಲಿಸಿಕಂಡಿದ್ದಾರೆ ಅನ್ನಿ. ಅಯ್ಯೋ ಎಷ್ಟೋ ಕೆರೆನೇ ನುಂಕೊಂಡಿರುವಾಗ ಒತ್ಲಿಸಿಕೊಂಡಿರೋದೇನು ಮಹಾ ಬಿಡಿ.

ನಮ್ಮೂರ ಬಗ್ಗೆ ಪುರಾತನ ಕಾಲದಿಂದ್ಲು ಆಗ್ರಾ ಅನ್ನೊ ನಂಬಿಕೆ ಇದೆ. ಹಾಗಾಗಿ ನಮ್ಮೂರಿಗೆ ಹೆಣ್ಣುಕೊಡೋಕೆ ನಾಮುಂದು ತಾಮುಂದು ಅಂತಿದ್ದ ಕಾಲ ಒಂದಿತ್ತು ಅನ್ನಿ. ಕೆರೆಗೂ ಹೆಣ್ಣಿಗೂ ಏನು ಸಂಬಂಧ ಅಂತೀರಾ ಯೋಚನೆ ಮಾಡಿ ನೀವೆನಾ. ಇದು ನಮ್ಮ ಕೆರೆ ಮಹಾತ್ಮೆ. ಹೆಚ್ಚೂಕಮ್ಮಿ ಒಂದುವರೆ ಸಾವಿರ ಹೆಕ್ರೆ ನೀರಾವರಿಗೆ ನಮ್ಮೂರ ಕೆರೆನೇ ಆಧಾರ. ಕಣ್ಣುಮನ ಕಾಣೋವರ್ಗು ಅಡಿಕೆ ತೋಟ, ಬತ್ತದ ಗದ್ದೆ. 2005ರ ವರೆಗೂ ನಮ್ಮೂರ ದಾರೆಗೆ ಬಿದ್ದ ಭತ್ತ ಗುಡಿಸೋಕೆ ಆಂದ್ರ ಭಾಗದಿಂದ ಜನ ಬರೋರು, ಅಷ್ಟು ಸಮೃದ್ಧಿ ಇತ್ತು. ಈಗ ನಮ್ಮೂರೆಲ್ಲಾ ರೇಶನ್ ಕಾರ್ಡ್ ಮಾಡಿಸಿಕೊಂಡು ಸೊಸೈಟಿ ಬಾಗ್ಲಲ್ಲಿ ನಿಂತೌವ್ರೆ ಬಿಡಿ.

ನಮ್ಮೂರ ಕೆರೆಗೆ ಹೇಮಾವತಿ ನೀರೇನೋ ಬಂತು. ಸಿರಾಕೆ ಕುಡಿಯೋ ನೀರು ಅಂತೇಳಿ ಗದ್ದೆಬೈಲಿಗೆ ನೀರಿಲ್ಲಂದಗಾಯ್ತು. ಅಲ್ಲಿಗೆ ಭತ್ತ ಬೆಳೆಯೋ ಕಥೆ ಮುಗಿತು. ಈಗ ಕೆರೆಗೆ ನೀರಿದ್ರೂ ಬೆಳೆಗೆ ನೀರಿಲ್ಲ. ಮೊದ್ಲು ಎರಡೊರ್ಷಕ್ಕಾದ್ರೂ ಒಂದು ಸಾರಿ ಕೆರೆ ತುಂಬೊದು. ಆ ವರ್ಷ ಗದ್ದೆಗೈದ್ರೆ ಎರಡ್ಮೂರೊರ್ಷ ತಿನ್ನೊವಷ್ಟು ಭತ್ತ ಆಗೋದು, ಜೀವಾದಿಗೆ ನೆಲ್ಲುಲ್ಲಾಗೊದು. ಈಗಿದೆಲ್ಲ ಗತವೈಭವ ಅಷ್ಟೇ. ಏನೋ ಹೇಮಾವತಿ ಬಂದು ಹಳ್ಳದಲ್ಲಿ ನೀರು ಹರಿತಿರೋದ್ರಿಂದ ಸುತ್ತಮುತ್ತ ಬೋರ್ ಶೇಪಾಗುತ್ತೆ ಅನ್ನೊದೊಂದೆ ಒಳ್ಳೆ ಸುದ್ದಿ. ಏನಾನಾ ಕಳ್ಳಂಬೆಳ್ಳ ಕೆರೆ ನೀರ್ನಾ ಸಿರಾಕೆ ಪೈಪ್ ಲೈನ್ ಮೂಲ್ಕ ತಂಗೊಂಡೋದ್ರೆ ಅಲ್ಲಿಗೆ ಕಳ್ಳಂಬೆಳ್ಳದ ಅಡಿಕೆ ತೋಟಗಳ ಕಥೆ ಏನೊ ಗೊತ್ತಿಲ್ಲ.

ಯಾವಯಾವೂ ನೀರಾವರಿ ಯೋಜನೆ ಮಾಡ್ತಾವ್ರೆ. ಯಂಗಾರಾ ಮಾಡಿ ನಮ್ಮ ತಾಲ್ಲೂಕಿನ ಎಲ್ಲಾ ಕೆರೆಗೆ ನೀರುಬಂದು ಕುಡಿಯೋಕು ಕೃಷಿಗೂ ನಿರಾಗ್ಲಿ ಅನ್ನೋದು ನನ್ನ ಬಯಕೆ.

ರಾತ್ರಿ ಚೆನ್ನಾಗಿ ಮಳೆ ಆತು. ಬೆಳಗ್ಗೆ ಕೆರೆ ನೋಡೋಕೆ ಹೋದೆ. ಇದೆಲ್ಲಾ ಜ್ಞಾಪಕ್ಕೆ ಬಂತು.

 

#ಜೀವನಪ್ರೀತಿಯಬರಹಗಳು

Untitled 4.png

Videos of Mrughavade Temple

Video on Mrughavade Temple and Brahmi River

Untitled 4.png

ಗಳಗೇಶ್ವರ ದೇವಾಲಯ

ಗಳಗನಾಥ ಎಂಬ ಪುಟ್ಟ ಗ್ರಾಮವು ಹಾವೇರಿ ತಾಲೂಕಿನಿಂದ 40 ಕಿಲೋಮೀಟರ್ ದೂರದಲ್ಲಿ ವರದಾ ಹಾಗೂ ತುಂಗಭದ್ರಾ ನದಿಗಳ ಸಂಗಮ ಸ್ಥಳದಲ್ಲಿರುವ ಒಂದು ಪುಣ್ಯಕ್ಷೇತ್ರ. ಇದು ಪ್ರಾಚೀನ ಶಾಸನಗಳಲ್ಲಿ "ಫಲ್ಗುಣಿ" ಎಂದು ಉಲ್ಲೇಖಗೊಂಡಿದೆ.

 

ಚಾಲುಕ್ಯರ ಕಾಲದಲ್ಲಿ ಸುಮಾರು 11ನೇ ಶತಮಾನದಲ್ಲಿ ನದಿದಂಡೆಯಲ್ಲಿ ನಿರ್ಮಿಸಲಾದ ಗಳಗೇಶ್ವರ ದೇವಾಲಯ ಒಂದು ಸಂಕೀರ್ಣ ದೇವಾಲಯವಾಗಿದೆ. ಭವ್ಯ, ವಿಶಾಲ ಹಾಗೂ ಶಿಲ್ಪವೈಭವ ತುಂಬಿದ ಗಳಗೇಶ್ವರ ದೇವಾಲಯ ಗರ್ಭಗೃಹ, ಅಂತರಾಳ ಹಾಗೂ ವಿಶಾಲವಾದ ನವರಂಗವನ್ನು ಹೊಂದಿದೆ.

ದೇವಾಲಯದ ಗರ್ಭಗುಡಿಯಲ್ಲಿ ಅರ್ಚಿತ ಲಿಂಗವೇ ಅಲ್ಲದೆ, ಒಂದೂವರೆ ಅಡಿ ಎತ್ತರದ ಸಪ್ತಮಾತೃಕೆಯರ ಕೆಲವು ಮೂರ್ತಿಗಳಿದ್ದು ಅವುಗಳಲ್ಲಿ ಇಂದ್ರಾಣಿ, ವೈಷ್ಣವಿ, ಮಾಹೇಶ್ವರಿ, ವಾರಾಹಿ ಅಲ್ಲದೆ ವಿಷ್ಣು, ಭೈರವ, ಶಿವ-ಪಾರ್ವತಿ ಅಷ್ಟಭುಜ ಕಾಳಿ ಮುಂತಾದ ಮೂರ್ತಿಗಳಿವೆ. ಅಂತರಾಳದಲ್ಲಿ ಜನಾರ್ಧನ ಹಾಗೂ ಸರಸ್ವತಿಯ ವಿಗ್ರಹಗಳನ್ನು ಇರಿಸಲಾಗಿದೆ.

ನವರಂಗಕ್ಕೆ ಮೂರು ಕಡೆಯಿಂದಲೂ ಪ್ರವೇಶವಿದ್ದು ,ಇದನ್ನು 4 ಬೃಹತ್ ಕಲ್ಲಿನ ಕಂಬಗಳ ಆಧಾರದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಒಂದು ಸುಂದರವಾದ ನಂದಿಯ ವಿಗ್ರಹ ಸ್ಥಾಪಿತಗೊಂಡಿದೆ. ಮುಖಮಂಟಪದಲ್ಲಿ ಮಹತ್ವದ ಐತಿಹಾಸಿಕ ಶಿಲಾಶಾಸನ ಕಾಣಸಿಗುತ್ತದೆ.

ದೇಗುಲದ ಗೋಪುರ ಪಿರಮಿಡ್ ನ ರೀತಿ ಇದ್ದು ಅತ್ಯಂತ ಅದ್ಭುತವಾದ ಕುಸುರಿ ಕಲೆಯನ್ನು ಹೊಂದಿದೆ.

 

#ನಮ್ಮೂರಶಿವ #ದಿನಕ್ಕೊಂದುಶಿವಲಿಂಗ

Untitled 4.png

ಕೆಆರ್ ನಗರದ ಅರ್ಕೇಶ್ವರ

ಕೆಆರ್ ನಗರದ ಹೊರವಲಯದಲ್ಲಿ ಕಾವೇರಿ ನದಿಯ ದಡದಲ್ಲಿ ಕಣ್ಮನ ಸೆಳೆಯುತ್ತಿರುವ ದೇವಾಲಯವೇ ಅರ್ಕೇಶ್ವರ ದೇವಾಲಯ ಅಥವಾ ಎಡತೊರೆ ಅರ್ಕೇಶ್ವರ ದೇವಾಲಯ. ಈ ದೇಗುಲದ ಒಳಪ್ರಾಂಗಣದಲ್ಲಿ ಹಲವಾರು ಶಿವಲಿಂಗಗಳನ್ನು ಪ್ರತಿಷ್ಠಾಪಿಸಿದ್ದು, ಶಿವನು ವಿವಿಧ ನಾಮರೂಪಗಳಲ್ಲಿ ಪೂಜೆಗೊಳ್ಳುವದನ್ನು ಕಾಣಬಹುದಾಗಿದೆ. ಒಂದು ಅಡಿ ಎತ್ತರದ ಉದ್ಭವ ಮೂರ್ತಿಯಾದ ಶಿವಲಿಂಗವನ್ನು ಅರ್ಕೇಶ್ವರ ಅಥವಾ ಅರ್ಕನಾಥೇಶ್ವರ ಎಂದು ಪೂಜಿಸಲಾಗುತ್ತದೆ. ಅರ್ಕೇಶ್ವರ ಗರ್ಭಗುಡಿಯ ಪಕ್ಕದಲ್ಲಿ ಪಾರ್ವತಿದೇವಿಗೆ ಅರ್ಪಿತವಾದ ಒಂದು ಸಣ್ಣ ದೇವಾಲಯವಿದೆ.

 

ಕಾವೇರಿ ನೀರಿನಿಂದ ಎಡತೊರೆಯು ಜಲಾವೃತಗೊಂಡಾಗ ಅಲ್ಲಿನ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹೊಸ ಪಟ್ಟಣವನ್ನು ನಿರ್ಮಿಸಿದರು. ಅಂದಿನಿಂದ ಎಡತೊರೆಯ ಕೃಷ್ಣರಾಜನಗರವಾಯಿತು.

 

ವಿಶಿಷ್ಟವಾದ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿರುವ ಪ್ರಸ್ತುತ ದೇವಾಲಯದ ಸಂಕೀರ್ಣವೂ 19ನೇ ಶತಮಾನದ ಮೈಸೂರಿನ ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ದತ್ತಿಯಿಂದ ನಿರ್ಮಿಸಲಾಗಿತ್ತು. ಶಾಸನ ಶಾಸ್ತ್ರಜ್ಞ ಬಿ ಎಲ್ ರೈಸ್ ಅವರ ಪ್ರಕಾರ ಈ ಮೂಲ ದೇವಾಲಯವು ಕುಲೋತ್ತುಂಗ ಚೋಳನ ಯುಗದಷ್ಟು ಹಳೆಯದಾಗಿದೆ ಎಂದು ಉಲ್ಲೇಖಿಸಿದ್ದಾರೆ.

 

ಪ್ರತಿವರ್ಷ ಮಾಘಮಾಸದಲ್ಲಿ ರಥಸಪ್ತಮಿಯಂದು ಅರ್ಕೇಶ್ವರ ದೇವಸ್ಥಾನದ ಭವ್ಯವಾದ ಬ್ರಹ್ಮೋತ್ಸವ ನಡೆಯುತ್ತದೆ.

 

#ನಮ್ಮೂರಶಿವ #ದಿನಕ್ಕೊಂದುಶಿವಲಿಂಗ

Untitled 4.png

ಶಿವಲಿಂಗ ದೇವಾಲಯ ಹಂಗರಗಿ

ನಮ್ಮೂರಿನ ಪುರಾತನವಾದ ಶಿವಲಿಂಗ ದೇಗುಲವು ಕಂಬಳಿಯವರ ಓಣಿಯಲ್ಲಿ ಇದೆ. ಊರಿನಲ್ಲಿ ಒಟ್ಟು ೪ ದೇವಸ್ಥಾನಗಳು ಇದ್ದು, ಇಲ್ಲಿಯ ಆರಾಧನಾ ಕಾರ್ಯಕ್ರಮಗಳು ಸಾಕಷ್ಟು ಸ್ಥಗಿತಗೊಂಡಿವೆ.

ಹಿಂದೆ ನಮ್ಮ ಹಿರಿಯರು ಹಬ್ಬ-ಹರಿದಿನ, ಸಂಸ್ಕೃತಿಗೆ ಸಾಕಷ್ಟು ಮಹತ್ವ ಕೊಟ್ಟಿದ್ದರು. ಇಂದಿನ ಆಧುನಿಕ ಜೀವನ ಕ್ರಮಗಳ ಮಧ್ಯೆ,ಈ ಎಲ್ಲ ಆಚರಣೆಗಳು ಮಾಯವಾಗಿ, ಅನುದಾನಗಳ ಭರಾಟೆಗೆ ಬಲಿಯಾಗಿ, ಒಗ್ಗಟ್ಟಿನ ಬಲ ಕಡಿಮೆಯಾಗಿ, ಪ್ರತಿಷ್ಟೆಗಳ ಭರಾಟೆ ಹೆಚ್ಚಾಗಿವೆ. ನಮ್ಮ ಸಂಸ್ಕೃತಿಗಳು ಉಳಿಯಲು ಹಳೆಯ ದೇವಾಲಯಗಳನ್ನ ಗುರುತಿಸಿ ಅವುಗಳಲ್ಲಿಯೇ ನಮ್ಮ ಪೂವ೯ಜರು ಆಚರಿಸುತ್ತಿದ್ದ ಪದ್ದತಿಗಳ ಕಾಯ೯ಕ್ರಮಗಳನ್ನ ರೂಪಿಸಬೇಕಾಗಿ ನನ್ನ ಮನವಿ.

Untitled 4.png

ಹೊನ್ನಾವರ ಗ್ರಾಮದ ಶ್ರೀ ಚನ್ನಕೇಶವ ದೇವಾಲಯ, ಭಾಗ-1

ಹೊನ್ನಾವರ ಎಲ್ಲಾ ಗ್ರಾಮಗಳಂತೆಯೇ ಸಾಮಾನ್ಯವಾದ ಗ್ರಾಮವಾದರೂ, ಇಲ್ಲಿನ ಐತಿಹಾಸಿಕವಾದ ದೇವಾಲಯವಾದ ಶ್ರೀ ಚೆನ್ನಕೇಶವ ದೇವಾಲಯದಿಂದ ವಿಶಿಷ್ಟತೆಯನ್ನು ಪಡೆದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

 

ದೇವಾಲಯದ ಇತಿಹಾಸ:-

ದೇವಾಲಯ ನಿರ್ಮಾಣ ಕಾಲ ದೇವಾಲಯದ ಮುಂದಿರುವ ದಾನಶಾಸನದಲ್ಲಿ ಉಲ್ಲೇಖಿತವಾಗಿರುವಂತೆ ದೇವಾಲಯದ ನಿರ್ಮಾಣ ಕೊನೆಯ ಶಂಕರ ದಂಡನಾಥ (ಎಪಿಗ್ರಾಫಿಯ ಕರ್ನಾಟಕ ಸಂಪುಟ 08, ಶಾಸನ ಸಂಖ್ಯೆ 65, 66) ಪ್ರಕಾರ ಶಾಲಿವಾಹನ ಶಕವರ್ಷ 1071, ಅಂದರೆ ಕ್ರಿ. ಶ. 22ನೇ ಜನವರಿ 1149 ವಿಭವ ಸಂವತ್ಸರ ಮಾಘ ಶುದ್ಧ ತ್ರಯೋದಶಿ, ವಡ್ಡವಾರ (ಶನಿವಾರ) ವಿಷ್ಣುವರ್ಧನನ ಅವಧಿಯಲ್ಲಿ ನಿರ್ಮಿತವಾಗಿದೆ. ಅಂದರೆ ಈ ದೇವಾಲಯವು ನಿರ್ಮಾಣವಾಗಿ ಈ ವರ್ಷಕ್ಕೆ 869 ವರ್ಷಗಳು ಸಂದಂತಾಯಿತು. ದೇವಾಲಯದ ಸ್ಥಾಪನೆಯ ನಂತರ ದೇವಾಲಯದ ನಿರ್ವಹಣೆ ಸಲುವಾಗಿ ಒಂದನೇ ನರಸಿಂಹನಿಗೆ (ವಿಷ್ಣುವರ್ಧನನ ಮಗ) ಮಹಾಪ್ರಧಾನನಾಗಿದ್ದ ಲಕ್ಷ್ಮಯ್ಯ ಹೆಗಡೆ ದೇವಾಲಯದ ಪೂಜಾವ್ಯವಸ್ಥೆ ಸಲುವಾಗಿ ನೀಡಲಾದ ದಾನಶಾಸನ ದೇವಾಲಯದ ಮುಂದೆ ಸ್ಥಾಪಿತವಾಗಿದೆ. ಈ ದಾನಶಾಸನದಲ್ಲಿ ದೇವಾಲಯದ ನಿತ್ಯ ಪೂಜಾವ್ಯವಸ್ಥೆ ಮತ್ತು ಉತ್ಸವಗಳ ಸಲುವಾಗಿ ನೀಡಿರುವ ದಾನದ ವಿವರಣೆಯಿದೆ. ಅಲ್ಲದೇ ಈ ರೀತಿಯಾಗಿ ನೀಡಲ್ಪಟ್ಟಿರುವ ದಾನವು ಸಾರ್ವಜನಿಕರಿಂದ ಅಪಹರಿಸಲ್ಪಟ್ಟರೆ, ಅಪಹರಿಸಿದ ವ್ಯಕ್ತಿಯು 60 ಸಾವಿರ ವರ್ಷ ಭೂಮಿಯಲ್ಲಿ ಕ್ರಿಮಿಯಾಗಿ ಹುಟ್ಟುತ್ತಾನೆ ಎಂಬ ಎಚ್ಚರಿಕೆ ಸಂದೇಶವಿದೆ.

 

ದೇವಾಲಯದ ವಾಸ್ತು:-

ಏಕಕೂಟ ದೇವಾಲಯವಾದ ಇದು ಪೂರ್ವಾಭಿಮುಖವಾಗಿದೆ. ದ್ರಾವಿಡ ಶೈಲಿಯ ಶಿಖರವಿದ್ದು ಮುಖಮಂಟಪ, ನವರಂಗ, ಸುಂದರವಾದಕಂಬಗಳು, ಅಂತರಾಳ, ಶುಕನಾಸಿ ಮತ್ತು ಗರ್ಭಗುಡಿಯನ್ನೊಳಗೊಂಡಿದೆ. ಗರ್ಭಗುಡಿಯಲ್ಲಿ ಸುಮಾರು 6ಅಡಿ ಎತ್ತರದ ಸುಂದರವಾದ ಚನ್ನಕೇಶವನವಿಗ್ರಹವಿದೆ. ಶಂಕ, ಚಕ್ರ, ಗದಾ ಮತ್ತು ಪದ್ಮವನ್ನು ಹಿಡಿದು ನಿಂತಿರುವ ಕೇಶವನ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು. ದ್ವಾರದ ಮೇಲೆ ಲಲಾಟಬಿಂಬದಲ್ಲಿ ದ್ವಾರಲಕ್ಷ್ಮಿಯ ಸುಂದರವಾದ ಶಿಲ್ಪವಿದೆ. ಈ ಶಿಲ್ಪದ ಎರಡೂ ಕಡೆ ಆನೆಗಳಿದ್ದು ದೇವಿಯ ಪಾದಕ್ಕೆ ನಮಿಸುತ್ತಿವೆ. ಚಾಮರಧಾರಿಣಿಯರು ದೇವಿಗೆ ಚಾಮರ ಸೇವೆ ಮಾಡುತ್ತಿದ್ದಾರೆ. ದ್ವಾರದ ಕೆಳಗಡೆ ದ್ವಾರಪಾಲಕರ ಶಿಲ್ಪಗಳಿವೆ. ನವರಂಗದ ಛಾವಣಿಯಲ್ಲಿ ಸುಂದರವಾದ ವಿತಾನ / ಭುವನೇಶ್ವರಿ ಇದೆ. ಅಷ್ಟದಿಕ್ಪಾಲಕರ ಕೆತ್ತನೆಯೂ ಇದೆ.

ದೇವಾಲಯದ ಹೊರಗೋಡೆಗಳು ಹಲವು ಶಿಲ್ಪಗಳಿಂದ ಅಲಂಕೃತವಾಗಿದ್ದು ವಿಷ್ಣುವಿನ ಅವತಾರಗಳು ಮತ್ತು ಚತುರ್ವಿ0ಶತಿ ಮೂರ್ತಿಗಳನ್ನು ಕಾಣಬಹುದು. ವೀರನಾರಾಯಣ, ಕೇಶವ, ಮಾಧವ, ವರಾಹ, ಜನಾರ್ಧನ, ನರಸಿಂಹ, ವಾಮನ, ಗೋವರ್ಧನಗಿರಿಧಾರಿ ಕೃಷ್ಣ, ಲಕ್ಷ್ಮೀನಾರಾಯಣ, ದರ್ಪಣ ಸುಂದರಿ, ಕಾಪಾಲಿಕ ಮತ್ತು ವಿಷಕನ್ಯೆ, ಮರ್ಕಟ ಪೀಡಿತ ಮದನಿಕೆ, ವಿವಿಧ ವಾದ್ಯಗಳನ್ನು ನುಡಿಸುತ್ತಿರುವ ವಾದ್ಯಗಾರರು, ಮತ್ಸ್ಯಯಂತ್ರಭೇದಕ ಅರ್ಜುನ ...ಇನ್ನೂ ಮುಂತಾದ ಸುಂದರವಾದ ಶಿಲ್ಪಗಳಿವೆ. ಹೊಯ್ಸಳರ ಸಾಮಾನ್ಯ ರಚನೆಯಾದ ನಕ್ಷತ್ರಾಕಾರದ ಜಗತಿ ಮತ್ತು ಪ್ರದಕ್ಷಿಣಾ ಪಥಇಲ್ಲಿ ಕಾಣುವುದಿಲ್ಲ. ಇದೇ ಗ್ರಾಮದಲ್ಲಿ ಹೊಯ್ಸಳರ ಕಾಲದ್ದೇ ಆದ ಶಿವಾಲಯವೂ ಇದೆ.

 

Chennakeshava Photos courtesy: Kengeri Chakrapani

Article & Photos courtesy: Shashidhar H G

Untitled 4.png

ಸರ್ವಜ್ಞನ ಊರು ಮಾಸೂರು-ಅಂಬಲೂರು

ಕನ್ನಡ ಸಾಹಿತ್ಯ ಪರಂಪರೆಗೆ, ಕನ್ನಡಿಗರಿಗೆ ಹೆಮ್ಮೆಯ ಪುತ್ರನನ್ನು ರಟ್ಟೀಹಳ್ಳಿ ನೀಡಿದೆ ಎಂಬುದು ಮಹತ್ವವಾದುದು. ಅವರಿಂದ ಕನ್ನಡ ನಾಡಿಗೆ ಮತ್ತು ಕನ್ನಡ ಭಾಷೆಗೆ ಅತ್ಯಅಮೂಲ್ಯವಾದ ಕೊಡುಗೆ ದೊರೆತಿದೆ. ರಟ್ಟೀಹಳ್ಳಿ ತಾಲೂಕಿನ ಮಾಸೂರು-ಅಂಬಲೂರು ಕನ್ನಡದ ಶ್ರೇಷ್ಠ ತ್ರಿಪದಿ ಕವಿ, ದಾರ್ಶನಿಕ ಕವಿ ಸರ್ವಜ್ಞನ ಹುಟ್ಟೂರು. ಕುಮದ್ವತಿ ನದಿಯ ದಂಡೆಯ ಮೇಲೆ ಈ ಊರಿದೆ. 16ನೇ ಶತಮಾನ ಈ ಕವಿಯ ಕಾಲಘಟ್ಟ. ಕನ್ನಡ ಭಾಷೆಯ ಸರಳತೆ, ಸೌಂದರ್ಯವನ್ನು ತ್ರಿಪದಿಯಲ್ಲಿ ಹೆಣೆದು ಕಾವ್ಯ ಸ್ವಾರಸ್ಯದೊಂದಿಗೆ ಲೋಕಕ್ಕೆ ಜೀವ ಮತ್ತು ಜೀವನಪರ ಮೌಲ್ಯಗಳನ್ನು ಸಾರಿದ ಕವಿ ಸರ್ವಜ್ಞ.

ಮಾಸೂರಿನಲ್ಲಿ ಸರ್ವಜ್ಞನ ಮೂರ್ತಿಯನ್ನು ಇತ್ತೀಚಿನ ವರ್ಷಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಮಾಸೂರು ಅಂಬಲೂರಿನಲ್ಲಿ ಸರ್ವಜ್ಞನ ಸಮಾಧಿ ಸ್ಥಳವೂ ಇದೆ. ಸರ್ವಜ್ಞನ ಮೊದಲ ಹೆಸರು ಪುಷ್ಪದತ್ತ, ಗುಂಡಪ್ಪ ಎನ್ನಲಾಗಿದೆ. ಒಂದು ವಚನದಲ್ಲಿ ಸರ್ವಜ್ಞನು ತನ್ನ ತಂದೆ ಮಾಸೂರು ಬಸವರಾಜ, ತಾಯಿ ಅಂಬಲೂರಿನ ಮಾಳಿ ಎಂದು ಹೇಳಿದ್ದಾನೆ.

ಮಾಸೂರು 10 ಶತಮಾನಕ್ಕಿಂತಲೂ ಹಿಂದೆಯೇ ಪ್ರಮುಖ ಊರಾಗಿತ್ತು.

ಜಾನಪದ ವಿಶ್ವವಿದ್ಯಾಲಯವು ಪ್ರಕಟಿಸಿರುವ ಹಾವೇರಿ ಜಿಲ್ಲಾ ಗ್ರಾಮಚರಿತ್ರೆ ಕೋಶದಲ್ಲಿ ಹೀಗೆ ಉಲ್ಲೇಖಿತವಾಗಿದೆ. “ಸರ್ವಜ್ಞ ಮಹಾಕವಿಯ ತಂದೆ ಹೆಸರು ಮಲ್ಲರಸ. ಈತ ಸುತ್ತಲಿನ 12 ಗ್ರಾಮಗಳ ಕೇಂದ್ರವಾಗಿ ಮಾಸೂರನ್ನು ಆಳುತ್ತಿದ್ದ ಎಂದು ಉಲ್ಲೇಖಿಸಲಾಗಿದೆ. ಈ ಗ್ರಾಮವು ಪ್ರಾಚೀನ ಆಡಳಿತದಲ್ಲಿ ಮಾಸೂರು ಎಡೆವಟ್ಟಿ-70 ಕಂಪಣದ ಭಾಗವಾಗಿತ್ತು. ಕಂಪಣ ಎಂದರೆ ನಾಡಿನ ಆಡಳಿತದಲ್ಲಿ ಒಂದು ಭಾಗ. ಸ್ವಾತಂತ್ರ ಪೂರ್ವದಲ್ಲಿ ಮಾಸೂರು 16 ಹಳ್ಳಿಗಳ ಒಂದು ಭಾಗವಾಗಿತ್ತು. ಕೆಳದಿ ರಾಜ್ಯದ ಈಶಾನ್ಯ ಗಡಿಯ ಕೊನೆಯ ಊರಾಗಿತ್ತು. ಸಿಂಧ್ಯ ಅರಸ ಈಶ್ವರದೇವನು ಈ ಗ್ರಾಮವನ್ನು ಕೋಟಿಪುರದ ಕೋಟಿನಾಥ ದೇವರಿಗೆ ಕ್ರಿ.ಶ. 1180ರಲ್ಲಿ ದತ್ತಿ ಕೊಟ್ಟಿದ್ದಾನೆ.” (ಯಾವ ಕೋಟಿಪುರ ಎಂಬ ಮಾಹಿತಿ ದೊರೆತಿಲ್ಲ.)

ಮೇದೂರಿನ 1476ರ ಶಾಸನದಲ್ಲಿ ‘ಮಾಸೂರು’ ಎಂಬ ಉಲ್ಲೇಖವಿದೆ. ನಿಡನೇಗಿಲ ಗ್ರಾಮದ ಕ್ರಿ.ಶ. 1165ರ ಶಾಸನದಲ್ಲಿ ‘ಮಾಸವೂರು’ ಎಂಬ ಉಲ್ಲೇಖವಿದೆ.

ತಾಲೂಕಿನ ಗ್ರಾಮನಾಮಗಳ ಕುರಿತು ಅಧ್ಯಯನ ಮಾಡಿರುವ ಡಾ. ಭೋಜರಾಜ ಪಾಟೀಲರು: ‘ಮಾ ಸೂರು’. ಮಾ ಎಂದರೆ ದೊಡ್ಡದು. ಸೂರು ಎಂದರೆ ನೀರಿನ ಸುಳಿ. ಕುಮದ್ವತಿ ನದಿಯು ಈ ಗ್ರಾಮದಲ್ಲಿ ದೊಡ್ಡ ತಿರುವು ಪಡೆದಿರುವುದರಿಂದ ‘ಮಾಸೂರು’ ಎಂದಾಗಿದೆ ಎನ್ನುತ್ತಾರೆ ಅವರು.

ಸರ್ವಜ್ಞನ ಜನ್ಮಭೂಮಿ, ಕರ್ಮಭೂಮಿ ಮಾಸೂರು ಅಂಬಲೂರಿನ ಕುರಿತು ಜಾನಪದ ಕಲೆ, ಸ್ವಾತಂತ್ರ್ಯ ಹೋರಾಟಗಾರರು, ಕೆರೆ, ದೇವಸ್ಥಾನಗಳು, ಇತರ ವಿವರವನ್ನು ದಾಖಲಿಸಬೇಕಿದೆ. ಅದನ್ನು ಮುಂದಿನ ಭಾಗದಲ್ಲಿ ನೋಡೋಣ.

Untitled 4.png

ಕಿಕ್ಕೇರಿಯ ಬ್ರಹ್ಮೇಶ್ವರ

ಹೊಯ್ಸಳರ ಆಳ್ವಿಕೆಯಲ್ಲಿ ಅಗ್ರಹಾರವಾಗಿದ್ದ ಈ ಸ್ಥಳವನ್ನು ಕಿಕ್ಕೇರಿ ಅಥವಾ ಕಿಕ್ಕೇರಿಪುರ ಎಂದು11ರಿಂದ13ನೇ ಶತಮಾನದ ದಾಖಲೆಗಳು ಉಲ್ಲೇಖಿಸುತ್ತವೆ. ದೊರೆ 1ನೇ ನರಸಿಂಹನ ಆಳ್ವಿಕೆಯಲ್ಲಿ ಸಾಮಂತನಾಗಿದ್ದ ಬೊಮ್ಮಯ್ಯನಾಯಕನ ಪತ್ನಿ ಬೊಮ್ಮವ್ವೆ ನಾಗತಿಯು ಈ ದೇವಾಲಯವನ್ನು ಕ್ರಿ.ಶ. 1171 ರಲ್ಲಿ ಕಟ್ಟಿಸಿದ ಉಲ್ಲೇಖವಿದೆ. ಇಲ್ಲಿ ಸುಮಾರು 18 ಶಿಲಾಶಾಸನಗಳು ದೊರೆತಿವೆ. ಬೊಮ್ಮವ್ವೆ ನಾಗತಿಯು ನಿರ್ಮಿಸಿರುವುದರಿಂದ ಈ ದೇಗುಲಕ್ಕೆ ಬ್ರಹ್ಮೇಶ್ವರ ಎಂಬ ಹೆಸರು ಬಂದಿದೆ.

ಪೂರ್ವಾಭಿಮುಖವಾಗಿರುವ ಈ ಏಕಕೂಟ ದೇಗುಲವು ಗರ್ಭಗುಡಿ, ಸುಖನಾಸಿ, ನವರಂಗ, ಮುಖಮಂಟಪ ಮತ್ತು ಪ್ರತ್ಯೇಕವಾದ ನಂದಿಮಂಟಪವನ್ನು ಹೊಂದಿದೆ. ಸುಮಾರು 9 ಅಂಕಣದ ಭವ್ಯ ನವರಂಗವಿದ್ದು, ಇಲ್ಲಿನ ಕಂಬಗಳು ಹಾಗೂ ವಿತಾನವು ಅತ್ಯಂತ ಸೂಕ್ಷ್ಮ ಕೆತ್ತನೆಗಳಿಂದ ಕಂಗೊಳಿಸುತ್ತಿವೆ. ನವರಂಗದಲ್ಲಿ ಮಹಿಷಮರ್ದಿನಿ, ಸಪ್ತಮಾತೃಕೆಯರು, ಗಣಪತಿ, ಬ್ರಹ್ಮ ಮುಂತಾದ ದೇವರುಗಳ ಶಿಲ್ಪಕಲೆಯನ್ನು ನೋಡಬಹುದು. ಈಶ್ವರನ ಎದುರಿನ ಮಂಟಪದಲ್ಲಿರುವ ನಂದಿಯ ಕೆತ್ತನೆ ಮನಸೆಳೆಯುತ್ತದೆ.

ಮುಖ್ಯ ದೇವಾಲಯದ ಪಕ್ಕದಲ್ಲಿ 13 ನೇ ಶತಮಾನದ ಆರಂಭದಲ್ಲಿ ನಿರ್ಮಿಸಲಾದ ಒಂದು ಚಿಕ್ಕ ದೇವಿ ದೇವಾಲಯವಿದೆ.

 

ಬ್ರಹ್ಮೇಶ್ವರ ದೇವಾಲಯವು ವಾಸ್ತುಶಿಲ್ಪದ ಅದ್ಭುತ ಮಾತ್ರವಲ್ಲದೆ, ಪ್ರಮುಖ ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣವಾಗಿ ಇಲ್ಲಿನ ಶ್ರೀಮಂತ ಪರಂಪರೆಯನ್ನು ಬಿಂಬಿಸುತ್ತಾ, ಹೊಯ್ಸಳ ರಾಜವಂಶದ ಧಾರ್ಮಿಕ ಮತ್ತು ಕಲಾತ್ಮಕ ವೈವಿಧ್ಯತೆಗೆ ಸಾಕ್ಷಿಯಾಗಿ ನಿಂತಿದೆ.

 

#ನಮ್ಮೂರಶಿವ #ದಿನಕ್ಕೊಂದುಶಿವಲಿಂಗ

Untitled 4.png

An ancient temple near Lalbagh

This is an ancient temple dedicated to siddapura someshwara swamy.

Untitled 4.png

Gorta's Mahadev Temple

Gorta village, located near Basavakalyan in Bidar district, Karnataka, is historically significant for the massacre of its residents by the Razakars in 1948. The village has an ancient site with medieval pottery and some Early Historic period remains.

Untitled 4.png

Mallikarjun temples

Old temple in hirnagav

Untitled 4.png

ನಮ್ಮೂರ ಶಿವ

ಐತಿಹಾಸಿಕ ನಗರ ತಾಳಿಕೋಟೆಯ ಪುರಾತನ ಶ್ರೀ ಸಿದ್ದಲಿಂಗ ದೇವಸ್ಥಾನದಲ್ಲಿ ಶಿವನ ಜಾಗರಣೆ

 

ನಮ್ಮೂರ ಇತಿಹಾಸ

ಮುದ್ದೇಬಿಹಾಳ ತಾಲೂಕು ವಿಜಯಪುರ ಜಿಲ್ಲೆ ಇತಿಹಾಸಿಕ ನಗರ ತಾಳಿಕೋಟಿ ಪಟ್ಟಣದಲ್ಲಿ, ಸಿಂಘನ ಕ್ರಿ. ಶ.1225 ರ ಯಾದವರ ವವಂಶದ ಬಿಲ್ಲಮ, ಜೈತುಗಿ, ಕಣ್ಣಾರ, ಮಹಾದೇವ ರಾಮಚಂದ್ರ,ಇದು 26 ನೇ ಆಳ್ವಿಕೆಯ ವರ್ಷ ತಾಳಿಕೋಟೆಯ ಸ್ವಯಂಭು ಸೋಮನಾಥ ದೇವರಿಗೆ ಮಹಾ ಮಂಡಳಿಕ ಮಗ ಮುರಾರಿ ಜಯಿತಪಾಲನಾಯಕ &ಮಾಣಿಕಾದೇವಿಯಿಂದ, ಹಗ್ಗರತೆಗೆ - ನಾಡಿನಲ್ಲಿ ದಂಡಯಾತ್ರೆ ಈ ಸಂದರ್ಭದಲ್ಲಿ ಭೂಮಿಯು ಉಡಗರೆಯಾಗಿ ಕೊಡಲಾಗಿದೆ. ಎಂದು ರಾಮ ದೇವರ ಗುಡಿಯಲ್ಲಿ ಇರುವ ಶಾಸನ ಕಂಬದ ಮೇಲೆ ಕೆತ್ತಲಾಗಿದೆ.

 

"ನಮ್ಮೂರ ಶಿವ"

ಸುಮಾರು ಹನ್ನೆರಡನೆ ಶತಮಾನದ ಅತೀ ಪುರಾತನ ದೇವಾಲಯ ಅದು ಮೊದಲು ಸುಮಾರು ವರ್ಷಗಳ ಆ ದೇವಸ್ಥಾನ ಶೀತಲ್ ಗೊಂಡಿತ್ತು,ನಮ್ಮೂರಿನ ಹಿರಿಯರು ಯುವಕರು ಸೇರಿ ಶ್ರದ್ದಾ ಪೂರ್ವಕವಾಗಿ, ದೇವಸ್ಥಾವನ್ನು ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ ಜೀರ್ಣದ್ದಾರ ಮಾಡಿ, ಪ್ರತಿ ವರ್ಷ ಶಿವನ ಜಾಗರಣೆ ಮಾಡಿಕೊಂಡು ಬರುತ್ತಿದ್ದಾರೆ.

 

ಈ ದೇವಸ್ಥಾನ ನಮ್ಮೂರಿನ ಊರ ಹೊರಗಿನ ಪುರಾತನ ಶ್ರೀ ಸಿದ್ದಲಿಂಗ ದೇವಸ್ಥಾನ, ಇದು ದೋಣಿ ಪಕ್ಕದಲ್ಲಿ ಶ್ರೀ ರಾಮ ಮಂದಿರ ದೇವಸ್ಥಾನದ ಹಿಬ್ಬದಿ ಅಲ್ಲಿ ಇದೆ, ಈ ದೇವಸ್ಥಾನ ಮಾತ್ತೊಂದು ವಿಶೇಷತೆ ಅಂದರೆ. ಪ್ರತಿ ಶಿವರಾತ್ರಿ ಅಮವಾಸೆ ದಿನದಂದು ಸೂರ್ಯ ರಶ್ಮಿ ಅಲ್ಲಿ ಇರುವ ಸ್ವಯಂಭು ಲಿಂಗದ ಮೇಲೆ ಬಿಳ್ಳುತ್ತೆ ಅಂತ, ಪ್ರತೀತಿ ಇಂದೇ, ಆದರೆ ಅದು ಈವಾಗ ಬಿಳ್ಳುತ್ತಿಲ್ಲ, ನಾವು ದೊಡ್ಡ ದೊಡ್ಡ ನಗರದಲ್ಲಿ ದೊಡ್ಡ ದೊಡ್ಡ ಮನೆಗಳಿವೇ ಅತೀ ಎತ್ತರವಾಗಿ ಕಟ್ಟಡಗಳು ನಿರ್ಮಾಣ ಮಾಡುತ್ತಿರುವ ಸಂದರ್ಭದಲ್ಲಿ.ನಾವು ಈಗಿನ ಪಿಲ್ಗೆಗೆ ಅದು ಕಾಣಲು ಸಿಗುತ್ತಿಲ್ಲ ಅನ್ನುವದೇ ದೌರ್ಭಗ್ಯದ ಸಂಗತಿ, ಒಟ್ಟಾರೆ ನಾವು ಪುರಾತನ ದೇವಾಲಗಳನ್ನು ಉಳಿಸೋಣ ಬೆಳಿಸೋಣ.

 

ಪ್ರತಿ ವರ್ಷದಂತೆ ಈ ವರ್ಷವೂ ಶಿವನ ಜಾಗರಣೆ ಪುರಾತನ ಶ್ರೀ ಸಿದ್ದಲಿಂಗ ದೇವಸ್ಥಾನದಲ್ಲಿ ಮುಂಜಾನೆ ಸ್ವಯಂಭು ಲಿಂಗಕ್ಕೆ ಅಭಿಷೇಕ್, ಬಿಲ್ವ ಅರ್ಚನೆ, ಪ್ರಸಾದ ವಿತರಣೆ ಮಾಡಲಾಗುತ್ತದೆ.ಎಲ್ಲರು ತಪ್ಪದೆ ಬನ್ನಿ.

 

ಎಲ್ಲರಿಗೂ ಮಹಾ ಶಿವರಾತ್ರಿಯ ಶುಭಾಶಯಗಳು 🙏

Untitled 4.png

ಮರಳಿ ಚಕ್ಕಡಿಯ ಕಡೆಗೆ

ಎಷ್ಟೇ ತಂತ್ರಜ್ಞಾನ ಮುಂದುವರೆದರು ಕೊನೆಯಲ್ಲಿ ನಮ್ಮ ಕೈ ಹಿಡಿಯುವುದು ನಮ್ಮ ಚಕ್ಕಡಿ ಯೆ

Untitled 4.png

ರಟ್ಟಿಹಳ್ಳಿ ಎಂಬ ಪ್ರಾಚೀನ ಸಿರಿ ಭಾಗ-1

ರಟ್ಟಿಹಳ್ಳಿ 2018ರವರೆಗೂ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿಗೆ ಸೇರಿದ ಹೋಬಳಿಯಾಗಿತ್ತು. 2018ರಲ್ಲಿ ತಾಲೂಕಾಗಿ ಅಸ್ತಿತ್ವಕ್ಕೆ ಬಂದಿದೆ. ಶ್ರೀ ವೀರಭದ್ರೇಶ್ವರ ಭದ್ರಕಾಳಿ ದೇವಸ್ಥಾನ ಮತ್ತು ಶ್ರೀ ಕದಂಬೇಶ್ವರ ದೇವಾಲಯಗಳು ಇಲ್ಲಿನ ಪ್ರಾಚೀನ ಮತ್ತು ವಾಸ್ತುಶಿಲ್ಪದ ಮಹತಿ ಹೊಂದಿರುವ ಪ್ರಮುಖ ದೇವಾಲಯಗಳು.

ರಟ್ಟಿಹಳ್ಳಿ ಎಂಬ ಹೆಸರು ಹೇಗೆ ಬಂತು? ಎಂಬ ಕುತೂಹಲದಿಂದ ಹುಡುಕಾಡಿದೆ. ರಟ್ಟ ರಾಜವಂಶದ ಕುರಿತಾಗಿಯೂ ಹುಡುಕಾಟ ಮುಂದುವರಿಸಿದೆ. ಕನ್ನಡದ ಮೊದಲ ಮತ್ತು ಪ್ರಖ್ಯಾತ ರಾಜಮನೆತನವಾದ ಕದಂಬ ಅರಸರ ಕಾಲದಲ್ಲಿ ರಟ್ಟಿಹಳ್ಳಿ ಪ್ರಮುಖ ಕೇಂದ್ರವಾಗಿತ್ತು. ಹೊಯ್ಸಳರ ಪ್ರಭಾವವೂ ರಟ್ಟಿಹಳ್ಳಿಯಲ್ಲಿ ಪ್ರಮುಖವಾಗಿದೆ. 9ರಿಂದ 13ನೇ ಶತಮಾನದ ಅವಧಿಯಲ್ಲಿ ಸವದತ್ತಿ (ಸುಗಂಧವರ್ತಿ) ಮತ್ತು ಬೆಳಗಾವಿಯನ್ನು ರಾಜಧಾನಿಯಾಗಿಸಿಕೊಂಡು ಆಡಳಿತ ನಡೆಸಿದ ರಟ್ಟರು ರಾಷ್ಟ್ರಕೂಟರ ಶಾಖೆಯಾಗಿ ಆಳ್ವಿಕೆ ನಡೆಸಿದರು ಎನ್ನುತ್ತದೆ ಒಂದು ಮಾಹಿತಿ. ರಟ್ಟ ಪದದ ಸಂಸ್ಕೃತರೂಪ ರಾಷ್ಟ್ರೀಯ ಎಂದು ಅರ್ಥೈಸಲಾಗುತ್ತಿದೆ. ರಟ್ಟಿಹಳ್ಳಿಗೆ ರಟ್ಟರಿಂದ ಹೆಸರು ಬಂದಿರುವ ಸಾಧ್ಯತೆಗಳೂ ಇವೆ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಸಿದ್ಧಪಡಿಸಿದ ಗ್ರಾಮ ಚರಿತ್ರೆ ಕೋಶದ ಹಾವೇರಿ ಸಂಪುಟದಲ್ಲಿ ರಟ್ಟಿಹಳ್ಳಿಯ ಪ್ರಾಚೀನ ಗ್ರಾಮನಾಮ ‘ಕುಡವಣ್ಣಗಂಡ’ ಎಂಬುದು. ಕ್ರಿ.ಶ. 715-16ರ ಶಾಸನದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಕುಡುವಣ್ಣ ಎಂದರೆ ರೈತ. ಕುಡುವಣ್ಣಗಂಡ ಎಂದರೆ ರೈತನನೆಲೆ ಎಂದರ್ಥ. ಬೇಸಾಯ ಪ್ರಧಾನವಾಗಿರುವುದು ಈ ಪ್ರದೇಶದ ಘನತೆಯನ್ನು ಹೆಚ್ಚಿಸುತ್ತದೆ. 10ನೇ ಶತಮಾನದಿಂದ ರಟ್ಟಿಪಳ್ಳಿ ಎಂದಾಯಿತು. ಪಳ್ಳಿ ಎಂದರೆ ಹಳ್ಳಿ ಎಂದರ್ಥ. ವಿದ್ವಾಂಸರು ‘ರಟ್ಟ’ ಎಂದರೆ ಪ್ರದೇಶ. ವಾಸಸ್ಥಾನ. ಪಳ್ಳಿ ಎಂಬುದು ಪಳ್ಳ (ಹಳ್ಳ) ದಿಂದ ಬಂದಿದೆ. ಹೊಳೆಯ ದಂಡೆಯ ಮೇಲೆ ಜನವಸತಿ ಹೊಂದಿದ ಪ್ರದೇಶ ಎಂದು ವಿವರಿಸುತ್ತಾರೆ.

ರಟ್ಟಿಹಳ್ಳಿಯು ಕುಮದ್ವತಿ ನದಿಯ ಎಡ ದಂಡೆಯ ಮೇಲಿನ ಊರು. ಅತ್ಯಂತ ಪ್ರಾಚೀನವಾದ ಗ್ರಾಮ ಎಂಬುದು ಹೆಮ್ಮೆಯ ವಿಷಯವೇ ಸರಿ. ಡಾ. ಚಂದ್ರಪ್ಪ ಸೊಬಟಿ ಅವರು, “ರಟ್ಟಿಹಳ್ಳಿಯಲ್ಲಿ ಕ್ರಿಸ್ತಪೂರ್ವ ಕಾಲದಿಂದ ಅಂದರೆ ಬುದ್ಧನ ಕಾಲದಿಂದಲೂ ಇಲ್ಲಿ ಜನವಸತಿ ಇತ್ತು. ದಖನ್ ಪ್ರಸ್ಥಭೂಮಿಯ ಗಡಿನಾಡು ಪ್ರದೇಶವಿದು. ಇಲ್ಲಿ ಪಶುಪಾಲನೆ ನಡೆಸುತ್ತಿದ್ದ ಜನಸಮುದಾಯವಿತ್ತು. ಕೃಷಿ ಫಲವತ್ತತೆ ಮತ್ತು ಪಶುಪಾಲನೆ ಕಾರಣದಿಂದ ಪ್ರಮುಖ ವ್ಯಾಪಾರಿ ಕೇಂದ್ರವಾಗಿಯೂ ಶತಮಾನಗಳಿಂದ ಪ್ರಸಿದ್ಧವಾಗಿತ್ತು. ಈ ಆರ್ಥಿಕ ಕಾರಣದಿಂದಾಗಿ ಅನೇಕ ಧಾರ್ಮಿಕ, ಸಾಂಸ್ಕೃತಿಕ ಪಲ್ಲಟಗಳು ನಡೆದಿವೆ. ಕಾಪಾಲಿಕ, ಕಾಳ ಪಂಥದ ನಾಡಾಗಿತ್ತು. ಬೌದ್ಧರ ನಂತರ ಜೈನ, ಆ ಬಳಿಕ ವೀರಶೈವ ಧರ್ಮದವರ ಪ್ರಭಾವ ಇಲ್ಲಿ ನಡೆದಿದೆ” ಎನ್ನುತ್ತಾರೆ.

“ರಟ್ಟರ ಆರಾಧ್ಯ ದೈವ ಬೀರಪ್ಪ. ಈ ಬೀರಪ್ಪನೇ ಮುಂದೆ ವೀರಭದ್ರಪ್ಪನಾಗಿ ಜನಮಾನಸದಲ್ಲಿ ನೆಲೆಯಾಗುತ್ತಾನೆ” ಎಂದೂ ಅವರು ಹೇಳುತ್ತಾರೆ.

ಫಲವತ್ತಾದ ಕೃಷಿ ಭೂಮಿ ಹೊಂದಿರುವ ರಟ್ಟಿಹಳ್ಳಿಯು ಮರಡಿಗುಡ್ಡ, ಕೆಂಗಟ್ಟು ಕೆರೆ, ಚಕ್ರಗಟ್ಟಿಕೆರೆ, ಬೀರನಕಟ್ಟೆ, ಶಂಕಮ್ಮನವರಹಳ್ಳ, ಮಾರಿಹಳ್ಳಗಳು ಇವೆ. ಕೃಷಿ ಪ್ರಧಾನವಾದ ಊರಾದ ಕಾರಣ ಇಲ್ಲಿ ಸಾಂಪ್ರದಾಯಿಕ ಬಣ್ಣ ಬಣ್ಣದ ಚಿತ್ತಾರಗಳ್ಳ ಕಲೆಯ ಎತ್ತಿನ ಬಂಡಿಗಳ ಸಾಲು ಮನಮೋಹಕವಾಗಿದೆ. ರಟ್ಟರು ಎಂಬುದಕ್ಕೆ ಕುರುಬರು ಎಂಬ ಅರ್ಥವೂ ಇದೆ. ರಟ್ಟಿಹಳ್ಳಿಯ ಮಧ್ಯಭಾಗದಲ್ಲಿ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ಥಳೀಯ ಕಬ್ಬಿಣಕಂತಿ ಮಠಕ್ಕೆ ಕುರುಬರೇ ಹೆಚ್ಚಿನ ಭಕ್ತರು.ರಟ್ಟರು, ಕದಂಬರ ಕಾಲದಲ್ಲಿ ವ್ಯಾಪಾರಿ ತಾಣವಾಗಿ ರಟ್ಟಿಹಳ್ಳಿ ಪ್ರಖ್ಯಾತಿಗೊಂಡಿತ್ತು. 18ನೇ ಶತಮಾನದಲ್ಲಿ ಮೈಸೂರಿನ ಹೈದರ್ ಅಲಿಯು ಫಜುಲ್ನ ಸಹಾಯದಿಂದ ರಟ್ಟಿಹಳ್ಳಿಯನ್ನುವಶಪಡಿಸಿಕೊಂಡ. ನಂತರ ಮರಾಠ-ಮೈಸೂರು ಯುದ್ಧದಲ್ಲಿ ಪೇಶ್ವೆ ಮಾಧವ್ ರಾವ್ ಮರಾಠ ಒಕ್ಕೂಟದಲ್ಲಿ ರಟ್ಟಿಹಳ್ಳಿಯನ್ನ ವಶಪಡಿಸಿಕೊಂಡ ಉಲ್ಲೇಖವಿದೆ.

ಶ್ರೀ ವೀರಭದ್ರೇಶ್ವರ ಭದ್ರಕಾಳಿ ದೇವಸ್ಥಾನ:

ರಟ್ಟಿಹಳ್ಳಿಯಲ್ಲಿರುವ ಶ್ರೀ ವೀರಭದ್ರೇಶ್ವರ ಭದ್ರಕಾಳಿ ದೇವಸ್ಥಾನವು 12-13ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ. ದೇವಾಲಯ ಕದಂಬ-ನಾಗರ ಶೈಲಿಯಲ್ಲಿದೆ. ಪೂರ್ವದಲ್ಲಿ ಈ ಸ್ಥಳದಲ್ಲಿ ಬೀರಪ್ಪನ ದೇಗುಲವಿತ್ತು ಅರಸು ಮನೆತನಗಳ ಆಳ್ವಿಕೆಯಲ್ಲಿ ದೇವಾಲಯ ಬದಲಾಯಿತು ಎಂಬುದು ಕೆಲ ಇತಿಹಾಸಕಾರರ ಹೇಳಿಕೆ. ವೀರಭದ್ರೇಶ್ವರ ಮತ್ತು ಭದ್ರಕಾಳಿ ಇಲ್ಲಿನ ದೇವರು. ಚಿತ್ರ: ಅಂತರ್ಜಾಲ

Untitled 4.png

ಉಳವಿ ಚನ್ನಬಸವೇಶ್ವರ ಜಾತ್ರೆ

ನಮ್ಮ ಊರಿನಲ್ಲಿ ಪ್ರಥಮ ಬಾರಿ ಎತ್ತಿನ ಚಕ್ಕಡಿ ಹುಡಿಕೊಂಡು ಹೋಗಿರುವದು ಒಂದು ವಿಶೇಷ ಈ ಸಾರಿ ನಮ್ಮ ಗ್ರಾಮದಲ್ಲಿ ಎರಡು ಜೋಡಿ ಎತ್ತುಗಳು ಹೊಗಿದ್ದವು ಪ್ರಕಾಶ ರಬ್ಬಣ್ಣಿ ಮತ್ತು ಯಲ್ಲಪ್ಪ ಹೊರಕೇರಿ ಎಂಬಾತ ರೈತರು ಸುಮಾರು ಎರಡು ತಿಂಗಳು ತರಬೇತಿ ನೀಡಿ ಪ್ರತಿ ದಿನ ಎರಡಮ್ಮೊರ ಗಂಟೆ ಎತ್ತುಗಳ ಜೊತೆ ಪ್ರ್ಯಾಕ್ಟೀಸ್ ಮಾಡಿಸಿ ಈ ವರ್ಷ ಉಳವಿ ಜಾತ್ರೆ ಮಾಡಿ ಅವರು ಒಂದು ನಮ್ಮ ಊರಿನ ಇತಿಹಾಸವೇ ಎನ್ನಬಹುದು.

Untitled 4.png

ಜೋಳ ರಾಶಿ

ನಮ್ಮ ರೈತರು ಜೋಳ ರಾಶಿ ಮಾಡುತ್ತಿರುವ ಸಮಯ

Untitled 4.png

ಆನೆಕೆರೆ ಚತುರ್ಮುಖ ಕೆರೆ ಬಸದಿ

ಜೈನ ತೀರ್ಥಕ್ಷೇತ್ರಗಳಿಂದ ತುಂಬಿರುವ ಕಾರ್ಕಳ-ಮೂಡುಬಿದ್ರೆಗಳನ್ನು ಒಟ್ಟಾಗಿ ಜೈನ ಕಾಶಿ ಎಂದು ಕರೆಯುತ್ತಾರೆ ಅನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಕಾರ್ಕಳದ 'ಆನೆಕೆರೆ ಚತುರ್ಮುಖ ಕೆರೆ ಬಸದಿ' ಇಂಥ ಪ್ರಸಿದ್ಧ ಕ್ಷೇತ್ರಗಳಲ್ಲೊಂದು. ಶ್ರೇಷ್ಠ ಜೈನ ವಂಶದ ರಾಜರಾದ ಭೈರವರಸರ ರಾಜಧಾನಿಯಾಗಿದ್ದ ಕಾರ್ಕಳದಲ್ಲಿ ಅರಮನೆಯ ಆನೆಗಳಿಗೆ ನೀರು ಕುಡಿಸುತ್ತಿದ್ದ ಮತ್ತು ಸ್ನಾನ ಮಾಡಿಸುತ್ತಿದ್ದ ಬೃಹತ್ ಕೆರೆಯಿಂದಾಗಿ ಈ ಸ್ಥಳಕ್ಕೆ ಆನೆಕೆರೆ ಎಂಬ ಹೆಸರು ಬಂದಿದೆ. ಇಪ್ಪತ್ತಾರು ಎಕರೆಗಳಷ್ಟು ವಿಸ್ತೀರ್ಣವಿರುವ ಈ ವಿಶಾಲವಾದ ಸುಂದರ ಸರೋವರದ ಮಧ್ಯೆ ಈ ಬಸದಿ ತಲೆಯೆತ್ತಿ ನಿಂತಿದೆ. ಈ ಬಸದಿಯನ್ನು ಭೈರವರಸರ ವಂಶದವರಾದ ಪಾಂಡ್ಯನಾಥ ಪಾಂಡ್ಯರು ೧೬.೦೫.೧೫೪೫ ರಂದು ಪ್ರತಿಷ್ಠಾಪನೆ ಮಾಡಿದನಂತೆ. ಇಲ್ಲಿ ಮಹಾವೀರ ಸ್ವಾಮಿ, ಆದಿನಾಥ ಸ್ವಾಮಿ, ಚಂದ್ರನಾಥ ಸ್ವಾಮಿ ಮತ್ತು ಶಾಂತಿನಾಥ ಸ್ವಾಮಿಗಳ ಮೂರ್ತಿಗಳಿವೆ. ಮೇಗಿ ನೆಲೆಯಲ್ಲಿ ಪೂರ್ವಾಭಿಮುಖವಾಗಿ ಭ.ಪಾರ್ಶ್ವನಾಥ ಸ್ವಾಮಿ ಮತ್ತು ಮಹಾಮಾತೆ ಪದ್ಮಾವತಿ ದೇವಿಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಹೊರಸುತ್ತಿನಲ್ಲಿ ಪಂಜುರ್ಲಿ , ನಾಗದೇವರು ಮತ್ತು ಕ್ಷೇತ್ರಪಾಲ ಗುಡಿಗಳಿವೆ. ಈಗ ಜೀರ್ಣೋದ್ಧಾರಗೊಳ್ಳುತ್ತಿರುವ ಈ ದೇವಾಲಯದ ಒಳ- ಹೊರ ಗೋಡೆಗಳನ್ನು ಭಾರತೀಯ ಸುಂದರ ಶಿಲ್ಪ ಕಲಾ ವಿನ್ಯಾಸಗಳಿಂದ ಅಲಂಕೃತಗೊಳಿಸುವ ಕಾರ್ಯ ನಡೆದಿದೆ.

 

ಎಲ್ಲದಕ್ಕಿಂತ ಹೆಚ್ಚು ನನ್ನನ್ನು ಬಹಳವಾಗಿ ಆಕರ್ಷಿಸಿದ್ದು ಸುಂದರವೂ ವಿಶಾಲವೂ ಆದ ಕೆರೆ.‌ ಇತ್ತೀಚೆಗಷ್ಟೇ ಅಮೃತಸರದ ಸುವರ್ಣ ದೇವಾಲಯ, ದುರ್ಗಿಯಾನಾ ಟೆಂಪಲ್ ಹಾಗೂ ರಾಮತೀರ್ಥ ದೇವಾಲಯಗಳ ಸುತ್ತ ಇರುವ ಕೆರೆಗಳನ್ನು ನೋಡಿ ಅದ್ಭುತವೆಂದು ಮೂಗಿನ ಮೇಲೆ ಬೆರಳಿಟ್ಟಿದ್ದ ನನಗೆ ನಮ್ಮ ಪಕ್ಕದ ಊರಿನ ಈ ಕೆರೆಯನ್ನು ನಾನು ಇದುವರೆಗೆ ನೋಡಿಯೇ ಇದ್ದುದಕ್ಕೆ ವಿಷಾದವೆನ್ನಿಸಿತು. ಅಲ್ಲಿನ ಕೆರೆಗಳಿಗಿಂತ ಆನೆಕೆರೆ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ. ಆದರೆ ಇಲ್ಲಿ ಕೆರೆಯನ್ನು ಸ್ವಚ್ಛಗೊಳಿಸಿ, ನೀಟಾಗಿ ದಂಡೆಗಳನ್ನು ಕಟ್ಟಿ ಸುತ್ತಲೂ ಇಟ್ಟಿಗೆಯ ಹಾಸು ಕಲ್ಲುಗಳನ್ನು ಹಾಕಿ ಸಂದರ್ಶಕರು ನಡೆದಾಡಲು ಮತ್ತು ವಿಹರಿಸಲು ಅನುಕೂಲ ಮಾಡಿಕೊಡುವ ಕೆಲಸ ಆಗಬೇಕಾಗಿದೆ ಅನ್ನಿಸಿತು. ದೇವಾಲಯದ ಸುತ್ತ ಈ ವ್ಯವಸ್ಥೆ ಚೆನ್ನಾಗಿ ಆಗಿದೆಯಾದರೂ ಕೆರೆಯ ಹೊರ ಸುತ್ತಿಗೆ ಕೂಡಾ ವ್ಯವಸ್ಥೆ ಮಾಡಿದರೆ ಇದೊಂದು ಅತ್ಯುತ್ತಮ ಜನಾಕರ್ಷಣೆಯ ಕೇಂದ್ರವಾಗ ಬಹುದು.

 

ಆನೆಕೆರೆಯ ಪ್ರವೇಶದ್ವಾರದ ಎಡ ಬದಿಯಲ್ಲಿ ಒಂದು ಮಕ್ಕಳ ಪಾರ್ಕ್ ಇದೆ. ಚೆಂದ ಚೆಂದದ ಗಿಡ ಮರಗಳು ಮತ್ತು ಮಕ್ಕಳು ಆಡಲು ಬೇಕಾದ ವ್ಯವಸ್ಥೆಗಳು ಇಲ್ಲಿವೆ. ಪ್ರವೇಶಿಸುತ್ತಿದ್ದಂತೆಯೇ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವವನ್ನು ಅರ್ಪಿಸಲು ಎಂದು ಕಟ್ಟಿದ ಪುಟ್ಟದೊಂದು ವೇದಿಕೆ ನಮ್ಮನು ಸ್ವಾಗತಿಸುತ್ತದೆ. ಮಕ್ಕಳಲ್ಲಿ ದೇಶಭಕ್ತಿಯ ಭಾವನೆ ಹುಟ್ಟಿಸುವ ಉದ್ದೇಶ ಇದರದ್ದು ಆಗಿರಬಹುದು. ಒಳಗೆ ಇದ್ದ ಕಲ್ಲು ಬೆಂಚುಗಳಲ್ಲಿ ನೆರಳು ಬಯಸಿ ಬಂದ ಯಾರು ಯಾರೋ ಮಲಗಿದ್ದರು. ಪಾರ್ಕ್ ನ ಒಳಭಾಗವನ್ನು ಇನ್ನಷ್ಟು ಜಾಗ್ರತೆಯಿಂದ ಸ್ವಚ್ಛವಾಗಿಡುವ ಬಗ್ಗೆ ಸಂಬಂಧಪಟ್ಟವರು ಸುರಕ್ಷತೆಯ ನಿರ್ವಹಣೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸಿತು. ಕೆರೆಯ ಬದಿಯಲ್ಲಿ ಬಾತುಕೋಳಿಗಳ ದೊಡ್ಡದೊಂದು ಗುಂಪು ಸ್ವಚ್ಛಂದವಾಗಿ ಓಡಾಡುತ್ತಿದ್ದುದನ್ನು ನೋಡಿ ಮೊಮ್ಮಗಳು ಕೇಕೆ ಹಾಕುತ್ತಾ ಅವುಗಳನ್ನು ಹಿಂಬಾಲಿಸಿ ಖುಷಿ ಪಟ್ಟಳು.

Untitled 4.png

ಈಶ್ವರನ ಮೂರ್ತಿಯ ಮೇಲೆ ಅಕ್ಕಿಯ ಪೂಜೆಯನ್ನ ಕಟ್ಟುವುದು

ಲಿಂಗುವಿನ ಮೇಲೆ ಅಕ್ಕಿಯ ಪೂಜೆಯನ್ನು ಕಟ್ಟುವ ಕಲೆಯನ್ನ ನಮ್ಮ ಗ್ರಾಮದವರು ಮಾಡುತ್ತಾರೆ

Untitled 4.png

ಮರೆಯಾದ ಕಾವಿ ಕಲೆ ಭಾಗ-2

ಡಾ. ಕೃಷ್ಣಾನಂದ ಕಾಮತರ ಪುಸ್ತಕವೇ ನಮಗೆ ಕಾವಿ ಕಲೆಯ ಕುರಿತ ಮಾಹಿತಿ ಪಡೆಯುವ ಭಗವದ್ಗೀತೆ ಎಂದೇ ಹೇಳಬಹುದು.

ಕರಾವಳಿಯ ದೇವಾಲಯಗಳು, ಚಿತ್ರಶೈಲಿ, ಜಾಮಿತಿ ಚಿತ್ರಗಳು, ಸಮಕಾಲೀನ ಚಿತ್ರಗಳು, ಗ್ರಾಮೀಣ ಶೈಲಿ, ಪಶು-ಪಕ್ಷಿಗಳು, ಹೆಂಗಳೆಯರು, ಹೂಬಳ್ಳಿಗಳು, ದ್ವಾರಪಾಲಕರು, ಆದಿ ಬೆಳವಣಿಗೆ, ವಿನಾಶದ ಹಾದಿಯಲ್ಲಿ ಎಂದು 11 ಅಧ್ಯಾಯಗಳ ಮೂಲಕ ಕಾವಿ ಕಲೆಯ ದರ್ಶನವನ್ನು ಕಾಮತರು ನಮಗೆ ಮಾಡಿಕೊಡುತ್ತಾರೆ.

ಈ ಪುಸ್ತಕದ ಆರಂಭದಲ್ಲಿ ಮಾದರಿಗಾಗಿ 33 ಊರುಗಳ ದೇವಸ್ಥಾನಗಳ ಪಟ್ಟಿಯನ್ನು ನೀಡಿದ್ದಾರೆ. ಅದರಲ್ಲಿ ಬನವಾಸಿಯ ಮಧುಕೇಶ್ವರ ದೇವಸ್ಥಾನ, ಶಿರಸಿಯ ಮಾರಿಕಾಂಬಾ ದೇವಸ್ಥಾನ, ಗೋವಾದ ಮಹಾಲಕ್ಷ್ಮಿ, ನಾಗೇಶಿ, ಭಟ್ಕಳ ಶಿರಾಲಿಯ ಹನುಮಾನ, ಹಳದೀಪುರದ ವೆಂಕಟರಮಣ ದೇವಸ್ಥಾನದ ಕಾವಿ ಕಲೆಯ ಚಿತ್ರಗಳೂ ಸೇರಿವೆ. ಒಂದೊಂದು ಊರಿನಲ್ಲಿಯೂ ಚಿತ್ರಗಳ ಶೈಲಿಯಲ್ಲಿ ಭಿನ್ನತೆ ಇದೆ. ‘ಹೊಸಾಡ ಶೈಲಿ’ ಎಂದರೆ, ಹೊನ್ನಾವರ ತಾಲೂಕಿನ ಹೊಸಾಡದ ಮುಖ್ಯಪ್ರಾಣ, ಲಕ್ಷ್ಮಿವೆಂಕಟೇಶ ದೇವಸ್ಥಾನದಲ್ಲಿಯ ಕಾವಿ ಚಿತ್ರಗಳ ಶೈಲಿ ಎಂದು ಅವರು ಉಲ್ಲೇಖಿಸಿದ್ದಾರೆ.

ಕಾವಿ ಕಲೆಯ ಚಿತ್ರಕಾರನು ರಾಮಾಯಣ, ಮಹಾಭಾರತ, ಭಾಗವತ, ದೇವಿ ಮಹಾತ್ಮೆ, ವಿಷ್ಣು ಪುರಾಣ, ಇತರ ಕೃತಿಗಳನ್ನು ಅದರ ಪಾತ್ರಗಳನ್ನು ತಿಳಿದುಕೊಂಡಿರುತ್ತಿದ್ದ. ಹೀಗಾಗಿಯೇ ಅವುಗಳ ಶರೀರ, ಭಾವ, ಭಂಗಿಗಳು-ಮಂದಹಾಸ, ಶೃಂಗಾರ, ಲಾವಣ್ಯ, ರೌದ್ರ, ಉಗ್ರ, ಆಭರಣ, ರಸಗಳ ಕುರಿತು ಪ್ರಾವೀಣ್ಯ ಅವನಲ್ಲಿ ಕರಗತವಾಗಿರುತ್ತಿತ್ತು. ಇದನ್ನೆಲ್ಲವನ್ನೂ ತಿಳಿದ ಅಸಮಾನ್ಯ ಕಲಾವಿದರು ಅವರಾಗಿರುತ್ತಿದ್ದರು. ಹೆಚ್ಚಿನವರು ಅನಕ್ಷರಸ್ಥರು. ಆದರೂ ಮಹಾನ್ ಕಲಾಸಿರಿ ಅವರಲ್ಲಿತ್ತು.

ಕೌರವ-ಪಾಂಡವರ ಯುದ್ಧವನ್ನು ಹಲವು ಭಾಗಗಳಲ್ಲಿ ಚಿತ್ರಿಸುವಾಗ ಬಳಲಿಬೆಂಡಾಗಿದ್ದರೂ ನಾಗಾಲೋಟದಲ್ಲಿ ಓಡುವ ಕುದುರೆಗಳನ್ನು ಸಹಜತೆಯಲ್ಲಿಯೇ ಚಿತ್ರಿಸುತ್ತಾರೆ. ಅಂತೆಯೇ ಮಹಿಷಮರ್ದಿನಿ, ಕಂಸನ ಮಂತ್ರಿ ಅಕ್ರೂರ, ವರಹಾವತಾರ ಚಿತ್ರಗಳೂ ಇವೆ.

ಕೆಲ ಸಂದರ್ಭಗಳಲ್ಲಿ ಸರಿಯಾಗಿ ಅರಿಯದ ಕಲಾವಿದನು ಭಾವ-ಭಂಗಿಯ ಕುರಿತು ಎಡವಿರುವುದನ್ನೂ ಕಾಮತರು ಉಲ್ಲೇಖಿಸಿದ್ದಾರೆ.

ಕಾವಿ ಕಲೆ ಉತ್ತರ ಕನ್ನಡ ಜಿಲ್ಲೆಯ ಭಾರಿ ಮಳೆಯ ಪ್ರದೇಶಕ್ಕೆ ಅತ್ಯಂತ ದೀರ್ಘಕಾಲ ಬಾಳಿಕೆ ಬರುವ ಬಣ್ಣವನ್ನು ಹೊಂದಿದೆ.

“ಸ್ಥಳೀಯವಾಗಿ ‘ಹುರಿಮಂಜಿ’ ಎಂದು ಕರೆಯಲಾಗುವ ಕಾವಿಮಣ್ಣು ಹೊನ್ನಾವರದಿಂದ 2 ಕಿ.ಮೀ. ದೂರದಲ್ಲಿ ಅರಬ್ಬಿ ಸಮುದ್ರದಲ್ಲಿರುವ ಬಸವರಾಜ ದುರ್ಗದ್ವೀಪದಲ್ಲಿ ವಿಪುಲವಾಗಿ ಸಿಗುತ್ತದೆ. ಇದನ್ನು ಮನೆಗಳ ಗೋಡೆ, ನೆಲಗಳಿಗೆ ಕೆಂಪು ಮೆರಗು ಕೊಡಲು ಬಳಸುವುದರಿಂದ ಎಲ್ಲ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳಬಹುದು ಎಂದು ಕಾಮತರು ಹೇಳಿದ್ದಾರೆ.

ಈಗ ಬಸವರಾಜ ದುರ್ಗ ದ್ವೀಪದಲ್ಲಿ ಈ ಮಣ್ಣು ಸಿಗುತ್ತದೆಯೇ, ಅಥವಾ ಬೇರೆಡೆ ಸಿಗುತ್ತದೆಯೇ ಎಂಬುದು ನನಗೆ ಮಾಹಿತಿ ಇಲ್ಲ. ಈಗಲೂ ಕಾವಿ ಕಲೆಯ ಕಲಾವಿದರು ಇದ್ದಾರೋ ತಿಳಿಯದು.

Untitled 4.png

ಶ್ರೀ ಮೈಲಾರ ದೇವರ ಜಾತ್ರೆ

ನಮ್ಮ ಗ್ರಾಮದಲ್ಲಿ ಶ್ರೀ ಮೈಲಾರ ದೇವರ ಜಾತ್ರೆಯು ಈ ವರ್ಷ ಅದ್ದೂರಿಯಾಗಿ ಆಚರಿಸಲಾಯಿತು

Untitled 4.png

೧೧ನೇ ಶತಮಾನದ ಉನ್ನತ ಶಿಕ್ಷಣ ಕೇಂದ್ರ ನಾಗಾಯಿ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿರುವ ನಾಗಾಯಿ ಊರು ೧೧ನೇ ಶತಮಾನದಲ್ಲಿ ಉನ್ನತ ಶಿಕ್ಷಣ ಕೇಂದ್ರವನ್ನು ಹೊಂದಿತ್ತು. ಮೊದಲು ಕದಂಬರ ಕಾಲದಲ್ಲಿ ಒಂದು ಘಟಿಕಾಲಯವಿದ್ದು, ನಂತರ ಕಲ್ಯಾಣ ಚಾಲುಕ್ಯ ಅರಸರಾದ ೧ನೇ ಸೋಮೇಶ್ವರ, ನಾಲ್ವಡಿ ವಿಕ್ರಮಾದಿತ್ಯ, ಜಗದೇಕಮಲ್ಲರ ಕಾಲದಲ್ಲಿ ಮತ್ತೊಂದು ಉನ್ನತ ಶಿಕ್ಷಣ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು.

ನಾಗಾಯಿಯಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣಗಳೆರಡನ್ನೂ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳ ಪಾಠಗಳಿಗೆ, ಅಧ್ಯಯನಕ್ಕೆ ಪೂರಕವಾದ ಕೊಠಡಿಗಳು, ನೃತ್ಯಮಂದಿರ, ಸಭಾಭವನ ಇದ್ದವು. ಮೂರು ಅಂತಸ್ತಿನ ಭವ್ಯ ವಿದ್ಯಾಮಂದಿರ ಇಲ್ಲಿತ್ತು.

೨೦೦ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ಶಾಸ್ತ್ರಗಳನ್ನು ಅಧ್ಯಯನ ಮಾಡುತ್ತಿದ್ದ ೫೨ ವಿದ್ಯಾರ್ಥಿಗಳಿಗೆ, ಅವರ ಮೂವರು ಅಧ್ಯಾಪಕರಿಗೆ, ಭಟ್ಟ ದರ್ಶನ, ಪ್ರಭಾಕರ, ನ್ಯಾಸ ಕಲಿಸುವ ಮೂವರು ಅಧ್ಯಾಪಕರಿಗೆ, ವೇದಗಳನ್ನು ಕಲಿಸುವ ಮೂವರು ಅಧ್ಯಾಪಕರಿಗೆ, ಗ್ರಂಥಾಲಯವನ್ನು ನೋಡಿಕೊಳ್ಳುವ ಸರಸ್ವತೀ ಭಂಡಾರಕರಿಗೆ ಈ ವಿಶ್ವವಿದ್ಯಾಲಯದಲ್ಲಿ ವಸತಿ ಮತ್ತು ಆಹಾರದ ವ್ಯವಸ್ಥೆ ಇತ್ತು. ವಿದ್ಯಾರ್ಥಿಗಳ, ಉಪಾಧ್ಯಾಯರ, ಗ್ರಂಥಭಂಡಾರಕರ, ಪಾರುಪತ್ಯಗಾರರ, ಸೇವಕರ ಸೇರಿದಂತೆ ಎಲ್ಲರ ವೆಚ್ಚ ಅಥವಾ ಸಂಬಳದ ಕುರಿತಾಗಿ ಹಣವನ್ನು ನಿಗದಿಪಡಿಸಲಾಗಿತ್ತು.

ವಿದ್ಯಾರ್ಥಿಗಳಿಗೆ, ಉಪಾಧ್ಯಾಯರಿಗೆ, ಸೇವಕರಿಗೆ ಪ್ರತ್ಯೇಕ ಕೊಠಡಿಗಳೂ ಇದ್ದವಂತೆ. ಕಲ್ಯಾಣ ಚಾಲುಕ್ಯರ ಅರಸ ಮೊದಲನೆಯ ಸೋಮೇಶ್ವರನು ನಾಗಾಯಿ ಘಟಿಕಾಲಯಕ್ಕೆ ಭೂಮಿಯನ್ನು ದತ್ತಿಯಾಗಿ ನೀಡಿದ್ದನಂತೆ. ಇಲ್ಲಿಗೂ ಸೇವಕರು, ಮೇಲ್ವಿಕಚಾರಕರನ್ನು ನೇಮಿಸಲಾಗಿತ್ತು. ಈ ಭೂಮಿಯಿಂದ ಬಂದ ಆದಾಯವನ್ನು ವಿದ್ಯಾರ್ಥಿಗಳ ಜೀವನ ನಿರ್ವಹಣೆಗೆ, ಉಪಾಧ್ಯಾಯರು, ಸೇವಕರು, ಮೇಲ್ವಿಚಾರಕರ ಸಂಬಳಕ್ಕೆ ಮೀಸಲಾಗಿತ್ತಂತೆ.

ಈಗ ನಾಗಾವಿ ಕೇಂದ್ರದ ಕಟ್ಟಡ ಹಾಳುಬಿದ್ದು ಅವಶೇಷಗಳಿದಂದ ಕೂಡಿದೆ. “೬೩ ಕಂಬಗಳಿAದ ಕೂಡದ ಸಾಲು ಮಂಟಪಗಳ ದೇಗುಲ, ನಂದೀಶ್ವರ ಗುಡಿ, ಅನುಮಾನ ಮಂದಿರ, ಇತರ ದೇವಾಲಯಗಳು ಕಲ್ಯಾಣ ಚಾಲುಕ್ಯರ ಕಾಲದ ಕಲೆ, ವಾಸ್ತುಶಿಲ್ಪ, ಶಿಕ್ಷಣ, ಸಾಹಿತ್ಯ, ಸಮಾಜ, ಧರ್ಮ, ವ್ಯವಸ್ಥೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಹನುಮಾನ ಗುಡಿಯ ಮೇಲ್ಛಾವಣಿಯ ಸುತ್ತಲ ಪಟ್ಟಿಗಳು ಯುದ್ಧ ಮಾಡುತ್ತಿರುವ ಸೈನಿಕರ ಚಿತ್ರಗಳು ಕಮಂಡಲ ಹಿಡಿದುಕೊಂಡು ಹೋಗುತ್ತಿರುವ ವಿದ್ಯಾಗುರುಗಳು, ಕುದುರೆ ರಥದ ಒಳಗೆ ಕುಳಿತು ಹೊರಟಿರುವ ಅರಸ, ಮುಂದೆ ಸೈನಿಕರ ದಂಡು ಎಲ್ಲವೂ ಕಲ್ಯಾಣಿ ಚಾಲುಕ್ಯರ ಪರಾಕ್ರಮ, ವಿದ್ಯಾದಾನ ಮುಂತಾದವುಗಳನ್ನು ಬಿಂಬಿಸುತ್ತವೆ” ಎಂದು ಸಂಶೋಧಕ ಮುಡಬಿ ಗುಂಡೇರಾವ್ ಹೇಳುತ್ತಾರೆ.

ಘಟಿಕಾದ ಸಾಲುಮಂಟಪದ ಬಳಿ ನಂದೀಶ್ವರ ಗುಡಿ ಇದೆ. ನಾಗಾವಿಯಲ್ಲಿ ದೊರೆತ ನಾಲ್ಕು ಶಾಸನಗಳು ನಾಗಾವಿ ಘಟಿಕಾ ಮತ್ತು ಅಗ್ರಹಾರಕ್ಕೆ ಸಂಬಂಧಪಟ್ಟಿವೆ. ಮತ್ತು ವಿದ್ಯಾಕೇಂದ್ರಕ್ಕೆ ದಾನ ಕೊಟ್ಟ ದತ್ತಿ ಶಾಸನಗಳಾಗಿವೆ. ನಾಗಾವಿಯು ಶೈವ, ವೈಷ್ಣವ ಧರ್ಮಗಳ ಕೇಂದ್ರವಾಗಿತ್ತಲ್ಲದೇ ಜೈನ ಧರ್ಮವೂ ಇಲ್ಲಿತ್ತು ಎಂಬುದಕ್ಕೆ ತೀರ್ಥಂಕರ ವಿಗ್ರಹ ದೊರೆತಿದೆ. ನಾಗಾವಿ ಅಗ್ರಹಾರದಲ್ಲಿ ಸುವಿಖ್ಯಾತ ವಿದ್ಯಾ ಕೇಂದ್ರವನ್ನು ಸ್ಥಾಪಿಸಿದ ಮಹಾದಣ್ಣ ನಾಯಕ ಮಧುಸೂಧನನ ಲೋಕಹಿತ ಕೆಲಸಗಳನ್ನು ವರ್ಣಿಸುವ ಕಂದ ಪದ್ಯವು ಕ್ರಿ.ಶ. ೧೦೫೮ರ ನಾಗಾಯಿ ಶಾಸನದಲ್ಲಿದೆ. ಇನ್ನೂ ಮಹತ್ವದ ವಿಷಯವೆಂದರೆ ನಾಗಾಯಿ ನಾಡನ್ನು ಹಲವಾರು ರಾಣಿಯರು ಆಳಿದ್ದಾರೆ.

ಘಟಿಕಾಸ್ಥಾನ ಎಂದರೆ ಉನ್ನತ ಮಟ್ಟದ ಶಿಕ್ಷಣ ಕೇಂದ್ರ. ಇಲ್ಲಿ ಗಳಿಗೆಯ ಬಟ್ಟಲುಗಳನ್ನು ಸಮಯ ತಿಳಿಸಲು ಇಡುತ್ತಿದ್ದುದರಿಂದ ಘಟಿಕೆ ಎಂದು ಕರೆಯುತ್ತಿದ್ದರು.

(ಆಕರ: ವಿವಿಧ ಮೂಲಗಳು)

Untitled 4.png

ಶಕ್ತಿಸ್ಥಳ ಕಲ್ಲಹಳ್ಳಿ ಭೂವರಹಾಸ್ವಾಮಿ ದೇವಸ್ಥಾನ

ದೈವಾನುಗ್ರಹದ ಮಹಾಶಕ್ತಿಯೊಂದು ನಮ್ಮನ್ನು ಕಾಯುತ್ತಿರುವುದಂತೂ ಖಂಡಿತ. ಎಷ್ಟೇ ಪ್ರಯತ್ನಪಟ್ಟರೂ ದೈವಾನುಗ್ರಹ ಇರದಿದ್ದರೆ, ಫಲಶ್ರುತಿ ದೊರಕದು ಎಂಬುದು ಅನುಭವದ ಮಾತು. ಕೆಲವು ಸ್ಥಳಗಳು, ದೇವಾಲಯಗಳು, ಅಲ್ಲಿನ ವಿಗ್ರಹಗಳು ಅಪಾರ ಮಹಿಮೆಯನ್ನು ಹೊಂದಿರುವುದಂತೂ ನಿಜ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಕಲ್ಲಹಳ್ಳಿಯ ಭೂವರಹಾಸ್ವಾಮಿ ದೇವಸ್ಥಾನ ಅತ್ಯಂತ ಶಕ್ತಿ ಸ್ಥಳವೆಂದೇ ಪ್ರಸಿದ್ಧಿ. ಈ ದೇವಸ್ಥಾನ ಹೇಮಾವತಿ ನದಿ ದಂಡೆಯ ಮೇಲಿದೆ.

ಮನೆ ಕಟ್ಟುವ, ಜಮೀನು ಕೊಂಡುಕೊಳ್ಳುವವ ಅಭಿಲಾಷೆ ಹೊಂದಿದವರು ಅಥವಾ ಭೂಮಿ ಸಂಬಂಧಿತ ವ್ಯಾಜ್ಯಗಳಿಂದ ನೊಂದವರು ಇಲ್ಲಿಗೆ ಬಂದು ದೇವರ ದರ್ಶನ ಪಡೆದು, ದೇವರ ಸಾನ್ನಿಧ್ಯದಲ್ಲಿ ತಮ್ಮ ಬೇಡಿಕೆಯನ್ನು ಹೇಳಿಕೊಂಡು ಎರಡು ಹಿಡಿ ಮಣ್ಣಿನೊಂದಿಗೆ ಪೂಜೆ ಸಲ್ಲಿಸಿ, ಹೊರಡುತ್ತಾರೆ. ಮಣ್ಣನ್ನು ತಾವು ಕಟ್ಟಬೇಕೆಂದಿರುವ ಜಾಗದಲ್ಲೋ, ವ್ಯಾಜ್ಯಕ್ಕೆ ತುತ್ತಾದ ಜಮೀನಿನಲ್ಲೋ ಹಾಕುತ್ತಾರೆ. ದೇವರ ದರ್ಶನಕ್ಕೂ ಮುನ್ನ ದೇವಸ್ಥಾನಕ್ಕೆ ೧೧ ಸುತ್ತು ಬರುವುದು ಇಲ್ಲಿನ ಪದ್ಧತಿ. ಭೂಮಿಯನ್ನು ಕೊಂಡುಕೊಳ್ಳಬೇಕೆಂಬ ಆಶಯವಿದ್ದವರು ಸಹ ಹರಕೆ ಹೇಳಿಕೊಳ್ಳುತ್ತಾರೆ. ತಮ್ಮ ಆಶಯ ಈಡೇರುತ್ತಿದ್ದಂತೆ ಕ್ಷೇತ್ರಕ್ಕೆ ಬಂದು ಮತ್ತೊಮ್ಮೆ ಪೂಜೆ ಕೃತಾರ್ಥರಾಗುತ್ತಾರೆ. ಎಷ್ಟೋ ವರ್ಷಗಳಿಂದ, ದಶಕಗಳಿಂದ ಭೂಮಿ ವ್ಯಾಜ್ಯ ಪರಿಹಾರವಾಗದೇ ಇದ್ದವರು ಇಲ್ಲಿಗೆ ಬಂದು ದೇವರ ದರ್ಶನ ಮಾಡಿದರೆ ಪರಿಹಾರವಾಗುತ್ತದೆ ಎಂಬ ನಂಬಿಕೆ.

ಕಲ್ಲಹಳ್ಳಿಯ ಭೂವರಹಾಸ್ವಾಮಿ ವಿಷ್ಣುವಿನ ಮೂರನೆಯ ಅವತಾರ. ಇಲ್ಲಿನ ವಿಗ್ರಹವು ಕಪ್ಪು ಶಿಲಾ ವಿಗ್ರಹವಾಗಿದ್ದು, ೧೮ ಅಡಿ ಎತ್ತರದಲ್ಲಿದೆ. ನೋಡಲು ಅತ್ಯಾಕರ್ಷಕವಾಗಿದೆ. ಭೂದೇವಿಯ ವಿಗ್ರಹವು ೩.೫ ಅಡಿ ಎತ್ತರವಿದ್ದು, ಭೂವರಹಾಸ್ವಾಮಿಯ ಎಡ ತೊಡೆಯ ಮೇಲೆ ಭೂದೇವಿ ವಿರಾಜಮಾನಳಾಗಿದ್ದಾಳೆ. ದೇವರ ಮೇಲ್ಭಾಗದಲ್ಲಿ ಒಂದು ಕೈಯಲ್ಲಿ ಶಂಖ, ಇನ್ನೊಂದು ಕೈಯಲ್ಲಿ ಸುದರ್ಶನ ಚಕ್ರವಿದೆ. ವಿಗ್ರಹದ ಕೆಳಗಿನ ಎಡಕೈಯಿಂದ ಸ್ವಾಮಿಯು ದೇವಿಯನ್ನು ಬಳಸಿಕೊಂಡಿದ್ದಾನೆ. ಕೈಳಗಿನ ಬಲಗೈ ಅಭಿಯಾನ ಮುದ್ರೆಯಲ್ಲಿದೆ.

ಇಲ್ಲಿನ ಭೂವರಹಾಸ್ವಾಮಿ ದೇವಸ್ಥಾನ ೨೫೦೦ ವರ್ಷಕ್ಕಿಂತಲೂ ಹಳೆಯದು ಎಂದು ಹೇಳುತ್ತಾರೆ. ಗೌತಮ ಋಷಿ ಈ ದೇವಸ್ಥಾನದಲ್ಲಿ ತಪಸ್ಸು ಮಾಡಿದ್ದರೆಂದು ಪ್ರತೀತಿ. ದೇವಸ್ಥಾನದ ಕಟ್ಟೋಣದ ಹಿಂದೆ ರಾಜ ವೀರ ಬಲ್ಲಾಳನ ಕುರಿತ ಕಥೆಯೊಂದು ಪ್ರಚಲಿತದಲ್ಲಿದೆ. ಈ ಪ್ರದೇಶದಲ್ಲಿ ರಾಜ ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಮರವೊಂದರ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದನು. ಆಗ ಮೊಲವನ್ನು ನಾಯಿ ಬೆನ್ನಟ್ಟಿತ್ತು. ಸ್ವಲ್ಪ ದೂರ ಅವರೆಡೂ ಹೋದ ನಂತರ ನಾಯಿಯನ್ನು ಮೊಲವು ಬೆನ್ನಟ್ಟಿತು. ಈ ಸ್ಥಳದಲ್ಲಿ ಯಾವುದೋ ಶಕ್ತಿ ಇದೆ ಎಂದು ಭಾವಿಸಿದ ರಾಜನು ಭೂಮಿಯನ್ನು ಅಗೆದನು. ಅಲ್ಲಿ ಭೂವರಹಾಸ್ವಾಮಿಯ ವಿಗ್ರಹ ದೊರೆಯಿತು ಎಂದು ಹೇಳಲಾಗುತ್ತಿದೆ. ನಂತರ ರಾಜನು ಇಲ್ಲಿ ದೇವಸ್ಥಾನ ಕಟ್ಟಿಸಿ, ವಿಗ್ರಹ ಪ್ರತಿಷ್ಠಾಪಿಸಿದನು. ಕಲ್ಲಹಳ್ಳಿ ಪ್ರದೇಶವು ಈಗಲೂ ಚಿಕ್ಕ ಗ್ರಾಮ. ಶನಿವಾರ, ಭಾನುವಾರ ಮತ್ತು ರಜಾದಿನಗಳಲ್ಲಿ ಇಲ್ಲಿಗೆ ಪೂಜೆ ಸಲ್ಲಿಸಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಕರ್ನಾಟಕದಿಂದ ಮಾತ್ರವಲ್ಲದೇ ಕೇರಳ, ತಮಿಳುನಾಡು, ಆಂಧ್ರ ಮತ್ತು ಉತ್ತರ ಭಾರತದಿಂದಲೂ ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆಯೂ ಇದೆ.

ಕಲ್ಲಹಳ್ಳಿಯನ್ನು ತಲುಪಲು ಬೆಂಗಳೂರು-ಮೈಸೂರು ಹೆದ್ದಾರಿಯ ನಡುವೆ ಪಕ್ಕದಿಂದ ಒಳಕ್ಕೆ ಹೋಗಬೇಕಿದೆ. ಮಂಡ್ಯ ಜಿಲ್ಲೆಯ ಪಾಂಡುವಪುರದಿಂದ ೩೨ ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ಬರುವವರು ಮಂಡ್ಯ ಮತ್ತು ಶ್ರೀರಂಗಪಟ್ಟಣ ರಸ್ತೆಯ ಮೂಲಕ ಬಂದು, ಕಿರಂಗೂರ್ ಗೇಟ್ ಬಳಿ ಬಲಕ್ಕೆ ತಿರುಗಿ ಕೆಆರ್ ಪೇಟೆ ರಸ್ತೆಯಲ್ಲಿ ಸಾಗಿ ಪಾಂಡವಪುರ ರೈಲು ನಿಲ್ದಾಣ, ಚಿನಕುರಳಿ, ಬೂಕನಕೆರೆ ದಾಟಿ, ಗಂಜಿಗೆರೆಯಿಂದ ಸುಮಾರು ೪ ಕಿ.ಮೀ. ಪಯಣಿಸಿದರೆ ಈ ದೇವಾಲಯವನ್ನು ತಲುಪಬಹುದು. ಸನಿಹದಲ್ಲೇ ಕನ್ನಂಬಾಡಿ ಕಟ್ಟುವ ಸಮಯದಲ್ಲಿ ಮುಳುಗಡೆಯಾಗಿದ್ದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ಖೋಡೇಸ್ ಟ್ರಸ್ಟ್ನವರು ನೂತನವಾಗಿ ಪುನರ್ ನಿರ್ಮಿಸಿದ್ದು, ಈ ದೇಗುಲ ಮತ್ತು ಅದರ ಪರಿಸರ ಅದ್ಭುತವಾಗಿದೆ.

Untitled 4.png

ದಟ್ಟ ಕಾನನ ನಡುವಣ ಯಾಣ ಭೈರವೇಶ್ವರನ ತಾಣ

ಉತ್ತರ ಕನ್ನಡ ಜಿಲ್ಲೆಯ ಅದ್ಭುತ ತಾಣ “ಯಾಣ”ವನ್ನು ಏನೆಂದು ಬಣ್ಣಿಸಲಿ. ಸುಂದರ ಅರಣ್ಯ ಪ್ರದೇಶ ಹೊಂದಿರುವ ಉತ್ತರ ಕನ್ನಡ ತಪೋಭೂಮಿಯೂ ಸಹ.

ಭೌಗೋಲಿಕವಾಗಿ ಕುಮಟಾ ತಾಲೂಕಿಗೆ ಸೇರುವ, ಭೂಮಾರ್ಗದಲ್ಲಿ ಸಿರ್ಸಿಯಿಂದ ತುಂಬಾ ಸುಲಭವಾಗಿ ತಲುಪುವ ತಾಣವೇ ಯಾಣ. ಭೈರವೇಶ್ವರನ ತಾಣಕ್ಕೆ ಪಯಣ ಹೋಗುತ್ತಿದ್ದ ಕಾರಣ ಯಾಣ ಎಂಬ ಹೆಸರು ಬಂತೆಂದು ಜನರು ಹೇಳುತ್ತಾರೆ.

ಗೋಕರ್ಣ ಸಹ ಕುಮಟಾ ತಾಲೂಕಿನ ವ್ಯಾಪ್ತಿಗೆ ಸೇರುತ್ತದೆ. ‘ಸೊಕ್ಕು ಇದ್ದರೆ ಯಾಣ, ರೊಕ್ಕ ಇದ್ದರೆ ಗೋಕರ್ಣ’ ಎಂಬ ಆಡುಮಾತಿದೆ. ಹಿಂದೆ ಯಾಣಕ್ಕೆ ಹೋಗುವಾಗ ನಡೆದೇ ಹೋಗಬೇಕಿತ್ತು. ಬುತ್ತಿಕಟ್ಟಿಕೊಂಡು. ಯಾಣದ ಬೆಟ್ಟ ಏರುವಾಗಲೂ ದೈಹಿಕಶಕ್ತಿ ಹೆಚ್ಚು ಬೇಕಿತ್ತು. ಹೀಗಾಗಿ ಮೈಮನಗಳಲ್ಲಿ ಸೊಕ್ಕಿನಶಕ್ತಿ ಇದ್ದರೆ ಮಾತ್ರ ಯಾಣ ತಲುಪಬಹುದಿತ್ತು. ಈಗ ವಾಹನಗಳ ಮೂಲಕ ಪಯಣ, ಯಾಣದ ಬೆಟ್ಟ ಏರಲು ಮೆಟ್ಟಿಲುಗಳ ನಿರ್ಮಾಣದ ಕಾರಣದಿಂದಾಗಿ ಸೊಕ್ಕಿನ ಕುರಿತ ಮಾತು ಕಡಿಮೆಯಾಗಿದೆ. ಹಾಗೆಯೇ ರೊಕ್ಕದ ಮಾತು ಕೂಡ.

ಸಹ್ಯಾದ್ರಿ ಬೆಟ್ಟಗಳ ಸಾಲಿನ ಪಶ್ಚಿಮಘಟ್ಟದಲ್ಲಿರುವ ಈ ಪ್ರದೇಶದಲ್ಲಿ ಸುಣ್ಣದ ಹರಳಿನಿಂದ ಕೂಡಿದ ಕಡುಗಪ್ಪು ಬಣ್ಣದ ಎರಡು ಬೃಹತ್ ಶಿಲಾ ಬಂಡೆಗಳೇ ಆಕರ್ಷಣೆ. ಈ ಪ್ರದೇಶದಲ್ಲಿ ಹೆಚ್ಚುಕಡಿಮೆ ಸಣ್ಣಪುಟ್ಟ 61 ಶಿಲಾ ಬಂಡೆಗಳ ಸಮೂಹವಿದೆ. ಎರಡು ಬಂಡೆಗಳು ಅತ್ಯಂತ ಎತ್ತರವಾದವು. ಅವುಗಳನ್ನು ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರ ಎಂದು ಕರೆಯುತ್ತಾರೆ. ನಮ್ಮ ಭಾರತೀಯ ಪರಂಪರೆಯಲ್ಲಿ ಪ್ರಾಕೃತಿಕ ಸ್ಥಳಗಳನ್ನೂ ನಾವು ದೇವಸಾನ್ನಿಧ್ಯದ ಬಂಧದಿಂದಲೇ ಕಟ್ಟಿಕೊಳ್ಳುತ್ತೇವೆ.

ಭೈರವೇಶ್ವರ ಶಿಖರವು ಸುಮಾರು 120 ಮೀಟರ್ ಗಳಷ್ಟು ಮತ್ತು ಮೋಹಿನಿ ಶಿಖರ 90 ಮೀಟರ್ ಗಳಷ್ಟು ಎತ್ತರವಿದೆ. ಆಕಾಶವನ್ನು ಚುಂಬಿಸಲು ಹೊರಟ ಚೂಪು ಎನಿಸುವಷ್ಟು ಶಿಖರಗಳಿವು.

ಭೈರವೇಶ್ವರ ಶಿಖರವು ಶಿವನನ್ನೂ ಮೋಹಿನಿ ಶಿಖರವು ವಿಷ್ಣುವನ್ನು ಸಂಕೇತವಾಗಿ ಹೆಸರಿಸಲಾಗಿದೆ. ಭಸ್ಮಾಸುರ ವಧೆಯನ್ನು ಈ ಶಿಖರಗಳಿಗೆ ಅನ್ವಯಿಸಲಾಗಿದೆ. ಶಿವನನ್ನು ಕುರಿತು ಭಸ್ಮಾಸುರ ತಪಸ್ಸು ಮಾಡುತ್ತಾನೆ. ತಪಸ್ಸಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ಏನು ವರ ಬೇಕು? ಎಂದು ಕೇಳಿದಾಗ, ತಾನು ಯಾವ ವಸ್ತುವಿನ ಮೇಲೆ ಕೈ ಇಡುತ್ತೇನೋ, ಆ ವಸ್ತು ಸಂಪೂರ್ಣವಾಗಿ ಭಸ್ಮವಾಗಬೇಕು ಎಂಬುದು ಅವನ ಬೇಡಿಕೆ. ಶಿವ ವರವನ್ನು ಕೊಟ್ಟು ಬಿಡುತ್ತಾನೆ. ಭಸ್ಮಾಸುರ ಶಿವನ ಮೇಲೆಯೇ ಕೈಯನ್ನು ಇಡಲು ಹೊರಡುತ್ತಾನೆ. ಶಿವನು ವಿಷ್ಣುವಿನ ಮೊರೆ ಹೋಗುತ್ತಾನೆ. ವಿಷ್ಣುವು ಮೋಹಿನಿ ರೂಪ ತಾಳಿ ಭಸ್ಮಾಸುರನ ಬಳಿ ಹೋಗುತ್ತಾನೆ. ಮೋಹಿನಿಯ ಸೌಂದರ್ಯಕ್ಕೆ ಮರಳಾಗುತ್ತಾನೆ ಭಸ್ಮಾಸುರ ಅವಳ ಜೊತೆ ಕುಳಿದು, ಅವಳು ತನ್ನ ತಲೆಯ ಮೇಲೆ ಕೈ ಇಟ್ಟುಕೊಳ್ಳುತ್ತಿದ್ದಂತೆ ತಾನೂ ಇಟ್ಟುಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಹೋಗುತ್ತಾನೆ. ಶಿವ ನಿಂತ ಜಾಗವನ್ನು ಭೈರವೇಶ್ವರ ಶಿಖರವೆಂದೂ, ಮೋಹಿನಿ ನಿಂತ ಜಾಗವನ್ನು ಮೋಹಿನಿ ಶಿಖರವೆಂದೂ ಕರೆಯುತ್ತಾರೆ. ಭಸ್ಮಾಸುರ ಸುಟ್ಟಾಗ ಈ ಜಾಗವೆಲ್ಲ ಕಪ್ಪು ಹೊಗೆಯಿಂದ ಆವರಿಸಿ, ಶಿಲೆಗಳೆಲ್ಲ ಕಪ್ಪಾದವೆಂದು ಸ್ಥಳೀಯರು ಕಲ್ಪನೆಯನ್ನು ಹೆಣೆದು ಗಟ್ಟಿಗೊಳಿಸಿದ್ದಾರೆ.

ಭೈರವೇಶ್ವರ ಶಿಖರದ ಕೆಳಗೆ ಸ್ವಯಂಭೂಲಿಂಗವಿದ್ದು, ದೇವಸ್ಥಾನವಿದೆ. ಬೆಟ್ಟದ ಭೈರವೇಶ್ವರ ದೇವಸ್ಥಾನವೆಂದೇ ಹೆಸರು ಪಡೆದಿದೆ. ಶಿವಲಿಂಗದ ಮೇಲೆ ವರ್ಷವಿಡೀ ಅಭಿಷೇಕದಂತೆ ನೀರು ಜಿನುಗುತ್ತದೆ. ಈ ನೀರು ಚಂಡಿಕಾ ಹೊಳೆಯಾಗಿ ಅಘನಾಶಿನಿ ನದಿಯನ್ನು ಸೇರುತ್ತದೆ.

ಯಾಣದಲ್ಲಿ ಹಸಿರು ಕಾಡಿನ ವೈಭವವನ್ನು ಸವಿಯಬಹುದು. ಚಾರಣವಂತೂ ಇದ್ದೇ ಇದೆಯಲ್ಲ. ವನ್ಯಜೀವಿಗಳು, ಪಕ್ಷಿ ಸಂಕುಲ, ಎಲ್ಲವೂ ಆಹ್ಲಾದಮಯ ವಾತಾವರಣವನ್ನು ನೀಡುತ್ತದೆ.

ಮಹಾ ಶಿವರಾತ್ರಿ ದಿನ ಬಹು ವಿಜೃಂಭಣೆಯಿಂದ ಉತ್ಸವ ನಡೆಸಲಾಗುತ್ತದೆ. ಅಂದು ಭಕ್ತರ ದಂಡು ಭಾರೀ ಸಂಖ್ಯೆಯಲ್ಲಿ ಸೇರುತ್ತದೆ. ಅಂದು ಭೈರವನಿಗೆ ಪೂಜೆ ಸಲ್ಲಿಸಿ ದಂಡಿ ತೀರ್ಥದ ನೀರನ್ನು ಗೋಕರ್ಣಕ್ಕೆ ಕೊಂಡೊಯ್ದು ಮಹಾಬಲೇಶ್ವರನಿಗೆ ಮಹಾಮಸ್ತಕಾಭಿಷೇಕ ಮಾಡಿದರೆ ಪುಣ್ಯ ದೊರೆಯುತ್ತದೆ ಎಂಬುದು ನಂಬಿಕೆ ಭಕ್ತರಲ್ಲಿದೆ.

 

ಚಿತ್ರಕೃಪೆ: ಸಂದೇಶ್ ಕುಮಾರ್ ಎಸ್, ಡಾ. ವಿಶ್ವಪ್ರಸಾದ್

Untitled 4.png

ಇತಿಹಾಸ ಪ್ರಸಿದ್ಧ ಪ್ರಾಚೀನ ಕಾಲದ ಸಾವಿರ ಕಂಬದ ದೇವಸ್ಥಾನ

ಹುಣಸೂರು (ತಾ) ಬಿಳಿಕೆರೆ ಹೋಬಳಿ ತರಿಕಲ್ಲು ಗ್ರಾಮದಲ್ಲಿರುವ ಶಿಥಿಲಗೊಂಡ ಪ್ರಾಚೀನ ಕಾಲದ ಕಾಶಿಲಿಂಗೇಶ್ವರ ದೇವಸ್ಥಾನವು (ಸಾವಿರ ಕಂಬದ ದೇವಾಲಯ) ಪುರಾಣ ಪ್ರಸಿದ್ಧ ಐತಿಹಾಸಿಕ ದೇವಸ್ಥಾನವಾಗಿದೆ. ಇಲ್ಲಿ ಅನೇಕ ಪುರಾತನ ಕೆತ್ತನೆಯ ಮೂರ್ತಿಗಳು, ಶಿಲಾ ಲೇಖನಗಳು, ಶಾಸನಗಳು ಸಿಕ್ಕಿವೆ.

 

Full information visit here:

https://youtu.be/Bg-02zlFUDA?si=JJLTaJaPHEQ6P7VX

Untitled 4.png

ನಮ್ಮೂರಿನ ಸ್ವಾತಂತ್ರ್ಯ ಹೋರಾಟಗಾರರು

ಅದು 1946 ಹಾರ್ಡ್‌ವಿಕ್ ಹೈಸ್ಕೂಲಿನಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದರು. ಈ ವೇಳೆ ಶಾರದಾ ವಿಲಾಸ, ಬನುಮಯ್ಯ ಹಾಗೂ ದಾಲ್ವಾಯ್ ಶಾಲೆಗಳ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ‘ಭಾರತ್ ಮಾತಾ ಕಿ ಜೈ’ ಮತ್ತು ‘ವಂದೇ ಮಾತರಂ’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಅವರು ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಕೇಳುತ್ತಿದ್ದರು.

 

ಬಾಣಾವರ ರಾಮಸ್ವಾಮಿ ಶಾಸ್ತ್ರಿ ಮತ್ತು ಅವರ ಪತ್ನಿ ಲಕ್ಷಿಮಿದೇವಮ್ಮ ಅವರ ಮನೆ ಪೂರ್ಣಯ್ಯನ ಚೌಲ್ಟ್ರಿಯಂತಿತ್ತು. ಮೈಸೂರಿಗೆ ಯಾರೇ ಬಂದರೂ ಅವರವರ ಮನೆಯಲ್ಲಿಯೇ ಇರುತ್ತಿದ್ದರು. ವಿದ್ಯಾರ್ಥಿ ರಾಮಸ್ವಾಮಿ ಬಡವನಾಗಿದ್ದರಿಂದ. ಶಾಸ್ತ್ರಿ ಅವರಿಗೆ ತಮ್ಮ ಪರಿಚಯಸ್ಥರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಿದರು.

 

ವಿದ್ಯಾರ್ಥಿ ರಾಮಸ್ವಾಮಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುವ ಹಂಬಲ ಹೊಂದಿದ್ದು, ಅದಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಾಗಿದ್ದರು. ಅದು 1946 ರಲ್ಲಿ ಒಂದು ನಿರ್ದಿಷ್ಟ ದಿನ ಮತ್ತು ಸಮಯ ಸುಮಾರು 11 ಗಂಟೆಯಾಗಿತ್ತು. ಹಾರ್ಡ್‌ವಿಕ್ ಶಾಲೆಯಲ್ಲಿ "ನಮಗೆ ಸ್ವಾತಂತ್ರ್ಯ ಬೇಕು" ಎಂದು ಕೂಗುತ್ತಾ ವಿದ್ಯಾರ್ಥಿಗಳ ದೊಡ್ಡ ಸಭೆ ಸೇರಿತು.

 

ನಾಗರಾಜಯ್ಯ ಆಗ ಮೈಸೂರು ಜಿಲ್ಲಾಧಿಕಾರಿಯಾಗಿದ್ದರು. ಅವರು ಸಭೆ ಮತ್ತು ಸ್ವಾತಂತ್ರ್ಯಕ್ಕಾಗಿ ಅವರ ಹೋರಾಟದ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದರು. ಕುದುರೆ ಏರಿ ವಿದ್ಯಾರ್ಥಿಗಳು ಜಮಾಯಿಸಿದ ಸ್ಥಳಕ್ಕೆ ಡಿಸಿ ಬಂದಿದ್ದು, ರಾಮಸ್ವಾಮಿ ಕೈಯಲ್ಲಿ ಧ್ವಜ ಹಿಡಿದುಕೊಂಡಿದ್ದು, ಇದನ್ನು ನೋಡಿ ಕೋಪಗೊಂಡ ನಾಗರಾಜಯ್ಯ ಅವರನ್ನು ಕೂಗಿ ಧ್ವಜ ಬಿಡುವಂತೆ ಹೇಳಿದ್ದಾರೆ.ಆದರೆ ರಾಮಸ್ವಾಮಿ ನಿರ್ಲಕ್ಷಿಸಿ ವಂದೇ ಮಾತರಂ ಹಾಡಿದರು. ತನ್ನ ಆದೇಶವನ್ನು ನಿರ್ಲಕ್ಷಿಸಿದ ವಿದ್ಯಾರ್ಥಿಯ ಕೃತ್ಯದಿಂದ ಕೆರಳಿದ ಡಿಸಿ ನಾಗರಾಜಯ್ಯ ಅವರು ಬುಲೆಟ್ ಅನ್ನು ಮೊದಲು ಗುಂಡು ಹಾರಿಸಬೇಕು ಎಂಬ ನಿಯಮವಿದ್ದರೂ ಅವರ ಎದೆಗೆ ನೇರವಾಗಿ ಗುಂಡು ಹಾರಿಸಿದ್ದಾರೆ. ರಾಮಸ್ವಾಮಿ ಸ್ಥಳದಲ್ಲೇ ಕುಸಿದು ಬಿದ್ದು ಹುತಾತ್ಮರಾದರು.

Untitled 4.png

ತಾಳಿಕೋಟೆ ಅಮರ ಚೇತನ ರಾಚಯ್ಯ ಉಳ್ಳೆಪ್ಪನಮಠ. ಭಾಗ-2

1942 ರಲ್ಲಿ "ಕ್ವಿಟ್ ಇಂಡಿಯಾ" ಚಳುವಳಿ ಪ್ರಾರಂಭವಾಯಿತು

ತಾಳಿಕೋಟೆಯಿಂದ ತಮ್ಮಾಜಿ ಮಿರಜಕರ ಮತ್ತು ರಾಮಸಿಂಗ ಹಾಜೇರಿ ಅವರನ್ನು ಬಂದಿಸಿದರು. ಆಗ ರಾಚಯ್ಯನವರು ಒಂದು ದಿನ ರಾತ್ರಿ 3.00 ಗಂಟೆಗೆ ಅಂಬಾಭವಾನಿ ಮಂದಿರದಿಂದ ಪ್ರಭಾತಫೇರಿ ಹೋರಾಟ ಸ್ವದೇಶಿ ಮೆರವಣಿಗೆ ಮಾಡಿ ಪೋಲೀಸ ಠಾಣೆಯ ಮೇಲೆ ರಾಷ್ಟದ್ವಜ ಹಾರಿಸಿ ವಾಪಸ ಬಸವಣ್ಣ ಗುಡಿ ಹತ್ತಿರ ಬರುವಾಗ ಪೊಲೀಸ ಸಬ್ ಇನಾಸ್ಪೆಕ್ಟರಾದ ಗಡಕರ್ ಇವರ ಮೇಲೆ ಸಿಕ್ಕಾಪಟ್ಟೆ ಲಾಠಿ ಪ್ರಹಾರ ಮಾಡಿದರು. ಮಾರಣಾಂತಿಕ ಪೆಟ್ಟು ತಿಂದ ರಾಚಯ್ಯನವರಿಗೆ ಕೈ ಕಾಲುಗಳಿಗೆ ಬೇಡಿ ಹಾಕಿ ತಂಗಡಿಗಿ ಬ್ರಿಟಿಷ್ ಕ್ಯಾಂಪಿನಲ್ಲಿ ರೆಸಿಡೆಂಟ್ ಆಫ್ ಮ್ಯಾಜಿಸ್ಟ್ರೇಟರ್ ಮುಂದೆ ನಿಲ್ಲಿಸಿದಾಗ. ರಾಚಯ್ಯನವರು ಪೊಲೀಸರು ಹೊಡೆದ ವಿಚಾರ ಹೇಳಿದರು ಅವರು 7-8 ದಿನ ಮುದ್ದೇಬಿಹಾಳ ಸರಕಾರಿ ದವಾಖಾನಿಯಲ್ಲಿ ಚಿಕಿತ್ಸೆ ನೀಡಿದ . ನಂತರ ವಿಜಾಪುರ ಮತ್ತು ಬೆಳಗಾಂವ ಹಿಂಡಲಗಾ ಜೈಲು ಶಿಕ್ಷೆಯನ್ನು 6 ತಿಂಗಳ ಕಾಲ ಅನುಭವಿಸಿ ಸ್ವಗ್ರಾಮಕ್ಕೆ ಮರಳಿದರು.

 

ಇವರು ಚಿಕ್ಕವಯಸ್ಸಿನಲ್ಲಿಯೇ ಹೆಂಡತಿಯನ್ನು ಕಳೆದುಕೊಂಡು ನೋವಿನಲ್ಲೂಯೂ.ರಾಷ್ಟ್ರಸೇವೆಗೆ ಬೆಂಬಿಡದೇ ಮುಂದಾದರು ರಾಚಯ್ಯನವರು ಅಮರಾದರು

Untitled 4.png

ವಡ್ಡಿಗೆರೆ ವೀರನಾಗಮ್ಮ ದೇವಿ ಮತ್ತು ಬಿಷಗ್ನಿಮಠದ ಇತಿಹಾಸ

ವಡ್ಡರ ಸಮುದಾಯದ ಏಳು ಮಂದಿ ಗಂಡಂದಿರ ಒಬ್ಬಳೇ ಹೆಂಡತಿ ಸೀತಾ ಬಾವಿಯಲ್ಲಿ ನೀರು ತರಲು ಹೋಗಿ ಬಾವಿಯಲ್ಲಿ ಮೂಗುತಿ ಕಳೆದುಕೊಂಡಳು. ಅವಳ ಏಳು ಜನ ಗಂಡಂದಿರು ಮೂಗುತಿಯನ್ನು ಆಳವಾದ ಬಾವಿಯಲ್ಲಿ ಹುಡುಕಲಾಗದೆ ಸೋತು ನಿಂತರು. ಆಗ ಅಲ್ಲಿಗೆ ಬಂದ "ಕುಂಚಿಟಿಗರು" ಸಮುದಾಯದ ವೀರಕ್ಯಾತರಾಯ ಎಂಬ ಗೋವಳಿಗ ಬಾವಿಯಲ್ಲಿ ಮುಳುಗಿ ಮೂಗುತಿಯನ್ನು ಹುಡುಕಿಕೊಟ್ಟು ವಡ್ಡರಿಂದ ಬಹುಮಾನವಾಗಿ ಕೆರೆಯನ್ನು ಪಡೆದನು. ತಾವೇ ಕಟ್ಟಿದ ಕೆರೆಯನ್ನು ಕೊಟ್ಟ ವಡ್ಡರು ಇದ್ದೂರನ್ನು ಬಿಟ್ಟು ಹೋದರು. ವೀರಕ್ಯಾತರಾಯನು ವಡ್ಡರಿಂದ ಪಡೆದ ಕೆರೆಯ ಅಂಗಳದಲ್ಲಿ ವಡ್ಡಗೆರೆ ಎಂಬ ಊರನ್ನು ಕಟ್ಟಿದನು. ಇದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ವಡ್ಡಗೆರೆಯ ಹೆಸರಿನ ಗ್ರಾಮದ ಇತಿಹಾಸ.

 

ವಡ್ಡಗೆರೆ ಸಂಸ್ಥಾನದ ಉಗಮ:-

ಕ್ರಿ.ಶ. 1321ರಲ್ಲಿ ವಾರಂಗಲ್ ಪ್ರಭು ಪ್ರತಾಪದೇವರ ಮರಣಾನಂತರ ರಾಜ್ಯದಲ್ಲಿ ದೆಹಲಿ ಸುಲ್ತಾನನಿಂದ ಪ್ರಜೆಗಳ ಮೇಲೆ ತೀವ್ರವಾದ ಸುಲಿಗೆ, ದರೋಡೆ, ಕೊಲೆ, ಮಾನಭಂಗಗಳು ಪ್ರಾರಂಭವಾದವು. ಇವುಗಳಿಂದ ತಪ್ಪಿಸಿಕೊಳ್ಳಲು ವಾರಂಗಲ್ ಪಟ್ಟಣದ ರಾಜ ಪ್ರತಿನಿಧಿಯಾಗಿ ಆಡಳಿತ ನಡೆಸಿದ ಮಹಾಪರಾಕ್ರಮಿ ವೀರಕೇತುರಾಯರ ನೇತೃತ್ವದಲ್ಲಿ ಮಹಾಜನತೆ ತಮ್ಮ ಆಯ್ಯಾಗಾರಾ ಗುರುಗಳೊಂದಿಗೆ ನಗನಾಣ್ಯ ಪಶುಧಾನ್ಯ ಕುಟುಂಬದೊಂದಿಗೆ ಕೃಷ್ಣಾ ನದಿಯನ್ನು ದಾಟಿ, ಕನ್ನಡ ನಾಡಿನ ದಕ್ಷಿಣ ಭಾಗದಲ್ಲಿ ಈಗಿನ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ಸಮೀಪ ವಡ್ಡಗೆರೆಯಲ್ಲಿ ನೆಲೆಸಿ, ಕೋಟೆ ಪಟ್ಟಣ ನಿರ್ಮಿಸಿ, ಪೆನಗೊಂಡ ರಾಜ ಆನೆಗುಂದಿ ಜಗ ದೇವರಾಯರ ಮತ್ತು ಮಂತ್ರಿ ಕಂಪಣರಾಯರ ಅನುಮತಿ ಪಡೆದು ಸಾಮಂತ ರಾಜರಾಗಿ ಆಡಳಿತ ನಡೆಸಿದರು. ಮಹಾಪರಾಕ್ರಮಿ ವೀರ ಕೇತುರಾಯರ ಏಕೈಕ ಪುತ್ರ ರಾಜ ವೀರನಾಗಪ್ಪ ಮತ್ತು ಇವರ ಪತ್ನಿ ವೀರನಾಗಮ್ಮ ದೇವಿ ಇವರು ವಡ್ಡಗೆರೆಯನ್ನು ರಾಜಧಾನಿ ಮತ್ತು ತಾಡಿ ಎಂಬ ಹಳ್ಳಿಯನ್ನು ಉಪರಾಜಧಾನಿಯಾಗಿ ಮಾಡಿಕೊಂಡು ಆಡಳಿತ ನಡೆಸಿದರು. ಪತಿ (ರಾಜ ವೀರನಾಗಪ್ಪರ) ಮರಣಾನಂತರ ಕೆಲಕಾಲ ಆಡಳಿತ ನಡೆಸಿದ ರಾಣಿ ವೀರನಾಗಮ್ಮ ದೇವಿ ಕೊನೆ ಕಾಲದಲ್ಲಿ ತನ್ನೆಲ್ಲಾ ಸಂಪತನ್ನು ದಾನ ಮಾಡಿ ಅಗ್ನಿ ಕುಂಡದಲ್ಲಿ ನಡೆದು ದೈವ ಸ್ಥಾನ ಪಡೆದರು.

 

ಕೊಂಡವಾಡಿ ಸಂಸ್ಥಾನ ಉಗಮ:

ವಾರಂಗಲ್‌ ಪ್ರಭು ಪ್ರತಾಪದೇವರ ಕಾಲದಲ್ಲಿ ರಾಜ್ಯದಲ್ಲಿ ವಾರಂಗಲ್ ಸಮೀಪದ ಬಡಾವಲವಾಡಿ ಪಟ್ಟಣದ ರಾಜಪ್ರತಿನಿಧಿಯಾಗಿದ್ದ ವಿವಲರಾಯರ (ಬಡುವಲರಾಯ) ವಂಶಸ್ಥರು ಪ್ರಭು ಪ್ರತಾಪದೇವರ ಮರಣಾನಂತರ ಕೊಂಡವಾಡಿ ರಾಮಲಿಂಗೇಗೌಡರ ಮೊಮ್ಮಗ ಚಿನ್ನಪ್ಪಗೌಡರ ಮಗ ಮಹಾಪರಾಕ್ರಮಿ ಮಾರೇಗೌಡ ಮತ್ತು ಇವರ ಸಹೋದರರು ವಡ್ಡಿಗೆರೆ ಸಂಸ್ಥಾನದ ಅಧೀನದಲ್ಲಿ ಕೊಂಡವಾಡಿ ಮತ್ತು ಪುರವರ ಪಟ್ಟಣಗಳ ಸಮೀಪದಲ್ಲಿ ಹರಿಯುವ 'ಜಯಮಂಗಲ' ನದಿ ತೀರದಲ್ಲಿ ವಿಜಯನಗರದ ಅರಸರ ಅನುಮತಿ ಪಡೆದು ಕೀಟಪಟ್ಟಣ ನಿರ್ಮಿಸಿ ಮುಮ್ಮಡಿ ಎಂದು ನಾಮಕರಣ ಮಾಡಿ ಕ್ರಿ.ಶ. 1399ರಲ್ಲಿ ಮಹಾನಾಡಿನ ಆಡಳಿತ ಪ್ರಾರಂಭಿಸಿದರು. ಇದು ವಡ್ಡಗೆರೆ ಸಂಸ್ಥಾನದ ಅಧೀನ ಪಾಳೆಪಟ್ಟು.

 

ವೀರನಾಗಮ್ಮನ ಮಾವ ವೀರ ಕೇತುರಾಯನು ವಡ್ಡಗೆರೆಯನ್ನು ಆಳುತ್ತಿರಲು ಒಮ್ಮೆ ತಾಲವಾಡಿಯ ಪಾಳೇಗಾರ ಮಲ್ಲಪ್ಪ ನಾಯಕನೊಡನೆ ಯುದ್ದ ನಡೆಯುತ್ತದೆ. (ಜೂಜಿನ ರೀತಿ) ಪಂದ್ಯದಲ್ಲಿ ಮಲ್ಲಪ್ಪ ನಾಯಕ ಸೋಲುತ್ತಾನೆ. ಸೋಲು ಗೆಲುವಿನ ಕಾರಣಕ್ಕೆ ಎರಡು ಕಡೆಯವರಿಗೆ ಜಿದ್ದಾಜಿದ್ದಿ ಏರ್ಪಟ್ಟು ಒಂದು ಊರಿನವರು ಮತ್ತೊಂದು ಊರಿಗೆ ಹೋಗದಂತೆ, ಅವಲಂಬಿಸದಂತೆ ನಿರ್ಬಂಧ ಹೇರಿಕೊಂಡು ಬದುಕಲಾರಂಭಿಸುತ್ತಾರೆ. ಅದು ಈ ರೀತಿ ಇದೆ, ಅಂದರೆ ವಡ್ಡಗೆರೆ ವೀರನಾಗಮ್ಮ ದೇವಿಯನ್ನು ಕುಲದೇವಿಯಾಗಿಸಿಕೊಂಡಿರುವ ಎಲ್ಲಾ ಜಾತಿವರ್ಗದ ಜನರು ತುಂಬಾಡಿ ಗ್ರಾಮಕ್ಕೆ ಬಂದಾಗ ಈ ಕೆಳಗಿನ ರೀತಿ ಆಚರಣೆ ಮಾಡುತ್ತಾರೆ:

 

ತಾಯಿ ಮಗುವಿಗೆ ಹಾಲು ಉಣಿಸುವುದಿಲ್ಲ.

ಟೀ ಕಾಫಿ ಸೇವಿಸುವುದಿಲ್ಲ

ಮನೆ-ಹೋಟೆಲ್‌ಗಳಲ್ಲಿ ಆಹಾರ ಸೇವನೆ ಇಲ್ಲ.

ಎಂಜಲು ಉಗಿಯುವುದಿಲ್ಲ.

ವಸ್ತುಗಳ ಖರೀದಿ ಉಪಯೋಗವಿಲ್ಲ.

ಮದುವೆ ಸಂಬಂಧವಿಲ್ಲ.

ತುಂಬಾಡಿಯಲ್ಲಿ ವಡ್ಡಗೆರೆಯವರು ಬಸ್ ಹತ್ತುವುದಿಲ್ಲ.

 

ಹೀಗೆ ಇವರ ವಿಚಿತ್ರ ಆಚರಣೆಗಳಿಂದ ತಮ್ಮ ಮನೆ ದೇವರಿಗೆ ನಿಷ್ಠ ತೋರಿಸುತ್ತಾ ಬಂದಿದ್ದಾರೆ.

 

ಭಿಷಗ್ನಿಮಠ:-

ವೀರಶೈವ ಸಂಪ್ರದಾಯದ ಪಂಚ ಪೀಠಗಳಲ್ಲಿ ಒಂದಾದ "ಕೇದಾರದ ವೈರಾಗ್ಯಪೀಠ"ದಿಂದ ಬಂದಂತಹ ಗುರುಗಳು, ಹೊಳವನಹಳ್ಳಿಯಲ್ಲಿ ಸುಮಾರು 400 ವರ್ಷಗಳ ಹಿಂದೆ "ಭಿಷಗ್ನಿಮಠ" ಸ್ಥಾಪನೆ ಮಾಡಿದರು. ವಿಜಯನಗರದಿಂದ ಬಂದಂತಹ ವಡ್ಡಗೆರೆ ಸಂಸ್ಥಾನದ ಪಾಳೇಗಾರರು ಹಂಪಿಯಿಂದ "ವಿರೂಪಾಕ್ಷಸ್ವಾಮಿ" ಲಿಂಗವನ್ನು ತಂದು ವಡ್ಡಗೆರೆಯಲ್ಲಿ ಸ್ಥಾಪನೆ ಮಾಡಿ ಭಿಷಗ್ನಿ ಮಠದ ಗುರುಗಳನ್ನು ಗುರುಗಳಾಗಿ ಸ್ವೀಕರಿಸಿ, “ವಿರೂಪಾಕ್ಷಸ್ವಾಮಿಯ" ಪೂಜೆಗೆ ನಿಯುಕ್ತಿಗೊಳಿಸಿದರು. ಭಿಷಗ್ನಿಮಠದ ಗುರುಗಳನ್ನು “ಒಡೆಯರ್" ಎಂದು ಗೌರವ ಪೂರ್ವಕಸ್ಥಾನ ನೀಡಿ, ಈಗಲೂ ಅವರ ವಂಶದ ಜನಾಂಗಕ್ಕೆ "ಒಡೆಯರ್” ಮನೆ ಎಂದೇ ಹಿಂದಿನ ತಲೆಮಾರಿನವರು ಗೌರವಿಸುತ್ತಾರೆ.

 

ಭಿಷಗ್ನಿ ಮಠದ ಇತಿಹಾಸವನ್ನು ಲೇಖಕಿಯ ಮಾವ ಹೇಳಿದ್ದು ,ಮಾನವನರಾದ "ಲಿಂಗಯ್ಯ” ನವರಿಗೆ ಮಠದ ಪಟ್ಟಾಭಿಷೇಕವಾಗಿತ್ತು. ಪಟ್ಟವನ್ನು ರಿಕ್ತಗೊಳಿಸಿ ಒಬ್ಬ ಮಗ 8 ಜನ ತಂಗಿಯರಿಗೆ ಅಣ್ಣನಾಗಿರಲೆಂಬ ಕಾರಣದಿಂದ ಮದುವೆ ಮಾಡಿದ್ದಾಗಿ ತಿಳಿಸಿದ್ದಾರೆ. ಇದರ ಉಲ್ಲೇಖ ಕೃತಿಯಲ್ಲಿ ಇಲ್ಲ. ಹಿರಿಯರಿಂದ ಕಿರಿಯರಿಗೆ ಹರಿದು ಬಂದಿದೆ.

 

ಶಿವರಾತ್ರಿಯ ದಿನ ಭಕ್ತರು "ವಿರೂಪಾಕ್ಷಸ್ವಾಮಿ" ದೇವಸ್ಥಾನಕ್ಕೆ ಬಂದು ಒಡೆಯರ್ ಮನೆತನದವರಿಂದ ವಿಭೂತಿ ಧರಿಸಿಕೊಂಡು ಹೋದ ನಂತರವೇ ಉಪವಾಸ ಕೊನೆಗೊಳಿಸುತ್ತಾರೆ. ಈಗ್ಗೆ 50 ವರ್ಷದ ಹಿಂದೆ ಗುರುಗಳ ಪಾದಪೂಜೆಯನ್ನು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ನೆರವೇರಿಸಿ ದಾನ ನೀಡಿ ಭಕ್ತಿ ಸಮರ್ಪಣೆ ಮಾಡುತ್ತಿದ್ದರು. ಈಗಿನ ದಿನಮಾನದಲ್ಲಿ 'ಭಿಷಗ್ನಿ' ಮಠವೂ ಇಲ್ಲ, ಸ್ವಾಮಿಗಳೂ ಇಲ್ಲ. "ವಿರೂಪಾಕ್ಷಸ್ವಾಮಿ” ದೇವಸ್ಥಾನವಿದೆ. ಅದರ ಜೀರ್ಣೋದ್ಧಾರವನ್ನು "ಭಿಷಗ್ನಿ” ಮಠದ ಈಗಿನ ಹಿರಿಯ ಮಗನಾದ ಎಲ್. ಶಿವಕುಮಾರ ಸ್ವಾಮಿಯವರು ಕೈಗೆತ್ತಿಕೊಂಡಿದ್ದಾರೆ. ದೇವಸ್ಥಾನಕ್ಕೆಂದು ಹಿಂದೆ ರಾಜರು ನೀಡಿದ್ದ ಜಮೀನನ್ನು ಶಿವರಾಮ ಅರ್ಚಕರ ಮೋಸದ ಹಿಡಿತದಿಂದ ಬಿಡಿಸಿ ಮಂದಿರವನ್ನು ವ್ಯವಸ್ಥಿತಗೊಳಿಸಬೇಕಾಗಿದೆ.

 

ವಿಜಯಾ S. ಒಡೆಯ‌ರ್

ತುಮಕೂರು

 

ಆಧಾರ:- ವಡ್ಡಗೆರೆ ವೀರನಾಗಮ್ಮ ಮಹಾಸತಿಕಾವ್ಯ

ಕುವೆಂಪು ವಿಶ್ವವಿದ್ಯಾಲಯ ಮತ್ತು ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪಠ್ಯ ಪುಸ್ತಕ

ಲೇಖಕ : ಪ್ರೊಫೆಸರ್ ವೀ ನಾಗರಾಜಯ್ಯ.

Untitled 4.png

800-Year-Old Hanuman Temple in Vaddarpalya

Tucked behind Royal County Park, JP Nagar 8th Phase (Vaddarpalya), this ancient Hanuman temple has a rich legacy of over 800 years, originally consecrated by Sri Vyasaraya. The temple was beautifully renovated 15 years ago by Sri Manjunath, chairman of PVV School and his family.

The surroundings are serene, and the temple radiates divine positive energy. Many devotees have felt a deep spiritual connection here.

 

Tuesdays and Saturdays are considered highly auspicious. A special Satyanarayana Puja is held on every full moon day, narrated beautifully by the priest and deeply cherished by devotees.

Festivals like Hanuman Jayanti, Dussehra and the Ugadi to Rama Navami 9-day celebration are major highlights, filled with bhajans, music and cultural programs. Recently, a vibrant event was held from Jan 20–22 to celebrate Ayodhya Ram Mandir Prana Pratistha, including homas and evening performances. Young talents perform bhajans, veena, violin, keyboard. Many believe that wishes made here are fulfilled within 3 weeks to 3 months. Visit here for a divine experience.

 

To reach: After Ray Centre swimming pool, take the second right and turn left at the dead end.

Untitled 4.png

ಸಾವಯವ & ಸಮಗ್ರ ಕೃಷಿ ಮತ್ತು ಕಡಿಮೆ ನೀರಿನ ಬಳಕೆಯ ಕೃಷಿ

ಸಮಗ್ರ ಕೃಷಿ 1.5 ಎಕರೆ , ಸಾವಯವ ಕೃಷಿ5 ಎಕ್ಕರೆ , ಜೀರೋ ಕಲ್ಟಿವೇಶನ್ 0.5 ಎಕರೆ, ಬಯೋಡೈನಾಮಿಕ್ ವ್ಯವಸಾಯ 1 ಎಕರೆ, ಎಲ್ಲಾ ಕಾಲಮಾನಗಳಲ್ಲೂ ನಿರಂತರ ಆದಾಯ ತರುವ ಮತ್ತು ಆರೋಗ್ಯ ಪೂರ್ಣ ಪರಿಸರ ಸ್ನೇಹಿವ್ಯವಸಾಯ.

ರಾಸಾಯನಿಕಗಳ ಬಳಕೆಯಿಂದ ಪ್ರಕೃತಿಯನ್ನು ನಾಶ ಪಡಿಸಿ, ವಿಷಪೂರಿತ ಆಹಾರ ಪದಾರ್ಥಗಳನ್ನು ಬೆಳೆಯುವ ಕೃಷಿಯನ್ನು ಕಳೆದ 2 ದಶಕಗಳಿಂದ ದೇಶದ ಹೆಚ್ಚಿನ ರೈತರು ಮಾಡುತ್ತಿದ್ದಾರೆ.

ಇನ್ನು ಮುಂದೆ ಆದರೂ ಪರಿಸರ ಸ್ನೇಹಿ ಮತ್ತು ಆರೋಗ್ಯ ಪೂರ್ಣ ಕೃಷಿಯನ್ನು ಅಳವಡಿಸಬೇಕಾಗಿದೆ. ಈ ಕಾರ್ಯದಲ್ಲಿ ನನ್ನದೊಂದು ಸಣ್ಣ ಪ್ರಯತ್ನ.

Untitled 4.png

ನಮ್ಮೂರ ಶಾಲೆ

ನಮ್ಮ ಊರ ಶಾಲೆ ತುಂಬಾ ಸ್ವಚ್ಛತೆಯಿಂದ ಇದೆ. ಮೈದಾನದಲ್ಲಿ ಗಿಡಗಳನ್ನು ಬೆಳಿಸಿದ್ದಾರೆ. ಶಾಲೆಯ ಕಾರ್ಯಕ್ರಮಗಳಿಗೆ ಊರಿನ ಗ್ರಾಮಸ್ಥರ ಸಹಕಾರ ಇದೆ. ಗ್ರಾಮದ ಯುವಕರ ತಂಡ ಸೇರಿ ಶಾಲೆಯ ಕಟ್ಟಡಕ್ಕೆ ಬಣ್ಣ ಬಳಿಸಿದ್ದಾರೆ.

Untitled 4.png

ನಮ್ಮೂರಿನ ರಥೋತ್ಸವ

ಸಾಮರಸ್ಯ ಕಳಸ ಸ್ಥಾಪನೆ ಮಾಡುವುದು

Untitled 4.png

ಅಣ್ಣೋರ ಸಿನಿಮಾ!

“ದೇವರೇ ದಿನಕ್ಕೆ ಮೂರು ಟೈಮ್ ಊಟ, ಒಂದು ರಾಜ್ ಕುಮಾರ್ ಪಿಕ್ಚರ್ ನೋಡೋ ತರ ವರ ಕೊಡಪ್ಪ” ಇದು ನಾನು ನನ್ನ ಬಾಲ್ಯದಲ್ಲಿ ದೇವರನ್ನು ಕೇಳುತ್ತಿದ್ದ ವರ. ನನ್ನ ಬಾಲ್ಯ ಕಳೆದದ್ದು ಅಮ್ಮನ ತೌರುಮನೆ ಜವನಹಳ್ಳಿಯಲ್ಲಿ ಅಜ್ಜಿಯ ಜೊತೆಗೆ. ಆ ಕಾಲಕ್ಕೆ ಆ ಊರಲ್ಲಿ ಒಂದೇ ಒಂದು ಟಿವಿ ಇದ್ದದ್ದು ಕಣ್ಮಜ್ಜಿಯ ಮಗ ಗುಂಡಪ್ಪನವರ ಮನೆಯಲ್ಲಿ. ಭಾನುವಾರ ಚಂದನ ಟಿವಿಯಲ್ಲಿ ಬರುತ್ತಿದ್ದ ವಾರದ ಸಿನಿಮಾಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆವು. ಅದೂ ಕೂಡ ಒಂದು ವಾರ ಕರೆಂಟ್ ಬೆಳಗ್ಗೆ ಶಿಪ್ಟ್ ಇದ್ದರೆ ಮತ್ತೊಂದು ವಾರ ರಾತ್ರಿ ಶಿಪ್ಟ್. ಹಾಗಾಗಿ ಎರಡು ವಾರಕ್ಕೆ ಒಂದೇ ಸಿನಿಮಾ ನೋಡೋಕೆ ಆಗುತ್ತಿತ್ತು. ಅದು ಬಿಟ್ರೆ ಶುಕ್ರವಾರ ಚಿತ್ರಮಂಜರಿ ಇರುತ್ತಿತ್ತು. ಅದನ್ನು ನೋಡೋಕೆ ಜನವೋ ಜನ. ಅಣ್ಣೋರ ಸಿನಿಮಾ, ಹಾಡು ಅಂದ್ರೆ ಒಂದು ಹಬ್ಬ ಇದ್ದ ಹಾಗೆ. ಅಣ್ಣೋರ ಸಿನಿಮಾ ನೋಡೋದೇ ಒಂದು ಸಂಭ್ರಮ. ಅಣ್ಣೋರ ಸಿನಿಮಾ ಬಂದ್ರೆ ಊರ ಜನರೆಲ್ಲಾ ದೊಡ್ಡಾಲದಮರದ ಟೆಂಟಿನಲ್ಲಿ ಟ್ರಾಕ್ಟರ್ ಮಾಡಿಕೊಂಡು ‘ನಮೋ ವೆಂಕಟೇಶ.. ನಮೋ ತಿರುಮಲೇಶ’ ಪ್ರಾರ್ಥನೆ ಬರೋದ್ರೊಳಗೆ ಹೋಗಿ ಸಿನೆಮಾ ನೋಡಿ ಮದ್ಯರಾತ್ರಿ ಮನೆ ಸೇರಿಕೊಳ್ಳುತ್ತಿದ್ದೆವು. ಆ ಎಲ್ಲಾ ನೆನಪುಗಳು ಈಗಲೂ ನನ್ನಲ್ಲಿ ಪುಳಕವನ್ನುಂಟುಮಾಡುತ್ತವೆ.

 

ರಾಜ್ ಕುಮಾರ್ ಭೌತಿಕ ದೇಹ ಇಲ್ಲವಾದ ಮೇಲೆ ನಾನು ಟಾಕೀಸ್‍ಗೂಗಿ ಸಿನಿಮಾ ನೋಡಿದ್ದೇ ಅಪರೂಪ. (ಅದಾದ ಮೇಲೆ ಕಿರಗೂರಿನ ಗಯ್ಯಾಳಿಗಳು ಮತ್ತು ಮೂಕಜ್ಜಿಯ ಕನಸುಗಳು ನೋಡಿದ ನೆನಪು) ಈಗ್ಲೂ ನಾನು ನೋಡುವ, ನೋಡಲು ಬಯಸುವ ಸಿನಿಮಾ ಅಂದ್ರೆ ಅದು ಅಣ್ಣೋರ ಸಿನಿಮಾ ಮಾತ್ರನೇ. ರಾಜ್ ಕುಮಾರ್ ಅಂದ್ರೆನೇ ಒಂತರಾ ಸೆಳೆತ. ಅವರ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಹೀಗೆ ಯಾವುದೇ ಸಿನಿಮಾಗಳ ಪಾತ್ರ ತೆಗೆದುಕೊಂಡರೂ ಫರ್ಪೆಕ್ಟ್ ಅಕ್ಟಿಂಗ್ ಅಣ್ಣೋರದ್ದು. ಪ್ರತಿಯೊಂದರಲ್ಲೂ ನಮ್ಮ ಬದ್ಕು ಬದಲಿಸಿಕೊಳ್ಳೋಕೆ ಸಾಕಷ್ಟು ವಿಷಯ ಇದ್ದೇ ಇದೆ. ಬಂಗಾರದ ಮನುಷ್ಯ, ಸನಾದಿ ಅಪ್ಪಣ್ಣ, ಮಯೂರ ಹೀಗೆ ಎಷ್ಟೇ ಬಾರಿ ನೋಡುದ್ರು ಮತ್ತೆ ಮತ್ತೆ ನೋಡಬೇಕಿನಿಸುವ ಅಣ್ಣೋರ ಸಿನಿಮಾಗಳು ಅಭಿಮಾನಿ ದೇವರುಗಳ ಮನಸ್ಸನ್ನು ತಟ್ಟಿವೆ ಅವರ ಬುದ್ಧಿಭಾವಗಳನ್ನು ತೀಡಿವೆ. ಅಣ್ಣೋರ ಸಿನಿಮಾ ಅಂದ್ರೆ ಅದು ಅಭಿಮಾನಿಗಳ ಬದುಕಿಗೆ ಸ್ಪೂರ್ತಿ. ಮೌಲ್ಯಾಧಾರಿತ ಪಾತ್ರಗಳು ಹಾಗೂ ವೈಯಕ್ತಿಕ ಬದುಕಿನಲ್ಲಿನ ಸರಳತೆ ಮತ್ತು ಸನ್ನಡತೆಯಿಂದಾಗಿ ಅಣ್ಣೋರು ಅಭಿಮಾನಿಗಳ ಪಾಲಿನ ದೇವರಾಗಿದ್ದಾರೆ.

 

ದೇವರು ದೊಡ್ಡೋನು ನಾನು ಕೇಳಿದ ವರ ಕರುಣಿಸಿದ್ದಾನೆ. ಯೂಟ್ಯೂಬ್ ದಯೆಯಿಂದ ಅವಕಾಶ ಸಿಕ್ಕಾಗಲೆಲ್ಲಾ ಅಣ್ಣೋರ ಅಪರೂಪದ ಸಿನಿಮಾಗಳನ್ನು ಬಯಸಿದಷ್ಟು ಬಾರಿ ನೋಡುವ ವರ ಕರುಣಿಸಿದ್ದಕ್ಕೆ ಕಣ್ಣಿಗೆ ಕಾಣದ ಭಗವಂತನೇ ನಿನಗೆ ವಂದನೆಗಳು.

Untitled 4.png

ನಮ್ಮ ಊರಿನಲ್ಲಿ ಮನೆ ಮನೆಗೆ ಶ್ರೀರಾಮ ಕಾರ್ಯಕ್ರಮ

ರಾಮ ನಾಮಸ್ಮರಣೆ ಮಾಡುತ್ತ ಗ್ರಾಮದ ಯುವಕರು ಸೇರಿ ಪ್ರತಿಮನೆ ಮನೆಗೆ ತೆರಳಿ ಅಯೋಧ್ಯೆ ಶ್ರೀರಾಮಚಂದ್ರರ ಮೂರ್ತಿ ಪೂಜೆಯನ್ನು ಮಾಡಲಾಯಿತು

 

#ಶ್ರೀರಾಮಮಂದಿರ

#ಅಯೋಧ್ಯ

Untitled 4.png

Kamandala Ganapathi & Brahmi River origin

Kamandala Ganapathi is famous throughout the country for its ‘Kamandala Tirtha’ which is a mysterious, unending, constantly flowing water reservoir throughout the year.

 

Purana of Kamandala Ganapathi:

The Kamandala Ganapathi temple in Koppa has a fascinating history. Goddess Parvati, troubled by the malefic effects of the planet Shani (Saturn), decided to perform tapas (austerities) in Bhooloka to free herself. She selected Mrugavadhe, located 18 kms from the temple, as the spot for her tapas.

 

To remove obstacles for her tapas, Goddess Parvati first wished to worship Lord Ganesha. She installed Lord Ganesha’s idol at the chosen location. Pleased by her decision, Lord Brahma appeared and, as a blessing, sprinkled water from his kamandala (holy pot). This act led to the emergence of the Brahmi River just in front of the Ganesha idol installed by Goddess Parvati.

 

Thus, Lord Ganesha in this temple became known as Kamandala Ganapathi, and the shrine earned its name as the Kamandala Ganapathi temple.

 

The Brahmi River, known as Kamandala Theertha, holds a unique significance in the Kamandala Ganapathi Temple. Its origin is traced back to the sprinkling of water from Lord Brahma’s kamandala at the feet of Lord Ganesha, who was installed by Goddess Parvati. The river earned the name Kamandala Theertha due to its divine origin and also received the name Brahmi, acknowledging its creation by Lord Brahma himself.

 

Interestingly, the River Brahmi emerges from a hole in a small square stone platform, intricately carved to resemble the petals of a flower. The perpetual flow of water from this source remains a captivating mystery, adding to the spiritual aura of the temple.

 

Ellu Amavasya holds a special place in the history of the Kamandala Ganapathi temple. On this auspicious day falling in the Margashirsh month (November–December), Goddess Parvati is believed to have performed worship. This sacred day is considered particularly propitious for women to engage in worship within the temple premises.

 

Worshipping or meditating in the Kamandala Ganapathi temple assures the devotee of Lord Ganesha's blessings. The divine atmosphere of the temple is believed to bring solace and relief to those afflicted by Shani dosha. Thus, the Kamandala Ganapathi temple stands not only as a place of worship but as a source of divine grace and blessings.

Untitled 4.png

ನನ್ನೂರು ಕೂಡಲಕುಪ್ಪೆಯ ದೇಗುಲಗಳು

ನನ್ನೂರಿನ ನಾಲ್ಕು ದಿಕ್ಕುಗಳಲ್ಲಿ ಪ್ರಸಿದ್ಧ ದೇವಾಲಯಗಳು ಇದ್ದು, ಭಕ್ತಿ ಪ್ರಧಾನವುಳ್ಳ ಧಾರ್ಮಿಕ ಕೇಂದ್ರವಾಗಿದೆ. ಗ್ರಾಮದಲ್ಲಿ ಶ್ರೀ ಶಕ್ತಿ ಶನೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಚಂದ್ರಮೌಳೆಶ್ವರ ಸ್ವಾಮಿ ದೇವಸ್ಥಾನ. ಶ್ರೀ ಅಂಕನಾಥೆಶ್ವರ ಸ್ವಾಮಿ ದೇವಸ್ಥಾನ, ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಮಾರಮ್ಮ ದೇವಸ್ಥಾನ, ಶ್ರೀ ಆಂಜನೇಯ ಸ್ವಾಮಿ ದೇಗುಲಗಳು ಇವೆ.

ಶ್ರೀ ಶಕ್ತಿ ಶನೇಶ್ವರ ಸ್ವಾಮಿ ದೇವಾಲಯು ಜಿಲ್ಲೆಯಲ್ಲಿಯೇ ಅತ್ಯಂತ ಜನಪ್ರಿಯವಾಗಿದ್ದು, ವಿಶೇಷವಾಗಿ ವರ್ಷಕ್ಕೆರಡು ಬಾರಿ ಸ್ವಾಮಿಯ ರಥೋತ್ಸವ ಜರಗುತ್ತದೆ.

ಇದರ ಜೊತೆಗೆ ಗ್ರಾಮದೇವತೆಯಾದ ಕಾರ್ಕಳ್ಳಿ ಮಾರಮ್ಮನಿಗೆ ಪ್ರತಿ ವರ್ಷ ಯುಗಾದಿ ಹಬ್ಬದ ಮುಂದೆ, ಗ್ರಾಮದ ಮಹಿಳೆಯರು ಪ್ರಮುಖ ಬೀದಿಗಳಲ್ಲಿ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಹೋಗಿ ತಂಬಿಟ್ಟಿನ ಆರತಿಯನ್ನು ಮಾಡುತ್ತಾರೆ.

ಇಲ್ಲಿಯ ಒಂದು ವಿಶೇಷವೆಂದರೆ ಮಾರಮ್ಮ ಆಂಜನೇಯ ಬಸವೇಶ್ವರರ ದೇವಸ್ಥಾನಗಳು ಒಂದೇ ಸ್ಥಳದಲ್ಲಿದ್ದು, ಮುಂಬಾಗದಲ್ಲಿರುವ ವಿಶಾಲವಾದ ಸ್ಥಳದಲ್ಲಿ ಗ್ರಾಮದ ಪ್ರಮುಖರು ನ್ಯಾಯ ಪಂಚಾಯತಿಯನ್ನು ಮಾಡುತ್ತಿದ್ದರು.

ಇತಿಹಾಸ ಪ್ರಸಿದ್ಧ ಶ್ರೀ ಅಂಕನಾಥೇಶ್ವರ ದೇವಾಲಯದಲ್ಲಿದ್ದ ಬೆಳ್ಳಿಯ ರಥವು ಮುಳುಗಡೆಯಾಗಿದೆ ಎಂಬ ಮಾತು ಕೇಳಿ ಬಂದಿದೆ.

 

ಲೋಕಕಲ್ಯಾಣಕ್ಕಾಗಿ ನಮ್ಮ ಗ್ರಾಮದಲ್ಲಿ ಮೂರು ಬಾರಿ ಅತಿ ರುದ್ರ ಮಹಾಯಾಗ ನಡೆದಿದೆ ಮತ್ತು ಪ್ರತಿ ಗುರುವಾರ, ಶನಿವಾರ ಅನ್ನದಾನ ನಡೆಯುವುದು ವಿಶೇಷವಾಗಿದೆ.

Untitled 4.png

ಲಕ್ಷ್ಮೀಶ ಕವಿಯ ದೇವನೂರು

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಗ್ರಾಮ (ಹಿಂದಿನ ಹೆಸರು ದೇವಪುರ) ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಸಾಹಿತ್ಯ ವಲಯದಲ್ಲಿ ಚಿರಪರಿಚಿತ. ಅದರಲ್ಲಿಯೂ ಗಮಕವಾಚನ ಕ್ಷೇತ್ರದಲ್ಲಿರುವವರಿಗೆ ಅತ್ಯಂತ ಪ್ರೀತಿಯ ಮತ್ತು ಪರಿಚಿತವಾದ ಊರು. ಜೈಮಿನಿ ಭಾರತವನ್ನು ರಚಿಸಿದಂತಹ ಕವಿ ಲಕ್ಷ್ಮೀಶನ ಹುಟ್ಟೂರು ಈ ದೇವನೂರು ಗ್ರಾಮ. 'ಗದಗಿನ ಭಾರತ' ಎಂದೇ ಹೆಸರು ಪಡೆದ ಕರ್ನಾಟಕ ಭಾರತ ಕಥಾಮಂಜರಿಯ ಕರ್ತೃ ಕವಿ ಕುಮಾರವ್ಯಾಸನ ಹೆಸರು ಗದಗದೊಂದಿಗೆ ಮತ್ತು ಶ್ರೀ ವೀರನಾರಾಯಣಸ್ವಾಮಿಯೊಂದಿಗೆ ಯಾವ ರೀತಿ ಬೆಸೆದುಕೊಂಡಿದೆಯೋ ಅದೇ ರೀತಿಯಲ್ಲಿ ಲಕ್ಷ್ಮೀಶನ ಹೆಸರು ಶ್ರೀಲಕ್ಷ್ಮೀಕಾಂತಸ್ವಾಮಿಯೊಂದಿಗೆ ಮತ್ತು ದೇವನೂರಿನೊಂದಿಗೂ ಬೆಸೆದುಕೊಂಡಿದೆ. ಲಕ್ಷ್ಮೀಶ ಕವಿಯ ಮನೆಯು ಇದ್ದ ಜಾಗ, ಉಪಯೋಗಿಸುತ್ತಿದ್ದ ಲೇಖನಿ ಎಲ್ಲವೂ ಚಿಕ್ಕಮಗಳೂರಿನ ಜಿಲ್ಲಾ ಗ್ರಂಥಾಲಯದಲ್ಲಿ ಇಂದು ವೀಕ್ಷಣೆಗೆ ಲಭ್ಯವಿದೆ. ಕವಿ ಲಕ್ಷ್ಮೀಶನು 'ಕರ್ನಾಟಕ ಚೂತವನ ಚೈತ್ರ' ಎಂದು ಬಿರುದಾಂಕಿತ. ಜೈಮಿನಿ ಭಾರತ 16ನೇ ಶತಮಾನದ ವಾರ್ಧಕ ಷಟ್ನದಿಯಲ್ಲಿ ರಚಿತವಾದ ಕೃತಿ. ಕಾವ್ಯದ ಕಥಾನಾಯಕ ಶ್ರೀಕೃಷ್ಣಪರಮಾತ್ಮ. ವ್ಯಾಸಮುನಿಯ ಐವರು ಶಿಷ್ಯರಲ್ಲಿ ಒಬ್ಬನಾದ ಜೈಮಿನಿಯ ಸಂಸ್ಕೃತ ಕೃತಿ 'ಅಶ್ವಮೇಧ ಯಾಗ' ಕೃತಿಯ ಮೂಲವಸ್ತು. ಯುದ್ಧಕ್ಕಾಗಿ ಹೊರಟ ಅರ್ಜುನ, ಹಂಸಧ್ವಜ, ತಾಮ್ರಧ್ವಜ ಪಾತ್ರಗಳು ಕವಿ ಲಕ್ಷ್ಮೀಶನ ಸ್ವತಂತ್ರ ಸೇರ್ಪಡೆ. ಕೃತಿಯಲ್ಲಿನ ವೀರ, ಶೃಂಗಾರ, ಕರುಣಾ ರಸಗಳು ಸಮಪಾಕದಲ್ಲಿ ಎರಕ ಹುಯ್ದಂದೆ ಕೃತಿಯಲ್ಲಿ ಮೂಡಿಬಂದಿವೆ. ಕೃಷ್ಣಭಕ್ತಿಯ ಅಗ್ಗಳಿಕೆಯ ಕೃತಿಯು ತನ್ನ ಕಥನಾಶಕ್ತಿ ಮತ್ತು ಉಪಮಾ ಸಮೃದ್ಧಿಯಿಂದ ಕೂಡಿದೆ.

 

ಕೃತಿಯಲ್ಲಿನ ನಾದಮಯ ಮಾತುಗಾರಿಕೆಯಿಂದ ಕೃತಿಯು ಪಂಡಿತ ಮತ್ತು ಪಾಮರರ ಭೇದವಿಲ್ಲದೆ ಸರ್ವಮಾನ್ಯವೂ ಸರ್ವಗ್ರಾಹ್ಯವೂ ಆಗಿದೆ. ಶೃತಿ ಹಚ್ಚಿಟ್ಟಿರುವ ವೀಣೆಯಂತಿರುವ ಕೃತಿಯನ್ನು ಓದುವ ಪ್ರತಿ ಓದುಗನಿಗೂ ಕವಿಯು ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ, ಪ್ರಥಮ ಪಂಕ್ತಿಯ ಕಥನಕಾರ ಎಂಬುದು ಅರಿವಾಗದೆ ಉಳಿಯದು. ಆದುದರಿಂದಲೇ ಕೃತಿಯ ಬಗ್ಗೆ ಗ್ರಾಮೀಣ ಜನತೆಯಲ್ಲಿ ಈಗಲೂ ಜನಪ್ರಿಯ ಅಭಿಪ್ರಾಯವೇನೆಂದರೆ ಜೈಮಿನಿ ಭಾರತವನ್ನು ಕೇಳಿದ್ದರೆ 'ರಸಿಕ', ಓದಿದ್ದರೆ 'ವಿದ್ಯಾವಂತ', ಅರ್ಥವನ್ನು ಹೇಳಬಲ್ಲವನಾದರೆ 'ಪಂಡಿತ' ಎಂಬುದು. ಕವಿಯ ಹುಟ್ಟೂರು ದೇವನೂರು ಗ್ರಾಮವೇ ಎಂಬುದನ್ನು ಗ್ರಾಮದಲ್ಲಿ ನಡೆಯುವ ಮದುವೆ, ಮುಂಜಿ ಮುಂತಾದ ಶುಭ ಸಮಾರಂಭಗಳಲ್ಲಿ ಕವಿ ಲಕ್ಷ್ಮೀಶನನ್ನು ಸ್ಮರಿಸುತ್ತಾ ನೀಡುವ ಅಗ್ರ ತಾಂಬೂಲ ಸಂಪ್ರದಾಯವು ಕವಿಯ ಬಗ್ಗೆ ಗ್ರಾಮಸ್ಥರು ಹೊಂದಿರುವ ಹೆಮ್ಮೆ. ಊರಿನೊಂದಿಗೆ ಕವಿಯು ಹೊಂದಿದ್ದ ತಾದಾತ್ಮಭಾವವನ್ನು ಪ್ರತಿನಿಧಿಸುತ್ತದೆ. ಪ್ರವಾಸಿ ಫಲಕದಲ್ಲಿನ ಮತ್ತೊಬ್ಬ ಮಹಾಕವಿ ರುದ್ರಭಟ್ಟ. ಈತನ ಜೀವಿತಕಾಲ ಕ್ರಿ.ಶ. 1200. ಈತ ಹೊಯ್ಸಳ ಅರಸು ವೀರಬಲ್ಲಾಳನ ಕಾಲದವನು. ಈತ ರಚಿಸಿದ 'ಜಗನ್ನಾಥ ವಿಜಯ' ಕೃತಿ ವಿಷ್ಣು ಪುರಾಣದಂತಹ ವೈದಿಕ ಪುರಾಣವನ್ನು ಆಧರಿಸಿದ ಮೊದಲ ಕೃತಿ. ಕೃತಿಯು ಕೃಷ್ಣನ ಜನನದಿಂದ ಆರಂಭವಾಗಿ ಸಾಳ್ವನನ್ನು ವಧಿಸುವವರೆಗಿನ ಕಥಾವಸ್ತುವನ್ನು ಹೊಂದಿದೆ. ರುದ್ರಭಟ್ಟ ಕವಿಗಿಂತ ಹೆಚ್ಚಾಗಿ ಪಂಡಿತ. ಇವರ ಕೃತಿಯಲ್ಲಿನ ಕ್ಲಿಪ್ಪತೆಯನ್ನು 'ನಾರಿಕೇಳ ಪಾಕ'ಕ್ಕೆ ಹೋಲಿಸಲಾಗಿದೆ. ನೋಡಲು ನನಗೆ ಸಾವಿರ ಕಣ್ಣುಗಳೇನೋ ಇದೆ. ಆದರೆ ಅವನ ಮಧುರಕಂಠ ಕೇಳಲು ಸಾವಿರ ಕಿವಿಗಳಿಲ್ಲವಲ್ಲ ಎಂದು ಮರುಗಿದನಂತೆ. ಈ ರೀತಿಯ ಸಾಹಿತ್ಯಪೂರ್ಣ ಭಾಷಾಶೈಲಿಯಿಂದ ಕವಿಯು ಅಮರನಾಗಿದ್ದಾನೆ.

Untitled 4.png

ಶ್ರೀ ಕಾಳಿಕಾದೇವಿ ದೇವಸ್ಥಾನ

ಶಿರಸಂಗಿ

ಜೈ ಕಾಳಿಕಾದೇವಿ

Untitled 4.png

ಹೊನ್ನಾವರ ಗ್ರಾಮದ ಶ್ರೀ ಚನ್ನಕೇಶವ ದೇವಾಲಯ ಭಾಗ-3

ಇತಿಹಾಸ ಫಲಕ

ಸತ್ಯಂ ಸತ್ಯಂ ಪುನಃ ಸತ್ಯಂ, ಉದ್ಧೃತ್ಯ ಭುಜಮುಚ್ಯತೆ|

ವೇದಶಾಸ್ತ್ರಾತ್ ಪರಂ ನಾಸ್ತಿ, ನ ದೈವಂ ಕೇಶವಾತ್ಪರಂ॥

(ಸತ್ಯ, ಸತ್ಯ ಎಂದು ಎರಡೂ ಭುಜಗಳನ್ನು ಎತ್ತಿ ಕೈಜೋಡಿಸಿ ಹೇಳುತ್ತೇನೆ. ವೇದಗಳಿಗೆ ಮೀರಿದ ಶಾಸ್ತ್ರವಿಲ್ಲ. ಕೇಶವನಿಗೆ ಮೀರಿದ ದೈವವಿಲ್ಲ)

 

ಹಾಸನ ತಾ|| ದುದ್ದ ಹೋಬಳಿಯ ಪ್ರಮುಖ ಗ್ರಾಮವಾದ ಹೊನ್ನಾವರಕ್ಕೆ ಹೊನ್ನಪುರ ಎಂಬ ಹೆಸರಿದ್ದುದು ಶಾಸನಗಳಿಂದ ತಿಳಿಯುವಂತಿದೆ. ಇದು ಫಲವತ್ತಾದ ಮಣ್ಣಿನಿಂದ ಕೂಡಿರುವುದರಿಂದ ಚಿನ್ನದ ಫಸಲನ್ನು ಉತ್ಪಾದಿಸುವ ಕ್ಷಮತೆ ಇರುವುದರಿಂದ ಈ ಹೆಸರು ಅನ್ವರ್ಥವಾಗಿದೆ. ಈ ಗ್ರಾಮದಲ್ಲಿರುವ ಪ್ರಸನ್ನ ಕೇಶವನ ವಿಗ್ರಹವು ಗಂಭೀರ ಮುಖಮುದ್ರೆ, ನೀಳ ನಾಸಿಕ, ತುಟಿಗಳ ಸೌಂದರ್ಯದಿಂದ ಪ್ರಸನ್ನ ಮುಖಭಾವವನ್ನು ಹೊಂದಿರುವುದು.

 

ಹೊನ್ನಾವರ ಗ್ರಾಮದ ಪ್ರಸನ್ನ ಕೇಶವ ದೇವಾಲಯದ ಆಗ್ನೇಯ ದಿಕ್ಕಿನಲ್ಲಿರುವ ಶಾಸನ ಫಲಕದ ಪ್ರಕಾರ ದೇವಾಲಯದ ನಿರ್ಮಾಣ ಕೊನೆಯ ಶಂಕರ ದಂಡನಾಥ (ಎಪಿಗ್ರಾಫಿಯ ಕರ್ನಾಟಕ ಸಂಪುಟ 08, ಶಾಸನ ಸಂಖ್ಯೆ 65, 66) ಪ್ರಕಾರ ಶಾಲಿವಾಹನ ಶಕವರ್ಷ 1071, ಅಂದರೆ ಕ್ರಿ. ಶ. 22ನೇ ಜನವರಿ 1149 ವಿಭವ ಸಂವತ್ಸರ ಮಾಘ ಶುದ್ಧ ತ್ರಯೋದಶಿ, ಕರ್ಕಾಟಕ ಲಗ್ನ, ರೋಹಿಣೀ ನಕ್ಷತ್ರದಲ್ಲಿ ವಡ್ಡವಾರ (ಶನಿವಾರ) ವಿಷ್ಣುವರ್ಧನನ ಅವಧಿಯಲ್ಲಿ ನಿರ್ಮಿತವಾಗಿದೆ.ಅಂದರೆ ಈ ದೇವಾಲಯವು ನಿರ್ಮಾಣವಾಗಿ ವರ್ತಮಾನಕ್ಕೆ 871 ವರ್ಷಗಳು ಸಂತ ಸಂದಂತಾಯಿತು. ದೇವಾಲಯದ ಸ್ಥಾಪನೆಯ ನಂತರ ದೇವಾಲಯದ ನಿರ್ವಹಣೆ ಸಲುವಾಗಿ ಒಂದನೇ ನರಸಿಂಹನಿಗೆ (ವಿಷ್ಣುವರ್ಧನನ ಮಗ) ಮಹಾಪ್ರಧಾನನಾಗಿದ್ದ ಲಕ್ಷ್ಮಯ್ಯ ಹೆಗಡೆ ದೇವಾಲಯದ ಪೂಜಾವ್ಯವಸ್ಥೆ ಸಲುವಾಗಿ ನೀಡಲಾದ ದಾನಶಾಸನದ ವಿವರಗಳು ಶಾಸನದ 38ನೇ ಸಾಲಿನಿಂದ 50ನೇ ಸಾಲಿನವರೆಗೆ ಉಲ್ಲೇಖಿತವಾಗಿದೆ.

 

ದೇವಾಲಯವು ಸಹಜ ಹೊಯ್ಸಳ ಶೈಲಿಯಲ್ಲಿದ್ದು, ಮುಖಮಂಟಪ – ನವರಂಗ – ಅಂತರಾಳ – ಗರ್ಭಗೃಹಗಳನ್ನು ಒಳಗೊಂಡಿದೆ. ನವರಂಗದ ಮೇಲ್ಛಾವಣಿಯಲ್ಲಿ ಅಷ್ಟದಿಕ್ಪಾಲಕರ ಉಬ್ಬುಶಿಲ್ಪಗಳಿವೆ. ದೇವಾಲಯದ ಪ್ರವೇಶ ದ್ವಾರದಲ್ಲಿ ಮತ್ತು ಗರ್ಭಗೃಹದ ಮೇಲ್ಭಾಗದಲ್ಲಿ ಅಪರೂಪದ ದ್ವಾರಲಕ್ಷ್ಮಿಯ ವಿಗ್ರಹವಿದೆ. ಎರಡು ಆನೆಗಳು ದೇವಿಯ ಪಾದಕ್ಕೆ ನಮಿಸುತ್ತಿದ್ದರೆ, ಚಾಮರಧಾರಿಣಿಯರು ಚಾಮರ ಸೇವೆ ಮಾಡುತ್ತಿರುವ ಈ ಶಿಲ್ಪ ಮೋಹಕವಾಗಿದೆ. ತುದಿಯಲ್ಲಿರುವ ಎರಡು ಸಿಂಹಗಳ ಭಂಗಿ ವಿಶೇಷವಾಗಿದೆ.

 

ದೇವಾಲಯದ ಮುಂದಿರುವ 50 ಸಾಲುಗಳ ಶಾಸನಗಳ ರೀತ್ಯಾ ಹೊಯ್ಸಳರ ಸಾಮ್ರಾಜ್ಯವನ್ನು ಶತ್ರುಗಳ ಹಿಡಿತದಿಂದ ಬಿಡಿಸಿ ಹೊಯ್ಸಳರ ಚಕ್ರವರ್ತಿ ಒಂದನೇ ನರಸಿಂಹ (ವಿಷ್ಣುವರ್ಧನನ ಮಗ)ನ ಪಟ್ಟಾಭಿಷೇಕಕ್ಕೆ ಕಾರಣಕರ್ತನಾದ ಮಹಾಪ್ರಧಾನ ಹೆಗಡೆ ಲಕ್ಷ್ಮಯ್ಯ ದೇವಾಲಯಕ್ಕೆ ಬಿಟ್ಟ ದಾನದ ವಿವರಗಳು ಶಾಸನದಿಂದ ತಿಳಿದುಬರುತ್ತದೆ.

 

ಶಾಸನದ ಧ್ಯಾನಶ್ಲೋಕದಲ್ಲಿ ಮೂರು ಲೋಕಗಳಲ್ಲೂ ಪೂಜಿತನಾದ ಸರ್ವ ಕರ್ಮಗಳಿಗೂ ಮತ್ತು ಅವುಗಳ ಫಲಾಫಲಗಳಿಗೂ ಸಾಕ್ಷೀಭೂತನಾದ ಆ ಪರಮಾತ್ಮ ಕೇಶವ ಮತ್ತು ಶಿವನನ್ನು ನಿತ್ಯವೂ ನಮಸ್ಕರಿಸುತ್ತೇನೆ ಎಂಬ ಸಾಲುಗಳಿವೆ.

 

ಸ್ವದತ್ತಂ ಪರದತ್ತಂ ವಾ ಯೋ ಹರೇತ್ ವಸುಂಧರಾ|

ಷಷ್ಠ ಸಹಸ್ರವರ್ಷಾಣಿ ವಿಷ್ಠಾಯಾಂ ಜಾಯತೇ ಕ್ರಿಮಿ||

 

ಅಲ್ಲದೇ ಈ ರೀತಿಯಾಗಿ ನೀಡಲ್ಪಟ್ಟಿರುವ ದಾನವು ಸಾರ್ವಜನಿಕರಿಂದ ಅಪಹರಿಸಲ್ಪಟ್ಟರೆ, ಅಪಹರಿಸಿದ ವ್ಯಕ್ತಿಯು 60 ಸಾವಿರ ವರ್ಷ ಭೂಮಿಯಲ್ಲಿ ಕ್ರಿಮಿಯಾಗಿ ಹುಟ್ಟುತ್ತಾನೆ ಎಂಬ ಎಚ್ಚರಿಕೆ ಸಂದೇಶವಿದೆ. ಎಂದರೆ, ಸಾರ್ವಜನಿಕ ಸ್ವತ್ತನ್ನು ಅಪಹರಿಸಬಾರದು, ಅದು ಪಾಪಕರ ಎಂಬ ಸಂದೇಶವನ್ನು ಈ ಮೂಲಕ ಸಾರಲಾಗಿದೆ.

 

by "ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ"

 

Photos courtesy: Shashidhar H G

Untitled 4.png

ಉದ್ಭವ ಬಸವಣ್ಣನ ಮೂರ್ತಿ

ಬಲಗಡೆ ಇರುವ ಕಲ್ಲಿನ ಮೂರ್ತಿ ತಾನಾಗಿಯೇ ಉದ್ಭವವಾಗಿದೆ ಇದನ್ನು ಯಾರು ಸ್ಥಾಪಿಸಿಲ್ಲ.

Untitled 4.png

ಮಹಾ ಶಿವರಾತ್ರಿ 2024

ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

 

ಪರಮಶಿವನು ಸಕಲರ ಇಷ್ಟಾರ್ಥಗಳನ್ನು ಪೂರೈಸಲಿ ಎಂದು ಪ್ರಾರ್ಥಿಸುತ್ತೇನೆ.

 

#MahaShivaratri2024

Untitled 4.png

ರಟ್ಟಿಹಳ್ಳಿಯ ಬತ್ತೀಕೊಪ್ಪ

ಬತ್ತೀಕೊಪ್ಪ ಗ್ರಾಮವು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಗ್ರಾಮ. ಸೋಬಾನೆ ಹಾಡು, ನಾಟಿ ವೈದ್ಯ, ಪುರವಂತಿಕೆ, ಭಜನೆಯಂತಹ ಮೌಖಿಕ ಪರಂಪರೆಯಲ್ಲಿ ಬತ್ತೀಕೊಪ್ಪ ಗ್ರಾಮ ತನ್ನದೇ ಆದ ಹೆಸರು ದಾಖಲಿಸಿದೆ.

ಬತ್ತೀ ಕೊಪ್ಪ ಎಂದರೆ ಎತ್ತರದ ಸ್ಥಳದಲ್ಲಿ ವಾಸಿಸಲು ಅನುಕೂಲ ಇರುವ ಊರು ಎಂದು ಹಲವರು ಅರ್ಥೈಸುತ್ತಾರೆ. ಬತ್ತಿ ಎಂಬ ಪದವು ‘ಪತ್ತಿ’ಯಿಂದ ಬಂದಿದೆ. ಪತ್ತಿ ಎಂದರೆ ಸ್ಥಳ ಎಂದು ಹೇಳಲಾಗುತ್ತಿದೆ.

ಈ ಗ್ರಾಮದ ಸಾಹಿತಿಗಳು ಕಲಾವಿದರು ಆದಂತಹವರು ಶ್ರೀ ಪುಟ್ಪಪ್ಪ ಬಸಪ್ಪ ಹಲಗೇರಿ. ಅವರು ಪುರವಂತಿಕೆ, ಭಜನೆ, ನಾಟಕ ಕಲಾವಿದರು ಮತ್ತು ನಿರ್ದೇಶಕರು. ಈರಪ್ಪ ಕೃಷ್ಣಾಚಾರಿ ಬಡಿಗೇರ್, ದೇವೀಂದ್ರಪ್ಪ ದೊಡ್ಡ ಈರಪ್ಪ ಬಡಿಗೇರ್ ಶಿಲ್ಪ ಕಲಾವಿದರು. ಗದಿಗೆಪ್ಪ ಚನ್ನಬಸಪ್ಪ ಬೇವಿನಹಳ್ಳಿ ಎಂಬ ಪಾರಂಪರಿಕ ವೈದ್ಯರು ಈ ಹಳ್ಳಿಯವರು. ಕತೆಗಾರ, ಸಂಶೋಧಕರೂ ಆಗಿದ್ದ ಡಾ. ಪ್ರಕಾಶ ಹಲಗೇರಿ ಇದೇ ಗ್ರಾಮದವರಾಗಿದ್ದು, ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.

ಗ್ರಾಮದಲ್ಲಿ ಹಳೆಯ ಕದಂಬೇಶ್ವರ ದೇವಾಲಯವಿದೆ. ಆದರೆ ಈ ದೇವಾಲಯವನ್ನು ಯಾವ ಇಸವಿಯಲ್ಲಿ ಕಟ್ಟಲಾಗಿದೆ, ಯಾರು ನಿರ್ಮಿಸಿದ್ದು ಎಂಬ ಮಾಹಿತಿಯು ದೊರಕುತ್ತಿಲ್ಲ. ಈ ಊರಿನಲ್ಲಿ ಬೀರಲಿಂಗೇಶ್ವರ, ಮಹೇಶ್ವರ, ಆಂಜನೇಯ, ಬಸವಣ್ಣ, ಗುಡದಯ್ಯ, ದೇವಾಲಯಗಳಿವೆ. ಕರಿಯಮ್ಮ ಈ ಹಳ್ಳಿಯ ಗ್ರಾಮದೇವಿ. ಕಾರ್ತಿಕ ಮಾಸದಲ್ಲಿ ಪ್ರತಿವರ್ಷ ಮಹೇಶ್ವರ ಜೊತ್ರೆ ನಡೆಯುತ್ತಿದ್ದು, ಗ್ರಾಮಕ್ಕೆ ಹೊಸ ಕಳೆ ಮೂಡಿಸುತ್ತದೆ. ಊರಿನಲ್ಲಿ ಕಳ್ಳಿಮಠವೂ ಇದೆ. ಗ್ರಾಮದ ಹೊರಗಡೆ ಮೂಕ ಬಸವಣ್ಣ, ಮಹೇಶ್ವರ ಗದ್ದುಗೆ, ಮಠಬಸಪ್ಪನ ಗುಡಿ, ಭರಮ ದೇವರ ಗುಡಿ ಇದೆ. ಗ್ರಾಮದ ಸುತ್ತಲೂ ಏಳು ಚೌಡವ್ವನ ಕಟ್ಟೆಗಳಿವೆ. ಈ ಎಲ್ಲ ಗುಡಿಗಳು, ದೇವಿಯರ ಉತ್ಸವಗಳು ಮತ್ತು ಯುಗಾದಿ, ಪಂಚಮಿ, ದಸರಾ, ದೀಪಾವಳಿ ಸಂದರ್ಭದಲ್ಲಿ ಊರಿನಲ್ಲಿ ಸಂಭ್ರಮ ರಂಗೇರುತ್ತದೆ.

ಬತ್ತೀಕೊಪ್ಪ ಗ್ರಾಮದಲ್ಲಿ ಕೃಷಿ ಸಹಕಾರ ಸಂಘ, ಮಹಿಳಾ ಸ್ವಸಹಾಯ ಸಂಘಗಳಿವೆ. ಈ ಗ್ರಾಮದ ಇನ್ನೊಂದು ವಿಶೇಷವೆಂದರೆ ಕುರಿ ಉಣ್ಣೆ ಉತ್ಪಾದನೆ ಮತ್ತು ಮಾರಾಟ. ಲಿಂಗಾಯತರು, ಕುರುಬರು, ತಳವಾರರು, ಜಾಡರು, ವಡ್ಡರು, ದಲಿತರು ಸೇರಿದಂತೆ ಈ ಊರಿನ ಜನಸಂಖ್ಯೆ ಸುಮಾರು 1800. ಈ ಗ್ರಾಮದ ಹಲವರು ಸೈನಿಕರಾಗಿದ್ದಾರೆ. ಗ್ರಾಮದಲ್ಲಿ ಹೆಚ್ಚಿನವರು ಹತ್ತಿ ಮತ್ತು ಮೆಕ್ಕೆಜೋಳ ಬೆಳೆಯುತ್ತಾರೆ. ಉಳಿದಂತೆ ತರಕಾರಿ, ಅಲಸಂದೆ, ಔಡಲ ಬೆಳೆಗಳನ್ನು ಬೆಳೆಯುತ್ತಾರೆ. ಒಟ್ಟಿನಲ್ಲಿ ಬತ್ತೀಕೊಪ್ಪ ಪುಟ್ಟ ಗ್ರಾಮವಾದರೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ.

Untitled 4.png

ಪುಟ್ಟ ಗ್ರಾಮ ಬಡಾಸಂಗಾಪುರ

ರಟ್ಟಿಹಳ್ಳಿ ತಾಲೂಕಿನ ಬಡಾಸಂಗಾಪುರ ಗ್ರಾಮವು ಪುಟ್ಟ ಹಳ್ಳಿ. ಬಡ+ಸಂಗ+ಪುರ ಈ ಮೂರು ಪದಗಳು ಈ ಗ್ರಾಮದ ಹೆಸರು ಬರಲು ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಸಂಗ ಎಂಬುದು ಸಂಗಮೇಶ, ಸಂಗಣ್ಣ, ಸಂಗಪ್ಪ ಹೆಸರುಗಳ ಸಂಕ್ಷಿಪ್ತ ರೂಪವಾಗಿದ್ದು ಗ್ರಾಮನಾಮವು ವ್ಯಕ್ತಿವಾಚಕವಾಗಿದೆ. ಪುರ ಎಂದರೆ ಊರು. ನೀರಿನ ಆಶ್ರಯವನ್ನು ಹೊಂದಿರುವ ಸಂಗಣ್ಣನ ಚಿಕ್ಕ ಹಳ್ಳಿಯು ‘ಬಡಸಂಗಾಪುರ’ ಆಗಿದೆ ಎಂಬ ಉಲ್ಲೇಖ ದೊರೆಯುತ್ತದೆ. ಸಂಗಪ್ಪ ಅಥವಾ ಸಂಗಣ್ಣನು ಈ ಊರಿನ ಮುಖಂಡನಾಗಿದ್ದನೇ ಅಥವಾ ಆರಾಧ್ಯ ದೈವವಾಗಿದ್ದನೇ ಎಂಬ ಬಗ್ಗೆ ಆಧಾರ ದೊರೆಯುವುದಿಲ್ಲ.

ಈ ಗ್ರಾಮದಲ್ಲಿ ಸಿದ್ಧಾರೂಢಸ್ವಾಮಿ, ಬಸವೇಶ್ವರ, ಹನುಮಂತ, ಗುಡೇದ ಭರಮಪ್ಪ, ದೊಣ್ಣೆ ಕೆಂಚಮ್ಮ, ಮರಡಿ ದುರ್ಗವ್ವ, ಮಾತಂಗೆವ್ವ, ಚೌಡವ್ವ ದೇವಸ್ಥಾನಗಳಿವೆ. ಶಿವರಾತ್ರಿಯಲ್ಲಿ ಸಿದ್ಧಾರೂಢ ಸ್ವಾಮಿಯ ಜಾತ್ರೆ ನಡೆಯುತ್ತದೆ. ಗ್ರಾಮಸ್ಥರು ಭಕ್ತಿಯಿಂದ ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಉಳಿದ ಎಲ್ಲ ದೇವರುಗಳ ಉತ್ಸವಗಳೂ ನಡೆಯುತ್ತವೆ. ಊರಿನಲ್ಲಿ ಕೋಳಿ ಚೌಡವ್ವ, ಲಿಂಗಮ್ಮಮುದ್ರೆ ಕಲ್ಲು ಇದ್ದು, ಇವು ಬಯಲು ದೇವರುಗಳು. ಜಾಂಜಮೇಳ, ಮತ್ತು ಭಜನಾ ಸಂಘಗಳು ಬಡಾಸಂಗನಪುರದಲ್ಲಿವೆ. ಊರಿನಲ್ಲಿ ಮಹಬೂಬ್ ಸುಬಾನಿ ದರ್ಗಾವಿದ್ದು, ಊರುಸ್ ನಡೆಯುತ್ತದೆ.

ಈ ಗ್ರಾಮದಲ್ಲಿ ನೀರಿನ ಅನುಕೂಲ ಚೆನ್ನಾಗಿದೆ. ನಾಲ್ಕು ಕಡೆಗಳಲ್ಲೂ ನದಿ, ಹಳ್ಳ, ಕೆರೆಗಳ ನೀರು ಕೃಷಿ ಚಟುವಟಿಕೆಗೆ ಸಮೃದ್ಧಿಯನ್ನು ಒದಗಿಸುತ್ತದೆ. ಗ್ರಾಮದ ದಕ್ಷಿಣಕ್ಕೆ ಕುಮದ್ವತಿ ನದಿ ಹರಿಯುತ್ತಿದ್ದಾಳೆ. ಅಲ್ಲದೇ ದಕ್ಷಿಣದಲ್ಲಿ ಧರ್ಮದ ಕೆರೆ, ಈಶಾನ್ಯದಲ್ಲಿ ಕೆಂಚಮ್ಮನ ಕೆರೆ, ಪೂರ್ವಕ್ಕೆ ಭೀರದರ ಕೆರೆ ಇದೆ. ಅಲ್ಲದೇ, ಪೂರ್ವದಲ್ಲಿ ಮೋಡಿಹಳ್ಳ, ಉತ್ತರದಲ್ಲಿ ಗುಡಿಬಸಪ್ಪ ಸ್ವಾಮಿಹಳ್ಳಗಳಿವೆ. ಗರಡಿ ಹೊಸೂರು ಕೆರೆಗೆ ಒಡ್ಡು ಕಟ್ಟಲಾಗಿದ್ದು, ಮುಂದೆ ಚಿಕ್ಕ ಬಾಂದಾರವನ್ನೂ ಕಟ್ಟಲಾಗಿದೆ. ಈ ಗ್ರಾಮ ಸಮೃದ್ಧ ಎರೆ ಮಣ್ಣಿನ ಪ್ರದೇಶ. ಹತ್ತಿ ಮತ್ತು ಮೆಕ್ಕೆಜೋಳವು ಹಳ್ಳಿಯ ಪ್ರಮುಖ ಬೆಳೆ. ಜೋಳ, ಸೇಂಗಾ, ಅಲಸಂದೆ, ಔಡಲ, ತೊಗರಿ, ಬೆಂಡೆ, ತೆಂಗು, ಬಾಳೆ ಬೆಳೆಗಳನ್ನು ಬೆಳೆಯುತ್ತಾರೆ.

ಈ ಊರಿನ ಜನ ತಮ್ಮ ಕೊಡು-ಕೊಳ್ಳುವಿಕೆಗಾಗಿ ಹಿರೇಕೆರೂರು ಸಂತೆಗೆ ಹೋಗುತ್ತಾರೆ. ಬಡಾಸಂಗಾಪುರವು ಪುಟ್ಟ ಗ್ರಾಮವಾದ ಕಾರಣ ಸೌಕರ್ಯಗಳು ಕಡಿಮೆ. ಒಟ್ಟಿನಲ್ಲಿ ಪುಟ್ಟದಾದರೂ ಬಡಾಸಂಗನಪುರ ಗ್ರಾಮವು ಸಮೃದ್ಧಕೃಷಿ ಭೂಮಿ ಹೊಂದಿರುವ ಹಳ್ಳಿ.

--

Untitled 4.png

2nd Jaliyanwalabag & Dummane house..

This is "Dummane house" was used by freedom fighters, who were massacred later!

 

Background of the Gorta massacre

While the entire Bharat celebrated independence on 15 August 1947 by unfurling the tricolour, hoisting the national flag was illegal in the then princely state of Hyderabad which included some parts of Maharashtra, Karnataka, and Telangana. This was because Mir Osman Ali Khan, who was Hyderabad Nizam at that time, refused to integrate the princely state with Bharat. However, the common citizens in these areas continued their struggle for freedom.

 

Defying the Nizam, Arya Samaji Baurao Patil led a few of his fellow Arya Samajis and unfurled the national flag at his native village Honnalli and neighbouring Halagorta in Bidar district. The local Razakar leader Isamuddin was sent to punish those involved in the act. When Isamuddin couldn’t find Patil and his followers at Honalli, the Razakars ransacked his house.

 

The group led by Patil retaliated quickly and targeted Isamuddin in eight nearby villages. He was finally ambushed and killed near the Dhannur-Muchalamba area when was returning to Gorta from Basavakalyan.

 

The Gorta massacre

Razakars attacked Gorta village as they believed that it was the villagers who had informed Baurao Patil about Isamuddin’s travel. Some villagers fled while others armed themselves for self-defence anticipating a Razakar attack. Sahukar Mahadevappa Dumani’s house was the centre of anti-Razakar activities. Mahadevappa had already left for Solapur leaving behind his armed servants to guard his house.

 

On 9 May 1948, armed Razakars, gathered from surrounding villages, attacked Gorta from all sides forcing the residents to seek shelter at Mahadevappa’s residence. Hundreds of people barricaded themselves inside Sahukar’s house after hearing gunshots. The house, constructed with heavy stone blocks, resembled a fortress. However, the Razakars massacred those who were left outside the stronghold. Many lives were lost in the battle that lasted from 9 in the morning to sunset.

 

Razakars retreated in the evening as they failed to overpower those who had sought safety at Mahadevappa’s house. When they returned with reinforcements the next morning they found that the entire village had been abandoned with most of the survivors seeking refuge in the neighbouring states.

 

The survivors returned to their village after Hyderabad was merged with Bharat following the efforts of Sardar Vallabhbhai Patel. The extent of casualties is unclear though KM Munshi puts the death toll at around 200 in his book The End of an Era – Hyderabad Memoirs. A semi-folk rendition by women folk called Bhulai pada keeps the memories of the Gorta massacre alive.

 

The construction of a memorial for those martyrs who fell to the tyranny of Nizam’s Razakars was a long-standing demand of the locals. Locals and a few political parties had collected 27 lakhs for the construction of a 35 feet tall memorial at Gorta. Although the foundation stone for the memorial was laid in 2014, its construction remained incomplete till BJYM stepped in and got the task completed. The memorial is an apt tribute to those patriots who became victims of Nizam’s tyranny only because they dared to hoist the tricolour.

 

On March 26, 2025 a memorial was dedicated to the martyrs of the Gorta massacre by Union Home Minister (HM) Amit Shah. A statue of Sardar Vallabhbhai Patel was also dedicated to the people on this occasion.

 

Info courtesy: Hindu post, June 24, 2025

Untitled 4.png

Neha gobade happy mahashivratri to all

Our village’s Mahadev Temple has stood as a silent witness to history for over twelve centuries. This year, that ancient energy has come alive with our second annual Shiv Katha and Parayan ceremony.

 

For the past seven days, our community has been immersed in the divine stories of Mahadev. Following the auspicious distribution of Rudrakshas last night, we have now reached the grand finale.

 

Today, on the holy occasion of Mahashivratri, we invite every villager to join the final day of the celebrations. Let’s come together to seek the blessings of the Lord who has guarded our village for over a millennium.

 

Don't miss the final day—be a part of our village's living history!

Untitled 4.png

ಕೃಷಿ ಸಮೃದ್ಧಿಯ ಅಂಗರಗಟ್ಟಿ

ಅಂಗರಗಟ್ಟಿಯು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನಲ್ಲಿರುವ ಪುಟ್ಟ ಗ್ರಾಮ. ಕಡೂರು ಗುಡ್ಡದ ಸಾಲಿನಲ್ಲಿ ಈ ಗ್ರಾಮವಿದೆ. ಕೆಲವು ಉಲ್ಲೇಖಗಳ ಪ್ರಕಾರ ‘ಹಂಗರು’ ಎಂಬ ಜನಾಂಗ ಈ ಗ್ರಾಮದಲ್ಲಿ ಬಹು ಹಿಂದೆ ವಾಸವಾಗಿತ್ತು. ಹಂಗರು ಇರುವುದು ಉಚ್ಛಾರದಲ್ಲಿ ಅಂಗರು ಎಂದಾಗಿ ಅಂಗರಗಟ್ಟಿಯಾಯಿತು ಎನ್ನುತ್ತಾರೆ. ಆದರೆ, ಈ ಹಂಗರು ಅಂದರೆ ಯಾವ ಸಮುದಾಯ, ಅವರ ವಿಶೇಷವೇನು? ಅವರೇನು ಮಾಡುತ್ತಿದ್ದರು? ಈಗಿನ ಯಾವುದಾದರೂ ಸಮುದಾಯಕ್ಕೆ ಸೇರಿದವರೇ? ಅಥವಾ ಆ ಸಮುದಾಯ ಅಳಿದು ಹೋಯಿತೇ? ಇಂತಹ ಯಾವುದೇ ಮಾಹಿತಿ ನನಗೆ ಸಿಗಲಿಲ್ಲ. ರಟ್ಟಿಹಳ್ಳಿ ಭಾಗದ ಕೆಲ ಸಂಶೋಧಕರಲ್ಲಿಯೂ ಈ ಬಗ್ಗೆ ವಿಚಾರಿಸಿದಾಗ, ಅವರಿಂದಲೂ ಈ ಬಗ್ಗೆ ಸಮರ್ಪಕ ಮಾಹಿತಿ ದೊರೆಯಲಿಲ್ಲ.

ಈ ಗ್ರಾಮವು ಮಲೆನಾಡ ಸೆರಗಿನದು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸನಿಹತೆ ಹೊಂದಿದೆ. ಮಳೆಯ ಪ್ರಮಾಣವೂ ಅಧಿಕ. ಗ್ರಾಮವು ಫಲವತ್ತಾದ ಎರೆ ಮತ್ತು ಮಸಾರಿ ಮಣ್ಣನ್ನು ಹೊಂದಿದೆ. ಜೊತೆಗೆ ಕೆರೆ, ಹಳ್ಳಗಳೂ ಕೃಷಿ ಸಮೃದ್ಧಿಯನ್ನು ಹೆಚ್ಚಿಸಿವೆ. ಬೈಲಬಸಪ್ಪನ ಕೆರೆ, ಬಣಕಾರ ಕೆರೆಗಳಿವೆ. ಗಲಗಿನಕಟ್ಟಿ ಹಳ್ಳ ಹರಿದಿದೆ. ಈ ಕೆರೆಗಳು ಮಳೆಗಾಲದಲ್ಲಿ ತುಂಬಿ, ಸಮೃದ್ಧ ವ್ಯವಸಾಯಕ್ಕೆ ನೆರವಾಗುತ್ತವೆ.

ಗ್ರಾಮದಲ್ಲಿ ಪ್ರಾಚೀನ ಕಾಲಭೈರವೇಶ್ವರ ದೇವಸ್ಥಾನವಿದೆ. ಕಾಲಭೈರವೇಶ್ವರನ ಜಾತ್ರೆಯು ಪ್ರತಿವರ್ಷವೂ ಎಂಟು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ಆಗ ಗ್ರಾಮದ ಎಲ್ಲೆಡೆ, ಎಲ್ಲರಲ್ಲಿಯೂ ಸಂಭ್ರಮವೋ ಸಂಭ್ರಮ. ನೆರೆಯ ಗ್ರಾಮಸ್ಥರು, ಉದ್ಯೋಗ, ಇತರ ಕಾರಣಗಳಿಗಾಗಿ ಪರವೂರಿನಲ್ಲಿ ನೆಲೆಸಿದವರು, ನೆಂಟರು, ಇಲ್ಲಿಂದ ಮದುವೆಯಾಗಿ ಬೇರೆ ಕಡೆ ನೆಲೆಸಿದವರು, ಜಾತ್ರೆಯ ಸಂದರ್ಭದಲ್ಲಿ ಊರಿಗೆ ಬರುತ್ತಾರೆ. ಆಗ ಪುಟ್ಟ ಗ್ರಾಮವಿಡೀ ಗಿಜಿಗುಡುತ್ತದೆ. ಕಾಲಭೈರವೇಶ್ವರ ದೇವರು ಊರಿನಲ್ಲಿ ಸಮೃದ್ಧಿ ನೀ ಡುತ್ತಾನೆ. ರೋಗ-ರುಜಿನಗಳಿಗೆ ಮುಕ್ತಿಯನ್ನು ನೀಡುತ್ತಾನೆ ಎಂದು ಗ್ರಾಮಸ್ಥರು ಬಲವಾಗಿ ನಂಬಿದ್ದಾರೆ. ಗ್ರಾಮದಲ್ಲಿ ಕಾಲಭೈರವೇಶ್ವರ ದೇವಸ್ಥಾನವಲ್ಲದೇ ಬಸವೇಶ್ವರ, ಹನುಮಂತ, ಕೊಟ್ರೇಶ್ವರ, ಮಾತಂಗೆಮ್ಮ ದೇವಾಲಯಗಳು, ಗ್ರಾಮದೇವತೆ ದುರ್ಗಮ್ಮನ ಗುಡಿ ಇದೆ. ಈ ದೇವರುಗಳ ಜಾತ್ರೆ, ಉತ್ಸವಗಳಲ್ಲದೇ, ಯುಗಾದಿ, ದೀಪಾವಳಿ, ಸೀಗೆ ಹುಣ್ಣಿಮೆ, ಹಟ್ಟಿ ಹಬ್ಬಗಳ ಸಂಭ್ರಮ ಗ್ರಾಮದ ತುಂಬ ಗರಿಗೆದರಿರುತ್ತದೆ. ಓಕುಳಿ, ಬಾಯಿಬೀಗ, ಹರಕೆ ನಡೆಯುತ್ತವೆ. ಗ್ರಾಮದಲ್ಲಿ ಮಸೀದಿಯೂ ಇದ್ದು ಉರುಸ್ ಆಚರಣೆ ಇದೆ.

ಅಂಗರಗಟ್ಟಿ ಗ್ರಾಮದಲ್ಲಿನ ಬಯಲು ರಂಗಮಂದಿರ ಹಲವು ಕಾರ್ಯಕ್ರಮಗಳಿಗೆ ಕೇಂದ್ರಬಿಂದುವಾಗಿದೆ. ನಾಟಕಗಳು ನಡೆಯುತ್ತವೆ. ಗ್ರಾಮದಲ್ಲಿ ಕಾಲಭೈರವೇಶ್ವರ ಭಜನಾ ಸಂಘವಿದೆ.

ಹತ್ತಿ, ಮೆಕ್ಕೆಜೋಳ, ಶೇಂಗಾ, ಅಲಸಂದೆ, ಹುರುಳಿ, ಉದ್ದು, ತೊಗರಿ, ಎಲೆ-ಅಡಕೆ ಇಲ್ಲಿನ ಪ್ರಮುಖ ಬೆಳೆಗಳು. ಗ್ರಾಮಸ್ಥರು ತಮ್ಮ ಕೊಡು-ಕೊಳ್ಳುವಿಕೆಗಾಗಿ ಪ್ರತಿ ಶುಕ್ರವಾರ ನಡೆಯುವ ರಟ್ಟಿಹಳ್ಳಿ ಸಂತೆಗೆ ಹೋಗುತ್ತಾರೆ. ಆಗ ಎತ್ತಿನ ಬಂಡಿಯ ಸಾಲು, ಅದರ ನಿನಾದ ಮನಮೋಹಕ.

Untitled 4.png

ಟ್ರ್ಯಾಕ್ಟರ ಮಯವಾಗುತ್ತಿರುವ ಗ್ರಾಮ

ಬಸವಣ್ಣನ ಕಡೆ ವಾಲುವುದನ್ನು ಬಿಟ್ಟು ಟ್ರ್ಯಾಕ್ಟರ್ ಕಡೆ ಹೋಗುತ್ತಿರುವ ಈಗಿನ ಈಗಿನ ಮನಸ್ಥಿತಿ

Untitled 4.png

ಮೈಲಾರ ದೇವರ ಪಲಕ್ಷೆ ಮಾಡುವ ಉದ್ದೇಶ

ನಮ್ಮ ಗ್ರಾಮದಲ್ಲಿ ಪ್ರತಿ ರವಿವಾರಕ್ಕೊಮ್ಮೆ ಮೈಲಾರ ಅಜ್ಜನ ಪಲಕ್ಷೆ ಮಾಡಲು ಸುತಗಟ್ಟಿ ಎಂಬುವವರ ಮನೆಯಿಂದ ಡ್ಡೊಳು ಬಾರಿಸುತ್ತ ದೇವಸ್ಥಾನಕ್ಕೆ ಹೋಗಿ ಸೇವಾ ಕಾರ್ಯ ಇದ್ದಾಗಿದೆ ಇದು ನಮ್ಮ ಗ್ರಾಮದ ಸಂಪ್ರದಾಯ ಆಗಿದೆ.

Untitled 4.png

ರೈತರೇ ಸೈನಿಕರಾದ ಅಮರ ಸುಳ್ಯ ಸ್ವಾತಂತ್ರ್ಯ ಸಮರ

ಬೆಳ್ಳಾರೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನೇ ಜಪ್ತಿ ಮಾಡಿದ್ದ ರೈತರು

 

ನಮಗೆಲ್ಲಾ ತಿಳಿದ ಹಾಗೆ 1857 ಮೊದಲ ಸ್ವಾತಂತ್ರ್ಯ ಸಂಗ್ರಾಮ. ಆದರೆ ಅದಕ್ಕಿಂತಲೂ 20 ವರ್ಷ ಮೊದಲು ನಮ್ಮೂರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹತ್ತಿಕೊಂಡಿತ್ತು.

 

ದೇಶದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವ ಮೊದಲೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರೇ ಬ್ರಿಟಿಷರ ವಿರುದ್ಧ ಶಸ್ತ್ರಸಜ್ಜಿತರಾಗಿ ಕಾದಾಡಿದ್ದರು. 1837ರಲ್ಲಿ ಬ್ರಿಟಿಷರ ಎದೆನಡುಗಿಸಿದ ಈ ಹೋರಾಟ ಇತಿಹಾಸದಲ್ಲಿ ಅಮರ ಸುಳ್ಯದ ಸ್ವಾತಂತ್ರ್ಯ ಸಮರ ಎಂದೇ ದಾಖಲಾಗಿದೆ. ಆದರೆ ಇದನ್ನು ಬ್ರಿಟೀಷರು ಕಲ್ಅಣಪ್ನ ಕಾಟುಕಾಯಿ, ಕಲ್ಯಾಣಪ್ಪನ ಧಂಗೆ ಎಂದೇ ಬಿಂಬಿಸಿದ್ದಾರೆ. ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿರುವ ಖಜಾನೆ ಮತ್ತು ಬಂಗ್ಲೆಗುಡ್ಡೆಗಳು ಈ ಹೋರಾಟದ ಕುರುಹುಗಳಾಗಿ ಉಳಿದಿವೆ.

 

ದಕ್ಷಿಣ ಕನ್ನಡದ ಸುಳ್ಯ ಮತ್ತು ಪುತ್ತೂರು ಕೆನರಾ ಪ್ರಾಂತ್ಯವಾಗುವವರೆಗೆ ರಾಜನಿಗೆ ವಸ್ತುಗಳ ರೂಪದಲ್ಲಿ ಕಂದಾಯ ಕಟ್ಟುವ ಪದ್ಧತಿ ಇತ್ತು. ಇದನ್ನು ಬದಿಗೊತ್ತಿ ಬ್ರಿಟಿಷರು ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ಹಣದ ರೂಪದಲ್ಲಿ ಕಂದಾಯ ಕಟ್ಟುವಂತೆ ಕಟ್ಟಳೆ ಹೇರಿದ್ದು ಜನರನ್ನು ಹೈರಾಣು ಮಾಡಿತ್ತು. ಇದು ಆಡಳಿತದ ವಿರುದ್ಧ ದಂಗೆ ಏಳಲು ಪ್ರೇರಣೆಯಾಗಿತ್ತು.

 

ರೈತರೇ ಸೈನಿಕರಾದರು:

1837ರ ಎ.5ರಂದು ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯ ವಿರುದ್ಧ ಯುದ್ಧ ಸಾರುವ ಬಗ್ಗೆ ಪ್ರಭಾವಿ ಮುಖಂಡ ಕೆದಂಬಾಡಿ ರಾಮಯ್ಯ ಗೌಡ ತನ್ನ ವಿಶ್ವಾಸಾರ್ಹ ನಾಯಕರೊಂದಿಗೆ ಸಮಾಲೋಚಿಸಿ ನಿರ್ಧಾರಕ್ಕೆ ಬಂದಿದ್ದರು. ಬಲಿಷ್ಠ ವೈರಿಯನ್ನು ಎದುರಿಸಲು ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಗೆರಿಲ್ಲಾ ರೀತಿಯ ತಂತ್ರಗಾರಿಕೆ ರೂಪಿಸಿದ್ದರು. ಇದಕ್ಕಾಗಿ ದುರ್ಗಮವಾದ ಪೂಮಲೆ ಬೆಟ್ಟವನ್ನು ಸೂಕ್ತವಾಗಿ ಬಳಸಿಕೊಂಡು ಸಾಧಾರಣ ರೈತಾಪಿ ಜನರನ್ನು ಸೈನಿಕರನ್ನಾಗಿ ತರಬೇತುಗೊಳಿಸುತ್ತಿದ್ದರು.

ಒಂದು ಅಂದಾಜಿನ ಪ್ರಕಾರ ಸುಮಾರು ಎರಡು ಸಾವಿರದಷ್ಟುಸೈನಿಕರು ಸುಳ್ಯ ಸಮೀಪದ ಉಬರಡ್ಕ ಮಿತ್ತೂರಿನ ಮದುವೆಗದ್ದೆ ಎಂಬಲ್ಲಿ ಮಾ.3ರಂದು ಸೇರಿದ್ದರು.

ಮಾ.30ರಂದು ಕೆದಂಬಾಡಿ ರಾಮಯ್ಯ ಗೌಡರ ಮುಂದಾಳತ್ವದಲ್ಲಿ ಬೆಳ್ಳಾರೆಯಲ್ಲಿ 2000 ಸಶಸ್ತ್ರ ರೈತರು ಖಜಾನೆಯನ್ನು ವಶಪಡಿಸಿಕೊಳ್ಳುತ್ತಾರೆ. ಅದೇ ದಿನ ಒಂದು ತಂಡ ಕಾಸರಗೋಡು ಕಡೆಗೆ, ಮತ್ತೊಂದು ತಂಡ ಪುತ್ತೂರು ಕಡೆಗೆ, ಮಗದೊಂದು ತಂಡ ಮಡಿಕೇರಿ ಕಡೆಗೆ ಮುಂದುವರಿಯುತ್ತದೆ. ದಾರಿಯಲ್ಲಿ ಸಿಕ್ಕಿದ ಎಲ್ಲ ಸರ್ಕಾರಿ ಕಚೇರಿಗಳನ್ನು, ಖಜಾನೆಗಳನ್ನು ಸ್ವಾಧೀನ ಪಡಿಸಿಕೊಳ್ಳುತ್ತಾ, ವಿರೋಧಿಸಿದವರನ್ನು ಸೆರೆ ಹಿಡಿಯುತ್ತಾ ತಮ್ಮ ಕಡೆಯ ಅಧಿಕಾರಿಗಳನ್ನು ನೇಮಿಸುತ್ತಾ ಮುಂದುವರಿಯುತ್ತಾರೆ.

ಕಾಸರಗೋಡು, ಕುಂಬ್ಳೆ, ಮಂಜೇಶ್ವರದ ಮೂಲಕ ತೆರಳಿದ್ದ ರೈತರು ಕೊನೆಯದಾಗಿ ಎಪ್ರಿಲ್ 5 ರಂದು ಮಂಗಳೂರನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡು ಸುಮಾರು 2 ವಾರಗಳ ಕಾಲ ಅವಿಭಜಿತ ಜಿಲ್ಲೆಯನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಅವಮಾನಕ್ಕೊಳಗಾದ ಬ್ರಿಟಿಷರು ಮುಂಬೈನಿಂದ ದೊಡ್ಡ ಸೈನ್ಯ ತರಿಸಿ ರೈತರನ್ನು ಸೋಲಿಸುತ್ತಾರೆ.

ಅಮರ ಕ್ರಾಂತಿ ಹೋರಾಟದ ಕುರುಹಾಗಿ ಖಜಾನೆ ಮತ್ತು ಬಂಗಲೆ ಈಗಲೂ ಬೆಳ್ಳಾರೆಯಲ್ಲಿದೆ.  ನನ್ನೂರಿನ ನೆಲವೂ ಸ್ವಾತಂತ್ರ್ಯದ ಕುರುಹಾಗಿ ಉಳಿದಿದ್ದು, ಜೊತೆಗೆ ನನ್ನೊಳಗೆ ಕ್ಷಾತ್ರತನವನ್ನು ಬಡಿದೆಬ್ಬಿಸಿದೆ. ಸರಕಾರ ಇದನ್ನು ನೋಡಿ ಇಲ್ಲೊಂದು ಪಾರಂಪರಿಕ ತಾಣವಾಗಿ ಮಾಡುವ ಯೋಜನೆಗಳನ್ನ ರೂಪಿಸಬೆಕಾಗಿದೆ. ನನ್ನ ನೆಲದ ನನ್ನೂರಿನ ತಾಕತ್ತು ಹತ್ತೂರಿಗೆ ತಿಳಿಯಬೆಕಾಗಿದೆ. ಮುಂದಿನ ಜನಾಂಗಕ್ಕೆ ವಿಷಯಗಳನ್ನ ಇತಿಹಾಸಗಳನ್ನ ದಾಟಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ.

 

ಧೀರಜ್ ಬೆಳ್ಳಾರೆ

ಕನ್ನಡ ಪ್ರಾಧ್ಯಾಪಕ

ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ.

8861193454

Untitled 4.png

ರಟ್ಟೀಹಳ್ಳಿಯ ಪುಟ್ಟ ಗ್ರಾಮ ಅಣಜಿ

'ಅಣಜಿ‘ ಗ್ರಾಮದ ಪ್ರಾಚೀನ ಹೆಸರು ‘ಅಂದ್ದಿ’ (ಅಂದಿ) ಎಂದು ಇತ್ತು. ಈ ಗ್ರಾಮದಲ್ಲಿನ ಶಾಸನವು ಈ ವಿಷಯವನ್ನು ಅರಹುತ್ತದೆ. ಅಂದಿಯು ನಂತರ ಅಣದಿಗೆಯಾಗಿ ಬದಲಾಯಿತು. ನಂತರ ಅಣಜಿಗೆ, ಆ ಬಳಿಕ ಅಣಜಿ ಆಯಿತು ಎಂದು ಹೇಳುತ್ತಾರೆ. ‘ಅಣದಿ’ ಎಂದರೆ ‘ನೀರಿನ ಹೂಜಿ’ ಅಥವಾ ‘ನೀರಿನ ಹರಾಜೆ’ ಎಂದು ಅರ್ಥ. ಸಮೃದ್ಧವಾದ ನೀರಿನ ಮೂಲವನ್ನು ಹೊಂದಿರುವ ಪ್ರದೇಶ ಎಂದು ಅರ್ಥವಾಗುತ್ತದೆ. ಮದಗದ (ನೀರಿನ ಸಂಪನ್ಮೂಲ ಹೊಂದಿರುವ) ಸಾಲು ಗುಡ್ಡಗಳ ಸನಿಹದ ಪ್ರಮುಖ ಹಳ್ಳಿ ಅಣಜಿ.

ಅಣಜಿ ಜಲಸಂಪನ್ಮೂಲ ಹೊಂದಿರುವ ಪ್ರದೇಶವಷ್ಟೇ ಅಲ್ಲ, ಈ ಗ್ರಾಮದ ಗುಡ್ಡದಲ್ಲಿ ಗ್ರಾಫೈಟ್ ಮತ್ತು ಮ್ಯಾಗ್ನಟೈಟ್ ಖನಿಜಗಳು ಇವೆ. ನಾಗವಂದ ಹಳ್ಳವು ಅಣಜಿ, ಮೈದೂರ, ಶಂಕರನಹಳ್ಳಿ, ಕಮಲಾಪುರದ ಮೂಲಕ ಹರಿದು ಮುಂದೆ ತುಂಗಭದ್ರಾ ನದಿಯನ್ನು ಸೇರುತ್ತದೆ.

ಈ ಊರಿನಲ್ಲಿ ದೊಡ್ಡಮಟ್ಟಿ ಕೆರೆ, ಮೂತಿಮಟ್ಟಿ ಕೆರೆ, ಗೌರಿ ಕೆರೆ, ಊರಮುಂದಿನ ಕೆರೆ, ಇಸ್ಲಾಪುರ ಕೆರೆ, ಬೋಳ ಹಳ್ಳ, ಎರಿಹಳ್ಳ, ಇಸ್ಲಾಪುರ ಹಳ್ಳ, ಕೆಂಚಸಿದ್ದೇಶ್ವರ ಹಳ್ಳಗಳಿವೆ. ರಕ್ಷಿತಾರಣ್ಯವೂ ಇದೆ. ಈ ಊರಿನಲ್ಲಿ ಹಿಂದೆ ನಾಥ ಮತ್ತು ಕಪಾಲಿ ಪಂಥಗಳು ಇದ್ದವು ಎನ್ನಲು ಆಧಾರವನ್ನು ಕೆಂಚಸಿದ್ಧೇಶ್ವರ ಹೆಸರು ಒದಗಿಸುತ್ತದೆ.

ಈ ಊರಿನಲ್ಲಿ 6 ಶಾಸನಗಳು ದೊರೆತಿವೆ. ರಾಷ್ಟ್ರಕೂಟ ಅರಸ ಕೃಷ್ಣನ ಕಾಲದ ಸುಮಾರು 9ನೇ ಶತಮಾನದ ಶಾಸನವು ಲೋಕಟೆ ಬನವಾಸಿ ನಾಡನ್ನು ಆಳುವಾಗ ದೇವಾಲಯಕ್ಕೆ ನೀಡಿದ ಭೂದಾನದ ವಿವರವನ್ನು ನೀಡುತ್ತದೆ. ಹನುಮಂತ ದೇವರ ಗುಡಿ ಹಿಂದಿನ ವೀರಗಲ್ಲು ಸುಮಾರು 11ನೇ ಶತಮಾನಕ್ಕೆ ಸೇರಿದ್ದಾಗಿದ್ದು, ವೀರನೊಬ್ಬನ ಮರಣವನ್ನು ದಾಖಲಿಸುತ್ತದೆ. ಈಶ್ವರ ದೇವಾಲಯದ ಬಳಿಯ ವೀರಗಲ್ಲು ಯಾದವ ಸಿಂಘಣನ ಕಾಲದಲ್ಲಿ ಸುಮಾರು ಕ್ರಿ.ಶ. 1228 ಕಾಲಘಟ್ಟಕ್ಕೆ ಸೇರುತ್ತದೆ. ಮಾಚಿಯಣ್ಣನಿಂದ ಯುದ್ಧದಲ್ಲಿಅನೇಕ ಜನರ ಮರಣವನ್ನು ಈ ವೀರಗಲ್ಲು ಸೂಚಿಸುತ್ತದೆ. ಕೆರೆಯ ಏರಿಯಲ್ಲಿ ದೊರೆತ ಶಾಸನವು ಸುಮಾರು 12ನೇ ಶತಮಾನಕ್ಕೆ ಸೇರಿದ್ದು, ಜೋಗ ಅರಸನು ಎಡವಟ್ಟಿ,ಅತ್ತಿಗೇರಿ, ಎಳಂಬಾರು ಆಳುವಾಗ ಮಠಕ್ಕೆ ಬಿಟ್ಟ ದತ್ತಿಯನ್ನು ಸೂಚಿಸುತ್ತದೆ. ಈಶ್ವರ ದೇವಾಲಯದ ಸಮೀಪ ದೊರೆತ ಇನ್ನೊಂದು ವೀರಗಲ್ಲು ಸುಮಾರು 12 ನೇ ಶತಮಾನಕ್ಕೆ ಸಂಬಂಧಿಸಿದ್ದು, ಮಾರಯ ನಾಯಕನ ಮಗ ಬೊಮ್ಮೆಯನಾಯಕನು ಹುಲಿಯನ್ನು ಕೊಂದು ಸ್ವರ್ಗ ಸೇರಿದ ಎಂದು ತಿಳಿಸುತ್ತದೆ. ಕೆರೆಯ ಏರಿಯಲ್ಲಿ ದೊರೆತ ಇನ್ನೊಂದು ಶಾಸನವನ್ನು ಓದಲು ಸಾಧ್ಯವಾಗದೇ ಅಸ್ಪಷ್ಟವಾಗಿದೆ.

ಅಣಜಿಯು ಕನ್ನಡದ ಹೆಮ್ಮೆಯ ರಾಜಮನೆತನ ರಾಷ್ಟ್ರಕೂಟರ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದು ಸ್ಪಷ್ಟವಾಗುತ್ತದೆ. ಅಣಜಿ ಗ್ರಾಮವನ್ನು ಒಳಗೊಂಡ ಈಗಿನ ರಟ್ಟಿಹಳ್ಳಿ ತಾಲೂಕು ರಾಷ್ಟ್ರಕೂಟರು, ಯಾದವರು, ಕಲ್ಯಾಣ ಚಾಲುಕ್ಯರು, ಕಲಚೂರಿ ಅರಸರು, ಸಿಂಧರು, ವಿಜಯನಗರದ ಅರಸರು ನಡೆಸಿದ್ದರು.

ಈ ಹಳ್ಳಿಯಲ್ಲಿ ದೀಪಾವಳಿ ಹಬ್ಬವನ್ನು ‘ಹಟ್ಟಿ ಹಬ್ಬ’ ಎಂದು ಆಚರಿಸುತ್ತಾರೆ. ಇದು ಸುಗ್ಗಿಯ ಆರಂಭದ ಪರ್ವ.

ಅಣಜಿ ಗ್ರಾಮದಲ್ಲಿ ಆಂಜನೇಯಸ್ವಾಮಿ ದೇವಾಲಯವಿದೆ. ಸುಮಾರು 11, 12ನೇ ಶತಮಾನಕ್ಕೆ ಸೇರಿದ ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿರುವ ಬಸವೇಶ್ವರ ದೇವಾಲಯವಿದೆ. ಈ ದೇವಾಲಯದ ಆವರಣದಲ್ಲಿ ನಂದಿ, ಭೈರವಿ, ನಾಗ, ವೀರಭದ್ರ ದೇವರ ಸ್ಮಾರಕಗಳೂ ಇವೆ.

ಗ್ರಾಮದಲ್ಲಿ ಬೂದಿಸ್ವಾಮಿ ಮಠವಿದೆ. ಅಲ್ಲದೇ, ಹೆಗ್ಗೇರಿ ಸಿದ್ಧೇಶ್ವರ, ಬ್ರಹ್ಮಲಿಂಗೇಶ್ವರ, ಬೀರಲಿಂಗೇಶ್ವರ, ಹನುಮಂತ, ಗ್ರಾಮದೇವತೆಗಳಾದ ಮಾರಿಕಾಂಬಾ, ಚೌಡಮ್ಮ, ಮಾತಂಗೇಶ್ವರ ದೇವಾಲಯವಿದೆ. ಪ್ರತೀವರ್ಷ ಡಿಸೆಂಬರ್ ತಿಂಗಳಿನಲ್ಲಿ ಹೆಗ್ಗೇರಿಯಪ್ಪ ಮತ್ತು ಬೀರಪ್ಪನ ಜಾತ್ರೆ ನಡೆಯುತ್ತದೆ. ಅಣಜಿಯಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯವೂ ನಡೆಯುತ್ತದೆ.

ಅಣಜಿ ಗ್ರಾಮದಲ್ಲಿ ಬೂದೀಶ್ವರ ಭಜನಾ ಸಂಘ ಕಾರ್ಯನಿರ್ವಹಿಸುತ್ತಿದೆ. ಈ ಊರಿನಲ್ಲಿ ಕೋಲಾಟ, ಭಜನೆ, ನಾಟಕಗಳು ನಡೆಯುತ್ತವೆ.

ಅಣಜಿ ಗ್ರಾಮದಲ್ಲಿ ಜೋಳ, ಮೆಕ್ಕೆಜೋಳ, ಅಡಕೆ, ವೀಳ್ಯದೆಲೆ, ತೆಂಗು, ಮೆಣಸು, ಎಲೆಕೋಸು ಬೆಳೆ ಬೆಳೆಯುತ್ತಾರೆ. ಜೋಳದರೊಟ್ಟಿ, ಚಪಾತಿ, ಅನ್ನ, ಕಾಳುಪಲ್ಯ, ಕೆಂಪುಹಿಂಡಿ ಈ ಹಳ್ಳಿಗರ ಪ್ರಮುಖ ಆಹಾರ. ಕನ್ನಡ ಇಲ್ಲಿನ ಪ್ರಮುಖ ಭಾಷೆ. ಮುಸ್ಲಿಂರು ಉರ್ದು ಮಾತನಾಡುತ್ತಾರೆ.

Untitled 4.png

ಕೆರೆಗೆ ಮಹಿಳೆಯರಿಂದ ಬಾಗಿನ ಕೊಡುವ ಕಾರ್ಯಕ್ರಮ

ನಮ್ಮ ಗ್ರಾಮದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗ್ರಾಮದವರೇ ಕೆರೆಗೆ ಬಾಗಿನ ಕೊಟ್ಟ ಫೋಟೋ

Untitled 4.png

ಉಡುಪಿ ಮಲ್ಲಿಗೆ ಘಮಘಮ

ಉಡುಪಿ ಜಿಲ್ಲೆಯ ಶಂಕರಪುರ, ಪಾಂಗಾಳ, ಕಟಪಾಡಿ, ಶಿರ್ವ, ಕಳತ್ತೂರು, ಇನ್ನಂಜೆ, ಬೆಳ್ಮಣ್, ಪೆರ್ಣಂಕಿಲಗಳಲ್ಲಿ ಬೆಳೆಯುವ ಮಲ್ಲಿಗೆ ಒಂದು ಜಾತಿ ‘ಉಡುಪಿ ಮಲ್ಲಿಗೆ’ ಎಂದೇ ಖ್ಯಾತಿ ಪಡೆದಿದೆ.

'ಉಡುಪಿ ಮಲ್ಲಿಗೆ’ ಎಂದೇ ಜಿಐ ಟ್ಯಾಗ್ ಗೆ ಸೇರ್ಪಡೆಯಾಗಿರುವ ಈ ಮಲ್ಲಿಗೆ ಅಸಲಿಗೆ ಉಡುಪಿ ಮೂಲದ್ದು ಅಲ್ಲವೇ ಅಲ್ಲ. ಸುಮಾರು 130 ವರ್ಷಗಳ ಹಿಂದೆ ಭಟ್ಕಳದಲ್ಲಿ ಪಾದ್ರಿಯಾಗಿದ್ದವರೊಬ್ಬರು ಅಲ್ಲಿನ ಚರ್ಚ್ ಆವರಣದಲ್ಲಿ ಧಾರಾಳವಾಗಿ ಬೆಳೆದಿದ್ದ ಮಲ್ಲಿಗೆಯ ಗಿಡಗಳನ್ನು ತಾವು ಕಟಪಾಡಿಗೆ ವರ್ಗಾವಣೆಗೊಂಡಾಗ ಕಟಪಾಡಿಗೆ ತಂದು ಬೆಳೆಸಿದ್ದರಂತೆ. ಹಾಗೆಯೇ ಚರ್ಚಿಗೆ ಬರುತ್ತಿದ್ದ ಕ್ರಿಶ್ಚಿಯನ್ನರಿಗೆ ಈ ಗಿಡಗಳನ್ನು ನೆಟ್ಟು, ಕೃಷಿಯಲ್ಲಿ ಉಪ ಆದಾಯ ಕಂಡುಕೊಳ್ಳಲು ಸೂಚಿಸಿದರಂತೆ.

ಈ ಮಲ್ಲಿಗೆಗೆ ಮನಸೋಲದವರೇ ಇಲ್ಲ. ದಂಡೆಯಾಗಿ ಕಟ್ಟಿದಾಗ ಅದರ ಸೊಬಗು ತೆಳುಕಾಯದ ಎಳೆಯ ಹರೆಯದ ಸುಂದರಿಯಂತಿದೆ. ಅಂತೆಯೇ ಅಂತಹ ಸುಂದರಿಯರ ಮುಡಿಗೆ ಏರಲು, ದೇವರ ಅಲಂಕಾರಕ್ಕೆ ಅದರ ತವಕವನ್ನು ಬಣ್ಣಿಸಲು ನನ್ನಿಂದಂತೂ ಅಸಾಧ್ಯ.

ನಾನು ಮಂಗಳೂರಿನಲ್ಲಿದ್ದಾಗ ಒಮ್ಮೆ ಉಡುಪಿಯ ಶಂಕರಪುರಕ್ಕೆ ಈ ಮಲ್ಲಿಗೆ ಬೆಳೆಯ ಬಗ್ಗೆ ಮಾಹಿತಿ ಪಡೆಯಲು ಹೋಗಿದ್ದೆ. ಬೆಳೆಗಾರರು ನನಗೆ ಪ್ರೀತಿಯಿಂದ ಒಂದು ಅಟ್ಟಿ ಮಲ್ಲಿಗೆಯನ್ನು ಬಾಳೆ ಎಲೆಯಲ್ಲಿ ಹಿತಕರವಾಗಿ ಪ್ಯಾಕ್ ಮಾಡಿ ಕೊಟ್ಟಿದ್ದರು. ನಾನು ಕಚೇರಿಗೆ ವಾಪಸ್ ಆಗುತ್ತಿದ್ದಂತೆ ಹೆಣ್ಣು ಮಕ್ಕಳ ತಂಡವೊಂದು ಕಚೇರಿಯ ಬಾಗಿಲಲ್ಲಿ ಕಾಯುತ್ತಿತ್ತು. ಹೆಚ್ಚುಕಡಿಮೆ ಒಬ್ಬಳು ನನ್ನ ಬ್ಯಾಗ್ ನ್ನು ಕಸಿದುಕೊಂಡು ಮಲ್ಲಿಗೆಯ ಅಟ್ಟಿಯನ್ನು ತನ್ನ ಸುಪರ್ದಿಗೆ ಪಡೆದಳು. ಉಳಿದವರು ಅವಳಿಗೆ ಮುಗಿಬಿದ್ದರು. ನಾನು ಮೌನವಾಗಿ ನನ್ನ ಸೀಟಿಗೆ ಬರುವಷ್ಟರಲ್ಲಿ, ಇನ್ನಷ್ಟು ಹೆಣ್ಣು ಮಕ್ಕಳು ಬಂದು, ನಮಗೆಲ್ಲಿ? ಎಂದು ಕೇಳಿದರು. ನಾನು ನಡೆದ ಸಂಗತಿಯನ್ನು ಹೇಳಿದೆ. ಮೊದಲು ಮಲ್ಲಿಗೆ ಅಟ್ಟಿ ಪಡೆದವರು ಅವರವರೇ ಹಂಚಿಕೊಂಡು (ಅದರಲ್ಲೂ ಕೆಲವರು ತಮಗೆ ಕಡಿಮೆ ಆಯಿತು ಎಂದು ಮುನಿಸಿಕೊಂಡಿದ್ದರು.) ಮುಡಿಗೇರಿಸಿಕೊಂಡು ಹೆಮ್ಮೆಯಿಂದ ಓಡಾಡುತ್ತಿದ್ದರು ಮತ್ತು ಕಚೇರಿಯಲ್ಲಿ ತುಂಬೆಲ್ಲ ಘಮಘಮಿಸುತ್ತಿದ್ದರು. ಈಗ ನನ್ನ ಬಳಿ ಕೇಳಿದವರಿಗೆ ಮಲ್ಲಿಗೆ ಸಿಗಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಒಂದು ಚೆಂಡಿನಷ್ಟು ಭಾಗ ನನಗೆ ಸಿಕ್ಕಿತು. ಅದನ್ನು ಇವರಿಗೆ ಕೊಟ್ಟರೆ, ಸಿಟ್ಟು ಮಾಡಿಕೊಂಡು ಜಗಳ ಮಾಡಿದರು. ನಾನು ಎನು ಮಾಡುವುದು ಎಂದು ತಿಳಿಯದೆ ಪೆಚ್ಚಾದೆ. ಸುಮಾ ಎಂಬವರು ಇದೇ ವಿಷಯಕ್ಕಾಗಿ ನನ್ನೊಡನೆ ತಿಂಗಳ ಕಾಲ ಮಾತು ಬಿಟ್ಟಿದ್ದರು. ಹೀಗಿದೆ ಉಡುಪಿ ಮಲ್ಲಿಗೆ ಮಹಿಮೆ!

ಕ್ರೈಸ್ತ ಹೆಂಗೆಳೆಯರು ಈ ಮಲ್ಲಿಗೆಯ ಸಪೂರ ಕಾಯ, ಪರಿಮಳಕ್ಕೆ ಮನಸೋತು ತಮ್ಮ ಹಿತ್ತಿಲಲ್ಲಿ ಧಾರಾಳವಾಗಿ ವಿಶೇಷ ಕಾಳಜಿಯಿಂದ ಬೆಳೆಸಿದರು. ಅದನ್ನು ದಂಡೆಯಾಗಿ ಕಟ್ಟಿ ಮುಡಿದುಕೊಂಡರು. ಮದುವೆ, ಇತ್ಯಾದಿ ಸಮಾರಂಭಗಳಲ್ಲಿ ಅಲಂಕರಿಸಿಕೊಂಡರು. ಸುಂಗಧಭರಿತ ಲಾವಣ್ಯವತಿಯ ಮಲ್ಲಿಗೆಗೆ ಮಾರು ಹೋಗದವರು ಯಾರಿಲ್ಲ. ಕ್ರಮೇಣ ಇದು ಕ್ರಯಕ್ಕೆ ಪಡೆಯುವ ವಸ್ತುವಾಗಿ ಮೌಲ್ಯವನ್ನು ವರ್ಧಿಸಿಕೊಳ್ಳುತ್ತ ಹಾಗೆಯೇ ವಾಣಿಜ್ಯ ಬೆಳೆ ಎಂಬ ಅಭಿದಾನಕ್ಕೆ ಪಾತ್ರವಾಯಿತು. ಕೆಲವೇ ಗ್ರಾಂ ತೂಗುವ ಈ ಮಲ್ಲಿಗೆಯ ಬೆಳೆಗಾರರು ಮಲ್ಲಿಗೆಯನ್ನು ಧಾರಾಳವಾಗಿ ಬೆಳೆದು ಗಮನಾರ್ಹ ಪ್ರಮಾಣದಲ್ಲಿ ಸಿರಿವಂತರಾಗಿದ್ದಾರೆ. ಆರಂಭದ ಕಾಲಘಟ್ಟದಲ್ಲಿ ಉಪ ಬೆಳೆಯಾಗಿದ್ದ ಮಲ್ಲಿಗೆಯನ್ನು ತಮ್ಮ ಹಿತ್ತಿಲಿನಲ್ಲಿಯೇ ಬೆಳೆದು ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಮದುವೆ, ಗೃಹಪ್ರವೇಶ, ಉತ್ಸವಗಳ ಋತುವಿನಲ್ಲಿಯಂತೂ ಈ ಮಲ್ಲಿಗೆಗೆ ಚಿನ್ನದ ಬೆಲೆ! ಉಡುಪಿಯಲ್ಲಿ ಮಲ್ಲಿಗೆ ಬೆಳೆಗಾರರ ಸಂಘಟನೆ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ.

(ಮುಂದುವರಿದೆ.)

Untitled 4.png

ನಮ್ಮ ಗ್ರಾಮದ ಹಿರಿಯರ ನೆನಪಿನ ಸಾಕ್ಷಿಯ ಕ್ಷಣಗಳು

50 ವರ್ಷಗಳಿಂದ ಗ್ರಾಮಗಳಲ್ಲಿ ಮಾಡಿರುವ ಕಾರ್ಯಕ್ರಮದ ಫೋಟೋಗಳನ್ನ ಸಂಗ್ರಹಿಸಿ ಇಡಲಾಗಿದೆ

Untitled 4.png

ಮರೆಯಾದ ಕಾವಿ ಕಲೆ

ಒಂದು ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ‘ಕಾವಿ ಕಲೆ’ ಯ ಚಿತ್ರಗಳು ಸರ್ವೇ ಸಾಮಾನ್ಯವಾಗಿದ್ದವು. ಈ ಜಿಲ್ಲೆಯ ಸಾವಿರಾರು ದೇಗುಲಗಳಲ್ಲಿ, ಸಿರಿವಂತರ, ಅನುಕೂಲಸ್ಥರ ಮನೆಗಳಲ್ಲಿ ಈ ಕಲೆ ರಾರಾಜಿಸುತ್ತಿತ್ತು. ಈಗ ಕಲೆಯ ಕುರುಹುಗಳು ಸಹ ತೀರಾ ಅಪರೂಪ.

ಶಿರಸಿಯ ಮಾರಿಕಾಂಬಾ ದೇವಸ್ಥಾನದ ಪ್ರವೇಶದ ಗೋಡೆಗಳ ಮೇಲೆ ಈ ಕಾವಿ ಕಲೆಯ ನೈಜ ಚಿತ್ರಗಳ ಮೇಲೆ ಆಧುನಿಕ ಪೈಂಟ್ ಬಳಿಯಲಾಗಿದೆ. ಮೂಲ ಕಾವಿ ಕಲೆಯ ಬಣ್ಣ ಮರೆಯಾಗಿದೆ. ಚಿತ್ರಗಳ ವಿನ್ಯಾಸದ ಮೇಲೆ ಈ ರೀತಿ ಮಾಡಲಾಗಿದೆ. ಕಾವಿ ಕಲೆ 19, 20ನೇ ಶತಮಾನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲೆಡೆ ವಿಜೃಂಭಿಸುತ್ತಿತ್ತು.

ದೇವಾಲಯಗಳಲ್ಲಿ, ಮಂದಿರಗಳಲ್ಲಿ, ಶ್ರೀಮಂತರ ಮನೆಗಳ ಹತ್ತಾರು ಅಂಕಣಗಳ ಪಡಸಾಲೆಯ ಗೋಡೆಗಳಲ್ಲಿ ಕಾವಿ ಕಲೆಯಲ್ಲಿ ರಾಮಾಯಣ, ಮಹಾಭಾರತ, ಪುರಾಣಗಳ ಪಾತ್ರಗಳು, ಕಥಾನಕಗಳು ಮೂಡಿ ಅಚ್ಚರಿ, ಸೌಂದರ್ಯ, ಕಥೆಗಳನ್ನು ಸಾರುತ್ತಿದ್ದವು. ಶ್ರೀಮಂತರು ತಮ್ಮ ಶಯನಗೃಹಗಳಲ್ಲಿ ಶೃಂಗಾರ ದೃಶ್ಯಗಳನ್ನು ಕಲಾವಿದರಿಂದ ಬರೆಯಿಸಿಕೊಳ್ಳುತ್ತಿದ್ದರು. ದೇವಾಲಯ, ಮನೆಯ ಗೋಡೆಗಳ ಮೇಲೆ ಈ ಕಾವಿ ಕಲೆಯ ಸೊಬಗಿನ ಚಿತ್ರಗಳ ಜೊತೆ ಮೇಲೆ ಕೆಳಗೆ ಅಂಚಿನ (border) ಸಾಲಿನ ಚಿತ್ರವೂ ಗಮನ ಸೆಳೆಯುತ್ತಿತ್ತು.

ಈಗ ಈ ಕಲೆ ಅಳಿದು ಹೋಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಕುಮಟಾ, ಹೊನ್ನಾವರ ಮತ್ತು ಶಿರಸಿಯ ಪ್ರಾಚೀನ ದೇವಾಲಯಗಳ ಕಟ್ಟೋಣಗಳಲ್ಲಿ ಶಿಥಿಲಾವಸ್ಥೆಯಲ್ಲಿನ ಈ ಕಲೆಯ ಕೆಲ ತುಣುಕುಗಳು ಮಸಕಾಗಿ ಕಾಣಬಹುದೇನೋ. ಅದೂ ಹುಡುಕಿಕೊಂಡು ಹೋದರೆ ಮಾತ್ರ.

ನಾನು ಕಳೆದ ವರ್ಷ ಶಿರಸಿಯ ತದ್ದಲಸೆಗೆ ಹೋಗಿದ್ದಾಗ, ಸುಮಾರು ನೂರು ವರ್ಷಗಳ ಹಿಂದೆ ಕಟ್ಟಲಾದ ಗಣಪತಿ ದೇವಸ್ಥಾನ ಹೊರಭಾಗದಲ್ಲಿ ಮೇಲ್ಗಡೆ ಇರುವ ಕಾವಿ ಕಲೆಯ ಅಂಚಿನ ಚಿತ್ತಾರವನ್ನು ಗಮನಿಸಿದ್ದೆ. ತದ್ದಲಸೆಯ ಹಿರಿಯರೂ ವಿದ್ವಾಂಸರು ಆದ ಶ್ರೀ ಎಂ.ವಿ. ಶರ್ಮಾ ತದ್ದಲಸೆ ಅವರಲ್ಲಿ ಈ ಬಗ್ಗೆ ಮಾತನಾಡಿದೆ. ಅವರು “ನಿಜ. ಅದು ಅದು ಕಾವಿ ಕಲೆಯೇ. ತಮ್ಮ ಅಜ್ಜನ ಕಾಲದಲ್ಲಿ ಈ ದೇವಸ್ಥಾನ ಕಟ್ಟಲಾಗಿತ್ತು. ಮಂಗರ್ಷಿ ಎಂಬ ಸಮುದಾಯದವರು ಈ ಕಲೆಗಾರರು. ಅವರು ಗೋವಾದವರು. ಅವರು ಈ ಕಲೆಯನ್ನು ಬೆಳಗುತ್ತಿದ್ದರು. ಬೈನೆ ಮರದ ಕಡ್ಡಿಯಿಂದ ಕಾವಿ ಕಲೆಯನ್ನು ಚಿತ್ರಿಸುತ್ತಿದ್ದರು. ಕಲೆಗೆ ಬೇಕಾದ ವರ್ಣವನ್ನು ಅವರೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ನಾನು ಸಣ್ಣವನಿದ್ದಾಗ ಅವರನ್ನು ನೋಡಿದ್ದೆ. ನಂತರದ ದಿನಗಳಲ್ಲಿ ಅವರನ್ನು ನೋಡಿಲ್ಲ” ಎಂದು ಹೇಳಿದರು.

ಕಾವಿ ಕಲೆಯನ್ನು ಉರಿಮಂಜಿನ ಚಿತ್ರಗಳು ಎಂತಲೂ ಕರೆಯುತ್ತಾರೆ. ಹಿರಿಯ ಬರಹಗಾರರಾದ ದಿವಂಗತ ಡಾ. ಕೃಷ್ಣಾನಂದ ಕಾಮತರು 1993ರಲ್ಲಿ ‘ಕಾವಿ ಕಲೆ’ ಪುಸ್ತಕ ಬರೆದಿದ್ದರು. 118 ಪುಟಗಳ ಈ ಪುಸ್ತಕವನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿ ಹೊರತಂದಿತ್ತು. ಕಾಮತರು ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಡೆದಾಡಿ ಈ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ. ಅಧ್ಯಯನಪೂರ್ಣ ಕೃತಿ ಇದು. ಈ ಕೃತಿ ಹೊರಬಂದ ಸಂದರ್ಭದಲ್ಲಿ ‘ತರಂಗ’ ಪತ್ರಿಕೆಯ ಸಂಪಾದಕರಾದ ಸಂತೋಷಕುಮಾರ್ ಗುಲ್ವಾಡಿ ಅವರು ಹೇಳಿದ ಮಾತು ನನ್ನ ನೆನಪಿನಲ್ಲಿ ಸದಾ ಇರುತ್ತದೆ. ಅವರು ಹೀಗೆ ಹೇಳಿದ್ದರು: “ಕಾವಿ ಕಲೆ ಅವಸಾನದ ಹಂತದಲ್ಲಿದೆ. ಮುಂದೆ ಕಾವಿ ಕಲೆ ಇರುವುದಾದರೆ ಅದು ಡಾ. ಕೃಷ್ಣಾನಂದ ಕಾಮತರ ಪುಸ್ತಕದಲ್ಲಿ ಮಾತ್ರ” ಎಂದು. ಆಗ ಅವರು ಹೇಳಿದ ಮಾತು ನಿಜವಾಗಿದೆ. ಈಗ ಆ ಪುಸ್ತಕದ ಪ್ರತಿಗಳೂ ಸಿಗುತ್ತಿಲ್ಲ. ನಿಜವಾಗಿಯೂ ಈ ಪುಸ್ತಕ ಕಾವಿ ಕಲೆಯ ಕುರಿತ ಅಧ್ಯಯನ-ವಿವರಪೂರ್ಣ ಕೃತಿ.

ಇದರಲ್ಲಿ ಕಾವಿ ಕಲೆಯ ಚಿತ್ರಗಳೂ, ನಾನಾ ದೇಗುಲಗಳಲ್ಲಿನ ಕಾವಿಕಲೆಯ ಚಿತ್ರಗಳೂ ಇವೆ.

 

ಮುಂದಿನ ಭಾಗಗಳಲ್ಲಿ ಆ ಕುರಿತ ವಿವರವನ್ನು ನೋಡೋಣ. (ನೀವೂ ನಿಮ್ಮ ಊರಿನ ಇಂತಹ ಕಲೆಯ ಕುರಿತು ಬರೆಯಿರಿ)

ಇಲ್ಲಿ ಆ ಪುಸ್ತಕದ ಮುಖಪುಟವನ್ನು ಲಗತ್ತಿಸಿದ್ದೇನೆ.

Untitled 4.png

ಬೆಡಗಿನ ಕಿನ್ನಾಳಕಲೆ

ಕೊಪ್ಪಳ ಜಿಲ್ಲೆ ಎಂದಾಕ್ಷಣ ಹಿಂದುಳಿದ, ಬರಪೀಡಿತ ಎಂದೆಲ್ಲ ಗುರುತಿಸಲಾಗುತ್ತಿದೆ. ಊಹೂಂ… ಇದೇ ಕೊಪ್ಪಳ ಜಿಲ್ಲೆಯ ಪುಟ್ಟ ಗ್ರಾಮ ಕಿನ್ನಾಳ ತನ್ನ ಕಲೆಯಿಂದಲೇ ವಿಶ್ವಪ್ರಸಿದ್ಧವಾಗಿದೆ. ಸಮೃದ್ಧ ಕಲಾ ಸಿರಿಯನ್ನು ಹೊಂದಿದೆ. ಇಲ್ಲಿನ ಆಟಿಕೆ ಮತ್ತು ಚಿತ್ತಾರ ‘ಕಿನ್ನಾಳ ಕಲೆ’ ಹೆಸರಾಗಿದೆ.

ಕಿನ್ನಾಳ ಕಲೆಯನ್ನು ಕಿನ್ಹಾಳ ಕಲೆ ಎಂದೂ ಹೇಳುತ್ತಾರೆ. ಈ ಕಲೆಯ ಕಲಾವಿದರನ್ನು ‘ಚಿತ್ರಗಾರರು’ ಎಂದು ಕರೆಯುತ್ತಾರೆ. ಪ್ರಾಣಿ, ಪಕ್ಷಿಗಳು, ಪುರುಷರು, ಮಹಿಳೆಯರು, ಮಕ್ಕಳು, ದೇವರು, ಹಣ್ಣುಗಳು ಈ ಕಲೆಯಲ್ಲಿ ‘ಜೀವ’ ಪಡೆಯುತ್ತವೆ. ದೇವರು, ದೇವರ ವಾಹನಗಳು ಸಹ ಕಿನ್ನಾಳ ಕಲೆಯಲ್ಲಿ ಮೂರ್ತ ಸ್ವರೂಪ ಪಡೆಯುತ್ತವೆ. ‘ಕಿನ್ನಾಳ ಗೌರಿ’ ಎಂಬ ಮರದ ಶಿಲ್ಪವಂತೂ ಈ ಕಲಾಪ್ರಕಾರದಲ್ಲಿ ಬಹು ಜನಪ್ರಿಯ. ಹಾಗೆಯೇ ತೊಟ್ಟಿಲು, ಮಣೆಗಳ ಮೇಲೂ ಕಿನ್ನಾಳ ಕಲೆಯ ಸೊಬಗು ನಾಟ್ಯವಾಡುತ್ತದೆ. ಕೊಪ್ಪಳಕ್ಕೆ ಆಗಮಿಸುವ ಗಣ್ಯರಿಗೆ ಕಿನ್ನಾಳ ಕಲೆಯ ಕಾಣಿಕೆ ನೀಡುವುದು ವಿಶೇಷ.

ಕಿನ್ನಾಳ ಆಟಿಕೆಗಳನ್ನು ರಚಿಸಲು ಹಗುರವಾದ ಮರಗಳ ಭಾಗಗಳನ್ನು ಬಳಸುತ್ತಾರೆ. ಆಟಿಕೆಯ ನಾನಾ ಭಾಗಗಳನ್ನು ಸೇರ್ಪಡೆಗೊಳಿಸಲು ಹುಣಸೆಬೀಜಗಳು ಮತ್ತು ಬೆಣಚುಕಲ್ಲುಗಳಿಂದ ಪೇಸ್ಟ್ ನ್ನು ತಯಾರಿಸುತ್ತಾರೆ. ಬೆಣಚುಕಲ್ಲಿನ ಪುಡಿಯ ಮಿಶ್ರಣದಿಂದ ದ್ರವರೂಪದ ಅಂಟಿನೊಂದಿಗೆ ಬೆರೆಸಿ, ಆಟಿಕೆಯ ಮೇಲೆ ಆಭರಣದ ರಚನೆಗಳನ್ನು ಮಾಡುತ್ತಾರೆ. ಕಿನ್ನಾಳ ಆಟಿಕೆಗಳ ಮೇಲಿನ ಬಣ್ಣ ಬಹು ದೀರ್ಘಕಾಲ ಮಾಸದೇ ಇರುತ್ತದೆ.

ಹಂಪಿಯ ಪಂಪಾಪತೇಶ್ವರ ದೇವಾಲಯದಲ್ಲಿರುವ ಭಿತ್ತಿ ಚಿತ್ರಗಳು ಮತ್ತು ಹಂಪಿಯಲ್ಲಿರುವ ಮರದ ರಥದ ಮೇಲಿನ ಸಂಕೀರ್ಣ ಕುಸುರಿ ಕೆಲಸವು ಕಿನ್ನಾಳ ಕಲೆ ಎಂದೇ ತಿಳಿಯಲಾಗಿದೆ.

2013ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಟ್ಯಾಬ್ಲೋ ಕಿನ್ನಾಳ ಆಟಿಕೆಗಳ ಪ್ರದರ್ಶನ ನಡೆದಿತ್ತು. ಇದು ವಿಶೇಷ ಗಮನ ಸೆಳೆದಿತ್ತು ಎಂದು ಬೇರೆ ಹೇಳಬೇಕಿಲ್ಲ. ಭಾರತದ ಅಂಚೆಚೀಟಿಯಲ್ಲೂ ಕಿನ್ನಾಳ ಕಲೆ ರಾರಾಜಿಸಿದೆ.

ದೇಶ, ವಿದೇಶಗಳ ಅನೇಕ ಕಲಾವಿದರು, ಆಸಕ್ತರು ಕೊಪ್ಪಳದ ಕಿನ್ನಾಳಕ್ಕೆ ಬಂದು, ಈ ಆಟಿಕೆಗಳ ತಯಾರಿಯ ತರಬೇತಿ ಪಡೆದು, ಕಲೆಯ ಸವಿ ಸವಿದು ಮರಳುತ್ತಾರೆ.

ಚಿತ್ರ ಕೃಪೆ: ಅಂತರ್ಜಾಲ

Untitled 4.png

ಭಕ್ತಿ, ಮನೋಹರ ತಾಣ ‘ಸಹಸ್ರಲಿಂಗ

‘ಸಹಸ್ರಲಿಂಗ’ ಶಿರಸಿ ಸಮೀಪದ ಒಂದು ತಾಣ. ಶಾಲ್ಮಲಾ ನದಿಯ ಹರಿವಿನಲ್ಲಿ ಕಲ್ಲು ಬಂಡೆಗಳ ಮೇಲೆ ಸಾವಿರಾರು ಶಿವಲಿಂಗಗಳು, ನಂದಿ ವಿಗ್ರಹಗಳನ್ನು ಕೆತ್ತಲಾಗಿದೆ. ಇದೊಂದು ಭಕ್ತಿಯ ಜೊತೆಗೆ ನಯನಮನೋಹರ ತಾಣ. ಇನ್ನೇನು ಶಿವರಾತ್ರಿ ಸನಿಹದಲ್ಲಿದೆ. ಶಿವಧ್ಯಾನದಲ್ಲಿ ಈ ಸ್ಥಳದ ಕುರಿತು ತಿಳಿಯೋಣ.

ಶಿರಸಿಯಿಂದ ಯಲ್ಲಾಪುರಕ್ಕೆ ಪಯಣಿಸುವ ರಸ್ತೆಯಲ್ಲಿ ಶಿರಸಿಯಿಂದ ಸುಮಾರು ೧೨ ಕಿ.ಮೀ. ದೂರದಲ್ಲಿ ಮುಖ್ಯ ರಸ್ತೆಯಿಂದ ಅರ್ಧ ಕಿ.ಮೀ. ದೂರದಲ್ಲಿದೆ ಈ ಸಹಸ್ರಲಿಂಗ. ಶಾಲ್ಮಲಾ ನದಿಯಲ್ಲಿ ಸಾವಿರಾರು ಶಿವಲಿಂಗಗಳನ್ನು ಕೆತ್ತಿರುವ ಕಾರಣದಿಂದಲೇ ಸಹಸ್ರಲಿಂಗ ಎಂಬ ಹೆಸರು ಈ ಸ್ಥಳಕ್ಕೆ ಬಂದಿದೆ. ನದಿಯ ಹರಿವಿನ ಸರಿಸುಮಾರು ೧೬ ಕಿ.ಮೀ. ವ್ಯಾಪ್ತಿಯಲ್ಲಿ ಈ ಶಿವಲಿಂಗಗಳ ಹರಡಿಕೊಂಡಿವೆ.

ಸೋಂದಾ ಮತ್ತು ಸ್ವರ್ಣವಲ್ಲಿ ಕ್ಷೇತ್ರಗಳಿಗೆ ಹತ್ತಿರದಲ್ಲಿಯೇ ಈ ಅಪೂರ್ವ ತಾಣ ಇರುವುದರಿಂದ ಪ್ರವಾಸದ ಯೋಜನೆಯಲ್ಲಿ ಈ ತಾಣದ ಸೌಂದರ್ಯವನ್ನು ಸವಿಯಬಹುದು. ಅದಕ್ಕೆ ಸಮಯದ ಅನುಕೂಲ ಮಾಡಿಕೊಳ್ಳಬೇಕು. ನೀರಿನ ಹರಿವು ಕಡಿಮೆ ಇರುವ ದಿನಗಳಲ್ಲಿ ಅಂದರೆ ಚಳಿಗಾಲದ ಕೊನೆ ಅಥವಾ ಬೇಸಿಗೆಯಲ್ಲಿ ಈ ಸ್ಥಳದ ವೀಕ್ಷಣೆಗೆ ಹೊರಡುವುದು ಅತ್ಯಂತ ಸೂಕ್ತ. ಏಕೆಂದರೆ ನೀರಿನ ಹರಿವು ಹೆಚ್ಚಾಗಿದ್ದರೆ, ಲಿಂಗವಿರುವ ಬಂಡೆಗಳು ನೀರಿನಲ್ಲಿ ಮುಳುಗಿರುತ್ತವೆ. ಮುಖ್ಯರಸ್ತೆಯಿಂದ ಹೋಗಲು ಸಹಸ್ರಲಿಂಗ ಹೆಸರಿನ ಮಾರ್ಗಸೂಚಿ ಸಹಾಯ ಮಾಡುತ್ತದೆ. ಸುಂದರ ಕಾಡಿನ, ಪಕ್ಷಿಗಳ ಮೋಹಕನೋಟ ಮತ್ತು ಹಸಿರು ಮನಕ್ಕೆ ಮುದ ನೀಡುತ್ತದೆ.

ಶಿರಸಿ ಪ್ರದೇಶದಲ್ಲಿ ೧೭ನೇ ಶತಮಾನದ ಕೊನೆಯಿಂದ ೧೮ನೇ ಶತಮಾನದ ಆರಂಭದ ಕಾಲಘಟ್ಟದಲ್ಲಿ ಆಳುತ್ತಿದ್ದ ಸದಾಶಿವರಾಯ ಅರಸನು ಈ ಶಿವಲಿಂಗಗಳನ್ನು ಕೆತ್ತಿಸಿದನು ಎಂದು ಹೇಳಲಾಗುತ್ತಿದೆ.

ಇತ್ತೀಚಿನ ದಶಕಗಳಲ್ಲಿ ಹಲವು ಶಿವಲಿಂಗಗಳು ಸವೆದು ಹೋಗಿವೆ. ಕೆಲವು ನೀರಿನ ರಭಸಕ್ಕೆ ತೇಲಿ ಹೋಗಿ ಅಡಿಯಲ್ಲಿ ಸಿಕ್ಕಿಕೊಂಡಿರಬಹುದು. ಆದರೂ ಈ ಸ್ಥಳ ತನ್ನ ಮಹಿಮೆ, ಆಕರ್ಷಣೆಯಿಂದ ಹಿಂದೆ ಸರಿದಿಲ್ಲ.

ಈ ಸ್ಥಳದ ಸನಿಹವೇ ನದಿಗೆ ಅಡ್ಡಲಾಗಿ ತೂಗು ಸೇತುವೆಯನ್ನೂ ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಸಂಚರಿಸಿ ಖುಷಿ ಪಡಬಹುದು.

ಚಿತ್ರ ಕೃಪೆ: ಮಹೇಶ ಎಚ್ ಸಿ

Untitled 4.png

ಅಯೋಧ್ಯಾ ಶ್ರೀರಾಮ ಪ್ರತಿಷ್ಠಾಪನೆ – ನಮ್ಮ ಊರಿನ ನಮನ

ಅಯೋಧ್ಯೆಯಲ್ಲಿ ನಡೆದ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸುಸಂದರ್ಭದಲ್ಲಿ, ನಮ್ಮ ಊರಿನ ಎಲ್ಲಾ ದೇವಾಲಯಗಳಲ್ಲಿ ಶ್ರೀರಾಮನ ಭಾವಚಿತ್ರವನ್ನು ಇರಿಸಿ, ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಲಾಯಿತು.

 

ನಮ್ಮೂರಿನ ಗ್ರಾಮಸ್ಥರು ಒಟ್ಟಾಗಿ ಸೇರಿ, ದೇವಸ್ಥಾನಗಳಿಗೆ ವಿಶೇಷ ದೀಪಾಲಂಕಾರ, ಹೂವಿನಲಂಕಾರ ಹಾಗೂ ರಾಮಭಜನೆಯೊಂದಿಗೆ ಸಂಭ್ರಮಿಸಿದರು.

Untitled 4.png

ದಡಗ ಗ್ರಾಮದ ಇತಿಹಾಸ

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ದೇವಿಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ “ದಡಗ” ಗ್ರಾಮವು, ತಾಲ್ಲೂಕು ಕೇಂದ್ರವಾದ ನಾಗಮಂಗಲದಿಂದ ೩೦ ಕಿಮೀ ದೂರ ಮತ್ತು ಹಾಸನ ಬೆಂಗಳೂರು ಹೆದ್ದಾರಿಯಲ್ಲಿ ಬರುವ ಬೆಳ್ಳೂರು ಕ್ರಾಸಿನಿಂದ ೮ ಕಿಮೀ ದೂರದಲ್ಲಿದೆ.

ದಡಗಾ ಗ್ರಾಮದಲ್ಲಿ ಲಭ್ಯವಿರುವ ಶಾಸನಗಳ ಪ್ರಕಾರ ಗ್ರಾಮದ ಇತಿಹಾಸವು ಹೊಯ್ಸಳರ ಪ್ರಸಿದ್ಧ ರಾಜ ವಿಷ್ಣುವರ್ಧನ’ನ ಕಾಲಕ್ಕೆ ಕೊಂಡೊಯ್ಯುತ್ತದೆ. ದಡಗನ ಕೆರೆ ಕೋಡಿ ಬಳಿ ಇರುವ ‘ಕೋಡಿಹಳ್ಳಿ’ಯು ಹಿಂದೊಮ್ಮೆ ಅಗ್ರಹಾರವಾಗಿತ್ತು. ಈ ಕೆರೆಯ ಉತ್ತರ ಭಾಗದಲ್ಲಿ ದಡಗ ಗ್ರಾಮವಿದೆ.

ದಡಗ ಗ್ರಾಮದ ಹೆಸರು ಗಂಗರ ಅರಸನಾದ ‘ದಡಿಗ’ನ ನೆನಪನ್ನು ತರುವಂತಿದೆ. ದಡಗ ಗ್ರಾಮದ ಶ್ರೀ ಯೋಗಾನರಸಿಂಹ ಸ್ವಾಮಿ ಮತ್ತು ಕೋಡಿಹಳ್ಳಿಯ ದಡಿಗೇಶ್ವರ ದೇವಾಲಯಗಳು ಇಟ್ಟಿಗೆ ಗೋಡೆಯಿಂದ ಕಟ್ಟಲ್ಪಟ್ಟಿವೆ. ಹೊರ ನೋಟಕ್ಕೆ ಇವುಗಳ ರಚನೆ ಇತ್ತೀಚಿನದಂತೆ ಕಂಡುಬಂದರೂ ದೇವಾಲಯದ ಒಳಗಿನ ಕಂಬಗಳು, ಅವುಗಳ ನಡುವಿನ ದೊಡ್ಡ ಅಂಕಣದ ಚಾವಣಿಯಲ್ಲಿನ ಉಬ್ಬು ರೀತಿಯಲ್ಲಿ ಬಿಡಿಸಿರುವ ಅರಳಿದ ಪದ್ಮ ಮೊದಲಾದ ಕೆತ್ತನೆಗಳು ಗಂಗರ ಕಾಲದ ಪ್ರಾರಂಭಿಕ ಕಾಲ ಘಟ್ಟದ ರಚನೆಯನ್ನು ಹೋಲುತ್ತವೆ.

 

ಶ್ರೀ ಯೋಗಾನರಸಿಂಹ ದೇವಾಲಯ:

ಸುಮಾರು 11 ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯದ ಶ್ರೀ ಯೋಗಾನರಸಿಂಹನ ವಿಗ್ರಹವು ಅತ್ಯಂತ ಸುಂದರ ರೂಪದಲ್ಲಿದ್ದು, ಭಕ್ತಾದಿಗಳ ಕಣ್ಮನ ಸೆಳೆಯುತ್ತದೆ. ಈ ದೇವಾಲಯವು ಗರ್ಭಗುಡಿ, ಅಂತರಾಳ ಹಾಗೂ ನವರಂಗ ಹೊಂದಿದ್ದು, ಗರ್ಭಗುಡಿಯಲ್ಲಿ ಯೋಗಮುದ್ರಾ ಭಂಗಿಯಲ್ಲಿರುವ ಬೃಹತ್ ಯೋಗನರಸಿಂಹನ ವಿಗ್ರಹವಿದೆ. ಪ್ರಭಾವಳಿಯಲ್ಲಿ ಕೆತ್ತನೆಗಳು ಬಹುತೇಕ ನಿರ್ವಹಣೆಯಿಲ್ಲದೇ ಮಸುಕಾಗಿದೆ. ಶಿಲ್ಪದ ಮೇಲಿನ ಒಂದು ಕೈನಲ್ಲಿ ಚಕ್ರ ಮತ್ತು ಮತ್ತೊಂದರಲ್ಲಿ ಶಂಖವಿದ್ದರೆ ಉಳಿದ ಎರಡು ಕೈಗಳು ತೊಡೆಯ ಮೇಲೆ ಇದೆ. ಕೊಳಗದ ಮಾದರಿ ಕಿರೀಟ, ಕೊರಳ ಹಾರಗಳು ಮತ್ತು ಕಾಲಿನ ಕಡಗ ಗಮನ ಸೆಳೆಯುತ್ತದೆ. ನವರಂಗದಲ್ಲಿ ನಾಲ್ಕು ಕಂಭಗಳಿದ್ದು ಹೊಯ್ಸಳರ ಶೈಲಿಯಲ್ಲಿದೆ. ದೇವಾಲಯದ ಹೊರಭಾಗದಲ್ಲಿ ಚಿಕ್ಕದಾಗ ಪ್ರವೇಶ ಮಂಟಪವಿದೆ.

 

ದಡಗದ ಶಾಸನಗಳು:

ಮಂಡ್ಯ ಜಿಲ್ಲೆ ಶಾಸನ ಸಂಪುಟ ೭ ರಲ್ಲಿ ಉಲ್ಲೇಖವಾಗಿರುವ ಶಾಸನಗಳು (ಸಂಖ್ಯೆ ೬೫, ೬೬, ೬೮, ೭೦) ಗ್ರಾಮದ ಐತಿಹಾಸಿಕ ಮಹತ್ವವನ್ನು ಸಾರುತ್ತಿವೆ.

ಈ ಶಾಸನಗಳಲ್ಲಿ ಗ್ರಾಮದ ‘ಪಂಚ ಕೂಟ ಬಸದಿ' (ಶಾಸನ ಸಂಖೆ ೬೮) ಹೊಯ್ಸಳ ದೊರೆ ವಿಷ್ಣುವರ್ಧನನ ಮಹಾಪ್ರಧಾನ ಮರಿಯನೆ ದಂಡನಾಯಕ ಭರ್ತಿಮಯ್ಯ ಇವರು, ಮಣಿಭದ್ರ ಸಿದ್ಧಾಂತದೇವರ ಶಿಷ್ಯರಾದ ಮೇಘಚಂದ್ರ ಸಿದ್ದಾಂತ ದೇವ ಇವರ ಮಾರ್ಗದರ್ಶನದಲ್ಲಿ ಈ ಬಸದಿಯನ್ನು ನಿರ್ಮಿಸಿದ ಮತ್ತು ನಿರ್ವಹಣೆ ಸಲುವಾಗಿ ನೀಡಿದ ದಾನಗಳ ವಿವರವಿದೆ.

ಈ ಗ್ರಾಮದ ಮತ್ತೊಂದು ಐತಿಹಾಸಿಕ ದೇವಾಲಯ ‘ಚನ್ನಕೇಶವ ದೇವಾಲಯ’. ಈ ದೇವಾಲಯದ ಉತ್ತರ ದಿಕ್ಕಿನ ತೊಲೆಯ ಮೇಲೆ (ಶಾಸನ ಸಂಖ್ಯೆ ೬೬) ಶ್ರೀ ಲಕ್ಷ್ಮೀ ದೇವಾಲಯ ನಿರ್ಮಾಣ ವಿವರಗಳ (ಶ್ರೀ ಕಾಳಉಕ್ತಿ ನಾಮ ಸಂವತ್ಸರ, ಅಶ್ವಯುಜ ಮಾಸ) ಸೂಚನೆ ಸಿಗುತ್ತದೆ.

ಇದೇ ಕೇಶವ ದೇವಾಲಯದ ಪಶ್ಚಿಮ ದಿಕ್ಕಿನ ತೊಲೆಯ ಮೇಲಿನ ಶಾಸನ (ಸಂಖ್ಯೆ ೬೭)ದಲ್ಲಿ ಊರಿನ ಸಮಸ್ತ ಮಹಾಜನರ ಸಮ್ಮುಖದಲ್ಲಿ ಈ ದೇವಾಲಯಕ್ಕೆ ಸೇರಿದ ಒಂದು ಮನೆ ಮತ್ತು ಕೆಲವು ಭೂಭಾಗಗಳನ್ನು ೫ ಪಣಗಳಿಗೆ ಮಾರಾಟ ಮಾಡಿ ಬಂದ ಹಣದಲ್ಲಿ ಮಾದೇವ (ಈಶ್ವರ) ದೇವಾಲಯದ ವಿಮಾನ ಗೋಪುರ ನಿರ್ಮಾಣ ಮಾಡಿದ ಉಲ್ಲೇಖವಿದೆ. ಈ ಶಾಸನ ೧೩ರಿಂದ ೧೪ನೇ ಶತಮಾನಕ್ಕೆ ಸಂಬಂಧಿಸಿದ್ದಾಗಿದೆ. ಶಾಸನ ಲಿಪಿಕಾರ ‘ಕಲಿದೇವ’ನ ಮಗನಾದ ‘ಲಚ್ಚಣ್ಣ’ ಎಂಬ ದಾಖಲೆ ಇದೆ.

ಇದೇ ದೇವಾಲಯದ ನವರಂಗ ಮಂಟಪದ ನಾಲ್ಕನೇ ಅಂಕಣದ ತೊಲೆಯ ಮೇಲೆ ಕ್ರಿ.ಶ. ೧೪೦೦ರ ಶಾಸನ ಪಟ್ಟಂಗಿ ವೀರಪಿಳ್ಳನ ಪತ್ನಿ ತನಗೆ ದೇವಾಲಯ ನೀಡಿದ್ದ ಜಮೀನನ್ನು ಮಾರಿ ಬಂದ ಹಣದಿಂದ ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ಕಲ್ಲಿನ ಮಂಟಪ ನಿರ್ಮಿಸಿದ ಉಲ್ಲೇಖವಿದೆ.

ಒಟ್ಟಿನಲ್ಲಿ ಈ ಗ್ರಾಮವು ಶೈವ, ವೈಷ್ಣವ ಮತ್ತು ಜೈನ ಸಮುದಾಯಗಳ ಸಮನ್ವಯ ಸಾರುವ ಐತಿಹಾಸಿಕ ಗ್ರಾಮ ಎಂಬುದನ್ನು ಶಾಸನಗಳು ಸಾರುತ್ತಿವೆ.

ಶ್ರೀ ಯೋಗಾನರಸಿಂಹ ದೇವಾಲಯದ ಗರ್ಭಗುಡಿ ಸೇರಿದಂತೆ ಬಹುತೇಕ ದೇವಾಲಯದ ಎಲ್ಲಾ ಭಾಗಗಳು ವಿನಾಶದತ್ತ ಸಾಗಿದ್ದು ಈ ಸುಂದರ ನರಸಿಂಹನ ಶಿಲ್ಪವನ್ನು ಉಳಿಸಕೊಳ್ಳಬೇಕಾಗಿದೆ. ಇಂಥ ಐತಿಹಾಸಿಕ ದೇವಾಲಯಗಳ, ಅದರಲ್ಲೂ ಸರ್ಕಾರದಿಂದಾಗಲೀ, ಸಾರ್ವಜನಿಕರಿಂದಾಗಲೀ ಸರಿಯಾದ ರೀತಿ ಸಂರಕ್ಷಣೆ ಆಗದೇ ಶಿಥಿಲಾವಸ್ಥೆ ತಲುಪಿರುವ ದೇವಾಲಯಗಳನ್ನು ಸರ್ಕಾರ, ದಾನಿಗಳು, ಭಗವಂತನ ಭಕ್ತರ ಸಹಕಾರದಿಂದ ಸಂರಕ್ಷಿಸಬೇಕು. ಮುಂದಿನ ಜನಾಂಗಕ್ಕೆ ಕೊಡುಗೆ ನೀಡುವ ಪ್ರಯತ್ನ ನಿರಂತರವಾಗಿ ನಡೆಯಬೇಕು.

 

More at:

https://www.facebook.com/share/p/iQ3yXdktZPYQJuGB/

Untitled 4.png

ತಲಪಾಡಿಯ ಗುತ್ತಿನ ಮನೆ

ತಲಪಾಡಿ ಕೇರಳ-ಕರ್ನಾಟಕ ಗಡಿಪ್ರದೇಶ. ಇದು ಸುಮಾರು ೬೦೦ ಎಕರೆ ಜಾಗದಲ್ಲಿ ಸಾವಿರಕ್ಕೂ ಮಿಕ್ಕಿ ಮನೆಗಳಿರುವ ವಸತಿ ಪ್ರದೇಶ. ಇದರ ಹಿಂದೆ ಉಳ್ಳಾಲ ರಾಣಿ ಅಬ್ಬಕ್ಕನಿಗೆ ಸಂಬಂಧಿಸಿದ ಒಂದು ಕಥೆಯಿದೆ.

 

ಪೋರ್ಚುಗೀಸರ ಆಕ್ರಮಣವಾದಾಗ ಅಬ್ಬಕ್ಕ ರಾಣಿಯ ಮೇಲೆ ಗುಂಡು ತಾಗಿ ಆಕೆಯ ಚಿಕಿತ್ಸೆ ಹಾಗೂ ಸುರಕ್ಷಿತತೆಗೋಸ್ಕರ ಆಕೆಯನ್ನು ಇಲ್ಲಿ ಒಂದು ಮುಳಿ ಹುಲ್ಲಿನ ಮನೆಯಲ್ಲಿ ಇರಿಸಿದ್ದರಂತೆ. ಅದು ಈ ಗುತ್ತಿನ ಮನೆಯ ಯಜಮಾನರ ಒಂದು ಒಕ್ಕಲು ಮನೆಯಾಗಿತ್ತು. ಅಲ್ಲಿಗೂ ಪೋರ್ಚುಗೀಸರು ದಾಳಿ ಮಾಡಿದರು. ಆಗ ಆಕೆಯನ್ನು ಎಲ್ಲರೂ ಸೇರಿ ಗುಟ್ಟಾಗಿ ಎಲ್ಲಿಗೋ ಸಾಗಿಸಿ ಕಾಪಾಡಿದರಂತೆ. ( ಆ ಮನೆಯವರು ತಲಪಾಡಿಗೆ ಹೇಗೆ ಬಂದರು ಅನ್ನುವುದರ ಹಿಂದೆ ಕೂಡಾ ಒಂದು ಕಥೆ ಇದೆ.)ರಾಣಿಯು ಸುಪ್ರೀತಳಾಗಿ ಅವರಿಗೆ ಸುತ್ತುಮುತ್ತಲಿನ ೬೦೦ ಎಕರೆ ಜಾಗವನ್ನು ಉಂಬಳಿಯಾಗಿ ಕೊಟ್ಟಳಂತೆ. ಅನಂತರ ಅಲ್ಲಿ ಒಂದು ಗುತ್ತಿನ ಮನೆ ನಿರ್ಮಾಣ ಮಾಡಲಾಯಿತಂತೆ. ಒಂದು ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆ ಕಟ್ಟಿರುವಂತಹ ಆ ಮನೆಯನ್ನು ಇಲ್ಲಿನವರು 'ದೊಡ್ಡ ಮನೆ' ಎಂದು ಕರೆಯುತ್ತಾರೆ. ಈ ಮನೆತನಕ್ಕೆ ಶಿರ್ವ ನಡುಬೊಟ್ಟು ಮನೆತನ, ಕಿನ್ನಿಗೋಳಿಯ ತಾಳಿಪ್ಪಾಡಿ ಗುತ್ತಿಗೆ ಹತ್ತಿರದ ಸಂಬಂಧವಿದೆಯಂತೆ. ಈ ಮನೆಯಲ್ಲಿ ೧೯೨೦ರಲ್ಲಿ ಹನ್ನೊಂದು ಜೋಡಿ ವಿವಾಹಗಳು ನಡೆದಿದ್ದವಂತೆ. ಬಿಲ್ವ ವೃಕ್ಷದ ಸುತ್ತಲೂ ಜೋಡಿಗಳು ನಿಂತಿದ್ದವಂತೆ. . ೧೯೯೩ರಲ್ಲಿ ನಾಗಮಂಡಲ ನಡೆದಿತ್ತಂತೆ. . (ಒಟ್ಟಿನಲ್ಲಿ ಆ ಮನೆಯದ್ದು ತುಂಬಾ ದೀರ್ಘವಾದ ಕಥೆ).ನನಗೆ ಈ ಕಥೆಯನ್ನು ಹೇಳಿದವರು ಶ್ರೀ ರಾಮನಾಥ ಶೆಟ್ಟರು ಮತ್ತು ಅವರ ಪತ್ನಿ ಕಸ್ತೂರಿಯವರು. ರಾಮನಾಥ ಶೆಟ್ಟರು ಅಜ್ಜನ ಹೆಸರು ತಿಮ್ಮಪ್ಪ ನಾಯಕ ಎಂದಾಗಿತ್ತು.

 

ಹೆಬ್ಬಾಗಿಲು ಮತ್ತು'ಉಳಾಯಿ ಜಾಲ್' (ಒಳಗಿನ ಅಂಗಳ), ಅಲ್ಲೊಂದು ಎತ್ತರಕ್ಕೆ ಕೊಂಬೆಗಳನ್ನು ಚಾಚಿರುವ ಅತ್ಯಪೂರ್ವ ಬಿಲ್ವ ವೃಕ್ಷ, ಕೆತ್ತನೆಯ ಕಂಬಗಳಿರುವ ಚಾವಡಿ, ತೆಂಕು ಬದಿಯ ಗೋಡೆಯ ಬಳಿ ಧೂಮಾವತಿ ದೈವದ ಮತ್ತು ಬಡಗು ಬದಿಯಲ್ಲಿ ಅರಸು ದೈವದ ಸುಂದರ ಕೆತ್ತನೆಗಳಿರುವ ಉಯ್ಯಾಲೆಗಳು, ಮೇಲೆ ಸೂಕ್ಷ್ಮ ಕುಸುರಿ ಕೆಲಸಗಳಿರುವ ಚೆಂದದ ವಿನ್ಯಾಸದ ಛಾವಣಿಗಳು, ಅಂಗಳದ ಸುತ್ತಲೂ ನಾಲ್ಕೂ ಬದಿಯಲ್ಲಿ ಜಗಲಿಗಳು ಮತ್ತು ವಾಸ್ತವ್ಯದ ಕೋಣೆಗಳು, ಮರದ ಹಲಗೆಗಳನ್ನು ಜೋಡಿಸಿ ಮಾಡಿದ ಮಾಳಿಗೆ- ಹೀಗೆ ಒಟ್ಟು ಮನೆಯನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಇಲ್ಲಿ ಈಗ ಆ ಮನೆತನಕ್ಕೆ ಸೇರಿದವರ ಕುಟುಂಬಗಳು ಒಂದೊಂದು ಬದಿಯಲ್ಲಿ ವಾಸ ಮಾಡುತ್ತಾರೆ. ಸಂಜೆಯ ಹೊತ್ತು ದೀಪ ಹಚ್ಚುತ್ತಾರೆ. ಹಾಡುಗಳನ್ನು ಹಾಡಿ ಭಜನೆ ಮಾಡುತ್ತಾರೆ. ನಾನು ನನ್ನ ಸರಸ್ವತಿ ಅಕ್ಕ ಮತ್ತು ಗೌರಿಯಕ್ಕ ಅವರೊಂದಿಗೆ ಇವತ್ತು ಆ ಮನೆಯನ್ನು ನೋಡಲು ಹೋಗಿದ್ದು ರೋಮಾಂಚನಗೊಳಿಸಿದ ಒಂದು ಅಪೂರ್ವ ಅನುಭವ. ಅದರ ಒಂದೆರಡು ವೀಡಿಯೋ ತುಣುಕುಗಳು ಇಲ್ಲಿವೆ. ಈ ಮನೆಗೆ ಸಂಬಂಧ ಪಟ್ಟ ಪಾವೂರು ಗುತ್ತು ಮನೆ ಮತ್ತು ಬಾಗಿಲು ಗುತ್ತು ಮನೆಗಳು ಇನ್ನೂ ತುಂಬಾ ಚೆನ್ನಾಗಿವೆ ಅನ್ನುವುದನ್ನು ಫೋಟೋದಲ್ಲಿ ನೋಡಿದೆ. ಆ ಫೋಟೋಗಳನ್ನು ಕೂಡಾ ಸೇರಿಸಿದ್ದೇನೆ.

Untitled 4.png

ತಾಳಿಕೋಟೆಯ ಅಮರ ಚೇತನ ರಾಚಯ್ಯ ಉಳ್ಳೆಪ್ಪನಮಠ ಭಾಗ 1

ತಾಯಿ ಭಾರತ ಮಾತೆಯ ದಾಸ್ಯ ಸಂಕೋಲೆಯನ್ನು ಕಲಿಚಲು. ದೇಶದ ಮೂಲೆ ಮೂಲೆಯಿಂದ ಬ್ರಿಟಿಷರನ್ನು ವದ್ದು ಹೊಡಿಸಲು ಮಹಾನ ದೇಶ ಭಕ್ತರು ಸ್ವತಂತ್ರಕ್ಕಾಗಿ ದುಮಕಿದ್ದುರು.ಅವಾಗ ನಮ್ಮೂರಿನ ಸ್ವತಂತ್ರಕ್ಕಾಗಿ ಮಹಾನ ದೇಶ ಭಕ್ತರಾದ ರಾಚಯ್ಯ ಉಳ್ಳೆಪ್ಪನಮಠ. ರಾಮಸಿಂಗ ಕೇಸರಸಿಂಗ ಹಜೇರಿ . ಗುರುನಾಥ ಪುಕಾಳೆ. ಶ್ರೀಶೈಲಪ್ಪ ಚನ್ನಪ್ಪ ಮಸಳಿ. ತಮ್ಮಾಜಿ ಮಿರಜಕರ. ಶಿವಲಿಂಗಪ್ಪ ಮ ಸಾಲಂಕಿ. ಗುಂಡಪ್ಪಗೌಡ ದ್ಯಾಪುರ. ಸಿದ್ದಪ್ಪ ಸಜ್ಜನ ಮಾಸ್ತರ. ಇವರೆಲ್ಲ ನಮ್ಮ ತಾಳಿಕೋಟೆಯ ಸ್ವತಂತ್ರಕ್ಕಾಗಿ ಹೋರಾಡಿದ ಮಹಾನ ದೇಶ ಭಕ್ತರು.

 

ತ್ಯಾಗ. ಸಹನೆಯ ಸಹಕಾರ ಮೂರ್ತಿ: ರಾಚಯ್ಯ ಉಳ್ಳೆಪ್ಪನಮಠ

 

ಐತಿಹಾಸಿಕ ಪಟ್ಟಣ ತಾಳಿಕೋಟಿ ಜಂಗಮ ಮೂರ್ತಿಗಳ ಮನಿತದ ತಂದೆ ಬಸಯ್ಯ ತಾಯಿ ಬಸಮ್ಮ ಅವರ ಗರ್ಭದಲ್ಲಿ ದೇಶ ಭಕ್ತ ರಾಚಯ್ಯ ಉಳ್ಳೆಪ್ಪನಮಠ ದಿನಾಂಕ 15-09-1907 ರಲ್ಲಿ ಜನಸಿದರು.

 

ತಾಳಿಕೋಟಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿಕೊಂಡು. "ಕಾಯಕವೇ ಕೈಲಾಸ "ಎಂಬ ತತ್ವದ ಅಡಿಯಲ್ಲಿ ರಾಚಯ್ಯನವರು ತಾಳಿಕೋಟಿಯ ಅಂಗಡಿಯೊಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುವಾಗ." ಕನ್ನಡ ದಿನ ಪತ್ರಿಕೆ "ಓದಿ ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಬೇಕು. ಸುಮಾರು 31 ವರ್ಷದಲ್ಲಿ ದೇಶಕ್ಕೆ ಸ್ವತಂತ್ರ ತರಬೇಕೆನ್ನುವ ಅಸೆ ಚಿಗರ ಓಡದ್ದಿತ್ತು.ಅವಾಗ 1932 ರಲ್ಲಿ ವಿಜಾಪುರಕ್ಕೆ ಹೋಗಿ ಕಾಂಗ್ರೆಸ ಸಮಿತಿ ಸೇರಿದರು. ಕಾರ್ಯಕರ್ತರಾದ ದೀಕ್ಷಿತರು ರಾಚಯ್ಯನವರಿಗೆ ಒಂದು ಸಲಹೆ ನೀಡುತ್ತಾರೆ. ನೀವು ಬೇರೆ ಹೆಸರು ಹಿಟ್ಟುಕೊಂಡು ಆಂದೋಲನಕ್ಕೆ ದುಮಕಿ.ಇಲ್ಲ ಅಂದರೆ ನಿಮಗೆ ಬ್ರಿಟಿಷರು ನಿಮ್ಮ ಮನಿತನಕ್ಕೆ ತ್ರಾಸುನೀಡುತ್ತಾರೆ.

ಅಂತ ಸಲಹೆ ನೀಡುತ್ತಾರೆ.ಅವಾಗ ಅವರ ಹೆಸರು ಬಡಾವಣೆ ಆಗುತ್ತೆ ಆಗ.ಧಾರವಾಡ ಜೆಲ್ಲೆ. ಕರಜಗಿ ತಾಲೂಕು. ಸಾ-ದೇವಕೊಪ್ಪ. ಬಸಯ್ಯ ಸಂಗಯ್ಯ ಮಠ ಆಗಿ ಬದಲಾವಣೆಗೊಂಡು ಸತ್ಯಾಗ್ರಹಕ್ಕೆ ಧೂಮಿಕಿದರು.

 

1932 ರಲ್ಲಿ ವಿಜಾಪುರದ ಕಬ್ರಾಜಿ ಬಜಾರದಲ್ಲಿ ವಾಕ್ ಸ್ವಾತಂತ್ರ್ಯ ಘೋಷಣೆಯ ಸತ್ಯಾಗ್ರಹ ಮಾಡಿದರು. ಆದರ ಅಡಿಯಲ್ಲಿ ಇವರನ್ನು ಪೊಲೀಸರು 2 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ. 150 ರೂಪಾಯಿ ದಂಡ ವಿಧಿಸಿತು.ವಿಜಾಪುರ ಜೈಲಿನಲ್ಲಿ ಕಾಲ ಕಳೆಯಬೇಕಾಯತು ರಾಚಯ್ಯನವರು 150 ರೂಪಾಯಿ ದಂಡ ಕಟ್ಟದ ಕಾರಣ.ಮತ್ತೆ 7 ತಿಂಗಳ 15 ದಿವಸ ಕಾಲ ಅಹಮ್ಮದ ನಗರ ಜಿಲ್ಲಾ ಟೆಂಪರವರಿ ಇಸಾಪುರ ಜೈಲಿಗೆ.

ಅಲ್ಲಿ ದಿನವಿಡಿ 60 ಪೌಂಡ ಜೋಳ ಬಿಸುವಾಗ ಒಂದು ಬೆರಳು ಒಡೆದು ರಕ್ತ ಬರುತ್ತಿತ್ತು ಅಷ್ಟಾದರು ಅವರಲ್ಲಿ. ದೇಶ ಪ್ರೇಮ ಉಸ್ತಾಹ ಬತ್ತರಲಿಲ್ಲ ಸಂಪೂರ್ಣ ಶಿಕ್ಷೆ ಮುಗಿಸಿಕೊಂಡು 1935 ರಲ್ಲಿ ತಾಳಿಕೋಟಿಗೆ ಬಂದರು.

 

ಮುಂಬೈನ ಮಂತ್ರಿಗಳಾದ ಜಮಾನದಸ ಮೆಹತಾ ತಾಳಿಕೋಟಿಗೆ ಬಂದ ಸಂದರ್ಭದಲ್ಲಿ ರಾಚಯ್ಯನವರು ಮೆಹತಾ ಅವರಿಗೆ "ದೇಶದ್ರೋಹಿ ಜಮಾನದಾಸ ಮೇಹತಾ "ಎಂದು ಅವರ ಎದುರೆ ಘೋಷಣೆ ಕೂಗುತಾ ಅವರ ಭಾಷಣ ಮಾಡದಂತೆ ಅಡಚಣೆ ಮಾಡಿ. ಕಪ್ಪು ನಿಶಾನೆ ತೋರಿಸಿ ಪ್ರತಿಭಣೆ ಮಾಡಿದರು.

 

ಊರಿನ ಗೌಡರಾದ ಶಿವಪ್ಪ ಪಾಟೀಲ ಇವರನ್ನು ಹೊಡೆದು ಅವಾಚ್ಯ ಶಬ್ದಗಳಿಂದ ಬೈದರು ಕೈಯಲ್ಲಿದ್ದ 2 ನಿಶಾನೆಗಳನ್ನು ಕಸೆದುಕೊಂಡರು. ಆಗ ಮೇಹತಾ ಅವರು ರಾಚಯ್ಯನವರ ಮೇಲೆ ಕರುಣೆ ತೋರಿ "ಹಾತ ಮತ ಲಗಾವೋ ಇಸಕೂ"ಅಂತ ಹೇಳಿದರು. ಆದರೂ ಪೊಲೀಸರು ಬಂಧಿಸಿ ಸಾಯಂಕಾಲ ಹೊತ್ತಿಗೆ ಬಿಟ್ಟರು 23-01-1941 ರಲ್ಲಿ ಮುದ್ದೇಬಿಹಾಳದ ಕೊನೆಯ ಹಳ್ಳಿಯಾದ ಬಿ ಸಾಲವಾಡಗಿ ಗ್ರಾಮದಲ್ಲಿ ಬ್ರಿಟಿಷರು ಸರಕಾರಕ್ಕೆ ಜನರು ಧನ ಸಹಾಯ ಮಾಡಬಾರದು ಎಂದು ವ್ಯಾಯಾಕ್ಕಿಕ ಸತ್ಯಾಗ್ರಹ ಮಾಡಿದರು. ಆದರ ಪರಿಣಾಮವಾಗಿ 6 ತಿಂಗಳು ಜೈಲು ಶಿಕ್ಷೆಯನ್ನು ವಿಜಯಪುರ ಇಸಪುರ ಜೈಲಿನಲ್ಲಿ ಕಳೆಯಬೇಕಾಯಿತು . ರಾಚಯ್ಯನವರೊಂದಿಗೆ ತಮ್ಮಾಜಿ ಮಿರಜಕರ. ಸೋಮಲಿಂಗಪ್ಪ ಡ್ಯಾಪುರ. ಭೀಮರವ ಗೋಗಿ. ಶ್ರೀಶೈಲಪ್ಪ ಮಸಳಿ.ಗುರುನಾಥ ಪುಕಳೆ. ರಾಮಸಿಂಗ ಹಾಜೇರಿ. ಶಿವಲಿಂಪ್ಪ ಸಾಲಂಕಿ. ಮುಂತಾದವರು ವೈಯಕ್ತಿಕ ಸತ್ಯಾಗ್ರದಲ್ಲಿ ಭಾಗವಹಿಸಿದರು.

 

ಮುಂದುವರೆವುದು......

Untitled 4.png

ಜ್ಞಾನ ಗಂಗೋತ್ರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

ರಾಜೇಂದ್ರ ನಗರದಲ್ಲಿರುವ ಜ್ಞಾನ ಗಂಗೋತ್ರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿ ಗೋವಿತ್ ಕಿರಣ್ ಮಾತನಾಡುತ್ತಾ ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ, ಕನ್ನಡ ಮೊದಲುಗಳು ಹಾಗೂ ವಿಶ್ವಕ್ಕೆ ನಾಡು ನೀಡಿದ ಕೊಡುಗೆಗಳ ಕುರಿತು ಮೆಲಕು ಹಾಕಿದರು.

ಈ ಸಂದರ್ಭದಲ್ಲಿ ಶಾಲೆಯು ಮುಖ್ಯೋಪಾಧ್ಯಾಯರಾದ ಶ್ರೀ ಸಚ್ಚಿದಾನಂದ, ಚಂದನ್ , ರವಿಕುಮಾರ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Untitled 4.png

ಊರಿನ ಹಿರಿಯರಿಂದ ರಾಮಾಯಣದ ಪಾತ್ರಗಳ ಪ್ರದರ್ಶನ

ಗಣರಾಜ್ಯೋತ್ಸವ ದಿನದಂದು ಊರಿನ ಹಿರಿಯರಿಂದ ರಾಮಾಯಣದ ಪಾತ್ರಗಳ ಪ್ರದರ್ಶನ.

Untitled 4.png

Dasarat Rameshwar trample

Lord Rama installed a Shiva Linga here.

Dasaratha Rameshwara is located in the midst of the serene forest of Hosadurga Taluk in Chitradurga District. This is a popular religious centre, which finds mention in Ramayana. In the epic it is mentioned that Saint Shravana was killed with an arrow by Maharaja Dasharatha at this site. As a sign of regret, King Dasharatha along with his son Lord Rama installed a Shiva Linga here.

It's located in very beautiful place studded with lots of greeneries. Very powerful spiritual place. You actually feel the positive vibes.

Untitled 4.png

ಗಣೇಶ ಹಬ್ಬದ ಸಂಭ್ರಮ & ಜಾತ್ರೆ..

ಗಣೇಶ ಹಬ್ಬದ ದಿನ.

Untitled 4.png

Gogarbhagiri aashram

Gogarbhagiri aashram at Chimannagaarapalli

Untitled 4.png

ಶ್ರೀ ರಾಮೋತ್ಸವ ಆಚರಣೆ

ನಮ್ಮೂರಿನಲ್ಲಿ ಪ್ರಭು ಶ್ರೀರಾಮನ ಪ್ರತಿಮೆಯನ್ನು ಪ್ರತಿ ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಕ್ರಾಯಕ್ರಮವನ್ನು ನಡೆಸಲಾಯಿತು. ಊರಿನ ಎಲ್ಲ ಯುವಕರು ಶುಭ್ರವಾದ ಬಿಳಿ ಬಟ್ಟೆ, ಪಂಚೆ, ಕೇಸರಿ ಶಾಲು ಧರಿಸಿ ಪಾಲ್ಗೊಂಡರು.

ಜೈ ಶ್ರೀರಾಮ್.

Untitled 4.png

ಪ್ರಭುದೇವರ ಮಠ – ಮಳೆಗೂ ಹರಿಚಂದ್ರ ಪುರಾಣಕ್ಕೂ ನಂಟು ಉಂಟು.

ಇದು ಊರ ಮಧ್ಯೆ ಇರುವ ಪ್ರಭುದೇವರ ಮಠ. ಒಂದು ಪಾರ್ಶ್ವದಲ್ಲಿ ರೇಣುಕಾಚಾರ್ಯರು ಹಾಗೂ ಮತ್ತೊಂದರಲ್ಲಿ ಅಲ್ಲಮಪ್ರಭು ದೇವರ ಚಿತ್ರಗಳನ್ನು ಬಿಡಿಸಲಾಗಿದೆ. ಈ ಮಠದ ಉಸ್ತುವಾರಿಯನ್ನು ಇಲ್ಲಿನ ಲಿಂಗಾಯಿತ ಸಮುದಾಯದವರು ನೋಡಿಕೊಳ್ಳುತ್ತಿದ್ದಾರೆ. ಈ ಊರಿನಲ್ಲಿ ಮಳೆ ಬಾರದೆ ಜನರಿಗೆ ತೊಂದರೆ ಉಂಟಾದಾಗ ಈ ಪ್ರಭುದೇವರ ಮಠದಲ್ಲಿ ಸಾಯಂಕಾಲದ ನಂತರ ಹರಿಶ್ಚಂದ್ರ ಪುರಾಣವನ್ನು ಓದಿಸುತ್ತಾರೆ. ನಂತರ ಮಳೆ ಬಂದೇ ಬರುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

Untitled 4.png

ಹೊಯ್ಸಳ ಕಾಲದ ಅಮೂಲ್ಯ ನಿಧಿ, ಕೇಶವೇಶ್ವರ ದೇವಾಲಯ - ಭಾಗ-1

ಹೆಸರೇ ಹೇಳುವಂತೆ ಬೆಳಗುಲಿಯೆಂಬುದು ಒಂದು ಕಾಲಕ್ಕೆ ಅಗ್ರಹಾರವಾಗಿ ಅಭಿವೃದ್ಧಿ ಹೊಂದಿದ ಸ್ಥಳ. ಎರಡನೇ ಹೊಯ್ಸಳ ಬಲ್ಲಾಳನ ಕಾಲದಲ್ಲಿ, ಎಂದರೆ ಶಾಲಿವಾಹನ ಶಕೆ 1210ರಲ್ಲಿ, ಆತನ ದಂಡನಾಯಕ ಕೇಶವ ಅಥವಾ ಕೇಶಿರಾಜನು ಇದನ್ನು ಸ್ಥಾಪಿಸಿ ಅಲ್ಲಿ ಕೇಶವೇಶ್ವರ ದೇವಾಲಯವನ್ನು ನಿರ್ಮಿಸಿದನು. ಈ ದೇವಾಲಯವು ಇಂದು ಬೆಟ್ಟೇಶ್ವರವೆಂದು ಪ್ರಸಿದ್ಧವಾಗಿದೆ. ದೇವಾಲಯಕ್ಕೆ ಸಂಬಂಧಿಸಿದಂತೆ ಲಕ್ಷ್ಮೀಸಮುದ್ರ ಮತ್ತು ಕೇಶವಸಮುದ್ರ ಎಂಬ ಹೆಸರಿನ ಎರಡು ದೊಡ್ಡ ಕೆರೆಗಳನ್ನು ನಿರ್ಮಿಸಲಾಗಿದೆ.

 

ಈ ದೇವಾಲಯದ ಮುಖ್ಯ ವಿಶೇಷತೆಯೆಂದರೆ ಒಂದೇ ದೇವಾಲಯದಲ್ಲಿ ಸುಂದರವಾದ ಶಿವ ಮತ್ತು ವಿಷ್ಣುವಿನ (ಕೇಶವ) ಗರ್ಭಗುಡಿಗಳನ್ನು ಹೊಂದಿರುವುದು ಶೈವ ಮತ್ತು ವೈಷ್ಣವ ಸಮನ್ವಯದ ಸಂಕೇತವಾಗಿದೆ.

 

ಇದೊಂದು ದ್ವಿಕೂಟ ದೇವಾಲಯವಾಗಿದ್ದು ಕೇಶವನ ಗರ್ಭಗುಡಿಯು ದಕ್ಷಿಣಾಭಿಮುಖವಾಗಿದೆ ಹಾಗೂ ಶಿವನ ದೇವಾಲಯವು ಪೂರ್ವಾಭಿಮುಖವಾಗಿದೆ. ಇವೆರಡನ್ನೂ ಸೇರಿಸಿದಂತಿರುವ ಮಂಟಪವು ವಿಶಾಲವಾಗಿದ್ದು ಅನೇಕ ತಿರುಗಣಿ ಕಂಬಗಳನ್ನು ಹೊಂದಿದೆ. ಅವು ಒಂದನ್ನೊಂದು ಹೋಲುವಂತಿಲ್ಲದಿರುವುದು ವಿಶೇಷ.

 

ಸಾಧಾರಣವಾಗಿ ಹೊಯ್ಸಳ ದೇವಾಲಯಗಳು ಜಗುಲಿಯ ಮೇಲೆ ನಿರ್ಮಾಣವಾಗಿರುತ್ತದೆ. ಆದರೆ ಈ ದೇವಾಲಯದ ತಳಪಾಯವು ನೇರವಾಗಿ ನೆಲದಿಂದಲೇ ಆರಂಭವಾಗಿದೆ. ನವರಂಗಕ್ಕೆ ಎರಡು ಪ್ರವೇಶದ್ವಾರಗಳಿವೆ. ಪಶ್ಚಿಮದ ಗರ್ಭಗೃಹವು ಚೌಕಾಕೃತಿಯದಾಗಿದೆ. ಬೆಟ್ಟೇಶ್ವರ ದ್ವಾರದಲ್ಲಿರುವ ದ್ವಾರಪಾಲಕರನ್ನು ಹೆಚ್ಚಾಗಿ ಅಲಂಕರಿಸಲಾಗಿಲ್ಲ. ಚತುರ್ಬಾಹುಗಳ ಕೇಶವನ ವಿಗ್ರಹವು ಆರೂವರೆ ಅಡಿ ಎತ್ತರವಾಗಿದ್ದು, ಸುಸ್ಥಿತಿಯಲ್ಲಿದೆ.

 

ದೇವಾಲಯದ ಕಂಬಗಳ ಕೆತ್ತನೆ ಮತ್ತು ಗಮನ ಸೆಳೆಯುತ್ತದೆ. ನವರಂಗದ ಮೇಲ್ಭಾಗದಲ್ಲಿನ ಅಷ್ಟದಿಕ್ಪಾಲಕರ ಕೆತ್ತನೆ ಅಂದಿನ ಕಾಲದ ಶಿಲ್ಪಿಗಳ ಕಲಾ ನೈಪುಣ್ಯತೆ ಬೆರಗುಂಟುಮಾಡುತ್ತದೆ.

ದೇವಾಲಯದ ಒಳ ಭಾಗದಲ್ಲಿ ಸರಸ್ವತಿ, ಬೃಹತ್ ಗಣೇಶ, ಸಪ್ತ ಮಾತೃಕೆಯರು, ಷಣ್ಮುಖ, ಕಾಳಿಯ ವಿಗ್ರಹಗಳ ಕತ್ತನೆ ಗಮನ ಸೆಳೆಯುವಂತಿದೆ ಹಾಗೂ ಸುಸ್ಥಿತಿಯಲ್ಲಿರುವುದು ಸಂತಸದ ಸಂಗತಿ. ಅಲ್ಲದೆ ಸರಸ್ವತಿಯ ಕೈಯಲ್ಲಿನ ಜಪ ಮಾಲೆ ಕೆತ್ತನೆ ಅದ್ಭುತವಾಗಿದೆ. ಕಾಳಿ ವಿಗ್ರಹವು ಆ ಕಾಲದಲ್ಲಿ ಈ ಭಾಗದಲ್ಲಿ ಶಕ್ತಿಯ ಆರಾಧನೆ ಅಸ್ತಿತ್ವದಲ್ಲಿದ್ದುದನ್ನು ಸ್ಪಷ್ಟೀಕರಿಸುತ್ತದೆ.

ದೇವಾಲಯದ ಮುಂದಿನ ವಿಶಾಲವಾದ ಜಗಲಿಯ ಕಟ್ಟೆಗಳು - ಅಂದಿನ ದಿನಗಳಲ್ಲಿ ದೇವಾಲಯದಲ್ಲಿ ವೈಭವಯುತವಾಗಿ ನಡೆಯುತ್ತಿದ್ದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೀಕ್ಷಿಸಲು ಬರುವವರಿಗೆ ನಿರ್ಮಿಸಿರುವ ಆಸನ ವ್ಯವಸ್ಥೆಯು ಆಗಿರಬಹುದಾಗಿದೆ ಎಂದು ಊಹಿಸಬಹುದಾಗಿದೆ.

ದೇವಾಲಯದ ಮುಂದಿರುವ ವಿಶಾಲವಾದ ಕೆರೆ ‘ಕೇಶವ ಸಮುದ್ರ‘ಎಂದೇ ಶಾಸನಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಈಶ್ವರನ ಮುಂಭಾಗದ ಬಾಗಿಲಿಗೆ ಹೊಂದಿಕೊಂಡಂತಿರುವ ಮಂಟಪ-ಅದಕ್ಕೆ ಹೊಂದಿಕೊಂಡಂತಿರುವ ಪುಟ್ಟ ಗುಡಿಯಲ್ಲಿನ ನಂದಿಯ (ಬಸವಣ್ಣನ) ವಿಗ್ರಹ ಭಕ್ತಾಧಿಗಳ/ಪ್ರವಾಸಿಗರ ಗಮನ ಸೆಳೆಯುತ್ತದೆ.

 

ಮುಖಮಂಟಪದಲ್ಲಿರುವ ಶಾಸನ ಕೂಡ ಸುಂದರವಾಗಿದೆ. ದೇವಾಲಯದ ಹೊರಭಿತ್ತಿಯಲ್ಲಿ ಸರಳ ರೇಖಾಕೃತಿಯ ಸ್ತಂಭಗಳನ್ನು ತೋರಿಸಲಾಗಿದೆ. ಗಾರೆಯಿಂದ ರಚಿಸಲಾದ ಶಿಖರಗಳು ಇನ್ನೂ ಉಳಿದುಕೊಂಡಿವೆ. ಕೀರ್ತಿಮುಖಗಳ ಅಲಂಕಾರಗಳಿಲ್ಲದ ಮಾಡಿನ ಸುತ್ತ ಇರುವ ರಚನೆ ಸರಳ ಫಲಕಗಳನ್ನು ಅಳವಡಿಸಿದಂತಿದೆ.

ಕಾಲನ ಆಘಾತಕ್ಕೆ ಸಿಕ್ಕಿದ್ದರೂ, ಆಸಕ್ತ ವಿದ್ಯಾರ್ಥಿಗಳು, ಸಾರ್ವಜನಿಕರು ಈ ದೇವಾಲಯದ ಬಗ್ಗೆ ತಳೆದಿರುವ ಪ್ರೀತಿಯಿಂದಾಗಿ ಆಗೀಗ ಸ್ವಚ್ಛಗೊಳ್ಳುತ್ತಿರುವುದರಿಂದ ಈ ಸ್ಥಿತಿಯಲ್ಲಿರಲು ಸಾಧ್ಯವಾಗಿದೆ.

ಇದರ ಪುನರುಜ್ಜೀವನವನ್ನು ಕೈಗೊಳ್ಳುವ ಕಾಲವೂ ಸಮೀಪಿಸಿರುವುದರಿಂದ, ಭಾರತೀಯ ಪ್ರಾಚ್ಯವಸ್ತುಗಳ ಇಲಾಖೆ, ರಾಜ್ಯದ ಪುರಾತತ್ತ್ವ ಇಲಾಖೆಗಳು ಇತ್ತ ಗಮನಹರಿಸಿ, ಆದಷ್ಟು ಬೇಗ ದುರಸ್ತಿ, ಪುನರ್ ನಿರ್ಮಾಣದ ಕಾರ್ಯಗಳನ್ನು ಕೈಗೊಳ್ಳುವಂತಾಗಲಿ ಎನ್ನುವದು ಕಲಾಪ್ರೇಮಿಗಳ ಆಶಯ.

 

ಮುಂದಿನ ಭಾಗ-2:

https://cykul.in/SCoGa/swagraam/activityShare2.php?AM=mivPosts&AI=326

Untitled 4.png

ನನ್ನೂರು ಕೂಡಲಕುಪ್ಪೆ

ನನ್ನ ಕುತೂಹಲ ಏನು ಅಂದರೆ, ಐತಿಹಾಸಿಕ ಪುರಾಣಪ್ರಸಿದ್ಧ ಶ್ರೀರಂಗಪಟ್ಟಣದಿಂದ 5 ಕಿ. ಮೀ ದೂರದಲ್ಲಿರುವ, ತನ್ನದೇ ಆದ ವಿಶೇಷ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆ ಹೊಂದಿರುವ ನಮ್ಮ ಗ್ರಾಮಕ್ಕೆ ಕೂಡಲಕುಪ್ಪೆ ಎಂಬ ಹೆಸರು ಹೇಗೆ ಬಂತು ಅಂತಾ?

 

ಈ ವಿಷಯದ ಬಗ್ಗೇ ಐತಿಹಾಸಿಕ ದಾಖಲೆ ಲಭ್ಯವಿಲ್ಲದಿದ್ದರೂ ಹಿರಿಯರ ಅನುಭವದ ಮಾತಿನಂತೆ ಹೀಗೆ ಭಾವಿಸಬಹುದು. ಈ ಗ್ರಾಮದ ಶಾಂತಿ ಸುವ್ಯವಸ್ಥೆ ಹಾಗೂ ನ್ಯಾಯ ಪಂಚಾಯಿತಿಯ ವ್ಯವಸ್ಥೆ ಎಷ್ಟು ಚೆನ್ನಾಗಿತ್ತೆಂದರೆ, ಯಾವುದೇ ಜಾತಿಯ, ಯಾವುದೇ ಧರ್ಮದ, ಯಾವುದೇ ಸಮುದಾಯದ ನಿರಾಶ್ರಿತಕರು ಆಗಮಿಸಿ, ಮೂಲನಿವಾಸಿಗಳ ಜೊತೆ ಕೂಡಲಸಂಗಮದಂತೆ ಬೆರೆತು ಇಲ್ಲೇ ಶಾಶ್ವತವಾಗಿ ಭಾತೃತ್ವ ಭಾವನೆಯೊಂದಿಗೆ ಸರ್ವಜನಾಂಗದ ಶಾಂತಿಯ ತೋಟದಂತೆ ಬದುಕನ್ನು ಕಟ್ಟಿಕೊಳ್ಳುತಿದ್ದರು. ಆದ್ದರಿಂದ ಕೂಡಲಕುಪ್ಪೆ ಎಂಬ ಹೆಸರು ಬಂದಿರಬಹುದು.

 

ರಾಜ ಮನೆತನವಾದ ಗಂಗರು, ಹೊಯ್ಸಳರು ಇಲ್ಲಿ ಆಳ್ವಿಕೆ ಮಾಡಿರುವ ನಿದರ್ಶನಗಳಿದ್ದು, ಗ್ರಾಮದ ಮಧ್ಯಭಾಗದಲ್ಲಿ ವಿಜಯ ಸಂಕೇತವಾದ ವೀರಗಲ್ಲು ಲಭ್ಯವಿದ್ದು, ಗ್ರಾಮದ ಧೈರ್ಯವಂತಿಕೆ ಹಾಗೂ ಹೋರಾಟದ ಕಿಚ್ಚನ್ನು ಬಿಂಬಿಸುತ್ತದೆ. ಪೂರ್ವ ಕಾಲದಲ್ಲಿ ಕುಂಬಾರರು ಮಡಿಕೆ ಮಾಡಲು ನಮ್ಮ ಗ್ರಾಮಕ್ಕೆ ಬಂದು ವಾಸವಿದ್ದು ಮಡಿಕೆಗಳು ಒಡೆದು ಹೋಗುವುದಿಲ್ಲ ಎಂದು ಗ್ರಾಮದಿಂದ ಹೊರಟುಹೋದರು ಎಂಬ ಪ್ರತೀತಿ ಇದೆ.

 

ಕೃಷಿ ಪ್ರಧಾನವಾದಂತ ನನ್ನ ಗ್ರಾಮದಲ್ಲಿ ಯೋಗ್ಯವಾದ ಭೂಮಿ ಹೊಂದಿದ್ದು, ಗ್ರಾಮದ ಆರಂಭದ ದಾರಿಯುವುದಕ್ಕೂ ಕೆರೆಗಳನ್ನು ಹೊಂದಿರುವ ಕುರುಹುಗಳು ಇವೆ. ಗ್ರಾಮಕ್ಕೆ ಪ್ರಮುಖ ನೀರಿನ ಮೂಲವಾದ ಚಿಕ್ಕದೇವರಾಯ ನಾಲೆ, ಲೋಕಪಾವನಿ ನದಿ ಮತ್ತು ಅಡ್ಡ ಹಳ್ಳ ಗ್ರಾಮದ ಪಕ್ಕದಲ್ಲಿ ಹರಿಯುವುದರಿಂದ, ಕಬ್ಬು ಮತ್ತು ಭತ್ತ ಪ್ರಮುಖ ಬೆಳೆಯಾಗಿದೆ.

 

ಕೂಡಲಕುಪ್ಪೆ 1200 ಮತದಾರರನ್ನು ಹೊಂದಿರುವ ಪುಟ್ಟ ಗ್ರಾಮವಾದರೂ, ಗರಿಷ್ಠ ಸಂಖ್ಯೆಯಲ್ಲಿ ಸ್ನಾತಕೋತ್ತರ ಪದವಿಧರರು ಹಾಗೂ ವೃತ್ತಿ ಶಿಕ್ಷಣ ಪಡೆದವರರು ಇದ್ದು ಶೈಕ್ಷಣಿಕವಾಗಿ ಉತ್ತಮ ಹೆಸರನ್ನು ಗಳಿಸಿದೆ. ಇದು ಮೂರು ಜನ ನ್ಯಾಯಾಧೀಶರು ಹೊಂದಿರುವ ತಾಲೂಕಿನ ಏಕೈಕ ಗ್ರಾಮ.

ನಮ್ಮ ಊರಿನವರು ಪ್ರಾಥಮಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸ್ ಇಲಾಖೆಯಲ್ಲಿ, ಭ್ರಷ್ಟಾಚಾರ ನಿಯಂತ್ರಿಸುವ ಲೋಕಾಯುಕ್ತ ಇಲಾಖೆಯಲ್ಲಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಗ್ರಾಮದ ಹೆಮ್ಮೆಯ ಸಂಗತಿ. ಇತ್ತೀಚೆಗೆ ವೈದ್ಯಕೀಯ ವೃತ್ತಿಯಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿರುವುದು ನಮ್ಮ ಗ್ರಾಮದ ಹಿರಿಮೆ. ಅಷ್ಟೆ ಅಲ್ಲದೆ ಕಾವೇರಿ ಹೋರಾಟಕ್ಕೆ ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.

ಕೂಡಲಕುಪ್ಪೆಯು ಪ್ರತಿಷ್ಠಿತ ಕಬಡ್ಡಿ ಕ್ರೀಡೆಗೆ ಪ್ರಸಿದ್ಧಿಯಾಗಿದ್ದು, ಬಾಲಕ ಮತ್ತು ಬಾಲಕಿಯರು ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದಾರೆ. ಗ್ರಾಮದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಬಡ್ಡಿ ಆಟಗಾರರ ಸಂಖ್ಯೆ ಹೆಚ್ಚಾಗಿದ್ದು ಚಿನ್ನದ ಪದಕ ಮತ್ತು ಬೆಳ್ಳಿಯ ಪದಕ ಪಡೆದ ಕ್ರೀಡಾಪಟುಗಳನ್ನು ಒಳಗೊಂಡಿದೆ. ಭಾರ ಎತ್ತುವ ಸ್ಪರ್ಧೆಯಲ್ಲಿ ರಾಷ್ಟ್ರದ ಕಂಚಿನ ಪದಕ ವಿಜೇತರು ಹಾಗೂ ಮೈಸೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿರುವ ಆಟಗಾರರು ನಮ್ಮ ಗ್ರಾಮದವರಾಗಿದ್ದಾರೆ. ರಾಜ್ಯ ಸರ್ಕಾರದ ಪ್ರತಿಷ್ಠಿತ ಕ್ರೀಡಾ ರತ್ನ ಪ್ರಶಸ್ತಿ ನಮ್ಮ ಗ್ರಾಮಕ್ಕೆ ಲಭಿಸಿದೆ.

+91 8310652068
contact@swagraam.org
  • Instagram
  • Facebook
  • LinkedIn
  • YouTube
@2023 by SWAGRAAM FOUNDATION
bottom of page